Ultimate magazine theme for WordPress.

ಈ ಯುಗಾದಿ ತಿಂಗಳು ಯಾವ ರಾಶಿಯವರಿಗೆ ಲಕ್ ತರುತ್ತೆ? ಇಲ್ಲಿದೆ

0 13

2023ಮಾರ್ಚ ತಿಂಗಳು ಬೇಸಗೆ ಆರಂಭದ ಜೊತೆಗೆ ಒಂದಷ್ಟು ಗ್ರಹಕೂಟದ ಬದಲಾವಣೆಗಳನ್ನು ಹೊತ್ತು ತಂದಿದೆ. ಅದರಂತೆ ಹನ್ನೆರಡು ರಾಶಿಯವರ ಮಾರ್ಚ್ ತಿಂಗಳ ಮಾಸ ಭವಿಷ್ಯ ಹೇಗಿದೆ ಎಂದು ತಿಳಿಯೋಣ ಬನ್ನಿ

ಮೇಷರಾಶಿಯವರಿಗೆ ಈ ಮಾರ್ಚ್ ತಿಂಗಳಲ್ಲಿ ಬಹಳಷ್ಟು ಹಣಕಾಸಿನ ಸಮಸ್ಯೆಗಳು ಎದುರಾಗಲಿದ್ದು, ಅವುಗಳಲ್ಲಿ ಆರೋಗ್ಯ ಸಮಸ್ಯೆಗಳಿಗಾಗಿ ಹೆಚ್ಚಿನ ಹಣವನ್ನು ವಿನಿಯೋಗಿಸಬೇಕಾಗುತ್ತದೆ. ಆರೋಗ್ಯ ಬಾಧೆಯಿಂದ ಹೊರಬರಲು ಪ್ರತಿ ಶುಕ್ರವಾರ ಸಾಂಯಂಕಾಲ ಮಹಾಲಕ್ಷ್ಮೀಯ ದೇವಸ್ಥಾನದಲ್ಲಿ, 600ಗ್ರಾಮ್ ಅವರೇಕಾಳನ್ನು ಬಿಳಿಯ ಬಟ್ಟೆಯಲ್ಲಿ ಸುತ್ತಿ ದಾನ ಮಾಡಿ. ಶುಭವಾಗುತ್ತದೆ.

ವೃಷಭ ರಾಶಿಯವರ ರಾಶಿ ಫಲಗಳು ಹೀಗಿವೆ ನೋಡಿ..
ಆರ್ಥಿಕ ಅಭಿವೃದ್ಧಿಯ ಸಮಯ ಇದಾಗಿದ್ದು, ಕೆಲಸದಲ್ಲಿ ಸ್ವಲ್ಪ ಮಟ್ಟಿಗೆ ಬದಲಾವಣೆ ಕಾಣಲಿದ್ದಿರಿ. ಉದ್ಯೋಗದ ಆಕಾಂಕ್ಷೆ ಹೊಂದಿರುವವರಿಗೆ ಒಳ್ಳೆಯ ಕೆಲಸಗಳು ದೊರೆಯಲಿವೆ. ಶುಕ್ರವಾರ ವದ್ಧಾಶ್ರನಕ್ಕೆ ಊಟ ಹಾಕಿಸಿ ಶುಭವಾಗುತ್ತದೆ.

ಕರ್ಕಾಟಕ ರಾಶಿಯಲ್ಲಿ ಜನಿಸಿದವರಿಗೆ 2023 ಮಾರ್ಚ್ ತಿಂಗಳು ಹಣವನ್ನು ತಂದುಕೊಡುವ ತಿಂಗಳಾಗಿದೆ. ಆದರೆ ಪ್ರತಿ ಕೆಲಸದಲ್ಲಿಯೂ ಹಿಂಜರಿಯುವುದನ್ನು ಬಿಟ್ಟು ಆತ್ಮವಿಶ್ವಾಸದಿಮದ ಮುಂದಡಿ ಇಟ್ಟಲ್ಲಿ ಅಂದುಕೊಂಡ ಕೆಲಸ ಅಂದುಕೊಂಡಂತೆಯೆ ನಡೆಯುತ್ತದೆ. ಆರೋಗ್ಯದಲ್ಲಿ ಸಮತೋಲನ ಕಾಪಾಡಿಕೊಳ್ಳಲು, ಬೆಳಗಿನ ಎಳೆಯ ಬಿಸಿಲಿನಲ್ಲಿ ಸೂರ್ಯನಮಸ್ಕಾರ ಮಾಡಿ. ಶುಭವಾಗುತ್ತದೆ.

ಸಿಂಹ ರಾಶಿಯವರಿಗೆ ವರ್ಷವಿಡಿ ಅತ್ಯುತ್ತಮ ಸಮಯವಾಗಿದ್ದು, ಮಾರ್ಚ ತಿಂಗಳು ಎಲ್ಲದಕ್ಕಿಂತ ಉತ್ತಮ ಸಮಯವಾಗಿದೆ. ಪಿತ್ರಾರ್ಜಿತ ಆಸ್ತಿ ದೊರಕುವ ಸಂಭವವಿದೆ. ಹಳೆಯ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳನ್ನು ಮಾಡುವ ಪುಣ್ಯವು ನಿಮಗೆ ಲಭಿಸಲಿದೆ. ದೇವಸ್ಥಾನದ ಅನ್ನಸಂತರ್ಪಣೆಗೆ ಕೈಲಾದ ಕಾಣಿಕೆ ನೀಡಿ. ಶುಭವಾಗುತ್ತದೆ.

ಕನ್ಯಾರಾಶಿಯ ಫಲಗಳು:- ಮನೆಯಲ್ಲಿ ಬಹಳ ದಿನಗಳ ನಂತರ ಮಂಗಳ ಕಾರ್ಯಗಳು ನೇರವೇರುವ ಸಮಯ ಸನ್ನಿಹಿತವಾಗಿದೆ. ಮದುವೆ, ಮುಂಜಿಯಂತಹ ಕಾರ್ಯಗಳನ್ನು ಮಾಡುವ ಯೋಚನೆಯಿದ್ದರೆ ತಿಂಗಳಾಂತ್ಯದೊಳಗೆ ಮುಗಿಸಿಕೊಳ್ಳಿ. ಮುಂದಿನ ತಿಂಗಳಿನ ಸಮಯ ನಿಮಗೆ ಅಷ್ಟು ಚೆನ್ನಾಗಿಲ್ಲ. ಶತೃನಾಶದ ಯೋಗವಿದೆ.

ತುಲಾರಾಶಿಯಲ್ಲಿ ಜನಿಸಿದವರಿಗೆ ಈ ಮಾರ್ಚ್ ತಿಂಗಳಲ್ಲಿ ಸಂತಾನ ಯೋಗವಿದೆ. ಐವಿಎಪ್ ಟ್ರೀಟ್ಮೆಂಟ್ ತೆಗೆದುಕೊಳ್ಳುವ ಯೋಚನೆಯಿರುವವರು ಈ ತಿಂಗಳಲ್ಲಿ ಮಾಡಿಸಿಕೊಳ್ಳಿ. ಹಾಗೂ ಈಗಾಗಲೇ ಟ್ರೀಟ್ಮೆಂಟ್ ತೆಗೆದುಕೊಂಡಿರುವವರ ಆದಷ್ಟೂ ಆರೋಗ್ಯದ ಮೇಲೆ ಗಮನವಿರಿಸಿ.

ಸಿಂಹ ರಾಶಿಯವರಿಗೆ ಈ ವರ್ಷ 4 ಯೋಗಗಳಿವೆ ಇವರ ಲೈಫ್ ಹೇಗಿರುತ್ತೆ ಗೊತ್ತಾ..

ವೃಶ್ಚಿಕ ರಾಶಿಯವರಿಗೆ ಇದು ಬಹಳ ಒಳ್ಳೆಯ ಸಮಯವಾಗಿದ್ದು, ಮದುವೆಯ ಕಾರ್ಯಕ್ಕೆ ಹೇಳಿ ಮಾಡಿಸಿದಂತಹ ದಿನಗಳಿವೆ. ನಿವೇಶನವನ್ನು ಖರೀದಿಸುವ ಆಲೋಚನೆಯಿದ್ದರೆ ಸಮಯ ಚೆನ್ನಾಗಿದೆ. ದುಡ್ಡಿನ ಸಮಸ್ಯೆ ಎದುರಾದ ಹಾಗೆ ಭಾಸವಾದರೂ, ಮುಂದಡಿಯಿಡುವುದು ಉತ್ತಮ. ದಿನಕಳೆದಂತೆ ಆ ಸಮಸ್ಯೆ ದೂರವಾಗುತ್ತದೆ.

ಧನುರಾಶಿಯವರಿಗೆ ಈ ತಿಂಗಳಲ್ಲಿ ವಾಹನ ಯೋಗವಿದ್ದು, ಮನೆಗೆ ಲಕ್ಷ್ಮೀ ಬರುತ್ತಾಳೆ.ಅನಾಥಮಕ್ಕಳಿಗೆ ನಿಮ್ಮಿಂದ ಆದಂತಹ ಓದಿನ ಸಹಾಯವನ್ನು ಮಾಡಿ. ಶುಭವಾಗುತ್ತದೆ.

ಮಕರ ರಾಶಿಯಲ್ಲಿ ಜನಿಸಿದಂತ ಹಿರಿಯರು ಈ ತಿಂಗಳಲ್ಲಿ ಮಕ್ಕಳ ನಿರೀಕ್ಷೆಯನ್ನು ಮಾಡಬಹುದು. ವಿದೇಶದಲ್ಲಿ ಇರುವ ಮಕ್ಕಳು ಮನೆಯ ನೆನಪುಮಾಡಿಕೊಂಡು ನಿಮ್ಮಲ್ಲಿಗೆ ಬರುತ್ತಾರೆ.

ಕುಂಭ ರಾಶಿಯವರ ಮಾಸ ಭವಿಷ್ಯ ಹೀಗಿದೆ.. ಈ ಹಿಂದೆ ನೀವು ವಿವಿಧ ಉದ್ದೇಶಗಳಲ್ಲಿ ತೊಡಗಿಸಿದ ಹಣ ವಾಪಸ್ಸು ಸಿಗಲಿದೆ. ವಿದೇಶಯಾನದ ಯೋಗವಿದೆ. ಕುಟುಂಬದ ಜೊತೆ ಸಮಯ ಕಳೆಯುವ ಅವಕಾಶಗಳು ಒದಗಲಿದ್ದು, ತೀರ್ಥಯಾತ್ರೆಯನ್ನು ಕೈಗೊಳ್ಳುವ ಯೋಗವಿದೆ. ಸಾಧ್ಯವಾದರೆ ತೀರ್ಥಸ್ನಾನವನ್ನು ಸಹ ಮಾಡಿ. ಇದರಿಂದ ಜನ್ಮಕ್ಕಂಟಿದ ಪಾಪಗಳು ಪರಿಹಾರವಾಗುತ್ತವೆ. ಶುಭವಾಗಲಿ.

ಇದನ್ನೂ ಓದಿ..ಇವತ್ತು ಹೋಳಿ, ಇಂದಿನಿಂದ ತ್ರಿಮೂರ್ತಿಗಳ ಆಶೀರ್ವಾದದಿಂದ 10 ರಾಶಿಯವರಿಗಿದೆ ಇವರ ಲೈಫ್ ಹೇಗಿರತ್ತೆ ಗೊತ್ತಾ..

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ

Leave A Reply

Your email address will not be published.