ಗ್ಯಾಸ್ಟ್ರಿಕ್ ಸಕ್ಕರೆಕಾಯಿಲೆ ಇರುವವರು ಈ ಹಣ್ಣು ತಿನ್ನುವುದರಿಂದ ಏನಾಗುತ್ತೆ ಗೊತ್ತಾ? 50 ಮಾತ್ರೆಗಳಿಗೆ ಸಮ ಈ ಹಣ್ಣು
ನೀವು ಚಿಕ್ಕವರಿದ್ದಾಗ ನೇರಳೆ ಹಣ್ಣನ್ನು ತಿಂದಿರುವುದು ನಿಮಗೆ ನೆನಪಿರಬೇಕು. ಅದರ ರುಚಿ ನಿಮಗೆ ತುಂಬಾ ಇಷ್ಟ ಎಂದೋ ಇಲ್ಲವೇ ಅದು ಆರೋಗ್ಯಕ್ಕೆ ಒಳ್ಳೆಯದು ಎಂದೋ ಅದನ್ನು ತಿಂದಿದ್ದಕ್ಕಿಂತ ಹೆಚ್ಚಾಗಿ, ಆ ಹಣ್ಣನ್ನು ತಿಂದಾಗ ನಾಲಗೆ ನೇರಳೆ ಬಣ್ಣಕ್ಕೆ ತಿರುಗುತ್ತಿದ್ದದ್ದು ನಿಮಗೆ ಹೆಚ್ಚು ಇಷ್ಟ ಆಗುತ್ತಾ ಇತ್ತು ಅಲ್ವಾ? ನೀವು ಈಗ ಗಮನಿಸಿರಬಹುದು, ನೇರಳೆ ಹಣ್ಣು ಮತ್ತೆ ಅಂಗಡಿಗಳಲ್ಲಿ ಕಾಣಸಿಗುತ್ತಿವೆ. ಅವು ನೇರಳೆ ಹಣ್ಣಿನ ರಸ, ಚಿಪ್ಸ್, ಪುಡಿ ಹಾಗೂ ನೇರಳೆ ಜೇನಿನ ರೂಪದಲ್ಲೂ ಸಿಗುತ್ತಿವೆ. ಇದಕ್ಕಿರುವ ಹಲವು ಕಾರಣಗಳಲ್ಲಿ ಒಂದು ಎಂದರೆ ನೇರಳೆ ಹಣ್ಣು ರಕ್ತದ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ನೆರವಾಗುತ್ತದೆ ಎಂಬುದು.
ಮಲೆನಾಡು ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ಸಿಗುವ ಹಣ್ಣುಗಳಲ್ಲಿ ನೇರಳೆ ಹಣ್ಣು ಕೂಡ ಒಂದು. ಇದೀಗ ನೇರಲೆ ಹಣ್ಣು ಕೂಡ ಮಾರುಕಟ್ಟೆ ಸೃಷ್ಟಿಸಿದೆ. ನಗರ ಪ್ರದೇಶದ ಮಾರ್ಕೆಟ್ಗಳಲ್ಲಿ ನೇರಲೆ ಹಣ್ಣುಗಳು ಸಿಗುತ್ತಿವೆ. ಈ ಹಣ್ಣಿನಲ್ಲಿ ಕ್ಯಾಲ್ಸಿಯಂ, ಪೊಟ್ಯಾಷಿಯಂ, ಮೆಗ್ನೀಷಿಯಂ, ಪ್ರೊಟೀನ್, ಐರನ್, ವಿಟಮಿನ್ ಸಿ,ಬಿ, ಗ್ಲುಕೋಸ್ ಸೇರಿದಂತೆ ಮೊದಲಾದ ದೇಹಕ್ಕೆ ಬೇಕಾದ ಹಲವು ಪೋಷಕಾಂಶಗಳಿವೆ. ಹೀಗಾಗಿ ಇದನ್ನು ತಿನ್ನುವುದರಿಂದ ಆರೋಗ್ಯಕಾರಿ ಪ್ರಯೋಜನಗಳನ್ನು ಪಡೆಯಬಹುದು. ನೇರಳೆ ಹಣ್ಣಿನ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಹಾಗೆಯೇ ಮೂಳೆಗಳು ಬಲಗೊಳ್ಳುತ್ತವೆ.
ನಿಯಮಿತವಾಗಿ ನೇರಳೆ ಹಣ್ಣಿನ ಸೇವನೆಯಿಂದ ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಿಸಬಹುದು.
ಈ ಹಣ್ಣಿನಲ್ಲಿ ಐರನ್ ಅಂಶ ಇರುವುದರಿಂದ ಇದು ರಕ್ತ ಶುದ್ಧ ಮಾಡುವಲ್ಲೂ ಪ್ರಮುಖ ಪಾತ್ರವಹಿಸುತ್ತದೆ. ಈ ಹಣ್ಣಿನ ರಸವನ್ನು ಕುಡಿಯವುದರಿಂದ ಕೆಮ್ಮು ಮತ್ತು ಉಬ್ಬಸವನ್ನು ನಿಯಂತ್ರಿಸಬಹುದು. ಹಾಗೆಯೇ ಇದು ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ನೇರಳೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಕೆಟ್ಟ ಉಸಿರಾಟದ ಸಮಸ್ಯೆಯನ್ನು ದೂರ ಮಾಡಬಹುದು. ಹಾಗೆಯೇ ಚರ್ಮದ ಉರಿ ಸಮಸ್ಯೆಗೆ ನೇರಳೆ ಹಣ್ಣಿನ ಪೇಸ್ಟ್ಗೆ ಸಾವಿಸಿ ಎಣ್ಣೆ ಮಿಶ್ರ ಮಾಡಿ ಉರಿ ಇರುವ ಜಾಗಕ್ಕೆ ಲೇಪನ ಮಾಡಿದ್ರೆ ಉರಿ ಶಮನವಾಗುತ್ತದೆ. ನಿಯಮಿತವಾಗಿ ನೇರಳೆ ಹಣ್ಣನ್ನು ಸೇವಿಸುವುದರಿಂದ ಅಜೀರ್ಣ ಸಮಸ್ಯೆಯನ್ನು ದೂರ ಮಾಡಬಹದು. ಹಾಗೆಯೇ ಇದರಿಂದ ಚರ್ಮ ಸುಕ್ಕುಗಟ್ಟುವಿಕೆ ಕೂಡ ಕಡಿಮೆಯಾಗುತ್ತದೆ. ನೇರಳೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಕರುಳಿನ ಸಮಸ್ಯೆ ಮತ್ತು ಕ್ಯಾನ್ಸರ್ ರೋಗದಿಂದ ಮುಕ್ತಿ ಪಡೆಯಬಹುದು.
ಅದೇ ರೀತಿ ಇದರ ಎಲೆಗಳನ್ನು ಅಗಿದು ರಸ ಕುಡಿದ್ರೆ ಅಲ್ಸರ್ ನಿವಾರಣೆಯಾಗುತ್ತದೆ. ನೇರಳೆ ಹಣ್ಣಿನ ಬೀಜದಲ್ಲಿ ಜಂಬೊಸಿನ್ ಹಾಗೂ ಜಂಬೊಲಿನ್ ಎನ್ನುವ ಅಂಶಗಳಿವೆ. ಇವರಡೂ ಆಹಾರದಲ್ಲಿರುವ ಗಂಜಿಯ ಅಂಶವನ್ನು ಸಕ್ಕರೆಯನ್ನಾಗಿ ಮಾರ್ಪಡಿಸುವ ಕೆಲಸವನ್ನು ನಿಧಾನಗೊಳಿಸುತ್ತವೆ ಎಂದು ನಂಬಲಾಗಿದೆ.
ಇದರರ್ಥ, ನಿಮ್ಮ ಆಹಾರದಲ್ಲಿರುವ ಗಂಜಿಯು ಮೆಟಬಾಲಿಸಂ ಮೂಲಕ ಅರಗಿದ ಕೂಡಲೇ ನಿಮ್ಮ ರಕ್ತದ ಸಕ್ಕರೆ ಮಟ್ಟ ಮೇಲೇರುವುದಿಲ್ಲ ಎಂದು. ಟೈಪ್ 2 ಡಯಾಬಿಟಿಸ್ ಇರುವವರಲ್ಲಿ ದೇಹದಲ್ಲಿರುವ ರಕ್ತದ ಸಕ್ಕರೆಯನ್ನು ಬಳಸಿಕೊಳ್ಳುವಷ್ಟು ಇನ್ಸುಲಿನ್ ಇರುವುದಿಲ್ಲ ಇದಕ್ಕೆ ಕಾರಣ, ಒಂದೋ ಅವರ ದೇಹದಲ್ಲಿರುವ ಪ್ಯಾಂಕ್ರಿಯಾಸ್ ಸಾಕಷ್ಟು ಪ್ರಮಾಣದ ಇನ್ಸುಲಿನ್ ಅನ್ನು ಉತ್ಪಾದಿಸುವುದಿಲ್ಲ, ಇಲ್ಲವೇ ಉತ್ಪತ್ತಿಯಾದ ಇನ್ಸುಲಿನ್ ಪ್ರಮಾಣ ಬೇಗನೆ ಇಳಿದುಬಿಡುವುದಾಗಿರುತ್ತದೆ. ನೇರಳೆ ಹಣ್ಣಿನ ಬೀಜಗಳು ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಇಲ್ಲವೇ ಅದರ ಪ್ರಮಾಣ ಬೇಗನೆ ಇಳಿದುಹೋಗದಂತೆ ತಡೆದು ದೇಹಕ್ಕೆ ಬೇಕಾದಷ್ಟು ಇನ್ಸುಲಿನ್ ದೊರಕುವಂತೆ ಮಾಡುತ್ತವೆ.
ಗರ್ಭಾವಸ್ಥೆಯಲ್ಲಿ ನೇರಳೆ ಹಣ್ಣು ಸುರಕ್ಷಿತವಾದದ್ದು ಎಂದು ಸಾಬೀತು ಮಾಡಲು ಯಾವುದೇ ಹೆಚ್ಚಿನ ಮಾಹಿತಿ ಸಿಗುತಿಲ್ಲ. ಹಾಗಾಗಿ, ಗರ್ಭಿಣಿಯರು ಇದನ್ನು ದೂರ ಇಡುವುದು ಒಳ್ಳೆಯದು. ನೇರಳೆ ಹಣ್ಣು ರಕ್ತದ ಸಕ್ಕರೆ ಮಟ್ಟದ ಮೇಲೆ ಬೀರುವ ಪರಿಣಾಮವು ಸ್ಥಿರವಾಗಿರುವುದಿಲ್ಲ, ಹಾಗಾಗಿ, ನೀವು ಯಾವುದಾದರೂ ಸರ್ಜರಿ ಮಾಡಿಸಿಕೊಳ್ಳುವುದಿದ್ದರೆ, ಸರ್ಜರಿಯ ಹದಿನೈದು ದಿನಗಳಿಗೆ ಮೊದಲೇ ಅದು ತಿನ್ನುವುದನ್ನು ನಿಲ್ಲಿಸುವುದು ಒಳ್ಳೆಯದು. ಡಯಾಬಿಟಿಸ್ಗೆ ನೇರಳೆ ಹಣ್ಣು ಸುರಕ್ಷಿತವಾದ ಗಿಡಮೂಲಿಕೆಯಾಗಿದೆ, ಆದರೂ ಇದು ಎಷ್ಟು ಪ್ರಮಾಣದಲ್ಲಿ ರಕ್ತದ ಸಕ್ಕರೆ ಮಟ್ಟವನ್ನು ಇಳಿಸುತ್ತದೆ ಎಂದು ಊಹಿಸಲು ಆಗುವುದಿಲ್ಲ. ಹಾಗಾಗಿ, ನೀವು ಈ ಹಣ್ಣನ್ನು ಇಲ್ಲವೇ, ಇದರ ಬೀಜದ ಪುಡಿಯನ್ನು ನಿಯಮಿತವಾಗಿ ಸೇವಿಸುವ ಮೊದಲು ನಿಮ್ಮ ಡಾಕ್ಟರ್ ಅವರ ಸಲಹೆ ಪಡೆಯುವುದು ಒಳ್ಳೆಯದು.
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.