ಮೇಷ ರಾಶಿಯವರ ಎಲ್ಲ ಕಷ್ಟಗಳಿಗೆ ಅಂತ್ಯ ಸಿಗಲಿದೆ ಆದ್ರೆ..

0 6,927

2023ನೇ ವರ್ಷವು ನಮ್ಮೆಲ್ಲರ ಪಾಲಿಗೆ ಒಳ್ಳೆಯ ದಿನಗಳನ್ನು ಹೊತ್ತು ತರುವಂತ ವರ್ಷವಾಗಲಿ ಎನ್ನುವ ಭರವಸೆಯಲ್ಲಿ ನಾವಿದ್ದೇವೆ. ಈಗಷ್ಟೇ ಕೊರೊನಾದ ಮಾಹಾ ಸುಳಿಯಿಂದ ಪಾರಾಗಿ ಹೊಸ ಚೈತನ್ಯದೊಂದಿಗೆ ಬದುಕು ಕಟ್ಟಿಕೊಳ್ಳಲು ನೋಡುತ್ತಿರುವ ಸಂದರ್ಭದಲ್ಲಿ, ಭವಿಷ್ಯ ಜಾತಕಗಳು ನಿಮಗೆ ಹೊಸ ಉಮೇದನ್ನು ತರಬಹುದು. ಮೇಷ ರಾಶಿಯ ವರ್ಷ ಭವಿಷ್ಯ ಹೇಗಿದೆ ಎಂದು ತಿಳಿಯೋಣ ಬನ್ನಿ.

ಈ ವರ್ಷವೀಡಿ ಮೇಷ ರಾಶಿಯಲ್ಲಿ ಶನಿ ಇರುವುದರಿಂದ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಲು ಅವಕಾಶಗಳು ಹುಡುಕಿ ಬರುತ್ತವೆ. ಏಪ್ರಿಲ್2023ರ ನಂತರ ಬದುಕಿನ ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಅದಕ್ಕೆ ಅನುಕೂಲವಾಗುವಂತೆ ಸಮಯವು ಒದಗಿ ಬರುತ್ತದೆ. ನೀವು ಅಂದುಕೊಂಡ ಕೆಲಸ ಕಾರ್ಯಗಳು ವರ್ಷದ ಮಧ್ಯಭಾಗದಲ್ಲಿ ಪೂರ್ಣವಾಗುತ್ತವೆ.

ಶೋಭಾಕೃತ ಎನ್ನುವ ಹೊಸ ಸಂವತ್ಸರವು ಯುಗಾದಿ ಹೊಸ ಸಂವತ್ಸರದ ಆರಂಭದಿಂದ ಎಲ್ಲ ರಾಶಿಗಳ ಗ್ರಹಗತಿಗಳು ಸಹ ಬದಲಾವಣೆ ಕಾಣುತ್ತವೆ. ಅಂತದ್ದೆ ಒಂದು ಬದಲಾವಣೆ ಮೊದಲ ರಾಶಿಯಾದ ಮೇಷರಾಶಿಯಲ್ಲಿಯು ಕಾಣಬಹುದು. ಹೊಸ ಸಂವತ್ಸರ ಶುರುವಿನಲ್ಲಿಯೆ ನಿಮಗೆ ಒಳ್ಳೆಯ ದಿನಗಳು ಎದುರಾಗುತ್ತವೆ. ವರ್ಷದ ಮೊದಲ ತಿಂಗಳುಗಳಲ್ಲಿ ಇರುವಂತಹ ಹಣಕಾಸಿನ ಅಡಚಣೆಗಳು ದೂರವಾಗುತ್ತವೆ

ಇದನ್ನೂ ಓದಿ..ವೃಶ್ಚಿಕ ರಾಶಿಯವರಿಗೆ ಈ ವರ್ಷ ಅದೃಷ್ಟ ನಿಮ್ಮ ಕೈ ಹಿಡಿಯುತ್ತೆ ಯಾಕೆಂದರೆ..

2023 ಒಂದು ವರ್ಷದ ಅವಧಿಯಲ್ಲಿ ಆಯ 5 ಹಾಗೂ ವ್ಯಯ 5 ಇರುವುದರಿಂದ, ಎಷ್ಟು ದುಡಿಯುತ್ತಿರೂ ಅಷ್ಟೇ ಖರ್ಚು ಸಹ ಬರುತ್ತವೆ. ಲಾಭವಿದ್ದಷ್ಟೇ ನಷ್ಟವು ಆಗಿ, ಹಣಕಾಸಿನ ಸ್ಥಿತಿ ಸಮಪ್ರಮಾಣದಲ್ಲಿ ಇರುತ್ತವೆ. ಅವಮಾನ ಒಂದರ ಅಳತೆಯಲ್ಲಿ ಇದ್ದರೆ ಪೂಜ್ಯ ಮೂರರ ಪ್ರಮಾಣದಲ್ಲಿ ಇದೆ. ಈ ಶೋಭಾಕೃತ ಸಂವತ್ಸರದ ಸಮಯದಲ್ಲಿ ನೀವು ಹೆಚ್ಚಾಗಿ ಸಮಾಜದಿಂದ ಗೌರವವನ್ನು ಪಡೆಯಲು ಸಾಧ್ಯವಾಗುತ್ತದೆ.

ಈ ಶೋಭಾಕೃತ ಸಂವತ್ಸರವು ನಿಮಗೆ ಹಣ ಹೂಡಿಕೆಯಲ್ಲಿ ಸಹಾಯ ಮಾಡುವ ವರ್ಷವಾಗಿದೆ. ಗುರುವಿನಿಂದಾಗಿ ಹಣ ಹೂಡಿಕೆಯ ಆಸಕ್ತಿ ನಿಮ್ಮಲ್ಲಿ ಮೂಡಿ, ಹಲವಾರು ಉದ್ಯಮಗಳಲ್ಲಿ ತೊಡಗಿಕೊಳ್ಳಲು ಇದು ಸಕಾಲವಾಗಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಹಣಕಾಸಿನ ಸಮಸ್ಥಿತಿಯನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ. ನಿಮಗೆ ಆದಾಯದ ಮೂಲ ಮಾರ್ಗಗಳನ್ನು ತಿಳಿದುಕೊಳ್ಳಲು ಶುಕ್ರನು ಸಹಾಯ ಮಾಡುತ್ತಾನೆ.

ಮೇ ತಿಂಗಳ ಮಧ್ಯಭಾಗದಿಂದ ಅಕ್ಟೋಬರ್ ವರೆಗಿನ ಸಮಯ ಬಹಳ ಮಂಗಳಕರವಾಗಿದ್ದು, ವ್ಯಾಪಾರಾಸ್ಥರಿಗೆ ಅನುಕೂಲವಾಗಲಿದೆ. ಹೊಸ ಉದ್ಯೋಗಗಳು ದೊರೆಯಲಿದ್ದು, ಹಣ ಕಾಸಿನ ಸ್ಥಿತಿ ಉತ್ತಮವಾಗುತ್ತದೆ. ನವೆಂಬರ್ ಡಿಸೆಂಬರ್ ತಿಂಗಳಲ್ಲಿ ಶಕ್ತಿ ಸ್ವಲ್ಪ ಕುಂದಿದ ಹಾಗೆ ಅನ್ನಿಸಿದರೂ, ಆರೋಗ್ಯವನ್ನು ಜೋಪಾನ ಮಾಡಿಕೊಂಡರೆ ಯಾವುದೇ ಬಾಧೆಗಳಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ 2023ನೇ ಇಸವಿಯು ಮೇಷ ರಾಶಿಯವರಿಗೆ ಎಲ್ಲ ರೀತಿಯ ಬಲಗಳನ್ನು ತಂದುಕೊಡಲಿದ್ದು, ಮುಂದಿನ ವರ್ಷದ ಹಣಕಾಸಿನ ಸ್ಥಿತಿಯನ್ನು ಉತ್ತಮಗೊಳಿಸುವ ವಾತಾವರಣವನ್ನು ಸೃಷ್ಟಿಸಲಿದೆ‌.

ಇದನ್ನೂ ಓದಿ..ಈ 4 ರಾಶಿಯವರಿಗೆ ಪ್ರೀತಿ ಸಿಗೋದು ತುಂಬಾ ಕಷ್ಟ, ಸುಲಭವಾಗಿ ಸಿಗಲ್ಲ ಯಾಕೆಂದರೆ..

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ

Leave A Reply

Your email address will not be published.