ಪ್ರತಿಯೊಬ್ಬರಿಗೂ ಸಹ ಹೊಸ ವರ್ಷ ಬಂತೆಂದರೆ ಮುಂದಿನ ದಿನಗಳ ರಾಶಿ ಭವಿಷ್ಯವನ್ನು ತಿಳಿದುಕೋಳ್ಳಲು ತುಂಬಾ ಕುತೂಹಲದಿಂದ ಇರುತ್ತಾರೆ ಸನಾತನ ಹಿಂದೂ ಧರ್ಮದಲ್ಲಿ ಯುಗಾದಿ ಹಬ್ಬವನ್ನು ಹೊಸ ವರ್ಷ ಎಂದು ಕರೆಯಲಾಗುತ್ತದೆ ಈ ಹಬ್ಬದಲ್ಲಿ ಬೇವು ಬೆಲ್ಲವನ್ನು ಪ್ರತಿಯೊಬ್ಬರೂ ಹಂಚಿ ಆಚರಣೆ ಮಾಡುವ ಹಬ್ಬವಾಗಿದೆ ಜೀವನದಲ್ಲಿ ಕಷ್ಟ ವನ್ನು ಕಹಿಗೆ ಹಾಗೂ ಸುಖವನ್ನು ಬೆಲ್ಲಕ್ಕೆ ಹೋಲಿಕೆ ಮಾಡಲಾಗುತ್ತದೆ

ಜೀವನದಲ್ಲಿ ಬರಿ ಕಷ್ಟಗಳು ಇರುವುದು ಇಲ್ಲ ಸುಖ ಹಾಗೂ ದುಃಖ ಎರಡು ಸಹ ಇರುತ್ತದೆ ಗ್ರಹಗಳ ಬದಲಾವಣೆಯಿಂದಾಗಿ ಹನ್ನೆರಡು ರಾಶಿಗಳ ಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಶನಿ ಗುರು ರಾಹು ಕೇತು ಶುಕ್ರ ಹಾಗೂ ಮಂಗಳ ಬುಧ ಈ ಗ್ರಹಗಳು ಸ್ಥಾನ ಬದಲಾವಣೆ ಮಾಡುತ್ತದೆ. 2023 ಯುಗಾದಿಯ ನಂತರ ವೃಶ್ಚಿಕ ರಾಶಿಯವರಿಗೆ ಶುಭದಾಯಕವಾಗಿ ಇರುತ್ತದೆ

ಕೆಲವು ಸಣ್ಣ ಪುಟ್ಟ ತೊಂದರೆಗಳು ಕಂಡು ಬಂದರು ಸಹ ವೃಶ್ಚಿಕ ರಾಶಿಯವರು ಜಾಗರೂಕವಾಗಿ ಬಗೆಹರಿಸಿಕೊಳ್ಳಬೇಕು ವೃಶ್ಚಿಕ ರಾಶಿಯವರು ಹಣಕಾಸಿನ ವಿಷಯದಲ್ಲಿ ತುಂಬಾ ಜಾಗರೂಕತೆಯಿಂದ ಇರಬೇಕು ಹಾಗೆಯೇ ಆರೋಗ್ಯದ ಕಡೆಗೆ ಸಹ ಗಮನ ಹರಿಸಬೇಕು ನಾವು ಈ ಲೇಖನದ ಮೂಲಕ 2023 ರ ಯುಗಾದಿಯ ನಂತರ ವೃಶ್ಚಿಕ ರಾಶಿಯ ಫಲಗಳ ಬಗ್ಗೆ ತಿಳಿದುಕೊಳ್ಳೋಣ.

ಶನಿ ಕುಂಭ ರಾಶಿಯಲ್ಲಿ ವರ್ಷ ಪೂರ್ತಿ ಇರುತ್ತಾನೆ ಗುರು ಏಪ್ರಿಲ್ 22 ರಂದು ಮೇಷ ರಾಶಿಗೆ ಹೋಗುತ್ತಾನೆ ಮೇಷ ರಾಶಿ ವೃಶ್ಚಿಕ ರಾಶಿಯವರಿಗೆ ಆರನೆಯ ಮನೆಯಾಗಿದೆ ಹಾಗೆಯೇ ಆರನೆಯ ಮನೆಯಲ್ಲಿ ರಾಹು ಇರುತ್ತಾನೆ ನವೆಂಬರ್ 29 ರವರಗೆ ಮೇಷ ರಾಶಿಯಲ್ಲಿ ಇರುತ್ತಾನೆ ನಂತರ ರಾಹು ನವೆಂಬರ್ 29ರ ನಂತರ ಮೇಷ ರಾಶಿಯಿಂದ ಮೀನ ರಾಶಿಗೆ ಹೋಗುತ್ತಾನೆ ಕೇತು ಸಹ ತುಲಾ ರಾಶಿಯಲ್ಲಿ ಸ್ಥಿತನಾಗಿ ಇರುತ್ತಾನೆ ಶನಿ ನಾಲ್ಕನೆಯ ಮನೆಯಲ್ಲಿ ಇರುತ್ತಾನೆ

ನಾಲ್ಕನೆಯ ಮನೆ ನೆಮ್ಮದಿ ವಾಹನ ಮನೆಯ ಪ್ರತೀಕವಾಗಿದೆ ಕರ್ಮ ಸ್ಥಾನವನ್ನು ಶನಿ ನೋಡುವುದರಿಂದ ಒಂದು ರೀತಿಯಲ್ಲಿ ಮನಸ್ಸಿಗೆ ಆತಂಕ ಅಶಾಂತಿ ಕಂಡು ಬರುತ್ತದೆ ಕೆಲಸದಲ್ಲಿ ಸಹ ಕಿರಿಕಿರಿ ತೊಂದರೆ ಕಂಡು ಬರುತ್ತದೆ ಕೆಲಸ ಒತ್ತಡ ಕಂಡು ಬರುವ ಸಾಧ್ಯತೆ ಇರುತ್ತದೆ ಹಾಗೆಯೇ ಮನೆ ಭೂಮಿ ವಾಹನ ಖರೀದಿಯ ವಿಷಯದಲ್ಲಿ ಶನಿ ಶುಭ ಫಲವನ್ನು ನೀಡುತ್ತಾನೆ ಯುಗಾದಿಯ ನಂತರ ವೃಶ್ಚಿಕ ರಾಶಿಯವರಿಗೆ ಮನೆ ಕಟ್ಟಲು ಹಾಗೂ ವಾಹನ ಖರೀದಿ ಮತ್ತು ಭೂಮಿ ಖರೀದಿ ಮಾಡಲು ಯೋಗ್ಯವಾದ ಸಮಯ ಇದಾಗಿದೆ ಆರನೆಯ ಮನೆ ಋಣ ಸ್ಥಾನವಾಗಿದೆ ಏಪ್ರಿಲ್ 22 ರಂದು ಗುರು ಮೇಷ ರಾಶಿಯನ್ನು ಪ್ರವೇಶ ಮಾಡುತ್ತಾನೆ ಸಾಲವನ್ನು ಮಾಡಿ ಮನೆ ಭೂಮಿಯನ್ನು ಖರೀದಿ ಮಾಡುತ್ತಾರೆ .

ಸಾಲವನ್ನು ಗುರು ಪ್ರೇರೇಪಿಸುತ್ತಾನೆ ಸಾಲ ದ ಬಗ್ಗೆ ಗಮನ ಹರಿಸಬೇಕು ಸಾಲವನ್ನು ಗುರು ಹೆಚ್ಚಿಸುತ್ತಾನೆ ಕೆಲಸದಲ್ಲಿ ಒತ್ತಡದ ಜೊತೆಗೆ ಹೆಚ್ಚಿನ ಜವಾಬ್ದಾರಿಯನ್ನು ನಿಭಾಯಿಸಬೇಕಾಗುತ್ತದೆ ಎಷ್ಟೇ ಕಷ್ಟ ಬಂದರು ಸಹ ಕೆಲಸವನ್ನು ಬಿಡಬಾರದು ಪಂಚಮ ಶನಿಯಿಂದಾಗಿ ಹೆಚ್ಚಿನ ಕಷ್ಟವನ್ನು ನೀಡುತ್ತಾನೆ ಇದರಿಂದ ಕೆಲಸದಲ್ಲಿ ತುಂಬಾ ತೊಂದರೆ ಕಂಡು ಬರುತ್ತದೆ ಆರನೇ ಮನೆಯಲ್ಲಿ ಗುರು ಹಾಗೂ ರಾಹು ಇರುತ್ತಾರೆ ಗುರು ಧನ ಸ್ಥಾನದ ಅಧಿಪತಿ ಆದರೂ ಸಹ ಸಾಲವನ್ನು ಜಾಸ್ತಿ ಮಾಡುತ್ತಾನೆ ಖರ್ಚನ್ನು ಸಹ ಗುರು ಜಾಸ್ತಿ ಮಾಡಿಸುತ್ತಾನೆ.

ಇದನ್ನೂ ಓದಿ..ಈ 4 ರಾಶಿಯವರಿಗೆ ಪ್ರೀತಿ ಸಿಗೋದು ತುಂಬಾ ಕಷ್ಟ, ಸುಲಭವಾಗಿ ಸಿಗಲ್ಲ ಯಾಕೆಂದರೆ..

ಹೆಚ್ಚಿನ ಲಾಭಕ್ಕಿಂತ ನಷ್ಟ ಆಗುವ ಸಾಧ್ಯತೆ ಇರುತ್ತದೆ ಹಾಗಾಗಿ investment ಮಾಡುವಾಗ ಬಹಳ ಜಾಗರೂಕತೆಯನ್ನು ವಹಿಸಬೇಕು ಆರೋಗ್ಯದಲ್ಲಿ ಸಹ ತೊಂದರೆ ಕಂಡು ಬರುವ ಸಾಧ್ಯತೆ ಇರುತ್ತದೆ ಜ್ವರಕ್ಕೆ ಗುರು ಕಾರಣ ಆಗುತ್ತಾನೆ ಪದೆ ಪದೆ ಜ್ವರ ಕಂಡು ಬರುವ ಸಾಧ್ಯತೆ ಇರುತ್ತದೆ ನೀರಿನಿಂದ ಸಹ ಆರೋಗ್ಯ ಸಮಸ್ಯೆ ಕಂಡು ಬರುವ ಸಾಧ್ಯತೆ ಇರುತ್ತದೆ. ಗುರು ದಶಮವನ್ನು ನೀಡುತ್ತಿದ್ದಾನೆ ಇದರಿಂದ ಕೆಲಸದಲ್ಲಿ ತೊಂದರೆ ಕಂಡು ಬರುವುದು ಇಲ್ಲ ಹಣದ ವಿಷಯದಲ್ಲಿ ಬಹಳ ಜಾಗರೂಕತೆಯಿಂದ ಇರಬೇಕು ಉಳಿತಾಯ ಮನೋಭಾವವನ್ನು ಬೆಳೆಸಿಕೊಳ್ಳಬೇಕು

ಶನಿ ಯಿಂದಾಗಿ ಹಳೆಯ ವ್ಯಾಧಿಗಳು ಉಲ್ಬಣ ಆಗುವ ಸಾಧ್ಯತೆ ಇರುತ್ತದೆ ಶನಿ ಗುರು ಹಾಗೂ ರಾಹುವಿಗೆ ಪರಿಹಾರ ಮಾಡಿಕೊಳ್ಳಬೇಕು ರಾಹು ಮೀನ ರಾಶಿಗೆ ಹೋದಾಗ ಕೆಟ್ಟ ಫಲವನ್ನು ನೀಡುತ್ತಾನೆ ಪ್ರತಿ ಶನಿವಾರ ಉದ್ದಿನಬೇಳೆ ಹುರುಳಿಕಾಳು ಹಾಗೂ ಕಪ್ಪು ಎಳ್ಳನ್ನು ದಕ್ಷಿಣೆ ಸಹಿತವಾಗಿ ದೇವಸ್ಥಾನಕ್ಕೆ ನೀಡಬೇಕು ಕರಿ ಎಳ್ಳನ್ನು ಕಪ್ಪು ಬಟ್ಟೆಯಲ್ಲಿ ಕಟ್ಟಿ ಇಡಬೇಕು ಪ್ರತಿ ಶುಕ್ರವಾರ ಕಟ್ಟಿ ಇಡಬೇಕು

ಇದನ್ನೂ ಓದಿ..ಮೀನ ರಾಶಿಯವರಿಗೆ ಗುರುಬಲ ಇರುವುದರಿಂದ ಈ ತಿಂಗಳ ಕೊನೆವರೆಗೂ ಏನೆಲ್ಲಾ ಆಗುತ್ತೆ ತಿಳಿದುಕೊಳ್ಳಿ

ಒಂಬತ್ತು ದಿನ ಪೂಜೆ ಮಾಡಬೇಕು ಅದನ್ನು ಒಂಬತ್ತನೆ ದಿನ ಶನಿವಾರ ಹರಿಯುವ ನೀರಿಗೆ ತೇಲಿ ಬಿಡಬೇಕು ಹನುಮಾನ್ ಚಾಲಿಸಾ ಮಂತ್ರವನ್ನು ಹೇಳಬೇಕು ಗುರುವಿಗೆ ಹಾಗೂ ಗುರು ಸಮಾನರಿಗೆ ಗೌರವವನ್ನು ಸೂಚಿಸಬೇಕು ಹೀಗೆ 2023 ಯುಗಾದಿಯಿಂದ ಮುಂದಿನ ಯುಗಾದಿಯವರೆಗೆ ವೃಶ್ಚಿಕ ರಾಶಿಯವರಿಗೆ ಶುಭದಾಯಕವಾಗಿ ಇರುತ್ತದೆ .

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!