Ultimate magazine theme for WordPress.

ಈ 4 ರಾಶಿಯವರಿಗೆ ಪ್ರೀತಿ ಸಿಗೋದು ತುಂಬಾ ಕಷ್ಟ, ಸುಲಭವಾಗಿ ಸಿಗಲ್ಲ ಯಾಕೆಂದರೆ..

0 1,762

Love Astrology on life time: ಕೆಲವರು ಹುಟ್ಟಿನಿಂದಲೇ ಅದೃಷ್ಟವನ್ನು ಪಡೆದು ಬಂದಿರುತ್ತಾರೆ. ಅವರಿಗೆ ಮನೆಯಲ್ಲಿ ಹಾಗೂ ಹೊರಗಡೆ ಪ್ರೀತಿ ಸ್ನೇಹಗಳು ಯಥೇಚ್ಛವಾಗಿ ದೊರೆತಿರುತ್ತವೆ. ಅವರನ್ನು ಅಪ್ಪ, ಅಮ್ಮ, ಸಹೋದರ ಸಂಬಂಧ ಹಾಗೂ ನೆಂಟರು ಸಹ ಪ್ರೀತಿಯಿಂದ ಕಾಣುತ್ತಾರೆ. ಅವರ ಸ್ನೇಹಿತ ಬಳಗವು ಸಹ ದೊಡ್ಡದಾಗಿಯೆ ಇರುತ್ತವೆ. ಯಾಕೆಂದರೆ ಅವರು ಜನ್ಮತಃ ಪ್ರೀತಿ ವಿಶ್ವಾಸಗಳನ್ನು ಪಡೆದುಕೊಳ್ಳುವ ಯೋಗವನ್ನು ಪಡೆದಿರುತ್ತಾರೆ. ಹಾಗಾಗಿ ಅವರ ಸುತ್ತಲಿನ‌ ವಾತಾವರಣವು ಕೂಡ ಪ್ರೇಮದಿಂದಲೇ ಕೂಡಿರುತ್ತದೆ.

ಆದರೆ ಎಲ್ಲರಿಗೂ ಅಂತಹ ಯೋಗ ಇರುವುದಿಲ್ಲ. ಕೆಲವರಿಗಂತೂ ಪ್ರೀತಿಯೆಂದರೆ ಏನು ಎಂಬುದೇ ತಿಳಿಯದ ಹಾಗೆ ಜೀವನ ಇರುತ್ತದೆ. ಎಲ್ಲ ಕಡೆಗಳಿಂದಲೂ ಕಷ್ಟ ನಷ್ಟಗಳು, ಅವಮಾನ ಅಪಮಾನಗಳು ಅವರನ್ನೇ ಅರಸಿ ಬಂದ ಹಾಗೆ ಇರುತ್ತದೆ. ಅಂತವರಿಗೆ ಸಂಗಾತಿಯ ಪ್ರೀತಿಯು ಸಹ ಹೆಚ್ಚಾಗಿ ದೊರೆಯುವುದಿಲ್ಲ‌. ಇನ್ನು ಕೆಲವರು ತಮ್ಮ ಬಳಿ ಇರುವ ಪ್ರೀತಿ ಸ್ನೇಹಗಳನ್ನು ಉಳಿಸಿಕೊಳ್ಳಲು ಯೋಗ್ಯರಾಗಿರುವುದಿಲ್ಲ.

ಅಂತಹುದೇ ಯೋಗವು ಈ ಐದು ರಾಶಿಯ ಜನರಿಗೆ ಜನ್ಮತಃ ಬಂದಿದೆ. ಇವರು ಏನೇ ಕಷ್ಟ ಪಟ್ಟರು, ಯಾರೂ ಇವರಿಗೆ ಬೆಂಬಲವಾಗಿ ನಿಲ್ಲಲಾರರು. ಇವರು ಎಲ್ಲರನ್ನೂ ಪ್ರೀತಿಸುತ್ತಾರೆ. ತಮ್ಮವರು ಎನ್ನುವ ಭಾವನೆಯಿಂದ ಕಾಣುತ್ತಾರೆ. ತಮ್ಮ ಸುತ್ತಲಿನ ಜನರನ್ನು ಹೆಚ್ಚಾಗಿ ನಂಬುತ್ತಾರೆ. ಆದಾಗ್ಯೂ ಇವರಿಗೆ ಹಿಡಿ ಮುಷ್ಟಿಯಷ್ಟು ಪ್ರೀತಿ ಸಿಗಬೇಕಾದರೂ ಯೋಚನೆ ಮಾಡುವಂತಾಗುತ್ತದೆ. ಯಾಕೆಂದರೆ ಇವರ ಗ್ರಹಗತಿಗಳು ಸರಿಯಾಗಿ ಇರುವುದಿಲ್ಲ. ಇವರ ರಾಶಿಯಲ್ಲಿ ಚಂದ್ರನು ವಕ್ರನಾಗಿರುತ್ತಾನೆ.

ಈ ಐದು ರಾಶಿಯಲ್ಲಿ ಜನಿಸಿದವರಿಗೆ ಒಂದಿಲ್ಲೊಂದು ತೊಂದರೆಗಳು ಬೇರೆ ಬೇರೆ ರೀತಿಯಲ್ಲಿ ಬರುತ್ತಲೆ ಇರುತ್ತವೆ. ಇವರು ಜನರ ನಂಬುಗೆ ಗಳಿಸಲು ಮಾಡುವ ಯತ್ನಗಳೆಲ್ಲ ವಿಫಲವಾಗುತ್ತಲೆ ಹೋಗುತ್ತವೆ. ಹಾಗಾದ್ದಿರೂ ಸಹ ಇವರು ತಮ್ಮ ಪ್ರಯತ್ನದಿಂದ ದೂರ ಸರಿಯುವುದಿಲ್ಲ. ಪ್ರಯತ್ನದಿಂದ ಏನು ಬೇಕಾದರೂ ಸಾಧಿಸಬಹುದು. ಅಂತೆಯೇ ಇವರು ಸಹ ಸತತ ಪ್ರಯತ್ನದ ಫಲವಾಗಿ ತಮ್ಮ ಜೀವನದ ಮಧ್ಯ ಭಾಗದಲ್ಲಿ ಕುಟುಂಬದ ಪ್ರೀತಿಯನ್ನು ಪಡೆಯುವಲ್ಲಿ ಸಫಲರಾಗುತ್ತಾರೆ.

ಇದನ್ನೂ ಓದಿ..ವೃಶ್ಚಿಕ ರಾಶಿಯವರಿಗೆ ಈ ವರ್ಷ ಅದೃಷ್ಟ ನಿಮ್ಮ ಕೈ ಹಿಡಿಯುತ್ತೆ ಯಾಕೆಂದರೆ..

ತಂದೆತಾಯಿಯ ಪ್ರೀತಿ, ಸಹೋದರರ ಪ್ರೀತಿಯು ಬಾಲ್ಯದಲ್ಲಿ ಇವರಿಗೆ ಅಷ್ಟಾಗಿ ದೊರಕಿರುವುದಿಲ್ಲ. ಕಾರಣ ಇವರು ಜನರ ಮೂದಲಿಕೆಗಳಿಗೆ ಪಾತ್ರರಾಗುತ್ತಾರೆ‌. ಅನಿಷ್ಟಕ್ಕೆಲ್ಲ ಶನಿಯೇ ಕಾರಣ ಎಂಬಂತೆ ಮನೆಯ ಎಲ್ಲಾ ತೊಂದರೆಗಳಿಗೂ ಇವರನ್ನೆ ಹೊಣೆಯಾಗಿಸುತ್ತಾರೆ‌‌. ಇವರಲ್ಲಿ ತಾಳ್ಮೆ ಹಾಗೂ ಕುಟುಂಬದ ಮೇಲಿನ ಪ್ರೀತಿಯು ಹೆಚ್ಚಾಗಿದ್ದ ಕಾರಣ ಇವರು ಎಲ್ಲವನ್ನು ಸಹಿಸಿಕೊಂಡು ಕುಟುಂಬದ ಏಳ್ಗೆಗಾಗಿ ದುಡಿಯುತ್ತಲೇ ಇರುತ್ತಾರೆ‌. ಇದೆಲ್ಲದರ ಪರಿಣಾಮವಾಗಿ ಇವರದೇ ಸ್ವಂತ ಕುಟುಂಬ ರಚನೆಯಾದಾಗ, ಸಂಗಾತಿ ಹಾಗೂ ಮಕ್ಕಳ ಪ್ರೀತಿಯು ಇವರ ಕೈ ಹಿಡಿಯುತ್ತದೆ.

ಮೇಷರಾಶಿ, ಕರ್ಕಾಟಕ ರಾಶಿ, ಮಕರ ರಾಶಿ, ಕುಂಭ ಹಾಗೂ ಮೀನ ರಾಶಿಯಲ್ಲಿ ಜನಿಸಿದ ಶೇಕಡ ಎಂಬತ್ತರಷ್ಟು ಜನರಿಗೆ ಪ್ರೀತಿಯ ಕೊರತೆ ಕಾಡುತ್ತಲೇ ಇರುತ್ತದೆ. ಮನೆಯ ಪ್ರೀತಿ ದೊರಕಿದರೂ, ಹೊರಗೆ ಸ್ನೇಹಿತರ ನಡುವಲ್ಲಿ ಇವರು ಗುರುತಿಸಿಕೊಳ್ಳದೆ ಹೋಗಿ ಬಿಡುತ್ತಾರೆ. ಸಂಗಾತಿಯ ಆಯ್ಕೆಯಲ್ಲಿಯು ಇವರಿಗೆ ಮೋಸವಾಗುವ ಸಾಧ್ಯತೆಗಳೆ ಹೆಚ್ಚು. ಇವರು ಭಾವ ಜೀವಿಗಳಾದ್ದರಿಂದ ಮೋಸ ಹೋದಾಗ ಮಾನಸಿಕವಾಗಿ ಖಿನ್ನತೆಗೆ ಒಳಗಾಗುವ ಸಾಧ್ಯತೆಗಳಿದ್ದು, ಅಂತಹ ಸಮಯದಲ್ಲಿ ಅವರಿಗೆ ಅವರೇ ಸಮಾಧಾನ ಮಾಡಿಕೊಳ್ಳುವ ಅಗತ್ಯವಿರುತ್ತದೆ.

ಒಟ್ಟಿನಲ್ಲಿ ಹೇಳುವುದಾದರೆ ಈ ಐದು ರಾಶಿಗಳಲ್ಲಿ ಜನಿಸಿದವರಿಗೆ ಪ್ರೀತಿ ಎಂಬುದು ಮರಳುಗಾಡಿನ ಮರಿಚಿಕೆಯಂತೆ, ಒಮ್ಮೆ ಕಾಣಿಸಿದರೂ ಕೈಗೆ ಸಿಗದ ಹಾಗೆ ಆಗಿ ಬಿಡುತ್ತದೆ. ಹಾಗಾಗಿ ಇವರು ಜೀವನ ಪೂರ್ತಿ ಪ್ರೀತಿಗಾಗಿ ಹಂಬಲಿಸುತ್ತ ಕಳೆಯಬೇಕಾಗುತ್ತದೆ. ಇದಕ್ಕೆ ಇವರೆಲ್ಲರ ಪೂರ್ವ ಕರ್ಮಗಳೆ ಕಾರಣವಾಗಿದ್ದು, ಒಂದಷ್ಟು ಒಳ್ಳೆಯ ಕೆಲಸಗಳನ್ನು ಮಾಡುವುದರಿಂದ ಕರ್ಮಗಳು ಕಳೆಯಬಹುದು‌‌. ಆ ದಿಕ್ಕಿನತ್ತ ಇವರ ಆಲೋಚನೆಗಳು ಸಾಗಬೇಕಾದ ಅನಿವಾರ್ಯತೆ ಇವರಿಗಿದೆ‌.

ಇದನ್ನೂ ಓದಿ..ತುಲಾ ರಾಶಿಯವರು ಈ ತಿಂಗಳು 4 ಎಚ್ಚರಿಕೆ ಪಾಲಿಸಿದರೆ ಸಾಕು, ಜೀವನ ಉತ್ತಮವಾಗಿರುತ್ತೆ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ

Leave A Reply

Your email address will not be published.