Women Real Story: ಇತ್ತೀಚಿನ ದಿನಗಳಲ್ಲಿ ಈ ಪ್ರಪಂಚದಲ್ಲಿ ಸಂಬಂಧಗಳಿಗೆ ಯಾವುದೇ ಬೆಲೆ ಇಲ್ಲ ಮೌಲ್ಯವಿಲ್ಲ ಎಂದು ಹೇಳಬಹುದಾಗಿದೆ ಯಾಕೆಂದರೆ ಅದಕ್ಕೆ ತಕ್ಕ ಉದಾಹರಣೆ ಎನ್ನುವಂತೆ ಮದುವೆಯಾಗಿದ್ದರು ಕೂಡ ಗಂಡ ಬೇರೆ ಮಹಿಳೆಯರ ಜೊತೆಗೆ ಸಂಬಂಧವನ್ನು ಇಟ್ಟುಕೊಳ್ಳುತ್ತಾನೆ ಇನ್ನು ಕೆಲವೊಮ್ಮೆ ಮಹಿಳೆ ಬೇರೆ ಪುರುಷರೊಂದಿಗೆ ಕ್ಷಣಿಕ ಸುಖಕ್ಕಾಗಿ ಬೇಡದ ಸಂಬಂಧವನ್ನು ಇಟ್ಟುಕೊಳ್ಳುತ್ತಾರೆ. ಮದುವೆಯನ್ನು ಅತ್ಯಂತ ಪವಿತ್ರ ಬಾಂಧವ್ಯ ಎಂದು ಹೇಳಲಾಗುತ್ತದೆ ಆದರೆ ಇತ್ತೀಚಿನ ದಿನಗಳಲ್ಲಿ ಈ ರೀತಿಯ ಘಟನೆಗಳಿದ್ದಾಗಿ ಅದು ಅರ್ಥ ಹೀನವಾಗಿದೆ ಎಂದರು ತಪ್ಪಾಗಲಾರದು.

ಇದಕ್ಕೆ ಜೀವಂತ ಉದಾಹರಣೆ ಎನ್ನುವಂತೆ ಆಂಧ್ರಪ್ರದೇಶದಲ್ಲಿ ನಡೆದಿರುವಂತಹ ಒಂದು ನೈಜ ಘಟನೆಯ ಕುರಿತಂತೆ ನಿಮಗೆ ವಿವರಿಸಿ ಹೇಳಲು ಹೊರಟಿದ್ದೇವೆ ತಪ್ಪದೆ ಕೊನೆಯವರೆಗೂ ಓದಿ. ರಾಮ್ ಬಾಬು ಹಾಗೂ ನಾಗಲಕ್ಷ್ಮಿ ಎನ್ನುವ ಇಬ್ಬರು ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದರು. ಇವರ ಪ್ರೀತಿಯ ದಾಂಪತ್ಯ ಜೀವನದ ಫಲವಾಗಿ ಇವರಿಗೆ ಇಬ್ಬರು ಮಕ್ಕಳು ಜನಿಸುತ್ತಾರೆ. ರಾಮ್ ಬಾಬು ವ್ಯಾಪಾರಸ್ಥನಾಗಿದ್ದು ಇವರ ಕುಟುಂಬ ಅನುಕೂಲಸ್ತವಾಗಿತ್ತು. ಹೇಳಿಕೊಳ್ಳುವಂತಹ ಯಾವುದೇ ಅಡ್ಡಿಯು ಕೂಡ ಇವರ ದಾಂಪತ್ಯ ಜೀವನದಲ್ಲಿ ಒದಗಿ ಬಂದಿರಲಿಲ್ಲ.

ಆದರೆ ನಾಗಲಕ್ಷ್ಮಿ ಮಾತ್ರ ದಾಂಪತ್ಯ ಜೀವನದ ಹಾದಿಯಲ್ಲಿ ಎಡವಿ ಬೀಳುತ್ತಾಳೆ. ಒಮ್ಮೆ ದೇವಸ್ಥಾನಕ್ಕೆ ಹೋದಾಗ ಹಳೆಯ ಪ್ರಿಯತಮ ರಮೇಶನನ್ನು ಭೇಟಿ ಮಾಡಿ ಇವರಿಬ್ಬರ ನಡುವೆ ಮತ್ತೆ ಪ್ರೀತಿ ಆರಂಭವಾಗುತ್ತದೆ. ಗಂಡ ಇಲ್ಲದಿದ್ದಾಗಲೆಲ್ಲಾ ಆತನನ್ನು ಮನೆಗೆ ಕರೆಸಿಕೊಂಡು ನಾಗಲಕ್ಷ್ಮಿ ಏಕಾಂತವನ್ನು ಕಳೆಯುತ್ತಿದ್ದಳು. ಇದು ರಾಮ್ ಬಾಬು ಗೆ ತಿಳಿದಾಗ ಮನೆಯಲ್ಲಿ ಹೆಂಡತಿಯ ಜೊತೆಗೆ ದೊಡ್ಡ ರಾದ್ಧಾಂತವನೇ ಮಾಡುತ್ತಾನೆ. ಆಗ ನಾಗಲಕ್ಷ್ಮಿ ಹಾಗೂ ರಮೇಶ್ ಇಬ್ಬರೂ ಕೂಡ ನಮ್ಮಿಬ್ಬರ ನಡುವೆ ಬರುತ್ತಿರುವ ಇವನನ್ನು ಮುಗಿಸಿಬಿಡಬೇಕು ಎನ್ನುವ ತೀರ್ಮಾನವನ್ನು ಮಾಡುತ್ತಾರೆ.

ರಾಮ್ ಬಾಬುಗೆ ನಿದ್ದೆ ಮಾತ್ರೆಯನ್ನು ನೀಡಲು ನಾಗಲಕ್ಷ್ಮಿ ಉಪಾಯವನ್ನು ಹೂಡುತ್ತಾಳೆ. ಈ ವಿಚಾರ ತಿಳಿದ ರಾಮಬಾಬು ನಿದ್ದೆ ಮಾತ್ರೆ ಹಾಕಿಕೊಟ್ಟಿರುವ ಹಾಲನ್ನು ಕುಡಿದಂತೆ ನಟಿಸಿ ಪ್ರಜ್ಞೆ ತಪ್ಪಿ ಬಿದ್ದಂತೆ ಬೀಳುತ್ತಾನೆ. ಆಗ ನಾಗಲಕ್ಷ್ಮಿ ಉಸಿರು ಕಟ್ಟಿಸಲು ಪ್ರಯತ್ನ ಪಟ್ಟಾಗ ಅವಳನ್ನು ಜೋರಾಗಿ ತಳ್ಳುತ್ತಾನೆ ಆಗ ಆಕೆಗೆ ಗಂಭೀರವಾದ ಏ’ಟು ಬೀಳುತ್ತದೆ.

ನಂತರ ಆಸ್ಪತ್ರೆಯಲ್ಲಿ ಆಕೆ ಕೊನೆ ಉಸಿರನ್ನು ಎಳೆಯುತ್ತಾಳೆ ಎಂಬುದಾಗಿ ಮಾಹಿತಿ ತಿಳಿದು ಬಂದಿದ್ದು ರಾಮ್ ಬಾಬು ಕೂಡ ಪೊಲೀಸರಿಗೆ ಶರಣಾಗಿ ಇರುವಂತಹ ವಿಚಾರವನ್ನು ನೇರವಾಗಿ ತಿಳಿಸಿದ್ದಾನೆ. ಗಂಡ ಹೆಂಡಿರ ಜಗಳದಲ್ಲಿ ಇಬ್ಬರು ಮಕ್ಕಳು ಅನಾಥರಾದರು ಎನ್ನುವುದೇ ನಿಜಕ್ಕೂ ಬೇಸರ ಪಡಬೇಕಾಗಿರುವಂತಹ ವಿಚಾರ. ದಾಂಪತ್ಯ ಜೀವನದಲ್ಲಿ ಹೆಣ್ಣು ದಾರಿ ತಪ್ಪಿದರೆ ಏನೆಲ್ಲ ಅನಾಹುತ ಆಗಲಿದೆ ಎಂಬುದಕ್ಕೆ ಇದೊಂದು ಜ್ವಲಂತ ಉದಾಹರಣೆ.

Leave a Reply

Your email address will not be published. Required fields are marked *