ತಂದೆ ತಾಯಿಯ ಮದುವೆ ವಾರ್ಷಿಕೋತ್ಸವಕ್ಕೆ ಮೇಘನಾರಾಜ್ ಕೊಟ್ಟ ಉಡುಗೊರೆ ಏನು ನೋಡಿ

0 0

ಸುಂದರ್ ರಾಜ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ಮತ್ತು ಪ್ರತಿಭಾನ್ವಿತ ನಟ. ಇವರ ಪತ್ನಿ ಪ್ರಮೀಳಾ ಜೋಷಾಯಿ ಮತ್ತು ಪುತ್ರಿ ಮೇಘನಾ ರಾಜ್ ಕೂಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ತಮಿಳುನಾಡು ಮೂಲದ ಇವರು ಖ್ಯಾತ ರಂಗಕರ್ಮಿ ಬಿ.ವಿ.ಕಾರಂತರ ತಂಡದಲ್ಲಿದ್ದರು. ನಂತರ ಚಿತ್ರರಂಗ ಪ್ರವೇಶಿಸಿದ ಇವರು ಕಾಡು,ಪಲ್ಲವಿ ಅನುಪಲ್ಲವಿ, ಇಮ್ಮಡಿ ಪುಲಕೇಶಿ, ವಿಜಯ ಕ್ರಾಂತಿ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಕೆಲವು ತಮಿಳು ಚಿತ್ರಗಳಲ್ಲಿ ನಟಿಸಿರುವ ಇವರು ಕೆಲ ಚಿತ್ರಗಳಲ್ಲಿ ಖಳನಾಯಕನ ಪಾತ್ರ ಕೂಡ ಮಾಡಿದ್ದಾರೆ.

ಕೆಲ ಕಾಲ ಕರ್ನಾಟಕ ಕಲಾವಿದ ಸಂಘದ ಸೆಕ್ರೆಟರಿಯಾಗಿ ಕಾರ್ಯನಿರ್ವಹಿಸಿರುವ ಇವರಿಗೆ ಗೌರವ ಡಾಕ್ಟರೇಟ್ ಕೂಡಾ ಲಭಿಸಿದೆ. ಇವರ ಹಾಗೆ ಇವರ ಪತ್ನಿ ಪ್ರಮೀಳಾ ಜೋಷಾಯಿ ಕೂಡಾ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಪ್ರಮುಖ ಪೋಷಕನಟಿ. 30 ವರ್ಷಕ್ಕೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿರುವ ಇವರು ನೂರಾರು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಸುಂದರ್ ರಾಜ್ ಹಾಗೂ ಪ್ರಮೀಳಾ ಜೋಷಾಯಿ ದಂಪತಿಗಳು ಇತ್ತೀಚೆಗೆ ಅಷ್ಟೇ ತಮ್ಮ 34ನೇ ಮದುವೆ ವಾರ್ಷಿಕೋತ್ಸವವನ್ನು ಸರಳವಾಗಿ ಆಚರಿಸಿದ ಮೇಘನಾ ರಾಜ್ ಕೊಟ್ಟ ಉಡುಗೊರೆ ಏನು ನೋಡಿ.

ಮೇಘನಾ ರಾಜ್ ಅವರ ತಂದೆ ಸುಂದರ್ ರಾಜ್ ಹಾಗೂ ತಾಯಿ ಪ್ರಮೀಳ ಜೋಷಾಯಿ ಅವರಿಗೆ ಇಂದು 35ನೇ ವರ್ಷದ ವಿವಾಹ ವಾರ್ಷಿಕೋತ್ಸವ. ಈ ದಿನ ನಟಿ ಮೇಘನ ರಾಜ್ ರವರು ತಂದೆ ತಾಯಿಯ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದ್ದಾರೆ. ಮೇಘಾನ ರಾಜ್ ಅವರ ಸ್ನೇಹಿತರು ಹಾಗೂ ಬಂಧು ಬಳಗದವರು ಈ ಒಂದು ಸಂತಸದ ವಾತಾವರಣದಲ್ಲಿ ಕಾಲ ಕಳೆದಿದ್ದಾರೆ. ಮೇಘನಾ ರಾಜ್ ರವರು ತಮ್ಮ ತಂದೆ ತಾಯಿ ವಿವಾಹ ವಾರ್ಷಿಕೋತ್ಸವವನ್ನು ಸಂಭ್ರಮಿಸಿದ ಕ್ಷಣಗಳ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಮಾನಿಗಳಿಗೆ ಹಂಚಿಕೊಂಡಿದ್ದಾರೆ.

ಈ ಸಂತಸದ ಫೋಟೋವನ್ನು ನೋಡಿದಂತಹ ಅಭಿಮಾನಿಗಳು ಮೇಘನಾ ರಾಜ್ ಅವರ ತಂದೆ ತಾಯಿಗೆ ಶುಭಾಶಯವನ್ನು ಕೋರಿದ್ದಾರೆ. ಸುಂದರ್ ರಾಜ್ ಸುಮಾರು ಸುಮಾರು ನಾಲ್ಕು ದಶಕಗಳಿಂದಲೂ ಕೂಡ ಕನ್ನಡ ಚಲನ ಚಿತ್ರರಂಗದಲ್ಲಿ ಹಲವಾರು ಸಿನಿಮಾದಲ್ಲಿ ಪೋಷಕರಾಗಿ, ಹಾಸ್ಯ ಕಲಾವಿದರಾಗಿ ಗುರುತಿಸಿಕೊಂಡವರು. ಇನ್ನೂ ಇವರ ಧರ್ಮಪತ್ನಿ ಪ್ರಮೀಳಾ ಜೋಷಾಯ್ ಅವರು ಕೂಡ ಕನ್ನಡದ ಬಹುತೇಕ ಚಲನಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ಗುರುತಿಸಿಕೊಂಡಿದ್ದಾರೆ.

ಮೇಘನಾ ರಾಜ್ ಅವರು ರಾಕಿಂಗ್ ಸ್ಟಾರ್ ಯಶ್ ಅವರ ರಾಜಾಹುಲಿ ಎಂಬ ಸಿನಿಮಾದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಳ್ಳುತ್ತಾರೆ. ಈ ಒಂದು ಸಿನಿಮಾದಲ್ಲಿ ಇವರಿಗೆ ಅಪಾರವಾದ ಕೀರ್ತಿ ದೊರೆಯುತ್ತದೆ. ಮೇಘನಾ ರಾಜ್ ಅವರ ನಟಿಯಾಗಿ ನಟನೆಯಲ್ಲಿ ಪಾಲ್ಗೊಳ್ಳಬೇಕಾದರೆ ಚಿರಂಜೀವಿ ಸರ್ಜಾ ಅವರ ಪರಿಚಯವಾಗುತ್ತದೆ ತದನಂತರ ಇವರಿಬ್ಬರ ಸ್ನೇಹ ಬೆಳೆದು ಇದು ಪ್ರೀತಿಗೆ ತಿರುಗಿ ಇಬ್ಬರು ಒಬ್ಬರನ್ನೊಬ್ಬರು ಪ್ರೀತಿಸ ತೊಡಗುತ್ತಾರೆ.

ಇವರಿಬ್ಬರೂ ಕೂಡ ಮದುವೆಯಾಗುವುದಕ್ಕೆ ಮನೆಯಲ್ಲಿ ಒಪ್ಪಿಗೆ ಸೂಚಿಸುತ್ತಾರೆ ಅಂದುಕೊಂಡ ರೀತಿಯಲ್ಲಿ ನಿಶ್ಚಿತಾರ್ಥ ಮದುವೆ ಎರಡು ಕೂಡ ಅದ್ದೂರಿಯಾಗಿ ಮಾಡಿಕೊಳ್ಳುತ್ತಾರೆ. ಮದುವೆಯಾದ ಕೇವಲ ಎರಡು ವರ್ಷಕ್ಕೆ ತಮ್ಮ ಪತಿಯನ್ನು ಮೇಘನಾ ರಾಜ್ ಕಳೆದುಕೊಳ್ಳುತ್ತಾರೆ ಇಂತಹ ಸ್ಥಿತಿ ಯಾರಿಗೂ ಕೂಡ ಬರಬಾರದು. ಏಕೆಂದರೆ ಚಿರಂಜೀವಿ ಸರ್ಜಾ ಸತ್ತಾಗ ಮೇಘನಾ ರಾಜ್ ಅವರಿಗೆ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರು.

ಈ ಸಮಯದಲ್ಲಿ ಹೆಣ್ಣು ಮಕ್ಕಳು ಖುಷಿಯಾಗಿರಬೇಕು ಆದರೆ ಪತಿಯನ್ನು ಕಳೆದುಕೊಂಡು ಮುಂದಿನ ದಾರಿ ತೋಚದೆ ದುಃಖದ ಮಡಲಿನಲ್ಲಿ ಜೀವಿಸಿದರು. ಆದರೂ ಕೂಡ ಈ ನೋವನ್ನು ಮರೆತು ಜೀವಿಸುವುದಕ್ಕೆ ಪ್ರಾರಂಭ ಮಾಡುತ್ತಾರೆ. ಏಕೆಂದರೆ ಮೇಘನಾ ರಾಜ್ ರವರಿಗೆ ಗoಡು ಮ’ಗುವು ಜ’ನನವಾಗುತ್ತದೆ ಮಗ ರಾಯನ್ ರಾಜ್ ಸರ್ಜಾ ಅವರ ಮುಖವನ್ನು ನೋಡಿಕೊಂಡು ಈ ಎಲ್ಲಾ ನೋವನ್ನು ಮರೆಯುತ್ತಾರೆ.

ಮಗ ಹುಟ್ಟಿದ ಮೇಲೆ ಅವರ ಮನೆಯಲ್ಲಿ ಸಂತಸದ ವಾತಾವರಣ ಮೂಡಿದೆ. ಕಳೆದ ತಿಂಗಳಿನಲ್ಲಿ ಮಗನಿಗೆ ನಾಮಕರಣ ಮಾಡಿದರು ಇದೀಗ ತಂದೆ ತಾಯಿಯ ವಿವಾಹ ವಾರ್ಷಿಕೋತ್ಸವ ಆಚಾರಿಸಿದ್ದಾರೆ ಒಟ್ಟಾರೆಯಾಗಿ ಹೇಳುವುದಾದರೆ ಈ ಎಲ್ಲ ನೋವನ್ನು ಮರೆತು ಇದೀಗ ಮಗನ ಜೊತೆ ನೆಮ್ಮದಿಯ ಜೀವನವನ್ನು ಸಾಗಿಸುತ್ತಿದ್ದಾರೆ. ಇನ್ನೂ ತಂದೆ ತಾಯಿಗೆ ಮೇಘನಾ ರಾಜ್ ಅವರು ೨೦ ಲಕ್ಷ ಬೆಲೆ ಬಾಳುವ ಹೊಸ ಟಾಟಾ ಕಂಪನಿಯ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.