ಹೊಸ ವರ್ಷದ ಮೊದಲ ತಿಂಗಳಾದ ಈ ತಿಂಗಳು ನಿಮಗೆ ಅನೇಕ ಶುಭ ಫಲಗಳನ್ನು ಹಾಗೂ ಕೆಲವು ಅಶುಭ ಫಲಗಳನ್ನೂ ನೀಡುವುದಲ್ಲದೆ ಈ ಮಾಸದಲ್ಲಿ ನಿಮಗೆ ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಗೌರವ ಹಾಗೂ ಮನ್ನಣೆ ದೊರೆಯಲಿದೆ ತಾವಂಡುಕೊಂಡ ಕೆಲಸಗಳಲ್ಲಿ ಜಯ ಸಾಧಿಸುವಂತ ನಿಟ್ಟಿನಲ್ಲಿ ಎಲ್ಲ ಕಾರ್ಯಗಳನ್ನು ನೀವು ಕೈಗೊಳ್ಳಬಹುದಾಗಿದೆ. ವೈದ್ಯ ವೃತ್ತಿಯನ್ನು ನಿರ್ವಹಿಸುತ್ತಿರುವವರಿಗೆ ಅತಿ ಹೆಚ್ಚು ಹಣದ ಜೊತೆಗೆ ಪ್ರತಿಷ್ಠಿತ ಸ್ಥಾನಮಾನ ದೊರೆಯುವುದರಲ್ಲೂ ಯಾವುದೇ ಸಂಶಯವಿಲ್ಲ ಹಾಗೂ ನೀವು ಅದೃಷ್ಟವಂತರಾದ್ಧರಿಂದ ಅನಿರೀಕ್ಷಿತ ಧನ ಲಾಭವಾಗುವುದರಲ್ಲಿ ಯಾವಿದೆ ಅನುಮಾನವಿಲ್ಲ.

ಈ ತಿಂಗಳಿನಲ್ಲಿ ಅಲ್ಪ ಮಟ್ಟಿಗೆ ದೈಹಿಕ ದೌರ್ಬಲ್ಯತೆ ನಿಮ್ಮನ್ನು ಕಾಡಲಿದೆ ಮತ್ತು ದುಡುಕಿ ಮಾತನಾಡುವುದು ಆದಷ್ಟು ಮಿತವಾಗಿದ್ದಲ್ಲಿ ಮುಂದಿನ ದಿನಗಳಲ್ಲಿ ಉತ್ತಮ ಫಲಗಳನ್ನೂ ನಿರೀಕ್ಷಿಸಬಹುದು. ವಿಶ್ರಾಂತಿ ಇಲ್ಲದ ಕೆಲಸ ಕಾರ್ಯಗಳಿಂದ ಜೀವನದಲ್ಲಿ ಕೆಲವು ಬಾರಿ ಬೇಸರ ಮೂಡಬಹುದು ಹಾಗೂ ಎಷ್ಟೇ ಬುದ್ಧಿವಂತರಾಗಿದ್ದರೂ ಸಮಯಕ್ಕೆ ತಕ್ಕಂತೆ ಅದರ ಬಳಕೆಯಲ್ಲಿ ಕೊರತೆಯುಂಟಾಗುವುದು. ಯಾವುದೇ ಒತ್ತಡಕ್ಕೆ ಮಣಿಯದೇ ನೀವಂಡುಕೊಂಡ ಕೆಲಸ ಕಾರ್ಯಗಳತ್ತ ಗಮನ ಕೊಡುವುದು ಉತ್ತಮವಾಗಿರುತ್ತದೆ.

ಈ ಮಾಸದಲ್ಲಿ ಯಾವುದೇ ನೂತನ ವಾಹನವನ್ನು ಕೊಳ್ಳದಿರಿ ಅದರಿಂದ ನಿಮಗೆ ಹೆಚ್ಚೀನೂ ಲಾಭವಿಲ್ಲ ಮತ್ತು ಅದರಿಂದ ತೊಂದರೆಗಳು ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿ ಕಂಡುಬರುತ್ತವೆ ವ್ಯಾಪಾರಸ್ತರಿಗೆ ಅತಿ ದೊಡ್ಡ ಪ್ರಮಾಣದ ಲಾಭದ ನಿರೀಕ್ಷಿ ಇಲ್ಲವಾದ್ದರಿಂದ ಯೋಚಿಸಿ ಕಾರ್ಯೋನ್ಮುಖರಾಗುವುದು ಉತ್ತಮ, ಆದರೆ ಸರ್ಕಾರೀ ಮಟ್ಟದ ಕೆಲಸದಲ್ಲಿರುವವರಿಗೆ ಹಾಗೂ ಸಾರಿಗೆ ವ್ಯಾಪಾರ ವ್ಯವಹಾರಗಳನ್ನು ನಿರ್ವಹಿಸುತ್ತಿರುವವರಿಗೆ ಅಧಿಕ ಲಾಭವುಂಟಾಗಲಿದೆ. ಬಾಯಿಗೆ ಸಂಬಂದಿಸಿದ ಕಾಯಿಲೆಗಳು ನಿಮ್ಮನ್ನು ಬಾಧಿಸಲಿವೆ ಹಾಗೂ ತಾಯಿಯ ಆರೋಗ್ಯದಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಇರುವುದು ಉತ್ತಮ.

ಪರಿಹಾರ ಕ್ರಮ: ಬಡ ಮಕ್ಕಳಿಗೆ ಅನ್ನದಾನವನ್ನು ಮಾಡುವುದರಿಂದ ದೋಷ ಪ್ರಮಾಣ ಕಡಿಮೆಯಾಗಿ ಇನ್ನೊ ಅಧಿಕ ಲಾಭವನ್ನು ನೀವು ನಿರೀಕ್ಷಿಸಬಹುದಾಗಿದೆ. ನಿಮ್ಮ ಜೀವನದಲ್ಲಿ ಎಂತಹ ಕಷ್ಟಗಳು ಇದ್ರೂ ಒಂದೇ ಕರೆಯ ಮೂಲಕ ಖಚಿತ ಪರಿಹಾರ ಕಂಡುಕೊಳ್ಳಿ. ಶ್ರೀ ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಚಿಂತಕರು ಪಂಡಿತ್ ಎಂಪಿ ಶರ್ಮ 9845 559493

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!