ಚಿರು ಪುತ್ರ ಮತ್ತು ಮೇಘನಾ ರಾಜ್‌ ಸೇರಿದಂತೆ ಇಡೀ ಸುಂದರ್‌ ರಾಜ್‌ ಕುಟುಂಬಕ್ಕೆ ಕೊರೊನಾ ಪಾಸಿಟಿವ್‌ ಬಂದಿದೆ! ನಟಿ ಮೇಘನಾ ರಾಜ್‌ ಮತ್ತು ಅವರ ಮಗು ಸೇರಿದಂತೆ ಇಡೀ ಕುಟುಂಬಕ್ಕೆ ಕೊರೊನಾ ಪಾಸಿಟಿವ್‌ ಆಗಿದೆ. ಸುಂದರ್‌ ರಾಜ್‌ ಮತ್ತು ಪ್ರಮೀಳಾ ಜೋಷಾಯ್‌ ಅವರಿಗೂ ಸೋಂಕು ತಗುಲಿರುವುದು ದೃಢವಾಗಿದೆ. ಚಿರು ಮಗನಿಗೆ ಕೊರೊನಾ ಆಗಿದೆ ಎಂದು ಕಣ್ಣೀರಿಟ್ಟ ಅರ್ಜುನ್ ಸರ್ಜಾ ಅವರು ಹೇಳಿದ ಮಾತುಗಳು ಈ ರೀತಿಯಾಗಿವೆ.

ಮೇಘನಾ ರಾಜ್ ಹಾಗೂ ಮಗು ಮತ್ತು ಸುಂದರ್ ರಾಜ್ ಹಾಗೂ ಪ್ರಮಿಳಾ ಸುಂದರ್ ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ಅರ್ಜುನ್ ಸರ್ಜಾ ಸಾಮಾಜಿಕ ಜಾಲತಾಣದಲ್ಲಿ ಚಿರು ಸರ್ಜಾ ಬಗ್ಗೆ ಮಾತನಾಡಿದ್ದಾರೆ.‌ ಹೌದು ಅದ್ಯಾಕೋ ದೇವರ ಮನಸ್ಸು ಒಮ್ಮೊಮ್ಮೆ ಕಲ್ಲಾಗಿಬಿಡುತ್ತದೆಯೋ ಎಂದು ಇಂತಹ ಸಂದರ್ಭಗಳಲ್ಲಿ ಅನಿಸುವುದುಂಟು. ಹೌದು ಮೇಘನಾ ರಾಜ್ ಅವರ ಕುಟುಂಬದ ಮೇಲೆ ಕೊರೊನಾ ಕರಿನೆರಳು ಬಿದ್ದಿದೆ.

ಪ್ರಮಿಳಾ ಸುಂದರ್ ಅವರಿಗೆ ಮೊನ್ನೆ ರಾತ್ರಿ‌ ಕೊರೊನಾ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆ ಅವರನ್ನು ಆಸ್ಪತ್ರೆಗೆ ದಾಖಲಿಸಿ ಪರೀಕ್ಷೆ ನಡೆಸಲಾಗಿ ಪ್ರಮಿಳಾ ಸುಂದರ್ ಅವರಿಗೆ ಕೊರೊನಾ ಇರುವುದು ಧೃಡಪಟ್ಟಿತ್ತು.ಹಿರಿಯ ನಟಿ ಪ್ರಮೀಳಾ ಜೋಷಾಯ್‌ ಅವರಿಗೆ ಕೊರೊನಾ ಸೋಂಕು ತಗುಲಿದ ಬೆನ್ನಲ್ಲೇ ಮತ್ತೊಂದು ಬೇಸರದ ಸುದ್ದಿ ಕೇಳಿಬಂದಿದೆ. ಮೇಘನಾ ರಾಜ್‌ ಮತ್ತು ಅವರ ಪುತ್ರನಿಗೂ ಕೊರೊನಾ ವೈರಸ್‌ ವಾಸಿಟಿವ್‌ ಆಗಿದೆ! ಅಲ್ಲದೆ, ಸುಂದರ್‌ ರಾಜ್‌ ಅವರಿಗೂ ಸೋಂಕು ತಗುಲಿರುವುದು ಖಚಿತವಾಗಿದೆ! ಈ ಬಗ್ಗೆ ಸ್ವತಃ ಸುಂದರ್‌ ರಾಜ್‌ ಅವರೇ ಮಾಹಿತಿ ನೀಡಿದ್ದಾರೆ.

ನಮ್ಮ ಕುಟುಂಬದ ಎಲ್ಲರ ಮೇಲೂ ಕೊರೊನಾ ಪರಿಣಾಮ ಬೀರಿದೆ. ಮೇಘನಾ ಮತ್ತು ಮಗುಗೆ ಕೂಡ ಪಾಸಿಟಿವ್‌ ವರದಿ ಬಂದಿದೆ’ ಎಂದು ಅವರು ತಿಳಿಸಿದ್ದಾರೆ. ಎರಡು ದಿನಗಳ ಹಿಂದೆಯೇ ಅಂದರೆ ಡಿಸೆಂಬರ್ 8 ಮಂಗಳವಾರ ಪ್ರಮೀಳಾ ಜೋಷಾಯ್‌ ಬೆಂಗಳೂರಿನ ಖಾಸಗಿ ಆಸ್ಪತ್ರಗೆ ದಾಖಲಾಗಿದ್ದರು. ಸುಂದರ್‌ ರಾಜ್‌ ಕೂಡ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೆಲವು ದಿನಗಳಿಂದ ಮೇಘನಾ ಮತ್ತು ಮಗುಗೆ ಮನೆಯಲ್ಲೇ ಐಸೊಲೇಟ್‌ ಆಗಿ ಚಿಕಿತ್ಸೆ ನೀಡಲಾಗುತ್ತಿದೆ. ಅವರಿಗೆ ಯಾವುದೇ ರೋಗ ಲಕ್ಷಣ ಕಾಣಿಸಿಕೊಂಡಿಲ್ಲ. ನಾನು ಮತ್ತು ಪ್ರಮೀಳಾ ಹಿರಿಯ ನಾಗರಿಕರಾದ ಕಾರಣ ಮನೆಯಲ್ಲಿ ಚಿಕಿತ್ಸೆ ಪಡೆಯುವುದು ಸೂಕ್ತ ಅಲ್ಲ ಎನಿಸಿತು. ನಮ್ಮ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಆಸ್ಪತ್ರೆಗೆ ದಾಖಲಾಗಿದ್ದೇವೆ ಎಂದು ಸುಂದರ್‌ ರಾಜ್‌ ಹೇಳಿದ್ದಾರೆ.

ಈ ಬಗ್ಗೆ ಮೇಘನಾ ಅವರು ಮಾತನಾಡಿ. ಅಭಿಮಾನಿಗಳು ಯಾರೂ ಚಿಂತಿಸಬೇಡಿ, ಅಪ್ಪ ಅಮ್ಮ ನನಗೆ ಹಾಗೂ ಮಗನಿಗೂ ಕೊರೊನಾ ಪಾಸಿಟಿವ್ ಆಗಿದೆ. ಎಲ್ಲರೂ ಚಿಕಿತ್ಸೆ ಪಡೆಯುತ್ತಿದ್ದೇವೆ. ಜೂನಿಯರ್ ಚಿರು ಚೆನ್ನಾಗಿದ್ದಾನೆ ಹಾಗೂ ಸದಾ ನನ್ನ ಜೊತೆಯಲ್ಲಿಯೇ ಇದ್ದಾನೆ. ಎಲ್ಲರೂ ಕೊರೊನಾ ಗೆದ್ದು ಬರುವೆವು ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದು ವಿಚಾರ ತಿಳಿಸಿದ್ದಾರೆ. ಇತ್ತ ಅರ್ಜುನ್ ಸರ್ಜಾ ಅವರು ಮೇಘನಾ ಹಾಗೂ ಮಗುವಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ವಿಚಾರ ತಿಳಿದು ಚಿರು ಸರ್ಜಾ ರನ್ನು ನೆನೆದಿದ್ದಾರೆ. ಚಿರು ಸರ್ಜಾರನ್ನು ಮಗನಂತೆ ನೋಡುತ್ತಿದ್ದ ಅರ್ಜುನ್ ಸರ್ಜಾ ಅವರು ಅತ್ತ ಮಗನಿಲ್ಲ. ಇತ್ತ ಮೇಘನಾ ಹಾಗೂ ಮಗುವಿಗೆ ಕೊರೊನಾ ಎಂಬ ವಿಚಾರ ಕೇಳಿ ನೊಂದುಕೊಂಡ ಅರ್ಜುನ್ ಸರ್ಜಾ ಅವರು “ಚಿರು ಸರ್ಜಾರ ಫೋಟೋ ಹಂಚಿಕೊಂಡು. ನಿನ್ನನ್ನು ಎಷ್ಟು‌ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದರೆ ಅದನ್ನು ಹೇಳಲು ಅಸಾಧ್ಯ ಮಗನೇ” ಎಂದು ಬರೆದುಕೊಂಡು ಕಣ್ಣೀರಿಟ್ಟಿದ್ದಾರೆ.

ಎಳೆ ಕಂದನ ಲಾಲನೆ ಪಾಲನೆ ಮಾಡಬೇಕಾದ ಚಿರು ಇಲ್ಲ. ಇತ್ತ ಇಂತಹ ಸಮಯದಲ್ಲಿ ಅಜ್ಜಿಯ ಆರೈಕೆಯ ಅಗತ್ಯ ಬಹಳಷ್ಟಿದೆ ಆದರೆ ಸಂಪೂರ್ಣ ಕುಟುಂಬಕ್ಕೆ ಕೊರೊನಾ. ಅದರಲ್ಲಿಯೂ ಎಳೆ ಮಗುವಿಗೂ ಸಹ ಸೋಂಕು ತಗುಲಿದ್ದು ಅರಗಿಸಿಕೊಳ್ಳಲಾಗದ ವಿಚಾರವಾಗಿದೆ. ಈ ಸಮಯದಲ್ಲಿ ಚಿರು ಇದ್ದಿದ್ದರೆ ಮೇಘನಾರಿಗೆ ನಿಜಕ್ಕೂ ಬಹಳ ಧೈರ್ಯ ಇರುತ್ತಿತ್ತು. ಅದೇ ಕಾರಣಕ್ಕಾಗಿ ಮಗನನ್ನು ನೆನೆದು ಕಣ್ಣೀರಿಟ್ಟಿದ್ದಾರೆ ಅರ್ಜುನ್ ಸರ್ಜಾ.

Leave a Reply

Your email address will not be published. Required fields are marked *