Ultimate magazine theme for WordPress.

ಯುಗಾದಿಯಿಂದ ತುಲಾ ರಾಶಿಯವರ ಹೊಸಜೀವನ ಆರಂಭ, ಹೇಗಿರತ್ತೆ ಗೊತ್ತಾ ಇವರ ಲೈಫ್

0 59

libra astrology 2023 ಹಳೇದೆಲ್ಲಾವನ್ನು ಹಬ್ಬಕ್ಕೆ ಬಿಟ್ಟು ಹೊಸ ಬದುಕನ್ನು ಸ್ವಾಗತಿಸುವುದೇ ಈ ಯುಗಾದಿಯ ವಿಶೇಷತೆ. ಚಳಿಗಾಲ ಮುಗಿದು ಬೇಸಿಗೆಯ ಆರಂಭದ ಜೊತೆಗೆ ವಸಂತನ ಆಗಮನ ಮೈ ಮನಗಳಿಗೆ ಹೊಸ ಮೆರಗನ್ನು ತಂದುಕೊಡುತ್ತದೆ‌. ಮಾವಿನ ಚಿಗುರೆಲೆಯ ಸವಿಯನ್ನು ಸವಿದ ಕೋಗಿಲೆಯೂ ಇಂಪಾಗಿ ಹಾಡುವಂತೆ, ನಿಮ್ಮ ಬದುಕು ಸಹ ತಂಪಾಗಿ ಕಂಪಾಗಿ ಇರಲಿ ಎಂದು ದೇವರಲ್ಲಿ ಬೇಡುತ್ತಾ, 2023ರಿಂದ 2024ರ ತನಕ ತುಲಾ ರಾಶಿಯವರ ವರ್ಷ ಭವಿಷ್ಯ ಹೇಗಿದೆ ಎಂದು ನೋಡೊಣ.

ಇಷ್ಟು ದಿನ ನಿಮ್ಮ ರಾಶಿಯಲ್ಲಿ ಕೇತು ಹಾಗೂ ಸಪ್ತಮದಲ್ಲಿ ರಾಹು, ಚತುರ್ಥ ಭಾವದಲ್ಲಿ ಶನಿ ಸ್ಥಿತನಾಗಿದ್ದರೆ, ಗುರುವು ಆರನೇ ಮನೆಯಲ್ಲಿ ನೆಲೆಸಿದ್ದ. ಈ ವರ್ಷ 2023ರ ಯುಗಾದಿಯ ನಂತರ ಶನಿ ಪಂಚಮಕ್ಕೆ ಬರುವುದರಿಂದ ನಿಮ್ಮ ನಿತ್ಯ ಜೀವನದಲ್ಲಿ ಬಹಳಷ್ಟು ಬದಲಾವಣೆ ನಡೆಯಲಿವೆ. ಸಪ್ತಮದಲ್ಲಿ ಇರುವಂತಹ ರಾಹು ನವೆಂಬರ್ ತಿಂಗಳಾಂತ್ಯದಲ್ಲಿ ಮೀನ ರಾಶಿಯತ್ತ ಚಲಿಸುತ್ತಾನೆ. ಕೇತುವು ಸಹ ನವೆಂಬರ್ ತನಕ ನಿಮ್ಮ ರಾಶಿಯಲ್ಲಿ ಇರುತ್ತಾನೆ. ಗುರುವು ಯುಗಾದಿಯ ನಂತರ ಏಳನೆ ಮನೆಯನ್ನು ಪ್ರವೇಶಿಸಲಿದ್ದಾನೆ‌.

2023 ನೇ ಶೋಭಾಕೃತ ಸಂವತ್ಸರದ ಆರಂಭದಿಂದಲೂ ಶನಿ ಪಂಚಮದಲ್ಲಿ ಇರುವುದರಿಂದ ಪಂಚಮಶನಿ ನಿಮ್ಮನ್ನು ಸ್ವಲ್ಪಮಟ್ಟಿಗೆ ಕಾಡಲಿದ್ದಾನೆ. ಸಾಡೇಸಾತಿ ಶನಿ ಹಾಗೂ ಅಷ್ಟಮ ಶನಿ ಎರಡರ ಪ್ರಭಾವವನ್ನು ಪಂಚಮಶನಿಯು ನೀಡುವುದರಿಂದ ಕೆಲವೊಮ್ಮೆ ಕಷ್ಟನಷ್ಟಗಳು ಜೊತೆಯಲ್ಲಿ ಅವಮಾನಗಳನ್ನು ತುಲಾ ರಾಶಿಯವರು ಅನುಭವಿಸಬೇಕಾಗುತ್ತದೆ. ಶನಿಯಿಂದ ಒಂದಷ್ಟು ಬದಲಾವಣೆಗಳು ಕಂಡು ಬರುತ್ತವೆ. ಆದರೆ ಗುರುವಿನ ದೃಷ್ಟಿಯು ನಿಮಗೆ ಸಾಕಾರವಾಗಿ ಸಿಗುವುದರಿಂದ ಹೆಚ್ಚಿನ ತೊಂದರೆಗಳು ಬಾಧಿಸಲಾರವು.

ಕುಟುಂಬದಲ್ಲಿ ಮನಸ್ಥಾಪಗಳು, ಹಣಕಾಸಿನ ಸಮಸ್ಯೆಗಳು ಈ ಸಮಯದಲ್ಲಿ ಹೆಚ್ಚಾಗಿ ನಿಮ್ಮ ಸಮಾಧಾನವನ್ನು ಕಸಿದುಕೊಳ್ಳುತ್ತವೆ. ಹಣ ಬಂದ ಹಾಗೆ ಖರ್ಚು ಸಹ ಬರುವುದರಿಂದ ಉಳಿತಾಯವು ಈ ವರ್ಷದಲ್ಲಿ ಸಾಧ್ಯವಾಗದೆ ಹೋಗಬಹುದು‌. ಶನಿಯು ನಿಮ್ಮ ರಾಶಿಗೆ ಲಾಭದಾಯಕನು ಆಗಿರುವುದರಿಂದ ನಿಧಾನಗತಿಯಲ್ಲಿ ಒಳ್ಳೆಯ ದಿನಗಳನ್ನು ಕಾಣುತ್ತಿರಿ. ತಾಳ್ಮೆ ಬೇಕು. ಗುರುವಿನ ಬೆಂಬಲವು ಇರುತ್ತದೆಯಾದರೂ ರಾಹುವಿನ ವಕ್ರದೃಷ್ಟಿಯು ಸೇರುವುದರಿಂದ ಎಲ್ಲವು ಕೆಟ್ಟದ್ದಾಗುವ ಹಾಗೆ ಕಾಣಿಸುತ್ತದೆ.

ಇದನ್ನೂ ಓದಿ..ಮಾರ್ಚ್ 15 ರಿಂದ ಗುರುಬಲ ಶುರು, ಈ 5 ರಾಶಿಯವರ ಜೀವನ ಸಂಪೂರ್ಣ ಬದಲಾಗುತ್ತೆ

ಗಂಡ ಹೆಂಡತಿಯರ ನಡುವಿನ ಅಂತರಗಳು, ಮನಸ್ಥಾಪಗಳು, ತಪ್ಪು ತಿಳುವಳಿಕೆಗಳು ಯುಗಾದಿಯ ನಂತರ ಬಗೆ ಹರಿಯಲಿದ್ದು, ಗುರುವಿನ ಅನುಗ್ರಹದಿಂದ ಸಂಸಾರದಲ್ಲಿ ನೆಮ್ಮದಿ ಕಾಣುವಿರಿ. ಉದ್ಯೋಗ ಕ್ಷೇತ್ರದಲ್ಲಿ ತುಲಾ ರಾಶಿಯವರಿಗೆ ಈ ವರ್ಷ ಪ್ರಮೋಷನ್ ಸಿಗುವ ಸಾಧ್ಯತೆಗಳಿದ್ದು, ಕೆಲವೊಮ್ಮೆ ತಾಳ್ಮೆಯಿಂದ ನಡೆದುಕೊಂಡಲ್ಲಿ ಕಷ್ಟಗಳಿಂದ ಪಾರಾಗುತ್ತಿರಿ. ವಿದ್ಯಾರ್ಥಿಗಳು ಹೆಚ್ಚಿನ ಕಷ್ಟ ಪಡಬೇಕಾಗುತ್ತದೆ. ಆದಾಗ್ಯೂ ಅದರ ಫಲಿತಾಂಶಗಳು ನೀವು ಎಣಿಸಿಕೊಂಡ ರೀತಿಯಲ್ಲಿ ಬಾರದೆ ಹೋಗಬಹುದು.

ಶನಿಯಿಂದ ಉಂಟಾದ ಕಷ್ಟಗಳನ್ನು ಗುರುವು ತುಂಬಿಕೊಡುತ್ತಾನಾದರೂ ಸಮಯವು ಹೆಚ್ಚು ತಗುಲುವುದರಿಂದ ನೀವು ತಾಳ್ಮೆಗೆಡದೆ ಕಾಯಬೇಕಾಗುತ್ತದೆ. ಗುರುವಿನ ದೃಷ್ಟಿ ಲಾಭದ ಕಡೆ ಇರುವುದರಿಂದ ಸ್ವಂತ ಉದ್ಯೋಗ ಮಾಡುತ್ತಿರುವವರಿಗೆ ಹಣಕಾಸಿನ ಹರಿವು ಇರುತ್ತದೆ‌. ಆದರೆ ದುಡ್ಡು ನಿಲ್ಲಲಾರದು.

ನಿಮ್ಮ ಕುಟುಂಬದ ಸದಸ್ಯರಿಂದ ಬಹಳ ಅನುಕೂಲಗಳು ದೊರೆಯಲಿದೆ. ಹೊಸದಾಗಿ ಬಂಡವಾಳಗಳನ್ನು ಹಾಕುವವರು ಸ್ವಲ್ಪ ಕಾಯುವುದು ಒಳಿತು. ಈ ಸಮಯ ಅಷ್ಟೇನು ಚೆನ್ನಾಗಿಲ್ಲದ ಕಾರಣ ಹಾಕಿದ ಹಣ ವಾಪಸ್ಸು ಸಿಗುವ ಸಾಧ್ಯತೆಯು ಕಡಿಮೆಯಿದೆ. ಆದಷ್ಟು ಒಳ್ಳೆಯ ಕೆಲಸಗಳನ್ನು ಮಾಡುತ್ತಿರಿ ಶುಭವಾಗುತ್ತದೆ.

ಇದನ್ನೂ ಓದಿ...ಕುಂಭ ರಾಶಿಯವರಿಗೆ ಈ ವರ್ಷ ಶನಿಯಿಂದ ತುಂಬಾ ಒಳ್ಳೆಯ ಫಲಗಳು ಸಿಗುತ್ತೆ ಯಾಕೆಂದರೆ..

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ

Leave A Reply

Your email address will not be published.