ಆ ದಿನ ಚಿಕ್ಕೋಡಿಯಿಂದ ಬರುವಾಗ ನಟ ಸುನಿಲ್ ಜೀವನದಲ್ಲಿ ಆಗಿದ್ದೇನು ನೋಡಿ

0 1

ನಟ ಸುನೀಲ ಅಪಘಾತವಾಗಿ ನಿಧನರಾಗಿದ್ದರು, ಅಪಘಾತದ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಬೆಂಗಳೂರಿನ ಆರ್.ವಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದುತಿದ್ದ ರಾಮಕೃಷ್ಣ ಅಪ್ಪಟ ಯಕ್ಷಗಾನ ಕಲಾವಿದ. ಆಕಸ್ಮಿಕವಾಗಿ ಮ್ಯಾಗಜೀನ್ ಗೆ ಪೋಸ್ ಕೊಟ್ಟ ನಂತರ ಅವನ ಜೀವನ ಬದಲಾಯಿತು. ಪೋಟೊ ನೋಡಿದ ನಿರ್ಮಾಪಕರು ಕೆಲವು ಚಿತ್ರಗಳಲ್ಲಿ ನಟಿಸಲು ಅವಕಾಶ ಕೊಟ್ಟರು. ಓದನ್ನು ಅರ್ಧಕ್ಕೆ ಬಿಟ್ಟು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಬಹುಬೇಗ ಸ್ಟಾರ್ ನಟನಾದ ರಾಮಕೃಷ್ಣನೇ ನಟ ಸುನೀಲ. ಹ್ಯಾಂಡ್ ಸಮ್ ಆಗಿರುವ ಇವರು ಹುಡುಗಿಯರ ಡ್ರೀಮ್ ಬಾಯ್ ಹಾಗೂ ನಿರ್ಮಾಪಕರ ಲಕ್ಕಿ ಬಾಯ್ ಆಗಿದ್ದರು. ಸತತ ಮೂರು ವರ್ಷ ಹಿಟ್ ಮೇಲೆ ಹಿಟ್ ಸಿನಿಮಾ ಮಾಡಿದರು. ಜುಲೈ 23, 1994 ಹೈದ್ರಾಬಾದ್ ನಲ್ಲಿ ಹಗಲು ಶೂಟಿಂಗ್ ಮಾಡಿದ ಸುನೀಲ ರಾತ್ರಿ ನಟಿ ಮಾಲಾಶ್ರೀ ಜೊತೆ ಚಿಕ್ಕೋಡಿಯಲ್ಲಿ ನಡೆಯುತ್ತಿದ್ದ ರಸಮಂಜರಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿದ್ದ ಕಾರಣ ಕಾರಿನಲ್ಲಿ ಚಿಕ್ಕೋಡಿಗೆ ಪ್ರಯಾಣ ಬೆಳೆಸಿದರು ಚಿಕ್ಕೋಡಿಯಲ್ಲಿ ರಸಮಂಜರಿ ಕಾರ್ಯಕ್ರಮ ಮುಗಿಯುವ ಹೊತ್ತಿಗೆ ರಾತ್ರಿ 3 ಗಂಟೆಯಾಗಿತ್ತು. ಆಯಾಸಗೊಂಡಿದ್ದು ಸುನೀಲ ಇವತ್ತು ಇಲ್ಲೇ ಉಳಿದು ಬೆಳಗ್ಗೆ ಬೆಂಗಳೂರಿಗೆ ಹೋಗೋಣ ಎಂದು ಹೇಳಿದರು ಕಾರ ಡ್ರೈವರ್ ಇದಕ್ಕೆ ಒಪ್ಪಲಿಲ್ಲ ಕಾರಣ ಮರುದಿನ ಕಾರ್ ಡ್ರೈವರ್ ಮಗನ ಹುಟ್ಟು ಹಬ್ಬವಿತ್ತು. ಡ್ರೈವರ್ ಗೆ ಬೇಜಾರು ಮಾಡುವುದು ಬೇಡವೆಂದು ಸುನೀಲ್ ಪ್ರಯಾಣಕ್ಕೆ ಒಪ್ಪಿದರು.

ಜುಲೈ 24, 1994 ರ ಬೆಳಗ್ಗೆ 5 ಗಂಟೆ ಸಮಯ ಚಿತ್ರದುರ್ಗದ ಮಾದನಾಯಕನ ಹಳ್ಳಿ ಸಮೀಪ ಸುನೀಲ ಪ್ರಯಾಣ ಮಾಡುತ್ತಿದ್ದ ಕಾರಿಗೆ ತಮಿಳುನಾಡಿನ ಲಾರಿ ಡಿಕ್ಕಿ ಹೊಡೆಯಿತು. ಕಾರ್ ಡ್ರೈವರ್ ಮರಣ ಹೊಂದಿದರು ಡ್ರೈವರ್ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಸುನೀಲ ಅವರಿಗೆ ಭೀಕರ ಗಾಯಗಳಾದವು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೂ ಅಷ್ಟೊತ್ತಿಗೆ ಸುನೀಲ ಇಹಲೋಕ ತ್ಯಜಿಸಿದ್ದರು. ಆವತ್ತು ಸುನೀಲ ಅವರ ಮಾತನ್ನು ಕೇಳಿದ್ದರೆ ಅಪಘಾತವಾಗುತ್ತಿರಲಿಲ್ಲ. ಈ ಅಪಘಾತದ ಹಿಂದೆ ಕಾಣದ ಕೈಗಳು ಇವೆ ಎನ್ನುವುದು ಹೆಚ್ಚಿನ ಜನರ ಅಭಿಪ್ರಾಯ. ಏನೇ ಆದರೂ ಕನ್ನಡ ಚಿತ್ರರಂಗದಲ್ಲಿ ಉಜ್ವಲಿಸಬೇಕಾದ ಸುನೀಲ ಬೇಗನೆ ದೂರವಾಗಿದ್ದು ನೋವಿನ ಸಂಗತಿ.

Leave A Reply

Your email address will not be published.