ಮಗಳಿಗಾಗಿ ಹರಕೆ ಪೂರೈಸಿದ ಸುಂದರ್ ರಾಜ್

0 0

ಸಂತಸದಲ್ಲಿರುವ ಮೇಘನಾ ರಾಜ್ ಅವರ ತಂದೆ ಸುಂದರರಾಜ್ ಅವರು ಮೇಘನಾ ಅವರಿಗೆ ಗಂಡು ಮಗುವಾದ ನಂತರ ತಮ್ಮ ಮಾತಿನಂತೆ ಹರಕೆಯನ್ನು ತೀರಿಸಿದರು ಅದು ಯಾವ ಹರಕೆ ಆ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಮೇಘನಾ ರಾಜ್ ಅವರ ತಂದೆ ಸುಂದರರಾಜ್ ಅವರು ಅಳಿಯನಾದ ಚಿರಂಜೀವಿ ಸರ್ಜಾ ಅವರು ಅಗಲಿದ ದಿನವೆ ತಿರುಪತಿ ತಿಮ್ಮಪ್ಪನಿಗೆ ಮಗಳು ಪ್ರೆಗ್ನೆಂಟ್ ಇರುವುದರಿಂದ ಅವಳಿಗೆ ಯಾವುದೇ ತೊಂದರೆ ಆಗದೆ ಸುರಕ್ಷಿತವಾಗಿ ಡೆಲಿವರಿ ಆಗಬೇಕೆಂದು ಕೇಶ ಮುಂಡನ ಮಾಡಿಸುವುದಾಗಿ ಹರಕೆ ಹೊತ್ತಿದ್ದರು ಅದರಂತೆ ಮೇಘನಾ ಗಂಡು ಮಗುವಿಗೆ ಜನ್ಮ ನೀಡಿದ ನಂತರ ಸುಂದರರಾಜ್ ಅವರು ತಿರುಪತಿಗೆ ಹೋಗಿ ಕೇಶಮುಂಡನ ಮಾಡಿಸಿಕೊಂಡಿದ್ದಾರೆ. ಸುಂದರರಾಜ್ ಅವರು ದೇವರು ಎಲ್ಲವನ್ನು ನೋಡುತ್ತಿರುತ್ತಾನೆ. ಒಂದುಕಡೆ ಕಷ್ಟ ಕೊಟ್ಟು ಇನ್ನೊಂದು ಕಡೆ ಸುಖ ಕೊಡುತ್ತಾನೆ.

ನಮ್ಮ ತಾಯಿ ತಿರುಪತಿ ತಿಮ್ಮಪ್ಪನನ್ನು ಬಹಳ ನಂಬುತ್ತಿದ್ದರು ನಾವು ಚಿಕ್ಕವರಿದ್ದಾಗಲೂ ಏನೇ ಕಷ್ಟ ಬಂದರು ತಿರುಪತಿ ತಿಮ್ಮಪ್ಪನಿಗೆ ಬೇಡಿಕೊಳ್ಳುತ್ತಿದ್ದರು. ಸಣ್ಣ ಖಾಯಿಲೆ ಬಂದರು ಅವರು ಹರಕೆ ಹೇಳಿಕೊಳ್ಳುತ್ತಿದ್ದರು ಅದರಂತೆ ಗುಣವಾಗುತ್ತಿತ್ತು ಅವರು ಯಾವಾಗಲೂ ಶ್ರೀನಿವಾಸ, ವೆಂಕಟೇಶ ಎಂದು ಹೇಳುತ್ತಿದ್ದರು. ಯಾವುದು ಶಾಶ್ವತವಾದುದಲ್ಲ ದೇವರಿಗೆ ಶರಣಾಗತಿಯಾಗಬೇಕು ಎಂದು ಅಮ್ಮ ಹೇಳುತ್ತಿದ್ದರು ಅದೇ ಸತ್ಯ ನಮ್ಮ ಕುಟುಂಬಕ್ಕೆ ಕಷ್ಟ ಬಂದಿದೆ ಚಿರು ಸರ್ಜಾ ಅವರು ಅಗಲಿದ್ದಾರೆ ಆದರೆ ಮೊಮ್ಮಗನ ರೂಪದಲ್ಲಿ ಅವರು ಮತ್ತೆ ಬಂದಿದ್ದಾರೆ, ನಮಗೆ ಬಹಳ ಖುಷಿ ತಂದಿದೆ ಅಲ್ಲದೇ ಮನೆಯಲ್ಲಿ ಸಂಭ್ರಮದ ವಾತಾವರಣ ಕಂಡುಬಂದಿದೆ ಎಂದು ಸುಂದರರಾಜ್ ತಮ್ಮ ಮಾತನ್ನು ಹಂಚಿಕೊಂಡರು. ಅವರ ಮೊಮ್ಮಗನಿಗೆ ಎಲ್ಲರ ಪ್ರೀತಿ ಸಿಗಲಿ, ಜೀವನ ಉಜ್ವಲವಾಗಲಿ ಎಂದು ಹಾರೈಸೋಣ.

Leave A Reply

Your email address will not be published.