ಜೇನು ಹಾಗೂ ಮಾವಿನಕಾಯಿಗಾಗಿ ನಟಿ ಅಮೂಲ್ಯ ಏನ್ ಮಾಡಿದ್ರು ಗೊತ್ತೇ?

0 2

ರಾಜ್ಯದಲ್ಲಿ ಜನತಾ ಕರ್ಫ್ಯೂ ಘೋಷಣೆ ಮಾಡುವುದಕ್ಕೂ ಮೊದಲೇ ಸ್ಯಾಂಡಲ್ ವುಡ್ ಸೆಲ್ಫ್ ಲಾಕ್ ಡೌನ್ ಘೋಷಣೆ ಮಾಡಿತ್ತು. ಚಿತ್ರೀಕರಣ ಇಲ್ಲದ ಕಾರಣ ಹಲವಾರು ನಟ-ನಟಿಯರು ತಮ್ಮ ಕುಟುಂಬದೊಂದಿಗೆ ಸಮಯ ಕಳೆಯಲು ತಮ್ಮ ಊರುಗಳತ್ತ ಮುಖ ಮಾಡಿದ್ದರು. ಕೆಲವರು ತಮ್ಮ ಫಾರಂ ಹೌಸ್ ನಲ್ಲಿ ಕಾಲ ಕಳೆಯುತ್ತಿದ್ದಾರೆ. ಅದೇ ರೀತಿ ನಟಿ ಅಮೂಲ್ಯ ಕೂಡಾ ಈ ಲಾಕ್ ಮಾಡಿ ಸಮಯದಲ್ಲಿ ತನ್ನ ಕುಟುಂಬದ ಜೊತೆಗೆ ತಮ್ಮ ಫಾರ್ಮ್ ಹೌಸ್ ನಲ್ಲಿ ಸಮಯ ಕಳೆಯುತ್ತಾ ಇದ್ದಾರೆ ಅಲ್ಲಿನ ಕೆಲವು ಸುಂದರ ಕ್ಷಣಗಳ ವಿಡಿಯೋವನ್ನು ಅಮೂಲ್ಯ ಹಂಚಿಕೊಂಡಿದ್ದಾರೆ.

ಕನ್ನಡ ಸಿನಿಮಾ ರಂಗದಲ್ಲಿ ಬಾಲನಟಿಯಾಗಿ ಅಭಿನಯ ಆರಂಭಿಸಿದ ನಟಿ ಅಮೂಲ್ಯ ಕನ್ನಡದ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ತನ್ನ ಮುಗ್ದ ನಟನೆಯಿಂದ ಜನರ ಮನ ಗೆದ್ದಿದ್ದಾರೆ. ಬಾಲ್ಯದಲ್ಲಿ ಸುದೀಪ್ ಅಭಿನಯದ ಚಂದು ಹಾಗೂ ದರ್ಶನ್ ಅಭಿನಯದ ಲಾಲಿ ಹಾಡು ಚಿತ್ರಗಳಲ್ಲಿ ಪುಟ್ಟ ಅಮೂಲ್ಯ ಅವರ ಪಾತ್ರವನ್ನು ನಾವು ಕಾಣಬಹುದು. ಚೆಲುವಿನ ಚಿತ್ತಾರ ಚಿತ್ರದ ಮೂಲಕ ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ಅಭಿನಯ ಮಾಡುವ ಮೂಲಕ ಕನ್ನಡ ಚಿತ್ರ ರಂಗದ ನಾಯಕ ನಟಿಯಾಗಿ ಪಾದಾರ್ಪಣೆ ಮಾಡಿದ್ದಾರೆ ನಟಿ ಅಮೂಲ್ಯ. ನಂತರ ಗಜಕೇಸರಿ , ಶ್ರಾವಣಿ ಸುಬ್ರಮಣ್ಯ , ಕೃಷ್ಣ ರುಕ್ಕು , ಮಾಸ್ತಿಗುಡಿ , ನಾನು ನನ್ನ ಕನಸು ಹೀಗೇ ಇನ್ನೂ ಅನೇಕ ಚಿತ್ರಗಳಲ್ಲಿ ಅಭಿನಯಿಸಿ ಮುಗ್ಧತೆಯಿಂದ ಜನರ ಮನ ಗೆದ್ದಿದ್ದಾರೆ. ಸಾಕಷ್ಟು ಅವಕಾಶಗಳು ಇವರನ್ನು ಅರಸಿ ಬರುವ ಸಂದರ್ಭದಲ್ಲಿ ನಟಿ ಅಮೂಲ್ಯ ಅವರು ಜಗದೀಶ್ ಎಂಬವರ ಜೊತೆ ವಿವಾಹ ಆಗುತ್ತಾರೆ. ವಿವಾಹದ ನಂತರ ಚಿತ್ರರಂಗದಿಂದ ಸಧ್ಯ ಸ್ವಲ್ಪ ದೂರವೇ ಇದ್ದಾರೆ ನಟಿ ಅಮೂಲ್ಯ.

ಸ್ಯಾಂಡಲ್‍ವುಡ್ ನ ಗೋಲ್ಡನ್ ಕ್ವೀನ್ ಎಂದೇ ಹೆಸರಾದ ನಟಿ ಅಮೂಲ್ಯ ಜಗದೀಶ್ ಮದುವೆಯಾದ ನಂತರ ಯಾವುದೇ ಸಿನಿಮಾದಲ್ಲಿ ಅಭಿನಯಿಸಿಲ್ಲ. ಆದರೂ ಸದಾ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುತ್ತಾರೆ. ಸಿನಿಮಾಗಳಲ್ಲಿ ಎಷ್ಟು ಅಮಾಯಕವಾಗಿ ಕಾಣುತ್ತಾರೋ ನಿಜ ಜೀವನದಲ್ಲೂ ಅಷ್ಟೇ ಮೃದು ಸ್ವಭಾವದ ನಟಿ. ವಿವಾಹದ ನಂತರ ಸಿನಿಮಾ ರಂಗದಿಂದ ಕೊಂಚ ಬ್ರೇಕ್​ ಪಡೆದಿರುವ ನಟಿ ಸ್ಯಾಂಡಲ್​ವುಡ್​ಗೆ ಕಮ್​ಬ್ಯಾಕ್​ ಮಾಡಲಿದ್ದಾರಂತೆ ಎನ್ನುವ ಈ ಸುದ್ದಿ ತುಂಬಾ ದಿನಗಳಿಂದ ಗಾಂಧಿನಗರದ ಗಲ್ಲಿಗಳಲ್ಲಿ ಹರಿದಾಡುತ್ತಿದೆ. ಆದರೂ ಅಮೂಲ್ಯ ಗಂಡ ಜಗದೀಶ್​ ಜತೆ ಫಾರಿನ್​ ಟ್ರಿಪ್​ ಅಂತ ಖುಷಿಯಾಗಿ ಕಾಲ ಕಳೆಯುತ್ತಿದ್ದಾರೆ. ಇಷ್ಟೆಲ್ಲ ಓಡಾಡುತ್ತಿದ್ದರೂ ಅವರಿಗೆ ಹಕ್ಕಿಯಾಗುವ ಆಸೆ ಇದೆಯಂತೆ. ಎಲ್ಲೆಂದರೆಲ್ಲಿ ಬೇಕಾದಾಗ ಹಾರಿ ಹೋಗಬಹುದು ಅನ್ನೋ ಕಾರಣಕ್ಕೆ ತಾನೂ ಹಕ್ಕಿಯಾಗಬಾರದಿತ್ತೆ ಎಂದು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ. ಗೋಲ್ಡನ್ ಕ್ವೀನ್ ಅಮೂಲ್ಯ ಅವರ ಈ ಟ್ವೀಟ್ ನ ಹೊಂದಿರುವ ಉದ್ದೇಶ ಬೇಸಿಗೆಯ ತಾಪದಿಂದ ಪಕ್ಷಿಗಳನ್ನ ರಕ್ಷಿಸಿ ಎಂದು ಹೇಳಿಕೊಂಡಿದ್ದಾರೆ. ಅವರ ಉದ್ದೇಶ ಒಳ್ಳೆಯದಾಗಿದ್ದು ಈ ಕಾರ್ಯದಲ್ಲಿ ಅವರೊಂದಿಗೆ ಕೈ ಜೋಡಿಸೋಣ.

ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಸಕ್ರಿಯರಾಗಿ ಇರುವ ಅಮೂಲ್ಯ ಈಗ ಇತ್ತೀಚೆಗೆ ಇದೇ ರೀತಿಯ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ಕೋರೋನ ವೈರಸ್ ಲಾಕ್ ಡೌನ್ ಸಮಯದಲ್ಲಿ ಯಾರಿಗೂ ಕೆಲಸ ಇಲ್ಲದ ಹಾಗೇ ಆಗಿದೆ. ಬಡ ಜನರು ತಮ್ಮ ತಮ್ಮ ಕುಟುಂಬದ ಜೊತೆಗೆ ಮನೆಯಲ್ಲಿಯೇ ಉಳಿದುಕೊಳ್ಳುವ ಹಾಗೆ ಆಗಿದ್ದರೆ ಸದಾ ಅಲ್ಲಿಲ್ಲಿ ಸುತ್ತಾಡಿಕೊಂಡು , ಶೂಟಿಂಗ್ ಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಇರುತ್ತಿದ್ದ ನಟ ನಟಿಯರು ಈಗ ಸ್ವಲ್ಪ ವಿರಾಮ ಪಡೆಯಲು ಅವರವರ ಫಾರ್ಮ್ ಹೌಸ್ ಗಳಿಗೆ , ಊರಿಗೆ ತೆರಳಿದ್ದಾರೆ. ಅದೇ ರೀತಿ ಅಮೂಲ್ಯ ಕೂಡಾ ಈ ಸಮಯದಲ್ಲಿ ತನ್ನ ಪತಿ ಹಾಗೂ ಕುಟುಂಬದವರ ಜೊತೆಗೆ ಫಾರ್ಮ್ ಹೌಸ್ ಗೆ ತೆರಳಿ ಅಲ್ಲಿ ಮಾವಿನ ಹಣ್ಣು ಹಾಗೂ ಜೇನು ಕೀಳುವ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಒಂದು ವಿಡಿಯೋ ಈಗ ಸಾಕಷ್ಟು ವೈರಲ್ ಆಗುತ್ತಿದೆ.

Leave A Reply

Your email address will not be published.