ಈ ಹಿಂದೆ ಡ್ರ ಗ್ಸ್‌ ಪ್ರಕರಣದಲ್ಲಿ ಸಿಸಿಬಿಯಿಂದ ವಿಚಾರಣಾ ನೋಟೀಸು ಪಡೆಯುವ ಮೂಲಕ ನಟಿ ಐಂದ್ರಿತಾ ರೇ ಮತ್ತು ದಿಗಂತ್‌ ಸುದ್ದಿಯಾಗಿದ್ದರು. ಆದರೆ ಕೆಲ ದಿನಗಳಿಂದ ನಟ ದಿಗಂತ್ ಹಾಗೂ ಐಂದ್ರಿತಾ ರೇ ಅಪ್ಪ ಅಮ್ಮ ಆಗುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಅಭಿಮಾನಿಗಳ ಮನದಲ್ಲಿ ಮೂಡಿದ ಈ ಎಲ್ಲಾ ಪ್ರಶ್ನೆಗೆ ನಟಿ ಐಂದ್ರಿತಾ ರೇ ಉತ್ತರ ನೀಡಿದ್ದಾರೆ. ಸ್ಯಾಂಡಲ್‌ವುಡ್‌ ನ ಕ್ಯೂಟ್ ದಂಪತಿ ದಿಗಂತ್ ಹಾಗೂ ಐಂದ್ರಿತಾ ರೇ ಪೋಷಕರಾಗುತ್ತಿದ್ದಾರೆ ಎಂಬ ಸುದ್ದಿ ಕೆಲ ದಿನಗಳಿಂದ ಹರಿದಾಡುತ್ತಿದ್ದು ಈ ಬಗ್ಗೆ ನಟಿ ಐಂದ್ರಿತಾ ರೇ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಇತ್ತೀಚೆಗಷ್ಟೇ ನಟ ದಿಗಂತ್ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಸಂದರ್ಶಕಿಯು ಮಗುವಿನ ನಿರೀಕ್ಷೆಯಲ್ಲಿದ್ದೀರಾ? ಎಂದು ಕೇಳಿದ್ದರು.ಇದಕ್ಕೆ ಪ್ರತಿಯಾಗಿ ನಟ ದಿಗಂತ್ ಸುಮ್ಮನಿರಿ ಅದರ ಬಗ್ಗೆ ಮಾತನಾಡಬೇಡಿ ಎಂದು ತಮಾಷೆಯಾಗಿ ಸನ್ನೆ ಮಾಡಿದ್ದರು. ಇದೇ ಕಾರಣಕ್ಕೆ ದಿಗಂತ್-ಐಂದ್ರಿತಾ ಮಗುವಿನ ನಿರೀಕ್ಷೆಯಲ್ಲಿರಬಹುದು ಎನ್ನಲಾಗಿತ್ತು.2018 ರ ಡಿಸೆಂಬರ್ ತಿಂಗಳಲ್ಲಿ ಈ ಯುವ ಜೋಡಿ ವಿವಾಹವಾಗಿದ್ದರು. ಇಬ್ಬರೂ ಸಹ ಸಿನಿಮಾಗಳಲ್ಲಿ ನಟಿಸುವುದನ್ನು ಮುಂದುವರೆಸಿರುವುದರ ಜೊತೆಗೆ ಹಲವಾರು ಸಾಹಸಗಳನ್ನು ಒಟ್ಟಿಗೆ ಮಾಡುತ್ತಿರುತ್ತಾರೆ. ರಿವರ್‌ ರ್ಯಾಫ್ಟಿಂಗ್, ಸೈಕ್ಲಿಂಗ್, ವ್ಯಾಯಾಮ, ಕಸರತ್ತು, ಸರ್ಫಿಂಗ್ ಹೀಗೆ ಹಲವು ಸಾಹಸ ಕ್ರೀಡೆಗಳಲ್ಲಿ ಈ ಜೋಡಿ ತೊಡಗಿಕೊಂಡಿದ್ದಾರೆ.

ನಟ ದಿಗಂತ್ ಅವರು ಇತ್ತೀಚೆಗೆ ನಟಿ ಸೋನು ಗೌಡ ಜೊತೆಗೆ ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದಾರೆ. ಯುವರತ್ನ ಸಿನಿಮಾದ ಪ್ರಚಾರಕ್ಕಾಗಿ ಈ ಯೂಟ್ಯೂಬ್ ಸಂದರ್ಶನ ಮಾಡಲಾಗಿದ್ದು, ಸಂದರ್ಶನದಲ್ಲಿ ಸೋನು ಗೌಡ ಕೇಳಿದ ಪ್ರಶ್ನೆ ಹಾಗೂ ಅದಕ್ಕೆ ದಿಗಂತ್ ನೀಡಿದ ಉತ್ತರ ಮೇಲಿನಂತೆ ಅನುಮಾನ ಮೂಡಲು ಕಾರಣವಾಗಿದೆ. ಸಂದರ್ಶನ ಪ್ರಾರಂಭವಾಗುತ್ತಿದ್ದಂತೆ ದಿಗಂತ್ ಅಪ್ಪ ಆಗುತ್ತಿದ್ದಾರಂತೆ ಹೌದಾ? ಎಂದು ಕೇಳಿದ್ದಾರೆ ಸೋನು ಗೌಡ. ಇದಕ್ಕೆ ದಿಗಂತ್ ಜೋರಾಗಿ ನಗುತ್ತಾರೆ. ಅಲ್ಲಿಗೆ ಸುಮ್ಮನಾಗದ ಸೋನುಗೌಡ ಹೇಳಿ ಇದು ನಿಜ ತಾನೆ? ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ಪ್ರತಿಯಾಗಿ ದಿಗಂತ್, ಪುಸ್ತಕವನ್ನು ಮುಖಕ್ಕೆ ಅಡ್ಡ ಇಟ್ಟುಕೊಂಡು ಬಾಯಿ ಮೇಲೆ ಬೆರಳಿಟ್ಟುಕೊಂಡು ಸುಮ್ಮನಿರುವಂತೆ ಸೋನು ಗೌಡಾಗೆ ಸೂಚಿಸುತ್ತಾರೆ.

ಇನ್ನೂ ಇದರ ಬಗ್ಗೆ ಮಾತನಾಡಿ ವಿಷಯ ಬಗೆ ಹರಿಸಿದ ಐಂದ್ರಿತಾ ರೈ, ನಾನು-ದಿಗಂತ್ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಆದರೆ ನಾನು ಮತ್ತು ದಿಗಂತ್ ಈಗಾಗಲೇ ಪೋಷಕರಾಗಿದ್ದೇವೆ ಎಂದಿದ್ದಾರೆ ಐಂದ್ರಿತಾ ರೇ. ಹಾಗೆಂದ ಮಾತ್ರಕ್ಕೆ ಈ ದಂಪತಿ ಮಕ್ಕಳನ್ನು ಹೊಂದಿದ್ದಾರೆ ಎಂದರ್ಥವಲ್ಲ. ನಾನು ದಿಗಂತ್ ಎರಡು ನಾಯಿಗಳನ್ನು ನಮ್ಮ ಮಕ್ಕಳಂತೆಯೇ ಸಾಕುತ್ತಿದ್ದೇವೆ. (ಡಾಗ್ ಪೇರೆಂಟ್ಸ್) ಇನ್ನು ಮುಂದೆಯೂ ಹೀಗೆ ಇರಬೇಕು ಎಂದುಕೊಂಡಿದ್ದೇವೆ ಎಂದಿದ್ದಾರೆ ನಟಿ ಐಂದ್ರಿತಾ ರೇ. ಐಂದ್ರಿತಾ ರೇ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿಮಣಿಯರಲ್ಲಿ ಒಬ್ಬರು. ಐಂದ್ರಿತಾ ಬೆಂಗಳೂರಿನ ಅಂಬೇಡ್ಕರ್ ಡೆಂಟಲ್ ಕಾಲೇಜಿನಿಂದ ಪದವಿ ಪಡೆದಿದ್ದಾರೆ. ಜೊತೆಗೆ ಕಾಲೇಜಿನಲ್ಲಿದ್ದಾಗ ಮಾಡೆಲಿಂಗ್ ಕೂಡ ಮಾಡುತ್ತಿದ್ದ ಐಂದ್ರಿತಾ ಕೆಲವು ಜಾಹೀರಾತುಗಳಲ್ಲಿ ಕೂಡ ಕಾಣಿಸಿಕೊಂಡರು. ತದ ನಂತರ ಆಗಾಗ ಕೆಲ ಕಿರುಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಐಂದ್ರಿತಾ 2008 ರಲ್ಲಿ ತೆರೆಕಂಡ `ಮೆರವಣಿಗೆ’ ಚಿತ್ರದಿಂದ ನಾಯಕಿಯಾಗಿ ಕನ್ನಡ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು.

ಇವರಿಗೆ ಬಿಗ ಬ್ರೇಕ್ ನೀಡಿದ ಚಿತ್ರಗಳು 2009 ರಲ್ಲಿ ತೆರೆಕಂಡ `ಜಂಗ್ಲಿ’ ಮತ್ತು `ಮನಸಾರೆ’. ಮನಸಾರೆ ಚಿತ್ರದಲ್ಲಿನ ದೇವಕಿ ಪಾತ್ರಕ್ಕೆ ಪ್ರೇಕ್ಷಕ ಮತ್ತು ವಿಮರ್ಶಕರ ಅಪಾರ ಮೆಚ್ಚುಗೆ ಪಡೆದರು. ಮನಸಾರೆ ಚಿತ್ರದಿಂದ ಶುರುವಾದ ದಿಂಗಂತ್ – ಐಂದ್ರಿತಾ ಸಾಂಗತ್ಯ 2018,ಡಿಸೆಂಬರ್ 12 ರಂದು ವಿವಾಹ ಬಂಧನದ ಮೂಲಕ ಮತ್ತಷ್ಟು ದೃಢವಾಯಿತು. ಇವರಿಬ್ಬರ ಪ್ರೀತಿಗೆ ಮದುವೆಯ ಮುದ್ರೆ ಬಿದ್ದಿತು. ಇದಾದ ನಂತರದ ದಿನಗಳಲ್ಲಿ ಜೋಡಿ ಹಕ್ಕಿಗಳು ಫೋಟೋ ಶೇರ್ ಮಾಡಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದರು.

Leave a Reply

Your email address will not be published. Required fields are marked *