Darshan vs punith rajkumar fans: ನಟ ದರ್ಶನ್ ಚಾಲೆಂಜಿಂಗ್ ಸ್ಟಾರ್, ಓಡುವ ಕುದುರೆ, ಬಾಕ್ಸ್ ಆಫೀಸ್ ಸುಲ್ತಾನ್ ಈ ರೀತಿಯಾಗಿ ಕರೆಸಿಕೊಳ್ಳುವಂತಹ ನಟ ಬದುಕಿನಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ ಇವತ್ತು ಒಂದು ದೊಡ್ಡ ಹಂತದಲ್ಲಿ ನಿಂತಿದ್ದಾರೆ.

ದರ್ಶನ್ ಅವರ ತಂದೆ ದೊಡ್ಡ ನಟರಾಗಿದ್ದರು ಕೂಡ ದರ್ಶನ್ ಅವರಿಗೆ ಸಿನಿಮಾ ರಂಗದಲ್ಲಿ ಅಷ್ಟು ಸುಲಭವಾಗಿ ಸ್ಥಾನ ಸಿಗಲಿಲ್ಲ ಕಷ್ಟಪಟ್ಟು ತನ್ನದೇ ಆದ ಶ್ರಮದಲ್ಲಿ ಸಿನಿಮಾ ರಂಗಕ್ಕೆ ಪ್ರವೇಶಿಸುತ್ತಾರೆ ಅಂತಿಮವಾಗಿ ಡಿ ಬಾಸ್ ಎನ್ನುವ ದೊಡ್ಡ ಬ್ರ್ಯಾಂಡ್ ಅನ್ನು ನಟ ದರ್ಶನ್ ನಿರ್ಮಾಣ ಮಾಡುತ್ತಾರೆ.

D Boss Darshan Kranti Movie Updates

ಕೆಲವೊಂದು ಪರಿಸ್ಥಿತಿ ಕಷ್ಟಕ್ಕೆ ತಳ್ಳಿತು ಅವರ ಪತ್ನಿಯ ಮೇಲಿನ ಹಲ್ಲೆಯ ಪ್ರಕರಣ ಜೋರಾಗಿ ಸದ್ದು ಮಾಡಿತ್ತು ನಟ ದರ್ಶನ್ ಜೈಲಿಗೆ ಹೋಗುವ ಪರಿಸ್ಥಿತಿ ಕೂಡ ಎದುರಾಗುತ್ತೆದೆ ನಟ ದರ್ಶನ್ ಅವರು ಜೈಲಿನಲ್ಲಿ ಇದ್ದರೂ ಕೂಡ ದರ್ಶನ್ ಅವರ ಸಾರಥಿ ಸಿನಿಮಾ ಬ್ಲಾಕ್ ಮಾಸ್ಟರ್ ಹಿಟ್ ಆಗುತ್ತದೆ ಅದು ಅವರಿಗೆ ಮರು ಜೀವವನ್ನು ಕೊಟ್ಟಿತ್ತು ಅಂದರು ತಪ್ಪಾಗಲಿಕ್ಕಿಲ್ಲ.

ಸಿನಿಮಾ ಮತ್ತು ಮಾಧ್ಯಮ ಒಂದೇ ನಾಣ್ಯ ಎರಡು ಮುಖಗಳಿದ್ದಾಗೆ ಸಿನಿಮಾವನ್ನು ತಯಾರು ಮಾಡಿ ಅದನ್ನು ಪ್ರಚಾರ ಮಾಡಬೇಕೆಂದರೆ ಮಾಧ್ಯಮದ ಸಹಾಯ ಬೇಕಾಗುತ್ತದೆ ಆಗ ದರ್ಶನ್ ಅವರ ಒಂದು ಆಡಿಯೋ ವೈರಲ್ ಆಗುತ್ತದೆ ಆಗ ಮಾಧ್ಯಮದವರು ನಟ ದರ್ಶನ್ ಅವರನ್ನು ಬೈಕಟ್ ಮಾಡುತ್ತಾರೆ ಬ್ಯಾನ್ ಮಾಡುತ್ತಾರೆ. ಇದರಲ್ಲಿ ಯಾರದು ತಪ್ಪು ಯಾರದು ಸರಿ ಎಂದು ತಿಳಿದಿಲ್ಲ ಇದರ ನಂತರ ಕ್ರಾಂತಿ ಸಿನಿಮಾವನ್ನು ಪ್ರಚಾರ ಮಾಡಬೇಕಾದಂತಹ ಸಂದರ್ಭ ಬರುತ್ತದೆ ಆಗ ಎಲ್ಲರೂ ಏನು ಅಪೇಕ್ಷೆ ಮಾಡುತ್ತಿದ್ದಾರೆ ಎಂದರೆ ಮಾಧ್ಯಮದವರ ಬಳಿ ಕ್ಷಮೆ ಕೇಳುತ್ತಾರೆ ಎಂದು ತಿಳಿದುಕೊಂಡಿದ್ದರು ಆದರೆ ದರ್ಶನವರು ಹಾಗೆ ಮಾಡಲಿಲ್ಲ

ದರ್ಶನ್ ಅವರು ಸಾಮಾಜಿಕ ಜಾಲತಾಣವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅದರಲ್ಲೂ ಯೂಟ್ಯೂಬ್ ಚಾನಲ್ ಗಳು ಯೂಟ್ಯೂಬ್ ಚಾನೆಲ್ ಗಳಲ್ಲಿ ಸಂದರ್ಶನವನ್ನು ಕೊಟ್ಟಿರಲಿಲ್ಲ ಆದರೆ ಈಗ ಸಾಲು ಸಾಲಾಗಿ ಸಂದರ್ಶನವನ್ನು ಕೊಡುತ್ತಿದ್ದಾರೆ ಅಷ್ಟೇ ಅಲ್ಲ ತುಂಬಾ ಮುಕ್ತವಾಗಿ ಚೆನ್ನಾಗಿ ಚಾನೆಲ್ ಗಳಲ್ಲಿ ಮಾತನಾಡುತ್ತಿದ್ದಾರೆ ತಮ್ಮ ಜೀವನದ ಕಥೆಯನ್ನು ಹೇಳಿಕೊಳ್ಳುತ್ತಿದ್ದಾರೆ ಹಾಗೂ ಕ್ರಾಂತಿ ಸಿನಿಮಾ ಪ್ರಚಾರವನ್ನು ಕೂಡ ಮಾಡುತ್ತಾರೆ.

ನಟ ದರ್ಶನ್ ಅವರು ಒಂದು ಮಾತನ್ನು ಹೇಳುತ್ತಾರೆ ಇಲ್ಲಿ ಯಾರನ್ನು ಯಾರೂ ತುಳಿಯಲು ಸಾಧ್ಯವಿಲ್ಲ ಪ್ರತಿಭೆ ಇತ್ತು ಅಂತ ಆಗಿದ್ದರೆ ನಮ್ಮ ಹಣೆಬರ ಸರಿಯಾಗಿದ್ದರೆ ಯಾರನ್ನು ಯಾರು ತಿಳಿಯಲು ಸಾಧ್ಯವಾಗುವುದಿಲ್ಲ ಯಾರನ್ನು ಯಾರು ಹಾಳು ಮಾಡಲು ಸಾಧ್ಯವಾಗುವುದಿಲ್ಲ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ಪರೋಕ್ಷವಾಗಿ ಮಾಧ್ಯಮದವರಿಗೆ ಸವಾಲ್ ಹಾಕುವಂತಹ ಕೆಲಸವನ್ನು ನಟ ದರ್ಶನ್ ಅವರು ಮಾಡಿದ್ದಾರೆ.

ಡಿ ಬಾಸ್, ರಚಿತಾ ರಾಮ್, ರವಿಚಂದ್ರನ್ ಹಾಗೂ ಸುಮಲತಾ ಅಂಬರೀಶ್ ಅವರಿಗೆ ಕ್ರಾಂತಿ ಸಿನಿಮಾದಲ್ಲಿ ಸಂಭಾವನೆ ಎಷ್ಟು ಗೊತ್ತಾ

ಕ್ರಾಂತಿ ಸಿನಿಮಾದ ಬಗ್ಗೆ ನೋಡಬೇಕೆಂದರೆ ಅಭಿಮಾನಿಗಳಿಗೆ ಎಲ್ಲೂ ಸುದ್ದಿ ಸಿಗುತ್ತಿರಲಿಲ್ಲ ಆದರೆ ಅದನ್ನು ದರ್ಶನವರು ಚಾಲೆಂಜ್ ಆಗಿ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ತಮ್ಮದೇ ಆದ ರೀತಿಯಲ್ಲಿ ಮಾಹಿತಿಯನ್ನು ತಿಳಿಸಲು ಶುರು ಮಾಡಿರುತ್ತಾರೆ. ಅಭಿಮಾನಿಗಳೆಲ್ಲರೂ ದರ್ಶನ್ ಅವರಿಗೆ ಬೆಂಬಲವನ್ನು ನೀಡುತ್ತಾರೆ ಹಳ್ಳಿ ಹಳ್ಳಿಗೆ ಹೋಗಿ ದೊಡ್ಡ ಮಟ್ಟದ ಪ್ರಚಾರವನ್ನು ಮಾಡುತ್ತಾರೆ ಅಭಿಮಾನಿಗಳ ಸಹಾಯದಿಂದ ಹಳ್ಳಿ ಹಳ್ಳಿ ಸಿನಿಮಾದ ಬಗ್ಗೆ ಪ್ರಚಾರ ನಡೆಯುತ್ತದೆ.

D Boss Darshan kranti

ಅಭಿಮಾನಿಗಳ ಸಹಾಯದಿಂದ ಕ್ರಾಂತಿ ಸಿನಿಮಾ ರಿಲೀಸ್ ಗು ಮುನ್ನವೇ ದೊಡ್ಡ ಮಟ್ಟದ ಕ್ರಾಂತಿಯನ್ನು ಎಬ್ಬಿಸಲು ಶುರು ಮಾಡಿತು. ಸಿನಿಮಾ ಪ್ರಚಾರಕ್ಕೋಸ್ಕರನೇ ಅವರ ಸಮಯವನ್ನು ಮೀಸಲಿಟ್ಟರು ಗೆದ್ದೇ ಗೆಲ್ಲುತ್ತೇನೆ ಅನ್ನುವ ವಿಶ್ವಾಸ ಕೂಡ ಅವರಲ್ಲಿದೆ. ತುಂಬಾ ಒಳ್ಳೆಯ ನಿರೀಕ್ಷೆ ಇಟ್ಟು ಕಾಯುತ್ತಿದ್ದಾರೆ.

Leave a Reply

Your email address will not be published. Required fields are marked *