ಅನೇಕ ನಿರ್ದೇಶಕಿಯರು ಧಾರಾವಾಹಿಗಳನ್ನು ನಿರ್ಮಾಣ ಮಾಡಿದ್ದಾರೆ. ಅಂತಹವರಲ್ಲಿ ಶ್ರುತಿ ನಾಯ್ಡು ಕೂಡ ಒಬ್ಬರು. ಇವರ ಧಾರಾವಾಹಿಗಳು ಅತ್ಯಂತ ಜನಪ್ರಿಯವಾಗಿವೆ. ಸದ್ಯದಲ್ಲಿ ಜೀ ಕನ್ನಡದಲ್ಲಿ ಪ್ರಸಾರವಾಗುವ ಬ್ರಹ್ಮಗಂಟು ಮತ್ತು ಯಾರೆ ನೀ ಮೋಹಿನಿ ಧಾರಾವಾಹಿಯನ್ನು ಇವರು ನಿರ್ದೇಶನ ಮಾಡುತ್ತಿದ್ದಾರೆ. ಶ್ರುತಿ ನಾಯ್ಡು ಅವರು ತಮ್ಮ ಹುಟ್ಟುಹಬ್ಬದ ಪಾರ್ಟಿಯನ್ನು ನಡೆಸಿಕೊಂಡ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಈಗ ಸುಮಾರು 6 ರಿಂದ 7ತಿಂಗಳ ಹಿಂದೆ ಕೊರೊನಾ ಎಂಬ ಮಹಾಮಾರಿಯ ಕಾರಣಕ್ಕೆ ಎಲ್ಲಾ ಧಾರಾವಾಹಿಗಳು ನಿಂತು ಹೋಗಿದ್ದವು. ಅಂತರವನ್ನು ಕಾಯ್ದುಕೊಳ್ಳಬೇಕು ಎಂಬ ಕಾರಣದಿಂದ ಶೂಟಿಂಗ್ ಗಳನ್ನು ನಿಲ್ಲಿಸಲಾಗಿತ್ತು. ಹಾಗೆಯೇ ಮನೆಗಳಲ್ಲಿ ನಡೆಯುವ ಸಮಾರಂಭಗಳು ಸಹ ಸಣ್ಣ ಪ್ರಮಾಣದಲ್ಲಿ ಈಗ ನಡೆಯುತ್ತಿವೆ. ಹಾಗೆಯೇ ಮೊದಲು ಸಿನೆಮಾಸ್ಟಾರ್ ಗಳು ತಮ್ಮ ಹುಟ್ಟುಹಬ್ಬದ ಪಾರ್ಟಿಯನ್ನು ತುಂಬಾ ದೊಡ್ಡದಾಗಿ ಆಚರಿಸಿಕೊಳ್ಳುತ್ತಿದ್ದರು. ಈಗ ಸಣ್ಣ ಪ್ರಮಾಣದಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ.

ಹಾಗೆಯೇ ಶ್ರುತಿ ನಾಯ್ಡು ಅವರು ಕನ್ನಡದ ಕಿರುತೆರೆಯ ಧಾರಾವಾಹಿ ಅಷ್ಟೇ ಅಲ್ಲದೆ ಸಿನೆಮಾಗಳನ್ನು ಕೂಡ ನಿರ್ಮಾಣ ಮಾಡಿದ್ದಾರೆ. ಇತ್ತೀಚೆಗೆ ಇವರು ಕಿರುತೆರೆಯ ಖ್ಯಾತ ನಟನಟಿಯರ ಜೊತೆ ತಮ್ಮ ಹುಟ್ಟುಹಬ್ಬದ ಪಾರ್ಟಿಯನ್ನು ಆಚರಿಸಿಕೊಂಡಿದ್ದಾರೆ. ಕನ್ನಡದ ಕಿರುತೆರೆಯ ಕಲಾವಿದರು ಎಂದು ಎನಿಸಿಕೊಂಡಿರುವ ಪ್ರಮೋದ್, ಅಂಬುಜಾ, ತೇಜಸ್ವಿನಿ, ಐಶ್ವರ್ಯ, ಪದ್ಮಜಾ ಹಾಗೂ ಮುಂತಾದವರು ಭಾಗಿಯಾಗಿದ್ದರು. ಕೊರೊನಾ ಕಾರಣದಿಂದಾಗಿ ಈ ಹುಟ್ಟು ಹಬ್ಬದ ಪಾರ್ಟಿಯನ್ನು ತುಂಬಾ ಸರಳವಾಗಿ ಮಾಡಲಾಗಿದೆ.

ಅದರಲ್ಲೂ ಬ್ರಹ್ಮಗಂಟು ಧಾರಾವಾಹಿ ಬಹಳ ಚೆನ್ನಾಗಿ ಮೂಡಿ ಬರುತ್ತಿದೆ. ಇದು ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ ಹತ್ತು ಗಂಟೆಗೆ ಪ್ರಸಾರವಾಗುತ್ತದೆ. ಇದರಲ್ಲಿ ನಟ ಮತ್ತು ನಟಿ ಆಗಿರುವ ಗೀತಾ ಮತ್ತು ಲಕ್ಕಿ ಅವರ ಪಾತ್ರಗಳು ಬಹಳ ಚೆನ್ನಾಗಿ ಇವೆ. ಇದರ ಕಥೆಯೇ ಬಹಳ ವಿಭಿನ್ನವಾಗಿ ಇದೆ. ಏಕೆಂದರೆ ಆ ಸಮಯಕ್ಕೆ ನಡೆಯುವ ಘಟನೆಗಳಿಗೆ ತಕ್ಕಂತೆ ಶ್ರುತಿ ನಾಯ್ಡು ಅವರು ತಮ್ಮ ಕಥೆಯನ್ನು ಬರೆಯುತ್ತಾ ನಡೆಸುತ್ತಿದ್ದಾರೆ. ಹಾಗೆಯೇ ಯಾರೆ ನೀ ಮೋಹಿನಿ ಎಂಬ ಧಾರಾವಾಹಿ ಕೂಡ ಪ್ರಸಾರವಾಗುತ್ತದೆ. ಇದು ಸಹ ಬೇರೆ ರೀತಿಯ ಕಥೆಯನ್ನು ಹೊಂದಿದೆ.

Leave a Reply

Your email address will not be published. Required fields are marked *