ಬಿ ಸಿ ಪಾಟೀಲ್ ಒಬ್ಬರು ನಿಷ್ಠಾವಂತ ಪೊಲೀಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿ ಕೊನೆಗೆ ತಮ್ಮ ಅಧಿಕಾರವನ್ನು ತ್ಯಜಿಸಿ ನಟನೆಯಲ್ಲಿ ಆಸಕ್ತಿ ಹೊಂದಿದ್ದರ ಸಲುವಾಗಿ 1993 ರಲ್ಲಿ ನಿಷ್ಕರ್ಷ ಸಿನಿಮಾದಲ್ಲಿ ವಿಷ್ಣುವರ್ಧನ್ ಅವರ ಜೊತೆ ನಟನೆ ಮಾಡಿದ್ದಾರೆ ಇವರು ಚೆನ್ನಬಸವ ಗೌಡ ಹಾಗೂ ಶ್ರೀಮತಿ ಶಿವಮ್ಮ ಅವರ ಪುತ್ರರಾಗಿ ಜನಿಸಿದರು ಬಿಸಿ ಪಾಟೀಲ್ ಅವರು ಜಾನಕಿ ಎನ್ನುವರನ್ನು ಮದುವೆ ಆಗಿ ಇಬ್ಬರು ಹೆಣ್ಣು ಮಕ್ಕಳ ತಂದೆ .ಸೃಷ್ಟಿ ಮತ್ತು ಸೌಮ್ಯ ಎನ್ನುವ ಇಬ್ಬರು ಹೆಣ್ಣುಮಕ್ಕಳು ಇದ್ದು ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.

ಒಬ್ಬ ಪ್ರಭಾವಿ ರಾಜಕಾರಣಿ ಕೂಡ ಆಗಿದ್ದಾರೆ ಇವರು 7 ಫೆಬ್ರವರಿ 2020 ರಿಂದ ಕರ್ನಾಟಕದ ಪ್ರಸ್ತುತ ಕೃಷಿರಾಜ್ಯಸಚಿವರಾಗಿದ್ದಾರೆ. ಅವರು ಹಿರೇಕೆರೂರು ವಿಧಾನಸಭಾ ಕ್ಷೇತ್ರದಿಂದ ಮೂರು ಅವಧಿಯ ಶಾಸಕರಾಗಿದ್ದಾರೆ . BC ಪಾಟೀಲ್ ಅವರು ಮಾಜಿ ಕಾಪ್, ಮತ್ತು ನಟನೆಯ ಹೊರತಾಗಿ, ಅವರು ಕನ್ನಡ ಚಲನಚಿತ್ರೋದ್ಯಮದಲ್ಲಿ ನಿರ್ಮಾಪಕ ಮತ್ತು ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ

ಪ್ರೇಮಚಾರಿ ಕೌರವ ಶಿವಪ್ಪ ನಾಯಕ ಜೋಗುಳ ಹೀಗೆ ಸುಮಾರು ಇಪ್ಪತ್ತೈದು ಸಿನಿಮಾದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಮಾದ್ಯಮ ಒಂದರಲ್ಲಿ ಸಿನಿಮಾ ಒಂದರ ಪ್ರೋಮೋ ಬಗ್ಗೆ ಅವರ ಪುತ್ರಿ ಶ್ರುತಿ ಪಾಟೀಲ್ ಅವರು ಮಾತನಾಡಿ ನಾನು ಸುಮಾರು ವರ್ಷಗಳ ನಂತರ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ದು ಯೋಗರಾಜ್ ಭಟ್ಟರ ಜೊತೆಗೆ ಒಂದು ಸಿನಿಮಾವನ್ನು ನಿರ್ದೇಶನ ಮಾಡಲಿದ್ದೇನೆ ಹಾಗೂ ದರ್ಶನ್ ಅವರು ಕೂಡ ಅಭಿನಯ ಮಾಡಲಿದ್ದು ಹ್ಯಾಪಿ ನ್ಯೂ ಇಯರ್ ನಂತರ ಸುಮಾರು ಎಂಟು ವರ್ಷಗಳ ಕಾಲ ರಾಜಕೀಯ ಪ್ರಚಾರದಲ್ಲಿ ತೊಡಗಿಕೊಂಡು ಇದ್ದೆ ಎಂದು ಹೇಳಿದ್ದಾರೆ

ಯೋಗರಾಜ್ ಭಟ್ಟರು ಎಂದಾಕ್ಷಣ ಎಲ್ಲರಿಗೂ ರೊಮ್ಯಾಂಟಿಕ್ ಹಾಗೂ ಅವರ ಹಾಡಿನ ಶೈಲಿಯ ಬಗ್ಗೆ ನೆನೆಪು ಆಗುವುದು ಆದರೂ ಈ ಕಥೆ ಪೂರ್ತಿ ವಿಭಿನ್ನ ಶೈಲಿಯಲ್ಲಿ ಮೂಡಿಬಂದಿದೆ ಇನ್ನೂ ಬಾದಾಮಿಯಲ್ಲಿ ಭಟ್ಟರು ಸ್ಥಳ ಅನ್ವೇಷಣೆಗೆ ಹೋದಾಗ ಮೊದಲಿದ್ದ ಕಥೆಗೆ ಸಾಕಷ್ಟು ತಿರುವು ನೀಡಿದ್ದಾರೆ.

ನಾನು ಸಣ್ಣ ವಯಸ್ಸಿನಲ್ಲೇ ತನ್ನ ಅಪ್ಪನ ಜೊತೆ ಸಿನಿಮಾ ಇಂಡಸ್ಟ್ರಿ ಬಗ್ಗೆ ಆಗು ಹೋಗುಗಳನ್ನು ತಿಳಿದುಕೊಂಡು ಬಂದಿದ್ದು ನನ್ನ ಅಪ್ಪ ನನ್ನ ಎಲ್ಲ ಬೆಳವಣಿಗೆಗೆ ಬೆನ್ನೆಲುಬಾಗಿ ನಿಂತಿದ್ದಾರೆ ಹಾಗೂ ಯಾವುದೇ ಕೆಲಸಕ್ಕೂ ಪ್ರೋತ್ಸಾಹ ನೀಡುತ್ತಾರೆ ಎಂದು ತನ್ನ ಅಪ್ಪನ ಮೇಲಿನ ಪ್ರೀತಿಯನ್ನು ಹೇಳಿಕೊಂಡಿದ್ದು ಸಿನಿಮಾದ ಮೊದಲಾರ್ಧದಲ್ಲಿ ಅರ್ಧ ಭಾಗವು ಪೂರ್ಣವಾಗಿದ್ದು ಸುಂದರವಾಗಿ ಮೂಡಿ ಬಂದಿದೆ ಎಂದು ಶ್ರುತಿ ಪಾಟೀಲ್ ಅವರು ಹೇಳಿಕೊಂಡಿದ್ದಾರೆ ನಮ್ಮ ಚಿತ್ರೀಕರಣ ಅಲ್ಲಿ ಇದು ಹದಿನಾರನೆಯ ಸಿನಿಮಾ ಆಗಿದ್ದು ಬಹಳ ಆಸಕ್ತಿ ಚಿತ್ರೀಕರಣ ಮಾಡಿದ್ದಾರೆ ಹಾಗೂ ಕೆಲವು ಮೇರು ನಟರು ಅಭಿನಯ ಮಾಡಿದ್ದಾರೆ ಎಂದು ಮಾದ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.

Leave a Reply

Your email address will not be published. Required fields are marked *