ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಆರ್ಯವರ್ಧನ್ ಪಾತ್ರ ಮಾಡುತ್ತಿರುವ ನಟ ಅನಿರುದ್ಧ ಅವರ ಅಭಿಮಾನಿಗಳ ಕುರಿತು ಒಂದು ನಿರ್ಧಾರ ಮಾಡಿದ್ದಾರೆ ಅದರ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಕಲಾವಿದರು ಅಂದಮೇಲೆ ಅವರನ್ನು ನೋಡಬೇಕು, ಅವರೊಡನೆ ಮಾತನಾಡಬೇಕು, ಅವರೊಂದಿಗೆ ಫೋಟೊ ತೆಗೆಸಿಕೊಳ್ಳಬೇಕು ಹೀಗೆ ತಮ್ಮ ನೆಚ್ಚಿನ ಕಲಾವಿದರಿಗೆ ಅಭಿಮಾನಿಗಳು ಬೇಡಿಕೆಯಿಡುವುದು ಸಹಜ. ಅದೇ ರೀತಿ ಅಭಿಮಾನಿಗಳು ಜೊತೆ ಜೊತೆಯಲಿ ಧಾರವಾಹಿಯ ನಟ ಅನಿರುದ್ಧ ಅವರನ್ನು ನೋಡಬೇಕು, ಮಾತನಾಡಬೇಕು, ಉಡುಗೊರೆ ನೀಡಬೇಕು ಎಂದು ಮನವಿ ಮಾಡಿದರು. ಕೆಲವು ಅಭಿಮಾನಿಗಳೊಂದಿಗೆ ತೆಗೆಸಿಕೊಂಡ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ನೋಡಬಹುದಾಗಿದೆ. ಇದೀಗ ಅನಿರುದ್ಧ ಅವರು ಎಲ್ಲ ಅಭಿಮಾನಿಗಳನ್ನು ಮನೆಗೆ ಆಹ್ವಾನಿಸುವ ನಿರ್ಧಾರ ಮಾಡಿದ್ದಾರೆ.

ಎಲ್ಲರಿಗೂ ಶುಭೋದಯ ಮೊದಲನೆಯದಾಗಿ ನಿಮ್ಮೆಲ್ಲರ ಪ್ರೀತಿ, ವಿಶ್ವಾಸಕ್ಕೆ ನನ್ನ ಅಂತರಾಳದ ಅನಂತ ಧನ್ಯವಾದಗಳು. ಎಷ್ಟೋ ಅಭಿಮಾನಿಗಳು ನನಗೆ ಉಡುಗೊರೆ ನೀಡಬೇಕು, ಹೇಗೆ ತಲುಪಿಸಬೇಕು ಎಂದು ಕೇಳಿದ್ದೀರಿ. ನೀವು ತೋರುತ್ತಿರುವ ಪ್ರೀತಿ, ವಿಶ್ವಾಸವೇ ನನಗೆ ದೊಡ್ಡ ಉಡುಗೊರೆಯಾಗಿದೆ ನಾನು ಸದಾ ತಮ್ಮೆಲ್ಲರ ಚಿರಋಣಿ. ಬಹಳಷ್ಟು ಅಭಿಮಾನಿಗಳು ನಿಮ್ಮನ್ನು ಭೇಟಿ ಮಾಡಬೇಕು, ಮಾತನಾಡಿಸಬೇಕು, ಹೇಗೆ ಭೇಟಿ ಮಾಡಬೇಕೆಂದು ಕೇಳಿದ್ದೀರಾ. ಕೊರೋನ ಸೋಂಕಿನ ಪ್ರಭಾವ ಮುಗಿದ ನಂತರ ನಾನು ನಿಮಗೆಲ್ಲ ಚಿತ್ರೀಕರಣ ಅಥವಾ ಮನೆಯ ವಿಳಾಸ ಕೊಡುವೆ ಅಲ್ಲಿಗೆ ಬಂದು ಭೇಟಿಯಾಗಬಹುದು ಎಂದು ಹೇಳುವುದರೊಂದಿಗೆ ತಮ್ಮೆಲ್ಲರ ಪ್ರೀತಿ, ವಿಶ್ವಾಸ, ಆಶೀರ್ವಾದ, ಹಾರೈಕೆ ಹೀಗೆ ಇರಲಿ ಎಂದು ತಮ್ಮಲ್ಲಿ ಕಳಕಳಿಯಿಂದ ಕೇಳಿಕೊಳ್ಳುತ್ತೇನೆ ಎಂದು ಅನಿರುದ್ಧ ಅವರು ಬರೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಅಭಿಮಾನಿಗಳ ಮನವಿಗೆ ಅನಿರುದ್ಧ ಅವರ ಪ್ರತಿಕ್ರಿಯೆ ನೋಡಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *