Ultimate magazine theme for WordPress.

ಅಪ್ಪು ಸ್ಥಾನ ತುಂಬಿದ ಯುವ ರಾಜ್ ಕುಮಾರ್ – ಪತ್ನಿ ಜೊತೆ ಹೋಗಿದ್ದು ಎಲ್ಲಿ ಗೊತ್ತೇ? ಪುನೀತ್ ಅವರ ಫೇವರೆಟ್ ಸ್ಥಳ ಅದು

0 2

ಕನ್ನಡ ಚಿತ್ರರಂಗದ ಅಪ್ಪು ದೊಡ್ಮನೆ ಕಣ್ಮಣಿ ನಮ್ಮನು ಆಗಲಿ ಹಲವು ತಿಂಗಳೇ ಕಳೆದಿದ್ದು ಇಂದಿಗೂ ಅವರ ನೆನೆಪು ಮಾಸಲಿಲ್ಲ ಹಾಗೆ ಅವರ ಮರಣೋತ್ತರ ಡಾಕ್ಟರೇಟ್ ಅನ್ನು ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರಿಗೆ ನೀಡಿ ಗೌರವಿಸಲಾಗಿದೆ ಇನ್ನು ಪುನೀತ್ ಅವರ ಮಕ್ಕಳು ವಿದೇಶದಲ್ಲಿದ್ದು ಹಲವಾರು ಸಭೆ ಸಭಾರಂಭಗಳಲ್ಲಿ ಗೌರವಿಸಲಾಯಿತು

ಈ ಎಲ್ಲ ಸಮಯದಲ್ಲೂ ಪುನೀತ್ ಅವರ ಸ್ಥಾನವನ್ನು ರಾಘವೇಂದ್ರ ರಾಜಕುಮಾರ್ ಅವರ ಮಗನಾದ ಯುವ ರಾಜ್ ಕುಮಾರ್ ಅವರು ಜೊತೆಗೆ ಇದ್ದು ನಡೆಸಿ ಕೊಟ್ಟಿದರು ನಿಜ ಸ್ನೇಹಿತರೆ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನೆಲ್ಲ ಅಗಲಿದ ಸಮಯದಲ್ಲಿ ಇಡೀ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಆಗಿದ್ದು ಸಾವಿರಾರು ಅಭಿಮಾನಿಗಳು ಪುನೀತ ಅವರನ್ನು ನೋಡಲು ರಾತ್ರೋರಾತ್ರಿ ಆಗಮಿಸಿದ್ದರು ಇನ್ನೂ ರಾಜ್ ಕುಮಾರ್ ಕುಟುಂಬ ಈ ಆಘಾತದಿಂದ ಆಚೆ ಬರಲು ಇಂದಿಗೂ ಸಾಧ್ಯವಾಗಿಲ್ಲ.

ಈ ಸಮಯದಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಜೊತೆ ಇದ್ದು ಸಾಂತ್ವನ ಅವರ ಯೋಗ ಕ್ಷೇಮ ಅನ್ನು ಯುವ ರಾಜ್ ಕುಮಾರ್ ಅವರೇ ನೋಡಿಕೊಂಡಿದ್ದರು ಇನ್ನೂ ಕೆಲವು ಸಭೆ ಸಮಾರಂಭದಲ್ಲಿ ಅಶ್ವಿನಿ ಅವರನ್ನು ಒಬ್ಬಂಟಿಯಾಗಿ ಬಿಡದೆ ಅವರ ಜೊತೆಗೆ ಮಗನ ಹಾಗೆ ಬೆಂಗಾವಲಾಗಿ ಜೊತೆಗೆ ಇದ್ದಾರೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟವಿದ್ದು ಇದು ಹನುಮನ ಜನ್ಮಸ್ಥಳ ಎಂದು ಪ್ರತೀತಿ ಇದೆ ಹಾಗೂ ಈ ಸ್ಥಳಕ್ಕೆ ಪುನೀತ್ ರಾಜ್ ಕುಮಾರ್ ಅವರು ಭೇಟಿ ನೀಡುತ್ತ ಬಂದಿದ್ದಾರೆ

ಪ್ರತಿವರ್ಷ ಇಲ್ಲಿಗೆತಮ್ಮ ಗೆಳೆಯರೊಂದಿಗೆ ಬಂದು ಬೆಟ್ಟ ಹತ್ತಿ ದೇವರ ದರ್ಶನ ಪಡೆಯುತ್ತ ಇದ್ದರು ಆದರೆ ಈ ವರ್ಷ ಅಂಜನಾದ್ರಿ ಬೆಟ್ಟ ಹತ್ತಿ ದರ್ಶನ ಪಡೆಯಲು ಅಪ್ಪು ಅವರೇ ಇಲ್ಲ ಎನ್ನುವುದು ವಿಷಾದನೀಯ ಆದರೂ ಅವರ ಅಭಿಮಾನಿಗಳ ಕಾತುರತೆ ಅನ್ನು ಹುಸಿಗೊಳಿಸಲಿಲ್ಲ ನಿಜ ಈ ವರ್ಷ ಯುವ ರಾಜ್ ಕುಮಾರ್ ಅವರು ಪುನೀತ್ ಅವರ ಸ್ಥಾನವನ್ನು ತುಂಬಿದ್ದು ಅಶ್ವಿನಿ ಪುನೀತ್ ಅವರ ಜೊತೆ ಬೆಟ್ಟವನ್ನು ಹತ್ತಿ ಪೂಜೆ ಸಲ್ಲಿಸಿದ್ದಾರೆ

ಈ ವೇಳೆಯಲ್ಲಿ ಯುವ ರಾಜ್ ಕುಮಾರ್ ಅವರನ್ನು ಬಹಳ ಗೌರವದಿಂದ ಬರಮಾಡಿಕೊಂಡರು ಯುವ ರಾಜ್ ಕುಮಾರ್ ಅವರು ಕೂಡ ಪುನೀತ್ ಅವರ ಅಭಿಮಾನಿಗಳ ಜೊತೆ ಹಲವಾರು ಫೋಟೋ ತೆಗೆಸಿಕೊಂಡು ಎಲ್ಲರಂತೆ ಸಾಧಾರಣ ವ್ಯಕ್ತಿಯಂತೆ ಎಲ್ಲರ ಜೊತೆ ಬೆರೆತರು ಅವರ ಈ ಸೃಜನಶೀಲ ಗುಣ ಹಾಗೂ ಯಾವುದೇ ಆಹಂ ಇಲ್ಲದೆ ಬೆರೆಯುವ ಗುಣ ಅಪ್ಪು ಅವರನ್ನು ನೆನಪಿಸುತ್ತದೆ ಅಪ್ಪು ಅನಂತರದ ಸ್ಥಾನವನ್ನು ಯುವ ರಾಜ್ ಕುಮಾರ್ ಅವರು ತುಂಬಬಹುದು ಎಂದು ಹಲವಾರು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ ಹಾಗೂ ಅವರ ಅಭಿಮಾನಿಗಳ ಜೊತೆ ನಡೆದುಕೊಂಡ ರೀತಿ ನೋಡಿ ಅಭಿಮಾನಿಗಳು ಅಪ್ಪು ಅವರ ಸ್ಥಾನವನ್ನು ಅವರಿಗೆ ನೀಡಲು ಒಂದು ಅವಕಾಶವನ್ನು ನೀಡಿದ್ದಾರೆ

ಯುವ ರಣಧೀರ ಕಂಠೀರವ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದೆ ಆದ್ರೆ ಸಿನಿಮಾ ಪೂರ್ಣಗೊಂಡಿದೆ ಅನ್ನೋದು ಗೊತ್ತಿಲ್ಲ ಆದರೆ ಸಂತೋಷ್ ಆನಂದ ರಾಮ್ ಜೊತೆಗೆ ಯುವ ರಾಜಕುಮಾರ್ ಚಿತ್ರಕ್ಕೆ ಸಹಿ ಹಾಕಿದ್ದು ಹೊಂಬಾಳೆ ನಿರ್ಮಾಣಕ್ಕೆ ತಯಾರಿ ನೆಡೆಸಿದ್ದಾರೆ ಪುನೀತ್ ಅವರು ಮಾಡಬೇಕಿದ್ದ ಹಲವಾರು ಸಿನಿಮಾಗಳನ್ನು ಯುವರಾಜ್ ಅವರು ಒಪ್ಪಿಕೊಂಡಿದ್ದು ಅಪ್ಪು ಅವರ ಸ್ಥಾನವನ್ನು ಯುವರಾಜ್ ಅವರು ತುಂಬಲಿ ಎನ್ನುವುದು ನಮ್ಮೆಲ್ಲರ ಆಶಯ ಇನ್ನೂ ಅಪ್ಪು ಅವರ ಗತ್ತು ಗಾಂಭೀರ್ಯ ಹಾಗೂ ನಟನೆ ಸ್ವಲ್ಪ ಯುವರಾಜ್ ಅವರಿಗೆ ಬಳುವಳಿಯಾಗಿ ಬಂದಿದೆ ಹಾಗಾಗಿ ಮುಂದೆ ಅವರು ನಟಿಸಿರುವ ಎಲ್ಲ ಚಿತ್ರಗಳಲ್ಲಿ ಯಶಸ್ಸು ಸಿಗಲಿ..

Leave A Reply

Your email address will not be published.