ನಮ್ಮ ಸಂಪ್ರದಾಯದಲ್ಲಿ ಮದುವೆಗೆ ವಿಶೇಷ ಸ್ಥಾನವಿದೆ. ಮದುವೆ ಆದ ನಂತರ ಹೆಂಡತಿ ಪರ ಪುರುಷನೊಂದಿಗೆ ಅಥವಾ ಗಂಡ ಪರ ಸ್ತ್ರೀಯೊಂದಿಗೆ ಸಹವಾಸ ಮಾಡುವ ಮೂಲಕ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಾರೆ. ಮದುವೆಯ ನಂತರ ಹೆಂಡತಿ ಪರ ಪುರುಷನೊಂದಿಗೆ ಸಹವಾಸ ಮಾಡಿ ತನ್ನ ಗಂಡನನ್ನೆ ಕೊ ಲೆ ಮಾಡಿಸಿದ ಘಟನೆಯನ್ನು ಈ ಲೇಖನದಲ್ಲಿ ನೋಡೋಣ.

ಸಪ್ತಪದಿ ತುಳಿದು ಜೀವನ ಪೂರ್ತಿ ಜೊತೆಗಿರುತ್ತೇನೆ ಎಂದು ಪ್ರಮಾಣ ಸ್ವೀಕರಿಸಿ ಮದುವೆ ಆದ ಮೇಲೆ ಪರ ಪರುಷ ಅಥವಾ ಪರ ಸ್ತ್ರೀಯೊಂದಿಗೆ ಸಹವಾಸ ಮಾಡುವ ಮನಸ್ಥಿತಿ ಇದ್ದರೆ ಮದುವೆ ಎನ್ನುವುದಕ್ಕೆ ಅರ್ಥ ಇಲ್ಲದಂತಾಗುತ್ತದೆ. ಈಗಿನ‌ ಕಾಲದ ವಿವಾಹಿತರಿಗೆ ಕಟ್ಟಿಕೊಂಡ‌ವರು ಸಾಲುವುದಿಲ್ಲ ಅನ್ನಿಸುತ್ತದೆ, ಅವರೊಂದಿಗೆ ಸುಖವಾಗಿ ಜೀವನ ಮಾಡುವ ಬದಲು ಜೀವನವನ್ನೆ ಹಾಳು ಮಾಡಿಕೊಂಡು ಬಿಡುತ್ತಾರೆ. ಸಿನಿಮಾ, ಸೀರಿಯಲ್ ಕಥೆಗಳಲ್ಲಿ ಎರಡು ಮೂರು ಸಂಬಂಧ‌ ಇಟ್ಟುಕೊಂಡ ಹಾಗೆ ನಿಜ ಜೀವನದಲ್ಲಿ ಕೂಡ ಜನರು ಅದನ್ನು ಅಳವಡಿಸಿಕೊಂಡು ಬಿಟ್ಟಿರುವುದನ್ನು ನಾವು ನೋಡುತ್ತೇವೆ. ಮಕ್ಕಳು ಇದ್ದರೂ ಅವರನ್ನು ಕೂಡ ಮರೆತು ಪರರ ಸಹವಾಸ ಮಾಡುತ್ತಾರೆ. ತಮ್ಮ ಪ್ರೀತಿಗೆ ಅಡ್ಡ ಬಂದವರನ್ನು ಕೊಲೆ ಮಾಡಲು ಕೂಡ ಹೇಸುವುದಿಲ್ಲ.

ಹೆತ್ತವರು ಮಕ್ಕಳಿಗೆ ಮದುವೆ ಮಾಡಿಸುವಾಗ ನೂರಾರು ಕನಸು ಕಂಡಿರುತ್ತಾರೆ. ತಮ್ಮ ಮಕ್ಕಳು ಮದುವೆ ಆಗಿ ಸುಖವಾಗಿ ಜೀವನ ನಡೆಸಬೇಕು, ಮರಿ ಮಕ್ಕಳನ್ನು ಆಡಿಸಿ ಬೆಳೆಸಬೇಕು, ಅದೇನೆ ಬಂದರೂ ಅಳಿಯ ಮಗಳು ಅದೆ ರೀತಿ ಮಗ ಸೊಸೆ ಜೊತೆಯಾಗಿ ಜೀವನ ನಡೆಸಿಕೊಂಡು ಹೋಗಬೇಕು ಎಂದು ಬಯಸಿರುತ್ತಾರೆ. ಆದರೆ ಮದುವೆ ಆದ ಮೇಲೆ ಹೆಂಡತಿಯಾಗಲಿ, ಗಂಡನಾಗಲಿ ಪರ ಪುರುಷನ ಅಥವಾ ಪರ ಸ್ತ್ರೀ ಪ್ರೀತಿಗೆ ಬಿದ್ದರೆ ಸಂಸಾರವೆ ಹಾಳಾಗುತ್ತದೆ.

ಸವಿತಾ ಹಾಗೂ ಆನಂದ್ ಇಬ್ಬರೂ ಮದುವೆ ಆಗಿ ಅನ್ಯೋನ್ಯವಾಗಿಯೆ ಇದ್ದರು. ಅವರ ಪ್ರೀತಿಗೆ ಸಾಕ್ಷಿಯಾಗಿ ಮಗು ಕೂಡ ಇತ್ತು. ಗಂಡ ಆನಂದ್ ಪ್ರತಿ ದಿನ ಕೆಲಸಕ್ಕೆ ಹೋಗುವ ಸಮಯದಲ್ಲಿ ತನ್ನ ಮಗನನ್ನು ಶಾಲೆಗೆ ಕರೆದುಕೊಂಡು ಹೋಗಿ, ಬರುವಾಗ ಕರೆದುಕೊಂಡು ಬರುತ್ತಿದ್ದ. ಹೀಗೆ ಇರುವಾಗ ಮನೆಯಲ್ಲಿ ಇದ್ದ ಸವಿತಾಳಿಗೆ ಆರೋಗ್ಯದಲ್ಲಿ ಕೊಂಚ ಏರು ಪೇರಾಗಿ ಯೋಗ ಕ್ಲಾಸ್ ಗೆ ಹೋಗಲು ಬಯಸಿದಳು. ಗಂಡ ಆನಂದ್ ಅದಕ್ಕೆ ಒಪ್ಪಿದ ಅದರಂತೆ ಸವಿತಾ ಪ್ರತಿನಿತ್ಯ ಯೋಗ ಕ್ಲಾಸ್ ಗೆ ಹೋಗಿ ಬರುತ್ತಿದ್ದಳು.

ಸವಿತಾ ತನಗೆ ಯೋಗ ಕಲಿಸುತ್ತಿದ್ದ ಗುರು ನವೀನ್ ಅನ್ನುವಾತನ ಪ್ರೇಮ ಪಾಶಕ್ಕೆ ಬಿದ್ದಳು. ಇಬ್ಬರ ನಡುವೆ ಸಲುಗೆ ಹೆಚ್ಚಾಗಿ ಅನೈತಿಕ ಸಂಬಂಧ ಬೆಳೆಯಿತು. ಈ ವಿಷಯ ಗಂಡ ಆನಂದ್ ಗೆ ಗೊತ್ತಾಗಿ ಆತ ಇಬ್ಬರಿಗೂ ಎಚ್ಚರಿಕೆ ನೀಡಿ ಇನ್ನು ಮುಂದೆ ಯೋಗ ಕ್ಲಾಸ್ ಗೆ ಹೋಗಬಾರದು ಎಂದು ಹೇಳಿದರು. ಹೀಗಾಗಿ ತಮ್ಮಿಬ್ಬರ ಸಂಬಂಧಕ್ಕೆ ಗಂಡ ಆನಂದ್ ಅಡ್ಡಿ ಎಂದು ಅರಿತ ಸವಿತಾ ಗಂಡನನ್ನೆ ಮುಗಿಸಲು ನವೀನ್ ಬಳಿ ಹೇಳಿದಳು.

ಅದರಂತೆ ನವೀನ್ ಸುಪಾರಿ ಕೊಟ್ಟಿದ್ದ. ಹಂತಕರು ಮಗನನ್ನು ಶಾಲೆಗೆ ಬಿಟ್ಟು ಹೋದ ಆನಂದ್ ನನ್ನು ಹಿಂಬಾಲಿಸಿ ಬರ್ಬರವಾಗಿ ಹತ್ಯೆ ಮಾಡಿದರು. ಯಾರಿಗೂ ಅನ್ಯಾಯ ಮಾಡದ ಆನಂದ್ ಈ ರೀತಿ ಕೊಲೆ ಆಗಿರುವ ಬಗ್ಗೆ ಸಂಶಯ ಮೂಡಿ ಪೊಲೀಸರು ವಿಚಾರಣೆ ನಡೆಸಿದಾಗ ಈ ಸತ್ಯ ಬಯಲಾಗಿತ್ತು. ಈಗ ನವೀನ್ ಹಾಗೂ ಸವಿತಾ ಕಂಬಿ ಎಣಿಸುತ್ತಿದ್ದಾರೆ. ಇಂತಹ ಘಟನೆಗಳ ‌ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ತಿಳಿಸಿ.

Leave a Reply

Your email address will not be published. Required fields are marked *