ಕಲ್ಲಂಗಡಿ ಹಣ್ಣಿನಿಂದ ಶರೀರಕ್ಕೆ ಸಿಗುವ ಲಾಭಗಳಿವು

0 1

ಬೇಸಿಗೆಯಲ್ಲಿ ಸೂರ್ಯನ ತಾಪ ಹೆಚ್ಚಾಗಿರುತ್ತದೆ. ಈ ಸಮಯದಲ್ಲಿ ದೇಹವನ್ನು ಆದಷ್ಟು ತಂಪಾಗಿಡುವಂತೆ ಮಾಡಬೇಕು. ನೀರಿನ ಅಂಶ ಇರುವಂತೆ ನೋಡಿಕೊಳ್ಳಬೇಕು. ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದಾಗ ದೇಹವು ಬೇಗನೆ ಬಿಸಿಲಿನ ತಾಪಕ್ಕೆ ಒಳಗಾಗುತ್ತದೆ. ಅದಕ್ಕೆ ತಜ್ಞರು ಆದಷ್ಟು ಹೆಚ್ಚಿಗೆ ನೀರನ್ನು ಕುಡಿಯಬೇಕು ಹೇಳುತ್ತಾರೆ. ನೀರಿನ ಜೊತೆಗೆ ಹಣ್ಣಿನ ಜ್ಯೂಸ್ ಗಳನ್ನು ಕುಡಿಯುತ್ತಿರಬೇಕು. ಅದರಲ್ಲೂ ಕಲ್ಲಂಗಡಿ ಹಣ್ಣಿನ ಜ್ಯೂಸ್ ಬೇಸಿಗೆಗೆ ಹೇಳಿ ಮಾಡಿಸಿದ ಹಣ್ಣು. ಕಲ್ಲಂಗಡಿ ಹಣ್ಣಿನಿಂದ ಆಗುವ ಪ್ರಯೋಜನಗಳೇನು ಅನ್ನುವುದು ಈ ಕೆಳಗಿನಂತೆ ಇವೆ.
ಇತರ ಹಣ್ಣುಗಳಿಗಿಂತ ಕಲ್ಲಂಗಡಿ ಹಣ್ಣಿನಲ್ಲಿ ನೀರಿನ ಅಂಶ ಹೆಚ್ಚಾಗಿರುತ್ತದೆ. ವಿಟಮಿನ್ ಎ, ಬಿ ಒನ್, ಬಿ ೬,ಸಿ ಪೊಟ್ಯಾಸಿಯಂ, ಇವೆ. ಕಲ್ಲಂಗಡಿಯಲ್ಲಿ 90% ನೀರಿನ ಅಂಶ ಇರುವುದರಿಂದ ಬೇಸಿಗೆಯಲ್ಲಿ ಈ ಹಣ್ಣು ತುಂಬಾ ಉಪಯೋಗಕರವಾಗಿದೆ.

ಬಿಸಿಲಿನ ತಾಪದಿಂದ ಪಾರಾಗಲು ಹಣ್ಣನ್ನು ತಿನ್ನಬಹುದು, ಇಲ್ಲವೆ ಜ್ಯೂಸ್ ಮಾಡಿ ಕುಡಿಯಬಹುದು. ಇದರಿಂದ ದೇಹವು ಬಳಲುವುದು ತಪ್ಪುತ್ತದೆ. ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ಸೇವಿಸುವುದರಿಂದ ದೇಹವನ್ನು ತೇವಾಂಶದಿಂದ ಇಡುವುದು. ಹಣ್ಣನ್ನು ಆಹಾರವಾಗಿ ಸೇವಿಸಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಲವಾರು ಪೋಷಕಾಂಶಗಳಿಂದ ಕೂಡಿರುವಂತಹ ಹಣ್ಣು ನೈಸರ್ಗಿಕವಾಗಿ ದೇಹದ ಕಲ್ಮಶ ಹೊರ ಹಾಕಿ ಎಲ್ಲಾ ಅಂಗಾಂಗಗಳು ಸರಿಯಾಗಿ ಕಾರ್ಯ ನಿರ್ವಹಿಸುವಂತೆ ಮಾಡುವುದು.

ಈ ಹಣ್ಣಿನಲ್ಲಿ ವೈಟೋಮಿನ್ ಎ ಮತ್ತು ಸಿ ಇರುವುದರಿಂದ ಚರ್ಮವನ್ನು ಕಾಂತಿಯುತವಾಗಿ ಇಡುತ್ತದೆ. ಸೂರ್ಯನಿಂದ ಆಗುವ ಸುಟ್ಟ ಕಲೆಗಳನ್ನು ನಿವಾರಿಸುತ್ತದೆ. ಬೇಸಿಗೆಯಲ್ಲಿ ಹೆಚ್ಚಾಗಿ ಸೆಕೆ ಇರುವುದರಿಂದ ಹಸಿವು ಕೂಡ ಸರಿಯಾಗಿ ಆಗುವುದಿಲ್ಲ ಈ ಹಣ್ಣಿನಲ್ಲಿ ಹೆಚ್ಚಾಗಿ ನೀರಿನ ಅಂಶ ಮತ್ತು ನಾರಿನ ಅಂಶ ಇರುವ ಕಾರಣದಿಂದ ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ. ಕೂದಲುಗಳು ಸುಂದರವಾಗಿ ಬೆಳೆಯಲು ಸಹಾಯ ಮಾಡುತ್ತದೆ. ರಕ್ತದೊತ್ತಡ ವನ್ನು ನಿವಾರಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ರಕ್ತನಾಳಗಳನ್ನು ಸರಿಯಾಗಿಟ್ಟುಕೂಂಡು ರಕ್ತ ಚಲನೆಯು ಸರಿಯಾಗಿ ಆಗುವಂತೆ ಮಾಡುತ್ತದೆ.

ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ತುಂಬಾ ಉಪಯೋಗಕರವಾಗಿದೆ. ಇದನ್ನು ಸೇವನೆ ಮಾಡುವುದರಿಂದ ಅನೇಕ ಲಾಭವನ್ನು ಪಡೆಯಬಹುದು.

Leave A Reply

Your email address will not be published.