ವಾಟರ್ ಪಾಲ್ಸ್ ತುದಿಗೆ ನಿಂತು ಫೋಟೋ ತಗೆದುಕೊಳ್ಳಲು ಹೋದ ನಟಿ ಕವಿತಾ ಗೌಡ, ನಂತರ ಆಗಿದ್ದೇನು ನೋಡಿ

0 1

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮೀ ಬಾರಮ್ಮ ಧಾರವಾಹಿ ಖ್ಯಾತಿಯ ಚಂದನ್ ಹಾಗೂ ಕವಿತಾ ಗೌಡ ಅವರು ನಟನೆಯ ಮೂಲಕ ಜನಪ್ರಿಯತೆ ಗಳಿಸಿ ಕಳೆದ ವರ್ಷ ಮದುವೆಯಾಗಿ ತಮ್ಮ ನಟನೆಯನ್ನು ಮುಂದುವರೆಸಿದ್ದಾರೆ. ನೀರಿರುವ ಜಾಗದಲ್ಲಿ ಕವಿತಾ ಅವರು ತೆಗೆಸಿಕೊಂಡ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಕನ್ನಡ ಕಿರುತೆರೆಯಲ್ಲಿ ಅದೆಷ್ಟೊ ಧಾರಾವಾಹಿಗಳು ಕೊನೆಗೊಂಡಿದ್ದರೂ ಕೂಡ ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ. ಅಂತಹ ಧಾರವಾಹಿಗಳಲ್ಲಿ ಲಕ್ಷ್ಮೀ ಬಾರಮ್ಮ ಧಾರಾವಾಹಿ ಕೂಡ ಒಂದು. ಅಂದಿನ ದಿನಗಳಲ್ಲಿ ಲಕ್ಷ್ಮೀ ಬಾರಮ್ಮ ಧಾರವಾಹಿ ಕನ್ನಡ ಟಾಪ್ ಧಾರಾವಾಹಿಗಳಲ್ಲಿ ಒಂದಾಗಿತ್ತು. ಇನ್ನು ಈ ಧಾರವಾಹಿಯ ಮೂಲಕ ನಟ ಚಂದನ್ ಕುಮಾರ್ ಹಾಗೂ ನಟಿ ಕವಿತಾ ಗೌಡ ಅವರು ಜನಪ್ರಿಯತೆ ಗಳಿಸಿದ್ದರು. ಇನ್ನು ಈ ಜೋಡಿ ಸತತವಾಗಿ ಮೂರ್ನಾಲ್ಕು ವರ್ಷಗಳ ಕಾಲ ಈ ಧಾರಾವಾಹಿಯಲ್ಲಿ ನಟಿಸಿದ್ದರು.

ನಂತರದಲ್ಲಿ ಚಂದನ್ ಹಾಗೂ ಕವಿತ ಗೌಡ ಅವರು ಧಾರವಾಹಿ ಪಾತ್ರಗಳಿಂದ ಹೊರಬಂದಿದ್ದರು ಆದರೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮಿ ಬಾರಮ್ಮ ಧಾರಾವಾಹಿ ಮೂಲಕ ಚಂದನ್ ಕುಮಾರ್ ಹಾಗೂ ಕವಿತ ಗೌಡ ಅವರು ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದರು. ಅಷ್ಟೆ ಅಲ್ಲದೆ ಈ ಜೋಡಿಯನ್ನು ನೋಡಿದ ಸಾಕಷ್ಟು ಅಭಿಮಾನಿಗಳು ಮೇಡ್ ಫಾರ್ ಈಚ್ ಅದರ್ ಎಂದು ಹೇಳಿದ್ದರು. ಇವರಿಬ್ಬರು ನಿಜ ಜೀವನದಲ್ಲಿ ಕೂಡ ವಿವಾಹವಾಗಬೇಕು ಎಂದು ಕೂಡ ಆಸೆ ಪಟ್ಟಿದ್ದರು. ಇನ್ನು ಅಭಿಮಾನಿಗಳ ನಿರೀಕ್ಷೆಯಂತೆ ಚಂದನ್ ಕುಮಾರ್ ಹಾಗೂ ಕವಿತಾ ಗೌಡ ಅವರು ಮದುವೆಯಾಗಿದ್ದಾರೆ.

ಇನ್ನು ಸಂಸಾರ ಪ್ರೀತಿ ಅಂತ ಸುಮ್ಮನಿರದೆ ತಮ್ಮ ಭವಿಷ್ಯದ ಕಡೆ ಗಮನ ಕೊಟ್ಟ ಇಬ್ಬರೂ ಸಹ ಮದುವೆಯ ನಂತರ ತಮ್ಮ ತಮ್ಮ ವೃತ್ತಿ ಬದುಕಿನಲ್ಲಿ ಬ್ಯೂಸಿ ಆದರು. ಅದಾಗಲೆ ಬೇರೆ ಭಾಷೆಗಳಲ್ಲಿಯೂ ಗುರುತಿಸಿಕೊಂಡಿದ್ದ ಕವಿತಾ ಅವರಿಗೆ ಅವರಿಷ್ಟದಂತೆ ಅವರ ಕಲಾಬದುಕನ್ನು ಮುಂದುವರೆಸಲು ಚಂದನ್ ಬೆಂಬಲ‌ ನೀಡಿದ್ದಾರೆ. ಜೊತೆಗೆ ಇತ್ತ ಚಂದನ್ ಕೂಡ ಮತ್ತೆ ಕನ್ನಡ ಹಾಗೂ ತೆಲುಗು ಧಾರಾವಾಹಿಗಳಲ್ಲಿ ಬ್ಯೂಸಿಯಾದರು.

ಅತ್ತ ಕವಿತಾ ಗೌಡ ಡ್ಯಾನ್ಸ್ ಶೋ, ಅಡುಗೆ ಶೋ ತಮಿಳಿನ ಧಾರಾವಾಹಿ ಹೀಗೆ ಅವರೂ ಕೂಡ ಸಿಕ್ಕಾಪಟ್ಟೆ ಬ್ಯೂಸಿಯಾದರು. ನಂತರದಲ್ಲಿ ನಟನೆಯ ಜೊತೆಗೆ ತಮ್ಮದೆ ಆದ ಪ್ರೊಡಕ್ಷನ್ ಹೌಸ್ ಅನ್ನು ಸಹ ತೆರೆದಿರುವ ಚಂದನ್ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ರಿಜಿಸ್ಟರ್ ಮಾಡಿಸಿ ಸಂತೋಷ ಹಂಚಿಕೊಂಡಿದ್ದರು. ಇತ್ತೀಚಿಗಷ್ಟೆ ಈ ಜೋಡಿ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಿಸಿಕೊಂಡು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಇದೀಗ ಚಿಕ್ಕಮಗಳೂರಿನ ಒಂದು ಜಲಪಾತದ ಎದುರು ಕವಿತಾ ಗೌಡ ಇರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕವಿತಾ ಗೌಡ ಅವರು ಈ ವಿಡಿಯೋವನ್ನು ಪೋಸ್ಟ್ ಮಾಡಿಲ್ಲ ಆದರೆ ಚಂದನ್ ಕವಿತಾ ಎನ್ನುವ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೊ ಶೇರ್ ಆಗಿದ್ದು, ಇದನ್ನು ನೋಡಿ ಕವಿತಾ ಅವರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡರು. ಕವಿತಾ ಗೌಡ ಅವರು ಜಲಪಾತದ ತುದಿಯಲ್ಲಿ ಮೊಬೈಲ್ ಹಿಡಿದು ವಿಡಿಯೊ ಮಾಡಿದ್ದಾರೆ.

ಮೊದಲೆ ಮಳೆಗಾಲ, ಕಲ್ಲು ತೇವವಾಗಿದ್ದು, ಅದರ ಮೇಲೆ ಸರಿಯಾಗಿ ಗಮನ ಕೊಡದೆ ಕಾಲಿಟ್ಟಾಗ ಜಾರಿ ಬೀಳುವುದು ಗ್ಯಾರಂಟಿ. ಅಂತಹ ಸ್ಥಳದಲ್ಲಿ ಮೊಬೈಲ್ ಹಿಡಿದು ವಿಡಿಯೊ ಮಾಡಿರುವುದಕ್ಕೆ ನೆಟ್ಟಿಗರು ಎಚ್ಚರಿಕೆಯಿಂದ ಇರಿ, ಸುರಕ್ಷಿತವಾಗಿರಿ ಎಂದಿದ್ದಾರೆ. ಮಳೆಗಾಲದ ಸಮಯದಲ್ಲಿ ನೀರಿರುವ ಪ್ರದೇಶಗಳಿಗೆ ಪ್ರವಾಸ ಹೋದರೆ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಕವಿತಾ ಗೌಡ ಹಾಗೂ ಚಂದನ್ ಅವರ ಮುಂದಿನ ಜೀವನ ಉಜ್ವಲವಾಗಲಿ ಎಂದು ಆಶಿಸೋಣ. ಕವಿತಾ ಗೌಡ ಅವರ ಪ್ರವಾಸದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ.

Leave A Reply

Your email address will not be published.