70 ರ ವಯಸ್ಸಲ್ಲೂ ಸೊಸೆಗೆ ಕಿಡ್ನಿ ದಾನ ಮಾಡಿ ಪ್ರಾಣ ಉಳಿಸಿದ ಅತ್ತೆ.! ನೆಟ್ಟಿಗರಿಂದ ಬಾರಿ ಮೆಚ್ಚುಗೆ

0 205

Viral News: 70 ವಯಸ್ಸಿನ ಅತ್ತೆ ತನ್ನ ಸೊಸೆಗೆ ತನ್ನ ದೇಹದ ಒಂದು ಭಾಗವನ್ನೇ ದಾನ ಮಾಡಿರುವ ಘಟನೆ ಮುಂಬೈನಲ್ಲಿ ಇತ್ತೀಚಿಗಷ್ಟೇ ನಡೆದಿದೆ ಈ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಎಷ್ಟೇ ಅಂದರೂ ಅತ್ತೆ ಸೊಸೆಯ ಬಾಂಧವ್ಯ ಅಷ್ಟಕ್ಕಷ್ಟೇ ಹೇಳಿಕೊಳ್ಳಲು ಅಮ್ಮ ಮಗಳಂತೆ ಇರುತ್ತೇವೆ ಎಂದರು ಸಹ ಅತ್ತೆ ಸೊಸೆಯರು ಹಾಗೆ ಇರುವುದು ಬಹಳ ಕಡಿಮೆ. ಇಂತಹ ಅತ್ತೆ ಸೊಸೆಯರ ನಡುವೆ ಜಗಳ ಸರ್ವೇ ಸಾಮಾನ್ಯವಾಗಿ ಕಂಡು ಬರುತ್ತಿರುತ್ತದೆ ಇಂತಹ ಜಗಳಗಳಿಂದ ಮದುವೆಯಾದ ನಂತರ ಗಂಡು ಮಕ್ಕಳು ತಮ್ಮ ಅಪ್ಪ-ಅಮ್ಮಂದಿರನ್ನ ಬಿಟ್ಟು ಬೇರೆ ಮನೆಯಲ್ಲಿ ಇರುವಂತಹ ಪರಿಸ್ಥಿತಿಯು ಒಮ್ಮೊಮ್ಮೆ ಬರುತ್ತದೆ. ಇಂತಹ ಕಾಲದಲ್ಲಿ ಇಲ್ಲೊಬ್ಬ ಅತ್ತೆ ತನ್ನ ಸೊಸೆಗೆ ತನ್ನ ದೇಹದ ಅಂಗವನ್ನೇ ದಾನ ಮಾಡಿ ಜೀವದಾನ ಮಾಡಿದ್ದಾಳೆ.

ಹೌದು ಮುಂಬೈನಲ್ಲಿ ಈ ಮನಕರುಗುವ ಘಟನೆ ನಡೆದಿದ್ದು 70 ವರ್ಷದ ಅತ್ತೆ ತನ್ನ 43 ವರ್ಷದ ಸೊಸೆ ಅಮಿಷ ಜಿತೇಶ್ ಇವರಿಗೆ ತನ್ನ ಕಿಡ್ನಿಯನ್ನು ದಾನ ಮಾಡಿದ್ದಾಳೆ. ಅಮಿಷಾಗೆ ಎರಡು ಕಿಡ್ನಿ ವೈಫಲ್ಯವಾಗಿದ್ದು ವೈದ್ಯರು ಕಿಡ್ನಿಯನ್ನು ಬದಲಾವಣೆ ಮಾಡಬೇಕು ಎಂದು ತಿಳಿಸಿದ್ದರೂ ಅದಕ್ಕೆ ಯಾರದು ಕಿಡ್ನಿ ಸಿಗದಿದ್ದ ಕಾರಣಕ್ಕಾಗಿ ಹಾಗೂ ಅವರ ಕುಟುಂಬದಲ್ಲಿ ಅನೇಕ ಕಿಡ್ನಿ ಅವಳ ದೇಹಕ್ಕೆ ಸರಿಹೊಂದದೆ ಇರುವ ಕಾರಣ ಈ ವಿಷಯಕ್ಕೆ ಬಹಳ ಹುಡುಕಾಡಬೇಕಾಯಿತು. ಅಂತಹ ಸಂದರ್ಭದಲ್ಲಿ ಅತ್ತೆಯ ಕಿಡ್ನಿ ಸರಿಹೊಂದುತ್ತದೆ ಎಂದು ವಿಷಯ ಗೊತ್ತಾದ ತಕ್ಷಣವೇ ಅವರ ಅತ್ತೆ ತನ್ನ ಕಿಡ್ನಿಯ ದಾನ ಮಾಡಲು ಒಪ್ಪಿದರು.

Viral News kannada kidney Donat mother in law

ಅತ್ತೆ ಪ್ರಭಾ, ತನ್ನ ಸೊಸೆ ನನಗೆ ಮಗಳಿದ್ದಂತೆ ಯಾರೇ ಏನೇ ಮಾತನಾಡಿಕೊಂಡರು ನನಗೆ ಆ ಕುರಿತು ಚಿಂತೆ ಇಲ್ಲ ಮಗಳಿಗಾಗಿ ತಾಯಿ ಏನನ್ನ ಮಾಡುತ್ತಾಳೋ ಅದನ್ನೇ ನಾನು ಮಾಡುತ್ತಿದ್ದೇನೆ ಎಂಬ ಮನಮಿಡಿಯುವ ಮಾತುಗಳನ್ನ ಆಡಿದಳು. ಈಕೆಯ ಈ ಕಾರ್ಯ ಹಾಗೂ ಮಾತುಗಳು ಎಲ್ಲರ ಮನಸ್ಸಿನಲ್ಲಿ ನೆಲೆಯೂರಿದೆ ಅಷ್ಟೇ ಅಲ್ಲದೆ ಜಗತ್ತಿನಲ್ಲಿ ಅತ್ತೆ ಸೊಸೆಯಂದಿರು ಹೀಗೂ ಇರುತ್ತಾರೆ ಎಂಬ ಚಿತ್ರಣ ಎಲ್ಲರ ಕಣ್ಣ ಮುಂದೆ ಕಟ್ಟಿದಂತಿದೆ.

ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಅತ್ತೆ ಪ್ರಭಾ ಅವರ ಕಿಡ್ನಿಯನ್ನು ಆಕೆಯ ಸೊಸೆ ಅಮಿಷ ಅವರ ದೇಹಕ್ಕೆ ವರ್ಗಾಯಿಸಲಾಯಿತು. ಈ ಸಂದರ್ಭದಲ್ಲಿ ಅವರಿಬ್ಬರಿಗೂ ಯಾವ ತೊಂದರೆಯೂ ಆಗಲಿಲ್ಲ ಇಬ್ಬರೂ ಆರೋಗ್ಯವಾಗಿಯೇ ಇದ್ದಾರೆ. ಈಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದ್ದು ಮನೆಯವರು ಪ್ರಭಾಳ ಬಗ್ಗೆ ಕೃತಜ್ಞತಾ ಭಾವವನ್ನ ವ್ಯಕ್ತಪಡಿಸಿದ್ದಾರೆ. ಇಂದಿನ ಕಾಲದಲ್ಲಿ ಇಂತಹ ಅತ್ತೆಯನ್ನ ಕಾಣುವುದು ಕಷ್ಟ ಸಾಧ್ಯ ಅಂತಹ ಸಂದರ್ಭದಲ್ಲಿ ಈ ಅತ್ತೆ ಸೊಸೆ ಇಬ್ಬರು ಎಲ್ಲರಿಗೂ ಮಾದರಿಯಾಗಿದ್ದಾರೆ.ಇದನ್ನೂ ಓದಿ ವೃಶ್ಚಿಕ ರಾಶಿಯವರಿಗೆ ಈ ಆಗಸ್ಟ್ ತಿಂಗಳಲ್ಲಿ ಕಷ್ಟಗಳು ದೂರ ಆಗುತ್ತಾ? ಈ ತಿಂಗಳು ಹೇಗಿರತ್ತೆ ತಿಳಿದುಕೊಳ್ಳಿ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.