ಕನ್ನಡ ಚಿತ್ರರಂಗದಲ್ಲಿ ಹಲವಾರು ನಟಿಯರು ವಿವಾಹವಾಗಿದ್ದಾರೆ. ವಿವಾಹವಾಗಿ ತಮ್ಮ ಮನೆಯಲ್ಲಿ ಸುಖವಾಗಿದ್ದಾರೆ. ಆದರೆ ಕೆಲವು ನಟಿಯರು ವಿವಾಹವಾಗಿಲ್ಲ. ಅದಕ್ಕೆ ಹಲವಾರು ಕಾರಣಗಳಿವೆ. ಆದರೆ ಎಲ್ಲ ನಟಿಯರೂ ವಿವಾಹವಾಗಿ ಸುಖವಾಗಿಲ್ಲ. ಅದಕ್ಕೆ ಉದಾಹರಣೆ ಎಂದರೆ ನಟಿ ಪ್ರೇಮಾ ಅವರು. ಆದರೆ ನಾವು ಇಲ್ಲಿ ವಿವಾಹವಾಗದೆ ಹಾಗೆಯೇ ಜೀವನ ನಡೆಸುತ್ತಿರುವ ನಟಿಯರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಮೊದಲು ನಟಿ ಸಿತಾರಾ ಅವರು ಕನ್ನಡ ಚಿತ್ರಗಳಲ್ಲಿ ನಟಿಸಿ ಒಳ್ಳೆಯ ಹೆಸರು ಮಾಡಿದ್ದರು. ಈಗ ಅವರಿಗೆ ಅವರದೇ ಆದ ಬೆಲೆಯಿದೆ. ಅವರ ಪ್ರೀತಿಯ ಸ್ನೇಹಿತನಾದ ಮುರಳಿ ಅವರು ನಿಧನ ಹೊಂದಿದರು. ಇದು ಅವರಿಗೆ ಮಾನಸಿಕವಾಗಿ ಬಹಳ ನೋವನ್ನುಂಟು ಮಾಡಿದೆ. ಹಾಗೆಯೇ ನಂತರದಲ್ಲಿ ತಮ್ಮ ತಂದೆಯನ್ನು ಕಳೆದುಕೊಂಡರು. ಈ ನೋವಿನಿಂದ ಅವರಿಗೆ ಹೊರಬರಲು ಮೂರು ವರ್ಷಗಳು ಬೇಕಾದವು. ಆದರೂ ಮದುವೆಯ ಬಗ್ಗೆ ಯೋಚಿಸಲೇ ಇಲ್ಲ.

ಹಾಗೆಯೇ ನಗ್ಮಾ ಅವರು ಒಂದು ಕಾಲದಲ್ಲಿ ಗ್ಲಾಮರಸ್ ನಟಿಯಾಗಿದ್ದರು. ಹುಡುಗರ ಕನಸಿನಲ್ಲಿ ಬರುವವರಾಗಿದ್ದರು. ನಟ ರವಿಕಿಶನ್ ಅವರ ಜೊತೆ ಬ್ರೇಕ್ ಅಪ್ ಆಗಿತ್ತು. ನಂತರದಲ್ಲಿ ಮದುವೆಯ ನಿರ್ಧಾರವನ್ನು ಕೈ ಬಿಟ್ಟರು. ಹಾಗೆಯೇ ನಟಿ ಶೋಭನಾ ಅವರು ನಟನೆಗೆ ಮತ್ತು ನಾಟ್ಯಕ್ಕೆ ಬಹಳ ಹೆಸರಾಗಿದ್ದಾರೆ. ಮಲಯಾಳಂ ಒಬ್ಬ ನಟನ ಜೊತೆ ಬ್ರೇಕ್ ಅಪ್ ಆಗಿದ್ದರಿಂದ ಮದುವೆಯ ಆಸೆಯನ್ನೇ ಬಿಟ್ಟರು. ಈಗ ಅವರು ಭರತನಾಟ್ಯ ಶಾಲೆಯನ್ನು ನಡೆಸುತ್ತಿದ್ದಾರೆ.

ಇದರಿಂದ ಎಷ್ಟೋ ವಿದ್ಯಾರ್ಥಿಗಳು ಭರತನಾಟ್ಯ ಕಲಿಯಬಹುದಾಗಿದೆ. ಲಕ್ಷ್ಮೀ ಗೋಪಾಲಸ್ವಾಮಿ ಅವರು ದಕ್ಷಿಣ ಭಾರತದ ಒಬ್ಬ ಕಲಾವಿದೆ. ಇವರು ಹಲವಾರು ಸಿನೆಮಾಗಳಲ್ಲಿ ನಟಿಸಿದ್ದಾರೆ. ಜೀವನದಲ್ಲಿ ಮದುವೆ ಎನ್ನುವುದು ಕೆಲವರ ಜೀವನದಲ್ಲಿ ಒಳ್ಳೆಯದನ್ನು ಮಾಡುತ್ತದೆ. ಆದರೆ ಕೆಲವರಿಗೆ ನರಕವೇ ಆಗುತ್ತದೆ. ಹಾಗಾಗಿ ಎಲ್ಲರಿಗೂ ವಿವಾಹ ಬಂಧನ ಆದ ಮೇಲೆ ಒಳ್ಳೆಯ ಜೀವನ ಸಿಗಲಿ ಎಂದು ಬಯಸೋಣ.

Leave a Reply

Your email address will not be published. Required fields are marked *