Today Horoscope Kannada: ಇವತ್ತು ಭಾನುವಾರ ತಾಯಿ ಚಾಮುಂಡೇಶ್ವರಿ ದೇವಿಯ ಅನುಗ್ರಹ ಈ ರಾಶಿಯವರ ಮೇಲಿದೆ ಇಂದಿನ ರಾಶಿಭವಿಷ್ಯ ತಿಳಿದುಕೊಳ್ಳಿ

0 3

Today Horoscope Kannada: ಮೇಷ ರಾಶಿ ಮಂಗಳಕರವಾದ ಕಾರ್ಯಕ್ರಮಕ್ಕೆ ದೃಷ್ಟಿದೋಷಗಳನ್ನು ಉಂಟು ಮಾಡುವಂಥ ಅಮಂಗಳಕಾರಿ ವ್ಯಕ್ತಿಗಳನ್ನು ಆಹ್ವಾನಿಸದಿರಿ.ಮಾತೃಸಂಬಂಧಿ ವ್ಯಕ್ತಿಗಳ ಆಗಮನವಾಗಲಿದೆ. ಮಗಳ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿ.ಲೋಹವಸ್ತುಗಳ ವ್ಯಾಪಾರಿಗಳಿಗೆ ಸಂಪಾದನೆಯಲ್ಲಿ ಹೆಚ್ಚಳವಾಗುವುದರ ವ್ಯಾವಹಾರಿಕ ಪ್ರಚಾರಗಳು ಸಿಗಲಿದೆ.

ವೃಷಭ ರಾಶಿ ವೈದ್ಯ ವೃತ್ತಿಯಲ್ಲಿರುವವರಿಗೆ ಹೃದಯ ವಿದ್ರಾವಕ ರೋಗಿಯೊಬ್ಬರು ಭೇಟಿಯಾಗುವ ಸಾಧ್ಯತೆ ಇದೆ. ದುರಾಚಾರಿಗಳಿಂದ ಅಪಾಯದ ಸೂಚನೆ ಇದ್ದರೆ ತಕ್ಷಣ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳುವುದು ಸೂಕ್ತ.ಧಾರ್ಮಿಕ ಕೆಲಸದಲ್ಲಿ ಇದ ತೋರಿದಷ್ಟೂ, ಅಭಿವೃದ್ಧಿಯ ದಾರಿಯನ್ನು ಕಾಣಬಹುದು.

ಮಿಥುನ ರಾಶಿ ಅನೇಕ ಕಾಲದಿಂದ ಕಾಡುತ್ತಿರುವ ದೇಹ ಭಾಷೆಯನ್ನು ನಿವಾರಿಸಿಕೊ- ಳ್ಳಲು ವೈದ್ಯರನ್ನು ಬದಲಾಯಿಸುವುದು ಉತ್ತಮ.ಸದ್ಗುರುವಿನ ದರ್ಶನದಿಂದ ಮನಸ್ಸಿನಲ್ಲಿರುವ ಪ್ರಶ್ನೆಗೆ ಉತ್ತರ ದೊರೆಯುತ್ತದೆ.ಪೋಷಕರಾದ ನೀವು ನಿಮ್ಮ ಮಕ್ಕಳ ಅಗತ್ಯಪೂರೈಸಿ ನೂತನ ವಾಹನ ಕೊಳ್ಳುವುದನ್ನು ಸ್ವಲ್ಪ ದಿನಗಳ ಕಾಲ ಮುಂದೂಡುವುದು ಉತ್ತಮ.

ಕರ್ಕಾಟಕ ರಾಶಿ ನಿನ್ನೆ ಮೊನ್ನೆಯಷ್ಟೆ ಇತ್ಯರ್ಥವಾಯಿತು ಎಂದುಕೊಂಡ ಕುಟುಂಬ
ಕಲಹವು ಮತ್ತೆ ಹೊಗೆಯಾಡುವ ಸಾಧ್ಯತೆ ಇದೆ.ದಿನವೂ ದೇವರನ್ನು ಸ್ತುತಿಸಿದ
ನಿಮಗೆ ಅದರ ಪುಣ್ಯಫಲಗಳ ಅನುಭವ ಮಕ್ಕಳ ಮೂಲಕ ತಿಳಿಯುತ್ತದೆ.ನಿತ್ಯದ ಕೆಲಸಗಳಲ್ಲಿ ಬದಲಾವಣೆ ಇರುವುದಿಲ್ಲ, ಸಮಾರಂಭಗಳಲ್ಲಿ ಭಾಗವಹಿಸುವಿರಿ.

ಸಿಂಹ ರಾಶಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಬೇಕೆಂದು ಯೋಚಿಸುತ್ತಿರುವ ವ್ಯಕ್ತಿಗಳಿಗೆ ಹಸ್ತಗಳು ಮುಂದೆ ಬರಲಿವೆ.ಅಡಿಕೆ ಮಾರಾಟಗಾರರಿಗೆ ನಷ್ಟದ ಸಲುವಾಗಿ ಬೇರೆಯೆ ಬೆಳೆ ಮುಂದುವರಿಸುವುದು ಸೂಕ್ತ ಎಂಬ ಯೋಚನೆ ಬರಬಹುದು.ತಾಯಿಗೆ ನುರಿತ ವೈದ್ಯರಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಲುವೈದ್ಯರ ಸಂಪರ್ಕ ಮತ್ತು ಸಹಾಯ ಹಸ್ತ ಸಿಗುವುದು.

ಕನ್ಯಾ ರಾಶಿ ಸಂಗಾತಿಯೊಂದಿಗಿನ ಸಂಬಂಧ ಗಟ್ಟಿಮಾಡಿಕೊಳ್ಳಲು ಬಿಡುವಿಲ್ಲದ ಸಮಯದಲ್ಲಿ ಸ್ವಲ್ಪ ಸಮಯ ನೀಡುವ ಪ್ರಯತ್ನ ಮಾಡಿ ಪ್ರಶಾಂತ ವಾತಾವರಣದ ಅಗತ್ಯ ನಿಮಗೆ ಇರುವುದರಿಂದ ಉದ್ಯಾನಕ್ಕೆ ಭೇಟಿ ನೀಡಿ.ಉದ್ಯೋಗ ಬದಲಾವಣೆ ವಿಚಾರದಲ್ಲಿ ಗೊಂದಲ ನಿವಾರಣೆ.ಪಂಚಾಕ್ಷರಿ ಮಂತ್ರದ ಜಪದಿಂದ ಅಶುಭ ದೂರ.

ತುಲಾ ರಾಶಿ ಇಂದು ವಿವಿಧ ಕಾರ್ಯಗಳ ಜವಾಬ್ದಾರಿಗಳ ಭಾರ ನಿಮ್ಮ ಮೇಲೆಯೆ ಬೀಳುವುದರಿಂದ ಕೆಲಸದ ಒತ್ತಡ ಹೆಚ್ಚಿರುತ್ತದೆ. ಬೇರೆಯವರ ಸಂಸಾರವನ್ನು ಟೀಕಿಸುವ ಮೊದಲು ಸಂಸಾರದ ಕುಂದು ಕೊರತೆಗಳನ್ನು ನಿವಾರಿಸಿಕೊಳ್ಳಿ. ಮನೋಭಾವವನ್ನು ಬದಲಿಸಿಕೊಳ್ಳುವಂತೆ ಅಗಲಿದ ಯಾವುದಕ್ಕೆ ಪ್ರಾಮುಖ್ಯ ಕೊಡಬೇಕೆಂಬುದು ನಿಮಗೆ ತಿಳಿಯಲಿದೆ.

ವೃಶ್ಚಿಕ ರಾಶಿ ಸಮಯದ ಗಡುವಿರುವ ಕೆಲಸಗಳನ್ನು ಕಡೆಯ ತನಕ ಉಳಿಸಿಕೊಳ್ಳುವ ಬದಲು ಈಗಲೇ ಮುಗಿಸಿಕೊಳ್ಳುವುದು ಉತ್ತಮ. ಸುತ್ತ ನಡೆಯುವ ಕೆಲವು ಸನ್ನಿವೇಶಗಳಿಂದ ಅಗಲಿದ ಹಿರಿಯರ ನೆನಪು ತರಿಸಲಿದೆ.ನೀವು ಈ ದಿನ ಪ್ರಗತಿಯ ಮಾಡಿ ಸ್ಪರ್ಶಿಸಲಿದ್ದೀರಿ. ಪ್ರತಿಭೆ ಸಾಮರ್ಥ್ಯ ಈ ಅಪಬೆಳಕಿಗೆ ಬರಲಿದೆ.

ಧನು ರಾಶಿ ಸಣ್ಣಸಣ್ಣ ವಿಷಯಗಳಿಗೆ ಕೋಪಿಸಿಕೊಳ್ಳುವ ಪ್ರವೃತ್ತಿಯಿಂದ ಹಿರಿಯರ ಕೋಪಕ್ಕೆ ಗುರಿಯಾಗುವ ಸಾಧ್ಯತೆಗಳಿವೆ. ಕೋಟಿಗಟ್ಟಲೆ ವ್ಯವಹಾರ ನಡೆಸುವವರು ಮನೆಯ ಕಾರ್ಯಕ್ರಮದಲ್ಲಿ ಕೃಪಣತೆ ತೋರಿಸುವುದು ಬೇಡ. ಸಿವಿಲ್ ಎಂಜಿನಿಯರ್‌ಗಳಿಗೆ ಉತ್ತಮ ಅವಕಾಶಗಳು ಸಿಗುವುದು.

ಮಕರ ರಾಶಿ: ಈಶ್ವರನ ಕೃಪೆಯಿಂದ ಉತ್ತಮವಾಗಿ ನಡೆಯುತ್ತಿರುವ ಕೆಲಸಗಳಲ್ಲಿ ಔನತ್ಯವು ನಿಶ್ಚಿತವಾದದ್ದು. ಕೆಲನಿರ್ಧಾರಗಳು ಈಗಿನ ಕಾಲದ ಗತಿಗೆ ಸ್ವಲ್ಪ ವಿರುದ್ಧವಾಗಿ ಕಂಡುಬರುವುದರಿಂದ ವಿರೋಧವ್ಯಕ್ತವಾಗಬಹುದು. ಸ್ನೇಹಪರ ದಾನ-ಧರ್ಮದಸ್ವಭಾವದಿಂದಾಗಿ ವೈಯಕ್ತಿಕ ಸ್ಥಾನ ಮಾನಗಳು ಲಭಿಸುವುದು.ನಟ ನಟಿಯರಿಗೆ ವಿಫುಲ ಅವಕಾಶಗಳು ದೊರೆಯಲಿವೆ.

ಕುಂಭ ರಾಶಿ ಆವೇಶ ಆಕ್ರೋಶಗಳನ್ನು ವ್ಯಕ್ತಪಡಿಸಲು ಅದಕ್ಕೆ ಕಾರಣರಲ್ಲದ ವ್ಯಕ್ತಿಗಳನ್ನು ಆರಿಸಿಕೊಳ್ಳಬೇಡಿ. ಮಸಾಲೆ ಪದಾರ್ಥಗಳ ತಯಾರಕರು ಲಾಭ ಹೊಂದಲಿದ್ದೀರಿ.ಆಗಾಗ ಬರುತ್ತಿರುವ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಿರಿ. ದೂರದ ಪ್ರಯಾಣವನ್ನು ನೀವು ಕೈಗೆತ್ತುಕೊಳ್ಳುತ್ತೀರಾ ಕುಟುಂಬದ ಜೊತೆಗೆ ಹೆಚ್ಚಿನ ಸಮಯವನ್ನು ನೀವು ಕಳಿಯಲಿದ್ದೀರಾ.

ಮೀನ ರಾಶಿ ಸಂತೋಷದಲ್ಲಿ ಮೈಮರೆಯುವಿಕೆಯಿಂದ ಕೆಲವು ವಿಷಯಗಳ ಮೇಲೆ ಗಮನ ಕಡಿಮೆಯಾಗಿ ಎಡವಟ್ಟುಗಳು ಉಂಟಾಗಬಹುದು.ಅಧಿಕಾರಿಗಳೊಂ ದಿಗೆ ವಾದಿಸದೆ ಅವರು ಹೇಳುವ ಕಾರ್ಯಗಳನ್ನು ಮಾಡುವುದು ಒಳ್ಳೆಯದು. ಕೆಲಸದ ಒತ್ತಡ ನಿಮಗೆ ಹೆಚ್ಚಿಗೆ ಇರಲಿದೆ ಇದನ್ನೂ ಓದಿ: Anjaneya Swamy: ಇವತ್ತಿನಿಂದ ಆಂಜನೇಯ ಸ್ವಾಮಿಯ ದಿವ್ಯದೃಷ್ಟಿಯಿಂದ ಈ 4 ರಾಶಿಯವರಿಗೆ ಗಜಕೇಸರಿ ಯೋಗ ಆರಂಭ, ನಿಮ್ಮ ರಾಶಿ ಇದೆಯಾ ನೋಡಿ

Leave A Reply

Your email address will not be published.