Today Daily Horoscopes ಮೇಷ ರಾಶಿ ಬದುಕಿನ ಮೇಲೆ ನಿಯಂತ್ರಣ ಸಾಧಿಸುವ ನಿಟ್ಟಿನಲ್ಲಿ ದುಡಿದು ಯಶಸ್ಸನ್ನು ಹೊಂದುವಿರಿ.ಕೌಟುಂಬಿಕವಾಗಿ ಅಚ್ಚರಿಯ ಸಂಗತಿಗಳನ್ನು ಕೇಳುವಂತಾಗುವುದು.ಸರಕು ಸಾಗಾಟದಿಂದ ಉತ್ತಮಲಾಭಪಡೆಯುವಿರಿ. ಬೇಕಾದ ಸಮಯದಲ್ಲಿ ವಿರಾಮ ನೀಡದೆ ದುಡಿಯುತ್ತಿದ್ದಲ್ಲಿ ದೇಹವು ಅಗತ್ಯವಿರುವ ಸಮಯದಲ್ಲಿ ಕೈಕೊಡುವ ಸಾಧ್ಯತೆಗಳಿವೆ.

Today Daily Horoscopes

ವೃಷಭ ರಾಶಿ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯ ಒಳ್ಳೆಯದಲ್ಲ, ಧೈರ್ಯವಿರಲಿ. ಯಾವುದೇ ಕೆಲಸದಲ್ಲಿ ಆದರೂ ಯಶಸ್ಸನ್ನು ಪಡೆಯಲು ಕಠಿಣವಾದ ಪರಿಶ್ರಮ ಅತ್ಯಗತ್ಯ.ಖರ್ಚುವೆಚ್ಚಗಳ ಮೇಲೆ ಗಮನವಿದ್ದರೆ ಒಳ್ಳೆಯದು.ಅಂದುಕೊಂಡ ಕೆಲಸಗಳು ನಿರ್ವಿಘ್ನವಾಗಿ ನಡೆಯಲು ಗಣಪತಿ ದೇವಾಲಯಕ್ಕೆ ಭೇಟಿ ಕೊಡಿ.

ಮಿಥುನ ರಾಶಿ ಕೆಲಸದ ನಿಮಿತ್ತವಾಗಿ ಅನಿರೀಕ್ಷಿತ ದೂರ ಪ್ರಯಾಣಮಾಡುವ ಸಾಧ್ಯತೆಗಳಿವೆ.ಕೌಟುಂಬಿಕ ಸಮಸ್ಯೆಗಳಿಗೆ ಸಂಗಾತಿಯೊಂದಿಗೆ ಸಮಾಧಾನದಿಂದ ಸಮಾಲೋಚನೆ ಮಾಡಿದಲ್ಲಿ ಉತ್ತಮ ಪರಿಹಾರದೊರೆಯುವುದು. ಹೊಸ ವ್ಯಾಪಾರ ಶುರು ಮಾಡಲು ಯೋಚನೆ ಮಾಡುತ್ತೀರಾ.

ಕರ್ಕಾಟಕ ರಾಶಿ ಧನಾತ್ಮಕ ಚಿಂತನೆಯಿಂದ ಮನಸ್ಸು ಆಹ್ಲಾದಕರವಾಗಿರುತ್ತದೆ. ರಾಜಕೀಯ ವ್ಯಕ್ತಿಗಳಿಗೆ ಅನೇಕ ಜನರ ಜೊತೆ ಸಮಾಲೋಚನೆ ನೆಡೆಸಬೇಕಾಗುವುದು. ಮನೆಗಾಗಿ ಅಲಂಕಾರಿಕ ವಸ್ತುಗಳ ಖರೀದಿ ಮಾಡುವಿರಿ. ಹಿರಿಯರ ಆರೋಗ್ಯದಲ್ಲಿ ಚೇತರಿಕೆ ನಿಮಗೆ ಕಾಣಲಿದೆ.

ಸಿಂಹ ರಾಶಿ ಭೌತವಿಜ್ಞಾನದ ಸಂಶೋಧನೆಯಲ್ಲಿ ತೊಡಗಿರುವ ವ್ಯಕ್ತಿಗಳಿಗೆ ಫಲಿ ತಾಂಶದ ಕಡೆಗೆ ಹೊಸ ಹೊಸ ಮಾರ್ಗಗಳು ಗೋಚರಿಸುವುದು.ಅವಿವಾಹಿತ ಯೋಗ್ಯವಯಸ್ಕರಿಗೆ ಹೊಸ ಸಂಬಂಧಗಳು ಹುಡುಕಿ ಬರುವ ಸಾಧ್ಯತೆಗಳಿವೆ.ಮಕ್ಕಳ ಆಟೋಪಚಾರಗಳನ್ನು ನೋಡಿದ ನಿಮಗೆ ಬಾಲ್ಯವು ಅತಿಯಾಗಿ ಕಾಡಲಿದೆ ಎಂದೋ ಕಳೆದುಕೊಂಡ ವಸ್ತು ಅಚಾನಕ್ಕಾಗಿ ದೊರೆಯಲಿದೆ.

ಕನ್ಯಾ ರಾಶಿ ಪೊಲೀಸ್ ಅಧಿಕಾರಿಗಳಿಗೆ ತುರ್ತುಕೆಲಸ ಒದಗುವ ಸಂದರ್ಭ ಬರುವುದು. ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಅವಕಾಶಗಳು ಒದಗಿ ಬರುತ್ತದೆ. ಈ ದಿನ ಮಿಶ್ರಫಲ ಅನುಭವಕ್ಕೆ ಬರಲಿದೆ.ರಾತ್ರಿಯ ವೇಳೆಗೆ ಅನಿರೀಕ್ಷಿತ ಪ್ರಯಾಣ ಮಾಡಬೇಕಾಗುತ್ತದೆ.

ತುಲಾ ರಾಶಿ ದಾಯಾದಿಗಳು ಅಥವಾ ಅಕ್ಕ-ಪಕ್ಕದವರು ಭೂಸಂಬಂಧದ ಕಲಹಗಳನ್ನು ಬಿಟ್ಟು ರಾಜಿಮಾಡಿಕೊಳ್ಳುವ ಮನೋಭಾವಕ್ಕೆ ಬಂದಾರು, ಅದರಂತೆ ನಡೆಯುವುದೇ ಉತ್ತಮ.ಶ್ರೀ ಶನೈಶ್ಚರನ ಆರಾಧನೆ ಮಾಡಿ.ಚಿತ್ರಕಲಾವಿದರು ಭಾವನೆಯ ಕೊರತೆ ಎದುರಿಸುತ್ತೀರಿ.ಎಷ್ಟು ಜಾಗರೂಕತೆಯಿಂದ ಕೆಲಸ ಮಾಡಿದರೂ ಮೇಲಧಿಕಾರಿಗಳ ಹದ್ದಿನ ಕಣ್ಣಿಗೆ ಕೆಲವು ದೋಷಗಳು ಕಾಣುತ್ತವೆ.

ವೃಶ್ಚಿಕ ರಾಶಿ ಈ ದಿನ ಸರ್ಕಾರಿ ಮೂರನೇ ದರ್ಜೆಯ ನೌಕರರಿಗೆ ಅರ್ಥಿಕವಾಗಿ ಅನುಕೂಲವಾಗುವುದು.ಆರೋಗ್ಯದಲ್ಲಿ ರಕ್ತದೊತ್ತಡಕ್ಕೆ ಸಂಬಂಧಿಸಿದಂತೆ ಏರುಪೇರಾಗುವ ಲಕ್ಷಣ ಇರುವುದು, ಆತಂಕಕ್ಕೆ ಒಳಗಾಗಬೇಡಿ. ನೀವು ಮಾಡು ಅಂತ ಕೆಲಸದಲ್ಲಿ ನೀವು ತುಂಬಾ ಚಾಣಾಕ್ಷತೆಯಿಂದ ಕೆಲಸ ಮಾಡಬೇಕು.
ಇನ್ನು ಚೆನ್ನಾಗಿ ರೂಪಿಸಿಕೊಳ್ಳಿ.

ಧನು ರಾಶಿ ಮಾತುಗಾರಿಕೆಯ ಸಾಮರ್ಥ್ಯದಿಂದ ಇತರರನ್ನು ಗೆಲ್ಲುವ ಸಾಮರ್ಥ್ಯ ನಿಮ್ಮಲ್ಲಿದೆ.ಅದನ್ನು ನೀವು ಬಳಸಿಕೊಳ್ಳಬಹುದು.ಜೀವನ ಶೈಲಿಯಲ್ಲಿ ಮಹತ್ತರ ಬದಲಾವಣೆಗಳನ್ನು ತಂದುಕೊಳ್ಳುವ ಸನ್ನಿವೇಶ ಬರಲಿದೆ.ವಿದ್ಯೆ ಹೇರಳವಾಗಿದ್ದರೂ ವಿನಯದ ಕೊರತೆ ಇದ್ದಲ್ಲಿ ಪಾಂಡಿತ್ಯಕ್ಕೆ ಬೆಲೆ ಸಿಗದೆ ಹೋಗಬಹುದು.

ಮಕರ ರಾಶಿ ಲಾಭ ತರುವಂತಹ ಮತ್ತು ಅನಿವಾರ್ಯದ ನಿರ್ಧಿಷ್ಟ ಕೆಲಸಗಳಿಗೆ ಮಾತ್ರ ಗಮನ ಕೊಡುವುದು ಒಳ್ಳೆಯದು. ಸಾಂಸಾರಿಕ ವಿಚಾರಕ್ಕೆ ಸಂಬಂಧಿಸದಂತೆ ಆತುರದಿಂದ ತೀರ್ಮಾನತೆಗೆದುಕೊಳ್ಳುವುದು ಸರಿಯಲ್ಲ. ಹಣ್ಣಿನ ತೋಪನ್ನು ಮಾಡಲು ಇಚ್ಚಿಸುತ್ತಿರುವ ಕೃಷಿಕರಿಗೆ ಹಣದ ಜತೆಗೆ ದಾನಿಗಳ ಹಣವೂ ಕೈಸೇರುವ ಸಾಧ್ಯತೆ ಇದೆ.

ಕುಂಭ ರಾಶಿ ಕೆಲಸದಲ್ಲಿ ಈ ದಿನ ವಿಘ್ನಗಳು ಎದುರಾದರೂ, ಅಪೇಕ್ಷಿತ ಫಲ ದೊರಕುವುದು.ಹೊಸದನ್ನು ಕಲಿಯುವುದಕ್ಕೆ ಬಹಳ ಉತ್ಸುಕರಾಗಿದ್ದೀರಿ. ಇತರರನ್ನು ನಂಬದಿರುವ ಪರಿಸ್ಥಿತಿ ಬರುವುದು.ಪ್ರತಿದಿನ ಭಕ್ತಿಯಿಂದ ದೇವರನ್ನು ನೀವು ಸ್ತುತಿಸುವುದರಿಂದ ನಿಮಗೆ ಎದುರಾಗಲಿರುವ ಸಣ್ಣಪುಟ್ಟ ಸಮಸ್ಯೆಗಳು ಸರಾಗವಾಗಿ ನಿವಾರಣೆಯಾಗಲಿದೆ.

ಮೀನ ರಾಶಿ ಗುರಿ ಸಾಧಿಸಲು ಹೊಸ ಬದಲಾವಣೆಗಳು ಅನಿವಾರ್ಯ ಎನಿಸಲಿದೆ. ಹಣಕಾಸಿನ ಸಂಸ್ಥೆಗೆ ಪಾಲುದಾರರಾಗುವ ಸಾಧ್ಯತೆ ಇದೆ. ರಫ್ತು ವ್ಯಾಪಾರಿಗಳು ಲಾಭಹೊಂದುವರು. ರೈಲ್ವೆ ಮಾರ್ಗದಲ್ಲಿ ಕೆಲಸ ಮಾಡುವವರಿಗೆ ಕಾರ್ಯದ ಒತ್ತಡ ಹೆಚ್ಚಿರುತ್ತದೆ.

Leave a Reply

Your email address will not be published. Required fields are marked *