ಚಿಂತೆಯನ್ನು ದೂರ ಮಾಡಿಕೊಳ್ಳೋದು ಹೇಗೆ, ನೋಡಿ

0 7

“ಚಿತೆ ಮನುಷ್ಯನ ದೇಹವನ್ನು ಸುಟ್ಟರೆ ಚಿಂತೆ ಮನುಷ್ಯನನ್ನು ಜೀವಂತವಾಗಿ ಸುಡುತ್ತದೆ” ಎಂಬ ಮಾತಿದೆ. ಈ ಮಾತು ನಿಜಕ್ಕೂ ಅಕ್ಷರಶಹ ಸತ್ಯ. ಪ್ರತಿಯೊಬ್ಬರೂ ತಮ್ಮ ಪ್ರತಿನಿತ್ಯ ಜೀವನದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಚಿಂತೆ ಮಾಡುತ್ತಲೇ ಇರುತ್ತಾರೆ ಚಿಂತೆ ಇಲ್ಲದ ವ್ಯಕ್ತಿ ಯಾರು ಇಲ್ಲ. ನಾವು ನಮ್ಮ ಮುಂದಿನ ಭವಿಷ್ಯದ ಸಲುವಾಗಿ ಅಥವಾ ಇನ್ಯಾವುದೋ ವಿಷಯಕ್ಕೆ ಚಿಂತೆ ಮಾಡುತ್ತಲೇ ಇರುತ್ತೇವೆ ಆದರೆ ಈ ರೀತಿಯಾಗಿ ಚಿಂತೆ ಮಾಡುವುದರಿಂದ ನಮ್ಮ ನಾಳಿನ ಮತ್ತು ಈಗಿನ ಈ ಕ್ಷಣದ ಸಂತೋಷವನ್ನು ಕಸಿದುಕೊಳ್ಳುತ್ತದೆ. ಚಿಂತೆ ನಮ್ಮ ಎಲ್ಲ ಸಂತೋಷಗಳನ್ನು ಕಸಿದುಕೊಳ್ಳುವ ರೋಗವಾಗಿದೆ ಎಂದರೆ ತಪ್ಪಾಗಲಾರದು. ವಾಸ್ತವಿಕವಾಗಿ ನೋಡುವುದಾದರೆ ಚಿಂತೆಗೆ ಯಾವುದೇ ಅಸ್ತಿತ್ವವೇ ಇಲ್ಲ. ಸಾಮಾನ್ಯವಾಗಿ ಚಿಂತೆ ನಮಗೆ ಮುಂಬರುವ ಭವಿಷ್ಯದ ಸಲುವಾಗಿ ಹುಟ್ಟುತ್ತದೆ. ಯಾವ ವಿಷಯದಲ್ಲಿ ನಮ್ಮ ಮನಸ್ಥಿತಿ ನಿಯಂತ್ರಣದಲ್ಲಿ ಇರುವುದಿಲ್ಲವೋ ಪದೇ ಪದೇ ಅದೇ ವಿಷಯದ ಬಗ್ಗೆ ಯೋಚಿಸುವುದು ಚಿಂತೆ ಆಗಿರುತ್ತದೆ. ಕೆಲವೊಮ್ಮೆ ನಾವು ನಮಗೆ ಸಂಬಂಧವೇ ಇಲ್ಲದ ವಿಷಯಗಳ ಕುರಿತು ಅನಾವಶ್ಯಕವಾಗಿ ಚಿಂತೆ ಮಾಡುತ್ತಲೇ ಇರುತ್ತೇವೆ ಹಾಗಾದರೆ ಚಿಂತೆಯಿಂದ ನಾವು ನಮ್ಮನ್ನು ರಕ್ಷಿಸಿಕೊಳ್ಳಲು ನಮ್ಮ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದರ ಸಲುವಾಗಿ ಚಿಂತೆಯನ್ನು ದೂರ ಮಾಡುವುದು ಹೇಗೆ ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಯಾವಾಗ ನಮ್ಮ ಮನಸ್ಸು ಯಾವುದಾದರೊಂದು ವಿಚಾರದ ಯೋಚನೆಯಲ್ಲಿ ಸಿಲುಕಿಕೊಂಡು ಯೋಚಿಸುತ್ತಾ ಇರುತ್ತದೆಯೋ ಆಗ ಕೇವಲ ಒಂದೇ ವಿಚಾರದ ಬಗ್ಗೆ ಮನಸ್ಸು ಕೇಂದ್ರೀಕೃತವಾಗದೆ ವಿಷಯದ ಕುರಿತಾಗಿ ಯೋಚಿಸುತ್ತಿರುತ್ತದೆ. ಅದೇ ವಿಚಾರಗಳು ನಮ್ಮ ತಲೆಯಲ್ಲಿ ಓಡುತ್ತಿರುವುದರಿಂದ ಅಂತಹ ವಿಚಾರಗಳೇ ನಮ್ಮನ್ನು ಹೆಚ್ಚು ಚಿಂತೆಗೆ ಒಳಪಡಿಸುತ್ತದೆ ಮುಂದಿನ ಸಂತೋಷದ ಜೀವನವನ್ನು ಕೂಡ ಕಸಿದುಕೊಳ್ಳುತ್ತದೆ. ನಮ್ಮ ಜೀವನದ ಸಂತೋಷ ಹಾಗೂ ಸುಖವನ್ನು ಕೂಡ ಕಿತ್ತುಕೊಳ್ಳುತ್ತದೆ. ಚಿಂತೆಯ ನಿಜವಾದ ಅರ್ಥ ನೋಡುವುದಾದರೆ ನಮ್ಮ ಜೀವನದಲ್ಲಿ ಯಾವಾಗಲೂ ಯಾವುದೇ ಘಟನೆ ನಡೆದಿರುವುದಿಲ್ಲ ಅಥವಾ ನಡೆಯುವುದಿಲ್ಲವೋ ಅದರ ಬಗ್ಗೆ ಅತಿಯಾಗಿ ಯೋಚಿಸುವುದು ಆಗಿರುತ್ತದೆ. ಒಂದೇ ವಿಚಾರದ ಕುರಿತು ನಾವು ಪದೇ-ಪದೇ ಯೋಚಿಸುವುದರಿಂದ ನಮ್ಮ ಜೀವನದಲ್ಲಿ ನಾವು ಏನನ್ನು ಸಾಧಿಸಲು ಕೂಡ ಆಗುವುದಿಲ್ಲ.

ನಮ್ಮ ಜೀವನದಲ್ಲಿ ಶೇಕಡ 98ರಷ್ಟು ವಿಷಯಗಳು ಅಥವಾ ಘಟನೆಗಳು ನಡೆದೆ ಇರುವುದಿಲ್ಲ. ಆದರೆ ನಡೆಯದೆ ಇರುವ ಘಟನೆಗಳ ಬಗ್ಗೆ ನಾವು ನಿರಂತರವಾಗಿ ಯೋಚಿಸುತ್ತಿರುತ್ತೇವೆ. ಮುಂದೆ ಏನಾಗಬಹುದು? ಎನ್ನುವುದರ ಕುರಿತಂತೆ ಚಿಂತೆ ಮಾಡುತ್ತಾ ಕುಳಿತರೆ ನಾಳೆ ಬರುವಂತಹ ಸಮಸ್ಯೆಗಳು ಏನೂ ದೂರ ಆಗುವುದಿಲ್ಲ ಬದಲಿಗೆ ನಮ್ಮ ಇಂದಿನ ಅಥವಾ ಈ ಕ್ಷಣದ ಸಂತೋಷವನ್ನು ಖಂಡಿತ ಹಾಳಾಗುತ್ತದೆ. ಒಂದು ವೇಳೆ ನೀವು ಚಿಂತೆಯಿಂದ ಬಿಡಿಸಿಕೊಳ್ಳಲು ಬಯಸಿದಲ್ಲಿ ನಿಮ್ಮ ಮನಸ್ಸನ್ನು ಒಂದೇ ಯೋಚನೆಯ ಒಂದು ವಿಷಯದ ಕಡೆ ಆಲೋಚನೆ ಮಾಡಲು ಬಿಡಬಾರದು. ಯಾವಾಗ ಒಂದೇ ವಿಚಾರದ ಬಗ್ಗೆ ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತಿರೋ ಆಗ ಜೀವನದಲ್ಲಿ ಮತ್ತಷ್ಟು ದುಃಖಗಳು ತೊಂದರೆಗಳುಂಟಾಗುತ್ತವೆ. ಒಂದು ವೇಳೆ ಯಾವುದೇ ವಿಚಾರದ ಕುರಿತು ನಿಮ್ಮ ನಿಯಂತ್ರಣ ಇಲ್ಲದೆ ಇದ್ದರೆ ಏನಾಗುತ್ತದೆಯೋ ಅದರಮೇಲೆ ಒಂದು ಅದ್ಭುತವನ್ನು ಸಾಧಿಸಲು ಪ್ರಯತ್ನಿಸಿ. ಅನಾವಶ್ಯಕ ವಿಚಾರದ ಕುರಿತು ಯೋಚನೆ ಮಾಡುತ್ತ ಚಿಂತೆ ಮಾಡಿಕೊಂಡು ನಿಮ್ಮ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ. ನಮ್ಮ ಮನಸ್ಸಿನಲ್ಲಿ ಯಾವುದೇ ಚಿಂತೆ ಭಾರ ಇಲ್ಲದೆ ಇರುವಾಗ ಹೃದಯ ಮತ್ತು ಮನಸ್ಸು 2 ಶಾಂತವಾಗಿ ಹಾಗೂ ಸುಖವಾಗಿ ಇರುತ್ತದೆ ಹಾಗಾಗಿ ಯಾವುದೇ ವಿಚಾರಕ್ಕೆ ಅತಿಯಾಗಿ ಚಿಂತೆಯನ್ನು ಮಾಡಬೇಡಿ.

Leave A Reply

Your email address will not be published.