ಅಯ್ಯೋ ದೇವರೇ, ಜೀವನದಲ್ಲಿ ಏನು ಬೇಕಾದರೂ ಕಷ್ಟ ಕೊಡು ಆದರೆ ಎಂದೂ ಹಲ್ಲು ನೋವು ಮಾತ್ರ ಕೊಡಬೇಡಪ್ಪ ಎನ್ನುವ ಪ್ರಾರ್ಥನೆ ನೋವು ಅನುಭವಿಸಿರುವ ಪ್ರತಿಯೊಬ್ಬರೂ ಮಾಡಿರುತ್ತಾರೆ. ಯಾಕೆಂದರೆ ಹಲ್ಲಿನಿಂದ ಬರುವ ನೋವನ್ನು ಸಹಿಸಿಕೊಳ್ಳುವುದು ಬಹಳ ಕಷ್ಟ.

ಕ್ಯಾಲ್ಸಿಯಂ ಕೊರತೆ ಹಾಗೂ ಶುಚಿತ್ವ ಕಾಪಾಡಿಕೊಳ್ಳದೆ ಇರುವುದರಿಂದ ಹಲ್ಲಿನಲ್ಲಿ ಕುಳಿ ಹಾಗೂ ಹುಳುಕು ಉಂಟಾಗುತ್ತವೆ. ಹಲ್ಲು ಇದ್ದ ಮೇಲೆ ಹಲ್ಲು ನೋವು ಒಂದಲ್ಲಾ ಒಂದು ಬಾರಿ ಬಂದೇ ಬರುತ್ತದೆ. ಹಲ್ಲು ನೋವಿನಿಂದ ಪಾರಾಗಿದ್ದೇವೆ ಎನ್ನುವವರು ಕೇವಲ ಬೆರಳೆಣಿಕೆಯ ಮಂದಿಗಳು ಇರಬಹುದು.

ಹಲ್ಲು ನೋವನ್ನು ಯಮ ಯಾತನೆ ಎಂದು ಪರಿಗಣಿಸಲಾಗುವುದು. ಹಲ್ಲಿನಿಂದ ಬರುವ ನೋವನ್ನು ಸಹಿಸಿಕೊಳ್ಳುವುದು ಬಹಳ ಕಷ್ಟ. ಕ್ಯಾಲ್ಸಿಯಂ ಕೊರತೆ ಹಾಗೂ ಶುಚಿತ್ವ ಕಾಪಾಡಿಕೊಳ್ಳದೆ ಇರುವುದರಿಂದ ಹಲ್ಲಿನಲ್ಲಿ ಕುಳಿ ಹಾಗೂ ಹುಳುಕು ಉಂಟಾಗುತ್ತವೆ. ಇವು ದಿನ ಕಳೆದಂತೆ ಹೆಚ್ಚುತ್ತಾ ಹೋಗಿ, ಹಲ್ಲಿನ ಬೇರುಗಳಿಗೆ ಪಸರಿಸುತ್ತವೆ. ಹಲ್ಲಿನ ಬೇರುಗಳಲ್ಲಿ ಉಂಟಾಗುವ ಹುಳುಕು, ನೋವು ಹಾಗೂ ಸೆಳೆತದಿಂದ ಸಾಕಷ್ಟು ನೋವು ಉಂಟಾಗುವುದು. ತಂಪಾದ ನೀರು, ಬಿಸಿಯಾದ ವಸ್ತು, ಸಿಹಿ ತಿಂಡಿ ಹಾಗೂ ಗಟ್ಟಿಯಾದ ಆಹಾರವನ್ನು ಸೇವಿಸಿದಾಗ ಹುಳುಕಾದ ಹಲ್ಲಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

ಇದರ ಪರಿಣಾಮ ಹಲ್ಲಿನ ಸುತ್ತಲ ಪ್ರದೇಶದಿಂದ ತಲೆ ಬುರುಡೆಯವರೆಗೂ ನೋವು ಉಂಟಾಗುವುದು. ಕೆಲವೊಮ್ಮೆ ಹಲ್ಲುನೋವಿನಿಂದ ಕಿವಿನೋವು ಮತ್ತು ತಲೆನೋವು ಸಹ ಕೆರಳುವ ಸಾಧ್ಯತೆಗಳಿರುತ್ತವೆ. ಹಲ್ಲು ನೋವಿನ ಕಾರಣಕ್ಕೆ ನಿಧಾನವಾಗಿ ಕೆಲವು ಆಹಾರ ಪದಾರ್ಥಗಳನ್ನು ಸೇವಿಸುವ ಮುನ್ನ ಯೋಚಿಸುವ ಸ್ಥಿತಿಯು ಎದುರಾಗುವುದು. ಈ ಲೇಖನದ ಮೂಲಕ ನಾವು ಹುಳುಕು ಹಲ್ಲಿಗೆ ಮನೆಮದ್ದಾಗಿ ಸೀತಾಫಲ ಹಣ್ಣಿನ ಎಲೆ ಹೇಗೆ ಪ್ರಯೋಜನ ಆಗಬಹುದು ಎನ್ನುವುದನ್ನು ನೋಡೋಣ ಹಾಗೂ ಅದರ ಜೊತೆಗೆ ಇನ್ನಿತರ ಮನೆಮದ್ದುಗಳನ್ನು ಸಹ ತಿಳಿದುಕೊಳ್ಳೋಣ.

ದವಡೆಯಲ್ಲಿ ನೋವು, ಸಡಿಲವಾದ ವಸಡು, ಸೋಂಕು, ಹುಳುಕಲ್ಲು ಹಾಗೂ ವಸಡು ಸೋರಿಕೆಯಿಂದ ನೋವು ಕಾಣಿಸಿಕೊಳ್ಳುತ್ತವೆ. ಇಂತಹ ಸಮಯದಲ್ಲಿ ನಾವು ಪರಿಣಾಮಕಾರಿ ಮನೆ ಮದ್ದನ್ನು ಸೇವಿಸಬಹುದು. ಮನೆ ಮದ್ದುಗಳು ಯಾವುದೇ ಅಡ್ಡ ಪರಿಣಾಮವನ್ನು ಉಂಟುಮಾಡದೆ ಸಮಸ್ಯೆಗಳಿಗೆ ಉತ್ತಮ ಪರಿಹಾರ ನೀಡುವುದು. ನೀವು ಆಗಾಗ ಹಲ್ಲು ನೋವಿನಿಂದ ಬಳಲುತ್ತೀರಿ ಅಥವಾ ನಿಮ್ಮವರು ಹಲ್ಲಿನ ಸಮಸ್ಯೆಗೆ ಒಳಗಾಗುತ್ತಿದ್ದಾರೆ ಎಂದರೆ ಈ ಉಪಯುಕ್ತವಾದ ಮನೆ ಮದ್ದನ್ನು ಬಳಸಿಕೊಂಡು ನೋವಿನಿಂದ ಮುಕ್ತರಾಗಿ.

ಮೊದಲಿಗೆ ಐಸ್ ಪ್ಯಾಕ್ ಹಲ್ಲು ನೋವು ಒಂದು ಅಥವಾ ಎರಡು ದಿನಗಳಿಗಿಂತ ಹೆಚ್ಚು ಕಾಲ ಇದ್ದರೆ ಚಿಕಿತ್ಸೆ ಪಡೆಯಲು ದಂತ ವೈದ್ಯರನ್ನು ಭೇಟಿಯಾಗಬೇಕು ಎನ್ನುವುದನ್ನು ನೆನಪಿಡಬೇಕು. ಐಸ್ ಪ್ಯಾಕ್ ನೋವನ್ನು ನಿಯಂತ್ರಿಸಲು ಸಹಾಯ ಮಾಡುವುದು. ಹಲ್ಲು ನೋವು ಬಂದಾಗ ನೀವು ಐಸ್ ಪ್ಯಾಕ್ ಅಥವಾ ಹೆಪ್ಪು ಗಟ್ಟಿದ ಬಟಾಣಿ ಚೀಲವನ್ನು ಹಲ್ಲಿನಿಂದ ಉಂಟಾದ ನೋವಿನ ಜಾಗದಲ್ಲಿ ಇರಿಸಿ.

ಕೆನ್ನೆಯ ಒಳಭಾಗದಲ್ಲಿ ಇರುವ ಹಲ್ಲಿನಿಂದ ನೋವು ಉಂಟಾಗುತ್ತಿದ್ದರೆ, ಕೆನ್ನೆಯ ಹೊರಭಾಗದಲ್ಲೂ ಐಸ್ ಪ್ಯಾಕ್ ಅನ್ನು ಇಡಬಹುದು. ಕೆಲವು ನಿಮಿಷಗಳ ಕಾಲ ಈ ಕ್ರಮವನ್ನು ಅನುಸರಿಸಿದರೆ ನೋವು ಶಮನವಾಗುವುದು. ಐಸ್ ಪ್ಯಾಕ್ ಅತಿಯಾಗಿ ತಣ್ಣಗಿರುವುದರಿಂದ ರಕ್ತನಾಳಗಳು ನಿರ್ಬಂಧಿಸುತ್ತವೆ. ಜೊತೆಗೆ ಪೀಡಿತ ಪ್ರದೇಶಗಳಿಗೆ ರಕ್ತದ ಹರಿವನ್ನು ನಿಧಾನಗೊಳಿಸುತ್ತದೆ. ಇದರಿಂದ ನೋವು, ಸೆಳೆತ ಮತ್ತು ಉರಿಯೂತವು ಕಡಿಮೆಯಾಗುವುದು.

ಎರಡನೆಯದಾಗಿ , ಉಪ್ಪು ನೀರಿನಲ್ಲಿ ಬಾಯಿ ಮುಕ್ಕುಳಿಸುವುದು. ಬೆಚ್ಚಗಿನ ಉಪ್ಪು ನೀರಿನಿಂದ ಬಾಯಿ ಮುಕ್ಕುಳಿಸಿದರೆ ಹಲ್ಲಿನ ಸಂಧಿಯಲ್ಲಿ ಸಿಲುಕಿಕೊಂಡ ಕೊಳೆ ಹಾಗೂ ಆಹಾರ ಪದಾರ್ಥಗಳು ತೆರವುಗೊಳ್ಳುತ್ತವೆ. ಜೊತೆಗೆ ಕೀಟಾಣುಗಳನ್ನು ನಾಶಗೊಳಿಸುವುದರಿಂದ ನೋವು ಮತ್ತು ಸೆಳೆತವು ಕಡಿಮೆಯಾಗುವುದು. ಒಂದು ಲೋಟ ಬೆಚ್ಚಗಿನ ನೀರನ್ನು ತೆಗೆದುಕೊಂಡು ಅದಕ್ಕೆ ಒಂದು ಟೀ ಚಮಚ ಉಪ್ಪನ್ನು ಸೇರಿಸಿ, ನಂತರ ಉಪ್ಪು ಮಿಶ್ರಿತ ನೀರನ್ನು ಬಾಯಲ್ಲಿ 30 ಸೆಕೆಂಡುಗಳ ಕಾಲ ಇರಿಸಿಕೊಂಡು ಮುಕ್ಕುಳಿಸಿ. ಈ ಪ್ರಕ್ರಿಯೆಯನ್ನು ನೀವು ಅಗತ್ಯ ಇರುವಷ್ಟು ಸಮಯಗಳ ಕಾಲ ಪುನರಾವರ್ತಿಸಬಹುದು.

ಇದರಿಂದ ತ್ವರಿತ ಆರಾಮ ದೊರೆಯುವುದು. ಬೆಳ್ಳುಳ್ಳಿ. ಬೆಳ್ಳುಳ್ಳಿಯನ್ನು ಪುರಾತನ ಕಾಲದಿಂದಲೂ ಔಷಧೀಯ ವಸ್ತುವನ್ನಾಗಿ ಬಳಸಲಾಗುತ್ತಿದೆ. ಇದರಲ್ಲಿ ಆಲಿಸಿನ್ ಎನ್ನುವ ಸಂಯುಕ್ತ ಇರುವುದನ್ನು ಕಾಣಬಹುದು. ಅಲ್ಲದೆ ಶಕ್ತಿ ಶಾಲಿ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವುದು. ಹಲ್ಲುನೋವು ಬಂದಾಗ ಬೆಳ್ಳುಳ್ಳಿಯನ್ನು ಹೀಗೆ ಬಳಸಿ. ಕೆಲವು ತಾಜಾ ಬೆಳ್ಳುಳ್ಳಿ ಎಸಳುಗಳನ್ನು ತೆಗೆದುಕೊಂಡು ಸಿಪ್ಪೆಯನ್ನು ಬಿಡಿಸಿ, ಜಜ್ಜಿಕೊಳ್ಳಬೇಕು. ಅದನ್ನು ಉಪ್ಪಿನೊಂದಿಗೆ ಬೆರೆಸಿ ಈ ಮಿಶ್ರಣವನ್ನು ಪೀಡಿತ ಪ್ರದೇಶ ಅಥವಾ ನೋವಿನ ಜಾಗದಲ್ಲಿ ಇರಿಸಿನೋವು ಬಹುಬೇಗ ಕಡಿಮೆಯಾಗುವುದು.

ಇವೆಲ್ಲ ಮನೆಮದ್ದುಗಳ ಹಾಗೆ ಸೀತಾಫಲ ಹಣ್ಣಿನ ಎಲೆ ನಮ್ಮ ಹುಳುಕು ಹಲ್ಲಿಗೆ ಹೇಗೆ ಬಳಕೆ ಮಾಡುವುದು ಎಂದು ನೋಡುವುದಾದರೆ, ನಾಲ್ಕೈದು ಸೀತಾಫಲ ಎಲೆಗಳನ್ನು ಬಿಸಿ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ನಂತರ ಅದನ್ನು ಸ್ವಲ್ಪ ಬೆಚ್ಚಗೆ ಇರುವಾಗ ಬೆಳಿಗ್ಗೆ ಹಾಗೂ ರಾತ್ರಿ ಮಲಗುವ ಮೊದಲು ಬ್ರಷ್ ಮಾಡಿ ಐದರಿಂದ ಹತ್ತು ನಿಮಿಷಗಳ ಕಾಲ ಬಾಯಿ ಮುಕ್ಕಳಿಸಬೇಕು. ಇದೆ ರಾತಿಯಾಗಿ ಸುಮಾರು ಒಂದು ವಾರಗಳ ಕಾಲ ನಿರಂತರವಾಗಿ ದಿನಕ್ಕೆ ಎರಡು ಬಾರಿ ಬಾಯಿ ಮುಕ್ಕಳಿಸುವುದರಿಂದ ಹಲ್ಲು ನೋವು ಶಮನ ಆಗುತ್ತದೆ.

ಅಷ್ಟೇ ಅಲ್ಲದೆ, ಬಾಯಲ್ಲಿ ಹಲ್ಲಿನ ಸಂಧಿಗಳಲ್ಲಿ ಹುಳಗಳು ಆಗಿದ್ದರೂ ಸಹ ಈ ನೀರಿನ ಜೊತೆ ಹೊರಗೆ ಬರುತ್ತದೆ. ನೋವು ಕೂಡಾ ಕಡಿಮೆ ಆಗುತ್ತದೆ. ಯಾರೊಬ್ಬ ವ್ಯಕ್ತಿ ಕೂಡಾ ಈ ಔಷಧಿಯನ್ನು ಬಳಕೆ ಮಾಡಿಕೊಳ್ಳಬಹುದು ವಯಸ್ಸಿನ ಅಂತರ ಇರುವುದಿಲ್ಲ ಹಾಗೂ ಯಾವುದೇ ಅಡ್ಡಪರಿಣಾಮ ಕೂಡಾ ಇರುವುದಿಲ್ಲ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *