ಪ್ರತಿಯೊಬ್ಬ ವ್ಯಕ್ತಿಯೂ ತಾನು ಸ್ವಚ್ಛವಾಗಿ ಇರಬೇಕು ಎಂದು ಅಂದುಕೊಂಡರೆ ದಿನನಿತ್ಯ ಹಲವಾರು ರೂಢಿಗಳನ್ನು ಬೆಳೆಸಿಕೊಳ್ಳಲೇಬೇಕು. ಆದ್ದರಿಂದ ದಿನನಿತ್ಯ ಒಂದೇ ರೀತಿಯ ರೂಢಿಗಳನ್ನು ಮಾಡಬೇಕಾಗುತ್ತದೆ. ಹಾಗೆಯೇ ಹಲ್ಲುಜ್ಜುವುದು ಇದು ದಿನನಿತ್ಯದ ರೂಢಿಗಳಲ್ಲಿ ಒಂದು. ಹಲ್ಲುಜ್ಜಬೇಕು ಎಂದಾದರೆ ಬ್ರಶ್ ಬೇಕೇ ಬೇಕು. ಎಲ್ಲಾ ಬ್ರಶ್ ಗಳು ಹಲ್ಲುಜ್ಜಲು ಸರಿಯಾಗುವುದಿಲ್ಲ. ಎಂದರೆ ಅದರಲ್ಲೂ ಹಲವಾರು ವಿಧಗಳಿವೆ. ಹಾಗೆಯೇ ಬ್ರಶ್ ನ್ನು ಸರಿಯಾದ ವಿಧಾನದಲ್ಲಿ ಹಲ್ಲುಜ್ಜಲು ಬಳಸಬೇಕು. ಆದ್ದರಿಂದ ನಾವು ಇಲ್ಲಿ ಬ್ರಶ್ ಮಾಡುವ ಸರಿಯಾದ ವಿಧಾನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಮೊದಲು ಹಲ್ಲುಗಳನ್ನು ಉಜ್ಜಲು ಬೇವಿನಕಡ್ಡಿಯನ್ನು ಬಳಸಲಾಗುತ್ತಿತ್ತು. ಹಾಗೆಯೇ ಮಾವಿನಕಡ್ಡಿಯನ್ನು ಕೂಡ ಬಳಸಲಾಗುತ್ತಿತ್ತು. ಹಾಗೆಯೇ ಇದ್ದಿಲುಗಳನ್ನು ಕೂಡ ಹಲ್ಲುಜ್ಜಲು ಬಳಸುತ್ತಿದ್ದರು. ಇವುಗಳನ್ನು ಬಳಸುವುದರಿಂದ ಗಟ್ಟಿಯಾಗಿರುತ್ತಿತ್ತು. ಆದರೆ ಈಗ ಪೇಸ್ಟ್ ಅನ್ನು ಬಳಸುವುದರಿಂದ ಹಲ್ಲುಗಳ ಆರೋಗ್ಯ ಬಹಳ ಕಡಿಮೆಯಾಗಿದೆ. ಹಾಗೆಯೇ ಈಗ ಎಲ್ಲರೂ ಬ್ರಶ್ ಗಳನ್ನು ಬಳಸುತ್ತಾರೆ. ಪ್ರತಿಯೊಬ್ಬರ ದಿನ ಶುರುವಾಗುವುದೇ ಬ್ರಶ್ ಮಾಡುವುದರಿಂದ ಆಗಿದೆ. ಹಾಗೆಯೇ ಔಷಧಿ ಅಂಗಡಿಗಳಿಗೆ ಹೋದರೆ ಅಲ್ಲಿ ಮೂರು ರೀತಿಯ ಬ್ರಶ್ ಗಳನ್ನು ತೋರಿಸುತ್ತಾರೆ.

ಅವುಗಳೆಂದರೆ ಸಾಫ್ಟ್, ಹಾರ್ಡ್ ಮತ್ತು ಮೀಡಿಯಂ. ಹಲ್ಲುಗಳ ಆರೋಗ್ಯಕ್ಕೆ ಸಾಫ್ಟ್ ಬ್ರಶ್ ನ್ನು ಖರೀದಿ ಮಾಡಬೇಕು. ಬ್ರಷ್ ಎಷ್ಟು ಸಾಫ್ಟ್ ಇರುತ್ತದೆಯೋ ಅಷ್ಟು ಹಲ್ಲು ಸ್ವಚ್ಛವಾಗುತ್ತದೆ. ಯಾವುದು ಕಡಿಮೆ ದರವನ್ನು ಹೊಂದಿದೆಯೋ ಅದನ್ನು ಜನರು ತೆಗೆದುಕೊಳ್ಳುತ್ತಾರೆ. ಹಾಗೆಯೇ ಹಲ್ಲುಗಳನ್ನು ಉಜ್ಜುವಾಗ ಸರಿಯಾದ ವಿಧಾನದಲ್ಲಿ ಉಜ್ಜಬೇಕು. ಇಲ್ಲವಾದಲ್ಲಿ ಹಲ್ಲು ಸ್ವಚ್ಛ ಆಗುವುದಿಲ್ಲ. ಇದರಿಂದ ಅವುಗಳ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ. ಹಲ್ಲುಗಳನ್ನು ಉಜ್ಜುವಾಗ ಬ್ರಶ್ ಗಳು ಮೇಲೆ ಕೆಳಗೆ ಹೋಗುವಂತೆ ತಿಕ್ಕಬೇಕು.

ಇದರಿಂದ ಬಾಯಿಯಲ್ಲಿರುವ ಆಹಾರ ಪದಾರ್ಥಗಳು ಸುಲಭವಾಗಿ ಸ್ವಚ್ಛವಾಗುತ್ತದೆ. ಹಲ್ಲನ್ನು ಉಜ್ಜುವಾಗ ಹಲ್ಲಿನ ಪ್ರತಿಯೊಂದು ಭಾಗವನ್ನು ತಿಕ್ಕಬೇಕು. ಹಲ್ಲುಗಳನ್ನು ಉಜ್ಜಲು ಎರಡು ನಿಮಿಷಗಳಷ್ಟು ಸಮಯವನ್ನು ತೆಗೆದುಕೊಳ್ಳಬೇಕು. ಹಾಗೆಯೇ ಎರಡು ತಿಂಗಳಿಗೊಮ್ಮೆ ಹಲ್ಲುಗಳನ್ನು ಉಜ್ಜುವ ಬ್ರಶ್ ಗಳನ್ನು ಬದಲಾವಣೆ ಮಾಡುತ್ತಿರಬೇಕು. ಹಾಗೆಯೇ ಅತಿ ಗಟ್ಟಿಯಾದ ಪದಾರ್ಥವನ್ನು ಹಲ್ಲುಗಳಿಂದ ಕಡಿಯಬಾರದು. ಏಕೆಂದರೆ ಹಲ್ಲುಗಳು ಮುರಿದು ಹೋದರೆ ಪಡೆಯಲು ಸಾಧ್ಯವಿಲ್ಲ ಹಾಗೂ ದಿನನಿತ್ಯ ಎರಡು ಬಾರಿ ಹಲ್ಲುಗಳನ್ನು ಉಜ್ಜಬೇಕು. ಇದರಿಂದ ಹಲ್ಲುಗಳು ಆರೋಗ್ಯವಾಗಿ ಇರುತ್ತವೆ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave a Reply

Your email address will not be published. Required fields are marked *