ವಾಕರಿಕೆ ಬಂದಂತೆ ಆಗುವುದು, ಬಾಯಲ್ಲಿ ಕಹಿಯಾದ ಹಳದಿ ಬಣ್ಣದ ನೀರು ಬರುವುದು, ಕೆಲವೊಮ್ಮೆ ವಾಂತಿ ಆಗುವುದು ಇವೆಲ್ಲವು ಪಿತ್ತದ ಲಕ್ಷಣಗಳಾಗಿವೆ. ಈ ರೀತಿ ಪಿತ್ತವಾದರೆ ಹೆಚ್ಚು ಸುಸ್ತಾಗುವುದು , ತಲೆಸುತ್ತುವುದು ಆಗುತ್ತದೆ. ಇಂತಹ ಪಿತ್ತದ ಕಾಯಿಲೆಯನ್ನು ಈ ಸಲಹೆಗಳನ್ನು ಅನುಸರಿಸುವುದರ ಮೂಲಕ ನೈಸರ್ಗಿಕವಾಗಿ ಗುಣಪಡಿಸಿಕೊಳ್ಳಬಹುದಾಗಿದೆ.

ಸಾಮಾನ್ಯವಾಗಿ ದೇಹದಲ್ಲಿ ಅಧಿಕ ಉಷ್ಣತೆಯಿಂದ ಈ ರೀತಿಯ ಪಿತ್ತ ಉಂಟಾಗುತ್ತದೆ. ಆದ್ದರಿಂದ ರಾತ್ರಿ ಊಟ ಮಾಡಿ 3-4 ಗಂಟೆಗಳ ನಂತರ ಮಲಗುವ ಅಭ್ಯಾಸ ಒಳ್ಳೆಯದು.ಪಿತ್ತವನ್ನು ತಡೆಯಲು ಕಡಿಮೆ ಕೊಬ್ಬಿನ ಆಹಾರವನ್ನು ರಾತ್ರಿಗೆ ಸೇವಿಸುವುದು ಒಳ್ಳೆಯದು. ಅಧಿಕ ಎಣ್ಣೆ ಮತ್ತು ಖಾರದ ಪದಾರ್ಥಗಳನ್ನು ರಾತ್ರಿ ಊಟದಲ್ಲಿ ಸೇವಿಸಬಾರದು. ಇಂತಹ ಆಹಾರಗಳ ಸೇವನೆ ಪಿತ್ತವನ್ನು ಹೆಚ್ಚು ಮಾಡುತ್ತದೆ.ಪಿತ್ತ ಕಾಯಿಲೆ ಇರುವರು ಜ್ಯೂಸ್ ಸೇವನೆ ಮಾಡುವುದು ಒಳ್ಳೆಯದಲ್ಲ, ನಿಂಬೆ ಜ್ಯೂಸ್ ನಲ್ಲಿರುವ ಸಿಟ್ರಿಕ್ ಅಂಶ ಪಿತ್ತವನ್ನು ಹೆಚ್ಚು ಮಾಡುತ್ತದೆ.

ಅಲ್ಲದೆ ಈ ಕಾಯಿಲೆ ಇರುವಾಗ ಮದ್ಯ ಸೇವನೆ ಮಾಡಿದರೆ ಅದರಿಂದ ಅಪಾಯ ಖಂಡಿತ.ರಾತ್ರಿ ಊಟವಾದ ಬಳಿಕ ಸ್ವಲ್ಪ ದೂರ ನಡೆಯುವ ಅಭ್ಯಾಸ ಆಹಾರವನ್ನು ಬೇಗನೆ ಜೀರ್ಣವಾಗುವಂತೆ ಮಾಡುತ್ತದೆ.ಮಲಗುವ ಮೊದಲು ಬಿಸಿ ನೀರು ಕುಡಿಯುವುದು ಈ ಕಾಯಿಲೆ ನಿವಾರಣೆಗೆ ಒಳ್ಳೆಯದು. ಕೃಷ್ಣ ತುಳಸಿಯನ್ನು ಸೇವಿಸುವುದರಿಂದ ಪಿತ್ತ ದೋಷ ನಿವಾರಣೆಯಾಗುತ್ತದೆ, ಒಂದು ಬಟ್ಟಲಿನಲ್ಲಿ ಜೀರಿಗೆ ಕಷಾಯ ಮಾಡಿ ಅದಕ್ಕೆ ಒಂದು ಚಿಟಿಕೆ ಏಲಕ್ಕಿ ಪುಡಿಯನ್ನು ಬೆರೆಸಿ ಕುಡಿದರೆ ಪಿತ್ತ ದೋಷ ನಿವಾರಣೆಯಾಗುತ್ತದೆ, ದಾಳಿಂಬೆ ಹಣ್ಣನ್ನು ಉಪಯೋಗಿಸುವುದರಿಂದ ಪಿತ್ತ ಉಪಶಮನವಾಗುತ್ತದೆ.

ಪಿತ್ತಕ್ಕೆ ಅತ್ಯಂತ ಪ್ರಭಾವಶಾಲಿ ಮನೆಮದ್ದೆಂದರೆ ಪುನರ್ಪುಳಿ ಹಣ್ಣು, ಇದನ್ನು ಚೆನ್ನಾಗಿ ತೊಳೆದು ಒಣಗಿಸಿ ಸಿಪ್ಪೆ ತೆಗೆದು ಇಟ್ಟುಕೊಳ್ಳಬೇಕು. ಒಂದು ಲೋಟ ನೀರಿಗೆ ಅಂದರೆ ಚೆನ್ನಾಗಿ ಕುದಿಸಿ ಆರಿಸಿ ತೆಗೆದುಕೊಂಡು ನೀರಿಗೆ ೫ ಸಿಪ್ಪೆಗಳನ್ನು ಹಾಕಬೇಕು, ಇದನ್ನು ರಾತ್ರಿಯೇ ನೆನೆಸಿಡಬೇಕು. ಆ ನೀರಿಗೆ ಒಂದು ಚಿಟಿಕೆ ಉಪ್ಪು ಹಾಕಿ ಆ ನೀರನ್ನು ಮುಂಜಾನೆಯೇ ಎದ್ದು ಕುಡಿದು ಮತ್ತೆ ಮಲಗಿ ನಿದ್ರಿಸಬೇಕು.

ಈ ರೀತಿಯ ನೀರು ಅತ್ಯುತ್ತಮ ಮನೆ ಮುದ್ದಾಗಿದೆ.ಸ್ವಲ್ಪ ಕಾಳು ಮೆಣಸು, ಬೆಲ್ಲ, ಉಪ್ಪು ಹಾಕಿ ಕುದಿಸಿ ಕರಿಬೇವು, ಸಾಸಿವೆ ಮತ್ತು ಜೀರಿಗೆಯನ್ನು ತುಪ್ಪದ ಒಗ್ಗರಣೆಯಲ್ಲಿ ಸಾಂಬಾರ್ ಮಾಡಿ ಸೇವಿಸುವುದರಿಂದ ಪಿತ್ತವನ್ನು ನಿಯಂತ್ರಣದಲ್ಲಿರಿಸಬಹುದು. ಈ ಪುನರ್ಪುಳಿಯಲ್ಲಿ ಕೆಂಪು ಮತ್ತು ಬಿಳಿಯ ಬಣ್ಣದ ಎರಡು ಪ್ರಭೇದಗಳಿವೆ, ಪಿತ್ತ ನಿವಾರಣೆಗೆ ಬಿಳಿಯದ್ದು ಅತ್ಯುತ್ತಮವಾಗಿದೆ.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *