ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರು ನಡೆಸಿಕೊಡುತ್ತಿದ್ದ ಎದೆ ತುಂಬಿ ಹಾಡುವೆನು ಕಾರ್ಯಕ್ರಮವನ್ನು ಕಲರ್ಸ್ ಕನ್ನಡ ವಾಹಿನಿ ಮುಂದುವರಿಸುತ್ತಿದೆ. ಈಗಾಗಲೇ ಈ ಹಾಡುಗಳ ರಿಯಾಲಿಟಿ ಶೋ ಪ್ರಸಾರವಾಗುತ್ತಿದ್ದು. ರಾಜ್ಯದ ಹಲವಾರು ಪ್ರತಿಭೆಗಳು ತಮ್ಮ ಹಾಡುಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಎಸ್‌ಪಿ ಬಾಲಸುಬ್ರಹ್ಮಣ್ಯಂ ಈ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾಗ ಎಲ್ಲೂ ಕಲಾವಿದರಿಗೆ ನೋವಾಗುವಂತೆ, ಅವರು ಅಳುವಂತೆ ಮಾಡುತ್ತಿರಲಿಲ್ಲ. ಆಮೇಲೆ ಬಂದ ಹಾಡುಗಳ ರಿಯಾಲಿಟಿ ಶೋಗಳಲ್ಲಿ ಹಾಡುಗಾರರಿಗೆ ಒತ್ತಡ ಹೇರುವುದು, ಅವರ ಕಣ್ಣಲ್ಲಿ ನೀರು ತರಿಸುವುದು, ಆ ಮೂಲಕ ಟಿ ಆರ್‌ ಪಿ ಹೆಚ್ಚಿಸಿಕೊಳ್ಳುವ ಪ್ರಯತ್ನ ನಡೆಯುತ್ತಿತ್ತು. ಆದರೆ ಎಸ್‌ಪಿಬಿ ಎಂದೂ ಇಂಥಾ ಚೀಪ್‌ ತಂತ್ರಗಳನ್ನು ಅನುಸರಿಸಿ ಸ್ಪರ್ಧಿಗಳ ಮನ ನೋಯಿಸಿದವರಲ್ಲ. ಬದಲಿಗೆ ಅವರಲ್ಲಿ ಆತ್ಮವಿಶ್ವಾಸ ತುಂಬಿ ಹುರುಪು ಹೆಚ್ಚಿಸುತ್ತಿದ್ದರು.

ಇದೀಗ ಅವರ ಪ್ರತಿಮೆಯನ್ನಿಟ್ಟು ಆರಂಭಿಸಿರುವ ಶೋನಲ್ಲಿ ಜಡ್ಜ್‌ಗಳೂ ಅವರಂತೆ ಕಲಾವಿದರನ್ನು ಉತ್ತೇಜಿಸುತ್ತಾರೆ. ಅವರ ಆತ್ಮವಿಶ್ವಾಸ ಹೆಚ್ಚಿಸಿ ಅವರ ಪ್ರತಿಭೆ ಇನ್ನಷ್ಟು ಬೆಳಗುವಂತೆ ಮಾಡುತ್ತಾರೆ. ಕಲರ್ಸ್ ಕನ್ನಡದ ಇಂಥದ್ದೊಂದು ಪ್ರಯತ್ನಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಇನ್ನೂ ಈ ಕಾರ್ಯಕ್ರಮದ ಸ್ಪರ್ಧಿಯಾದ ಸೂರ್ಯಕಾಂತ್ ಅವರಿಗೆ ಮಾತನಾಡಬೇಕಾದರೆ ತೊದಲುತ್ತೀರಾ, ಹಾಡು ಚನ್ನಾಗಿ ಹಾಡ್ತೀರಾ ಎಂದು ಕೇಳಿದಿಕ್ಕೆ ಸೂರ್ಯಕಾಂತ್ ಅವರು ಒಂದು ಉತ್ತರ ನೀಡಿದ್ದಾರೆ. ಅವರು ಏನು ಹೇಳಿರಬಹುದು ಎನ್ನುವುದನ್ನು ನಾವಿಲ್ಲಿ ನೋಡೋಣ.

ಇತ್ತೀಚೆಗೆ ‘ಎದೆತುಂಬಿ ಹಾಡುವೆನು’ ಕಾರ್ಯಕ್ರಮದಲ್ಲಿ ಗಮನಸೆಳದದ್ದು ಉತ್ತರ ಕರ್ನಾಟಕದ ಪ್ರತಿಭೆ ಸೂರ್ಯಕಾಂತ್‌. ಇವರು ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಲಿಂಗದಳ್ಳಿ ಗ್ರಾಮದ ಗಾಯಕ. ಈ ವ್ಯಕ್ತಿಯನ್ನು ಸ್ಟೇಜ್‌ಗೆ ಕರೆದು ಜಡ್ಜ್ ಗಳಲ್ಲೊಬ್ಬರಾದ ರಾಜೇಶ್‌ ಕೃಷ್ಣನ್‌ ಮಾತನಾಡಿಸಲಾರಂಭಿಸಿದಾಗ, ಇಂಥಾ ವ್ಯಕ್ತಿ ಹೇಗೆ ಹಾಡೋಕೆ ಸಾಧ್ಯ ಅನ್ನೋ ಪ್ರಶ್ನೆ ವೀಕ್ಷಕರನ್ನು ಕಾಡಿತ್ತು. ಆದರೆ ಈಗಾಗಲೇ ಹಲವು ರೌಂಡ್‌ಗಳ ಆಡಿಶನ್‌ ನಡೆಸಿಯೇ ಸ್ಪರ್ಧಿಗಳನ್ನು ಎದೆತುಂಬಿ ಹಾಡುವೆನು ರಿಯಾಲಿಟಿ ಶೋಗೆ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿತ್ತು.

ಹೀಗಿರುವಾಗ ಆತ ಚೆನ್ನಾಗಿ ಹಾಡದಿದ್ದರೆ ಈ ಲೆವೆಲ್‌ವರೆಗೂ ಬರೋದು ಸಾಧ್ಯವೇ ಆಗುತ್ತಿರಲಿಲ್ಲ. ಅಷ್ಟಕ್ಕೂ ಸೂರ್ಯಕಾಂತ್‌ ಅವರಿಗೆ ಇದ್ದದ್ದು ಮಾತಿನ ಸಮಸ್ಯೆ. ರಾಜೇಶ್‌ ಕೃಷ್ಣನ್‌ ನಿಮ್ಮ ಹೆಸರು ಹೇಳಿ ಅಂದಾಗ ಅವರಿಗೆ ತನ್ನ ಹೆಸರನ್ನೇ ಸರಿಯಾಗಿ ಹೇಳಲಾಗಲಿಲ್ಲ. ಕಾರಣ ಉಗ್ಗುವ ಸಮಸ್ಯೆ. ತನ್ನ ಹೆಸರು, ಊರನ್ನು ಉಗ್ಗುವ ಸಮಸ್ಯೆಯಿಂದ ಬಹಳ ಕಷ್ಟವಾಗಿ ಹೇಳಿದ ಇವರು ಮ್ಯೂಸಿಕ್‌ ಆನ್‌ ಆದ ತಕ್ಷಣ ಹಾಡಿನ ಪವಾಡವನ್ನೇ ಮಾಡಿ ಬಿಟ್ಟರು.

ಕನ್ನಡದ ಫೇಮಸ್ ರಿಯಾಲಿಟಿ ಶೋಗಳಲ್ಲಿ ಒಂದು ಎದೆ ತುಂಬಿ ಹಾಡುವೆನು. ಖ್ಯಾತ ಹಿನ್ನೆಲೆ ಗಾಯಕ SPB ಅವರಿಗೋಸ್ಕರ ಕನ್ನಡ ಕಿರುತೆರೆಯಲ್ಲಿ ಈ ಹೊಸ ರಿಯಾಲಿಟಿ ಷೋವನ್ನು ಆರಂಭಿಸಲಾಗಿದೆ. ಈ ಹಾಡಿನ ರಿಯಾಲಿಟಿ ಶೋನಲ್ಲಿ ಕನ್ನಡದ ಖ್ಯಾತ ಗಾಯಕ ರಘು ದೀಕ್ಷಿತ್, ಗಾಯಕ ರಾಜೇಶ್ ಕೃಷ್ಣನ್ , ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಅವರು ಜಡ್ಜ್ ಆಗಿ ಕಾರ್ಯ ನಿರ್ವಹಿಸುತ್ತಿರುವ ವಿಷಯ ನಮಗೆಲ್ಲ ತಿಳಿದೇ ಇದೆ. ಸದ್ಯ ಈ ರಿಯಾಲಿಟಿ ಶೋನಿಂದ ಕರ್ನಾಟಕದ ಮನೆ ಮಾತಾಗಿರುವ ಯುವ ಪ್ರತಿಭೆ ಎಂದರೆ ಸೂರ್ಯಕಾಂತ್. ಸೂರ್ಯಕಾಂತ್ ಅವರು ಮೂಲತಃ ಉತ್ತರ ಕರ್ನಾಟಕದವರು, ಇವರು ಜೀವನದಲ್ಲಿ ಏನನ್ನೂ ಓದಿಲ್ಲ, ಆದರೂ ಎಷ್ಟು ಅದ್ಭುತವಾಗಿ ಹಾಡುತ್ತಾರೆ ಎಂದು ಇಡೀ ಕರ್ನಾಟಕವೇ ನೋಡುತ್ತಿದೆ.

ಒಂದು ಸಂದರ್ಶನದಲ್ಲಿ ಸೂರ್ಯಕಾಂತ್ ಅವರಿಗೆ ನಿಮಗೆ ಮಾತಾಡಬೇಕಾದರೆ ತೊದಲುತ್ತೀರಾ, ಆದರೆ ಹಾಡು ಚನ್ನಾಗಿ ಹಾಡುತ್ತೀರಾ” ಎಂದು ಕೇಳಿದಿಕ್ಕೆ ಸೂರ್ಯಕಾಂತ್ ಈ ರೀತಿಯಾಗಿ ಹೇಳಿದ್ದಾರೆ. ತನಗೆ ಚಿಕ್ಕವನಿದ್ದಾಗಿಂದಲೂ ಈ ಉಗ್ಗು ಬರುವ ಸಮಸ್ಯೆ ಇದ್ದಿದ್ದು ಮೊದಲೆಲ್ಲ ಒಂದು ಶಬ್ದ ಉಚ್ಚಾರಣೆ ಮಾಡಬೇಕು ಎಂದರೂ ಅರ್ಧ ಗಂಟೆ ಸಮಯ ಬೇಕಾಗುತ್ತಿತ್ತು. ನಂತರ ಸಾಕಷ್ಟು ಪ್ರಯತ್ನದ ನಂತರ ಈಗ ಇಷ್ಟಾದರೂ ಮಾತನಾಡಬಲ್ಲೆ ಎನ್ನುತ್ತಾರೆ. ಇನ್ನೂ ಚಿಕ್ಕವಯಸ್ಸಿನಲ್ಲೇ ಈ ಸಮಸ್ಯೆ ಇದ್ದರೂ ಸಹ ಸಣ್ಣ ಪುಟ್ಟ ಭಜನೆ, ದೇವರ ಹಾಡುಗಳನ್ನು ಇವರು ಹಾಡುತ್ತಿದ್ದರು ಎಂದು ಹೇಳಿದ್ದಾರೆ. ಇನ್ನೂ ಏನು ಹೇಳಿದ್ದಾರೆ ಎಂದು ಈ ವಿಡಿಯೋ ನೋಡಿ. video credit for 1st News

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *