ನಟ ಸಾಯಿಕುಮಾರ್ ಸ್ಯಾಂಡಲ್ ವುಡ್ ನ ಡೈಲಾಗ್ ಕಿಂಗ್ ಎಂದೇ ಖ್ಯಾತಿ ಆಗಿರುವವರು ಸಾಯಿಕುಮಾರ್ ಇವರು ಮೂಲತಃ ಆಂಧ್ರಪ್ರದೇಶದವರು ಆದರು ಇವರಿಗೆ ನಟನಾಗಿ ಅವಕಾಶ ಸಿಕ್ಕಿದ್ದು ಕನ್ನಡ ಚಿತ್ರರಂಗದಲ್ಲಿ ಹಾಗಾಗಿ ಕನ್ನಡ ಚಿತ್ರರಂಗ ಮತ್ತು ಕರ್ನಾಟಕದ ಮೇಲೆ ಬಹಳ ಪ್ರೀತಿ ಇಟ್ಟುಕೊಂಡಿದ್ದಾರೆ ನಟ ಸಾಯಿಕುಮಾರ್. ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಹೆಚ್ಚಾಗಿ ಸಕ್ರಿಯರಾಗಿರುವ ಸಾಯಿ ಕುಮಾರ್ ಅವರು ಕನ್ನಡದಲ್ಲಿ ನಟಿಸಿದ ಪೊಲೀಸ್ ಸ್ಟೋರಿ ಸಿನಿಮಾ ಅವರ ಕೆರಿಯರ್ ನಲ್ಲಿ ದೊಡ್ಡ ಬ್ಲಾಕ್ ಬಸ್ಟರ್ ಆಗಿತ್ತು.

ಆಗೊಮ್ಮೆ ಈಗೊಮ್ಮೆ ತಮಿಳು ಚಿತ್ರರಂಗಕ್ಕೆ ಭೇಟಿ ಕೊಟ್ಟು, ಕೆಲವು ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಕನ್ನಡದಲ್ಲಿ ಇತ್ತೀಚೆಗೆ ಯುವರತ್ನ ಸಿನಿಮಾದಲ್ಲಿ ನಟಿಸಿದ್ದಾರೆ. ಸಾಯಿ ಕುಮಾರ್ ಅವರಿಗೆ ಇತ್ತೀಚೆಗೆ 60 ವರ್ಷ ತುಂಬಿತು. ಈ ಕಾರಣಕ್ಕೆ ಸಾಯಿ ಕುಮಾರ್ ಅವರು ಷಷ್ಟಿ ಪೂರ್ತಿ ಸಮಾರಂಭ ಮಾಡಿಕೊಂಡಿದ್ದಾರೆ. ಈ ಸಮಾರಂಭ ಹೇಗಿತ್ತು ಅನ್ನೋದರ ಕುರಿತು, ಸಾಯಿ ಕುಮಾರ್ ಅವರ ಕುರಿತು ಪುಟ್ಟ ವಿವರಣೆ ಇಲ್ಲಿದೆ ನೋಡಿ.

ಸಾಯಿ ಕುಮಾರ್ ಅವರು ಹುಟ್ಟಿದ್ದು 1960 ರಲ್ಲಿ. ಇತ್ತೀಚೆಗೆ ಇವರ ಮಕ್ಕಳು ಸಾಯಿ ಕುಮಾರ್ ದಂಪತಿಗಳ 60 ನೇ ಶಾಂತಿಯನ್ನು ಮನೆಯಲ್ಲಿ ಸಂಪ್ರದಾಯವಿಕವಾಗಿ ಮಾಡಿದ್ದಾರೆ. ಸಾಯಿ ಕುಮಾರ್ ಅವರ ತಂದೆ ತಾಯಿ ಇಬ್ಬರು ಸಹ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದರು. ಅವರ ತಂದೆ ಡಬ್ಬಿಂಗ್ ಆರ್ಟಿಸ್ಟ್ ಮತ್ತು ತಾಯಿ ಕನ್ನಡ ಚಿತ್ರಗಳಲ್ಲಿ ನಟಿಸಿದ್ದರು. ಸಾಯಿ ಕುಮಾರ್ ಅವರು ತಂದೆಯ ಹಾಗೆ ಡಬ್ಬಿಂಗ್ ಮಾಡಲು ಶುರು ಮಾಡಿದರು.

ಹಲವಾರು ಸಿನಿಮಾಗಳಲ್ಲಿ ನಾಯಕರಿಗೆ ಡಬ್ಬಿಂಗ್ ಮಾಡಿದ್ದಾರೆ ಸಾಯಿ ಕುಮಾರ್. ಇವರಿಗೆ ನಟನಾಗುವ ಅವಕಾಶ ನೀಡಿ, ಒಳ್ಳೆಯ ಪಾತ್ರಗಳನ್ನು ನೀಡಿದ್ದು ಕನ್ನಡ ಚಿತ್ರರಂಗ ಹಾಗಾಗಿ ಹಲವಾರು ಇಂಟರ್ವ್ಯೂಗಳಲ್ಲಿ ನಾನು ಯಾವಾಗಲೂ ಕನ್ನಡ ಚಿತ್ರರಂಗಕ್ಕೆ ಋಣಿಯಾಗಿರುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಸಾಯಿಕುಮಾರ್ ಅವರ ವೈಯಕ್ತಿಕ ಜೀವನದ ವಿಷಯಕ್ಕೆ ಬರುವುದಾದರೆ, ಇವರ ಪತ್ನಿಯ ಹೆಸರು ಸುರೇಖಾ. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಒಬ್ಬ ಮಗ ಮತ್ತು ಒಬ್ಬ ಮಗಳು. ಇವರ ಮಗನ ಹೆಸರು ಆದಿ.

ಡೈಲಾಗ್ ಕಿಂಗ್ ಸಾಯಿ ಕುಮಾರ್ ಅವರು ಕನ್ನಡದಲ್ಲಿ ಸುಮಾರು 70 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹೀರೊ ಆಗಿ ನಟಿಸಿದ್ದಾರೆ. ಸದ್ಯ ಸಾಯಿ ಕುಮಾರ್ ಅವರ ತಮ್ಮ ರವಿ ಶಂಕರ್ ಅವರು ಕನ್ನಡಲ್ಲಿ ಖ್ಯಾತ ನಟರಾಗಿ ಕೆಲಸ ಮಾಡುತ್ತಿದ್ದಾರೆ. ಸಾಯಿ ಕುಮಾರ್ ಅವರು ಸದ್ಯ ಕೆಲವೊಂದು ತೆಲುಗು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇದಲ್ಲದೆ ಕೆಲವು ತೆಲುಗು ರಿಯಾಲಿಟಿ ಶೋಗಳಲ್ಲಿ ಕೂಡ ಕಾಣಿಸಿ ಕೊಳ್ಳುತ್ತಾರೆ.

ಇತ್ತೀಚೆಗೆ ಸಾಯಿ ಕುಮಾರ್ ಅವರ ಮಗ ಸೊಸೆ, ಮಗಳು, ಅಳಿಯ ಮತ್ತು ಅವರ ಇಡೀ ಕುಟುಂಬ ಸೇರಿ ಸಾಯಿಕುಮಾರ್ ಅವರ ಷಷ್ಟಿ ಪೂರ್ತಿ ಸಮಾರಂಭವನ್ನು ಅಚ್ಚುಕಟ್ಟಾಗಿ, ಸಾಂಪ್ರದಾಯಿಕವಾಗಿ ಮಾಡಿದ್ದಾರೆ. ಸಾಯಿಕುಮಾರ್ ಅವರ ಷಷ್ಟಿ ಪೂರ್ತಿ ಸಮಾರಂಭದ ಫೋಟೋಗಳನ್ನು ನೋಡಿ. ಸಾಯಿ ಕುಮಾರ್ ದಂಪತಿಗಳ 60 ನೇ ವರ್ಷದ ಶಾಂತಿ ಹೇಗಿತ್ತು, ಇವರ ಸುಂದರ ಕುಟುಂಬ ಯಾವ ರೀತಿ 60 ನೇ ವರ್ಷದ ಶಾಂತಿಯನ್ನು ಮಾಡಿದೆ ಎಂದು ನೀವು ಇಲ್ಲಿ ನೋಡಬಹುದು.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *