ವೃತ್ತಿಯಲ್ಲಿ ಕೆಲಸ ಮಾಡಿಕೊಂಡು ಕೃಷಿ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆಯನ್ನು ಮಾಡುವುದರೊಂದಿಗೆ ಆದಾಯವನ್ನು ಪಡೆಯಬಹುದು. ಹಾಗಾದರೆ ವೃತ್ತಿಯಲ್ಲಿ ಶಿಕ್ಷಕರಾಗಿ ಕೃಷಿ ಮಾಡುವ ಮೂಲಕ ಆದಾಯ ಗಳಿಸುತ್ತಿರುವ ಮಂಜುನಾಥ ಅವರ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ವಿಜಯನಗರ ಜಿಲ್ಲೆಯ ಹರಪ್ನಳ್ಳಿ ತಾಲೂಕಿನ ಮಂಜುನಾಥ ಅವರು ವೃತ್ತಿಯಲ್ಲಿ ಪ್ರೌಢಶಾಲೆಯ ಶಿಕ್ಷಕರಾಗಿದ್ದು ತಮ್ಮ ಇಪ್ಪತ್ತು ಎಕರೆ ಜಮೀನಿನಲ್ಲಿ ಬೆಳೆಗಳನ್ನು ಬೆಳೆಯುವುದರೊಂದಿಗೆ ಎರಡು ವರ್ಷದಿಂದ ಹೈನುಗಾರಿಕೆ, ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆ ಮಾಡುತ್ತಿದ್ದಾರೆ. ಅವರು 150 ಕುರಿಗಳನ್ನು ಸಾಕಿದ್ದಾರೆ. ಗಂಡು ಕುರಿಗಳನ್ನು 2 ತಿಂಗಳು ಸಾಕಿ 5,000-6,000ರೂಪಾಯಿವರೆಗೆ ಮಾರಾಟ ಮಾಡಲಾಗುತ್ತದೆ. ಕುರಿಗಳಿಗೆ ಮೆಕ್ಕೆಜೋಳ, ಜೋಳ, ಶೇಂಗಾ ಹೊಟ್ಟನ್ನು ಹಾಕಲಾಗುತ್ತದೆ, ಬೆಳಗ್ಗೆ ಮತ್ತು ಮಧ್ಯಾಹ್ನ ಜೋಳ ಮತ್ತು ಶೇಂಗಾ ಹೊಟ್ಟನ್ನು ಮತ್ತು ಸಂಜೆ ಮೆಕ್ಕೆಜೋಳದ ಹೊಟ್ಟನ್ನು ಹಾಕಲಾಗುತ್ತದೆ. ಅವರಿಗೆ ಒಂದು ತಿಂಗಳಿಗೆ ಒಂದು ಕುರಿಯಿಂದ 1,000ರೂಪಾಯಿ ಲಾಭ ಬರುತ್ತದೆ.

ಕುರಿ, ಕೋಳಿಗಳನ್ನು ಅವರ ಕುಟುಂಬದವರು ನೋಡಿಕೊಳ್ಳುತ್ತಾರೆ ಕೆಲಸಗಾರರನ್ನು ನೇಮಿಸಿಕೊಳ್ಳುವುದಿಲ್ಲ. ಕುರಿ, ಕೋಳಿ ಸಾಕಾಣಿಕೆಯಿಂದ 4-5 ಲಕ್ಷ ರೂಪಾಯಿ ಆದಾಯ ಬರುತ್ತದೆ. ಅವರು ಶಿಕ್ಷಕರಾಗಿದ್ದರೂ ಕೃಷಿಯ ಬಗ್ಗೆ ಆಸಕ್ತಿ ಇರುವ ಕಾರಣ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆಯನ್ನು ಮುಂದುವರೆಸಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಕೋಟಿಗಟ್ಟಲೆ ಹಣ ಇದ್ದರೂ ಪ್ರಯೋಜನ ಬಾರದೆ ಕೃಷಿಯಿಂದ ಹೊಟ್ಟೆ ತುಂಬಿತು. ಮಂಜುನಾಥ ಅವರು ಇಂದಿನ ಯುವಕರು ತಮ್ಮ ವೃತ್ತಿಯ ಜೊತೆಗೆ ಕೃಷಿ, ಹೈನುಗಾರಿಕೆ, ಕೋಳಿ ಕುರಿ ಸಾಕಾಣಿಕೆಯನ್ನು ಮಾಡುವುದರೊಂದಿಗೆ ಆದಾಯದ ಜತೆ ಹಸಿವನ್ನು ನೀಗಿಸುತ್ತದೆ ಎಂದು ಹೇಳಿದರು. ಯುವಕರು ಆಲಸ್ಯತನವನ್ನು ಬಿಟ್ಟು ಕೃಷಿಯಲ್ಲಿ ತೊಡಗಬೇಕು ಎಂದು ಹೇಳಿದರು.

ಪೂರ್ವಜರು ಮಾಡಿಕೊಂಡು ಬಂದಿರುವ ಕುಲಕಸುಬು ಬಿಡಬಾರದು ಎಂದು ಯುವಕರಿಗೆ ತಿಳಿ ಹೇಳಿದ್ದಾರೆ. ಜಮೀನಿನಲ್ಲಿ ಬೆಳೆದ ಬೆಳೆಗಳ ಹೊಟ್ಟುಗಳನ್ನು ಕುರಿಗಳಿಗೆ ಆಹಾರವಾಗಿ ಹಾಕುವುದರಿಂದ ಆದಾಯವನ್ನು ಉಳಿಸಬಹುದು. ಮಂಜುನಾಥ ಅವರು ಒಂದೆ ಆದಾಯವನ್ನು ನಂಬಿಕೊಂಡು ಇರಬಾರದು ಬೇರೆ ಬೇರೆ ಮೂಲಗಳಿಂದ ಆದಾಯ ಬರುವಂತಿರಬೇಕು ಎಂದು ಹೇಳಿದರು. ಕೋಳಿ ಸಾಕಾಣಿಕೆಯಿಂದ ಮೊಟ್ಟೆಯನ್ನು ಮಾರಾಟ ಮಾಡಲಾಗುತ್ತದೆ. ಎಮ್ಮೆ ಸಾಕಾಣಿಕೆಯಿಂದ ಹಾಲನ್ನು ಡೇರಿಗೆ ಕೊಡುವುದರಿಂದ ಆದಾಯ ಬರುತ್ತದೆ. ಯಾವುದೆ ಕೆಲಸವನ್ನಾದರೂ ಶ್ರದ್ಧೆಯಿಂದ ಮಾಡಿದಾಗ ಅದರಲ್ಲಿ ನಾವು ಯಶಸ್ಸನ್ನು ಕಾಣಬಹುದು.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *