ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್ ಜೀವನದಲ್ಲಿ ಎಲ್ಲವೂ ಸರಿಯಾಗಿತ್ತು. ಪ್ರೀತಿಸಿದ ಹುಡುಗನ ಕೈ ಹಿಡಿದರು. ಕಳೆದ ವರ್ಷ 2020 ರ ಶುರುವಿನಲ್ಲಿ ಮೇಘನಾ ರಾಜ್ ಹಾಗೂ ಚಿರು ತಮ್ಮ ಮೊದಲನೇ ಮಗುವಿನ ನಿರೀಕ್ಷೆಯಲ್ಲಿದ್ದರು. ತಮ್ಮ ಮನೆಗೆ ಹೊಸ ಜೀವದ ಆಗಮನದ ಸಂತೋಷದಲ್ಲಿದ್ದರು. ಆದರೆ ವಿಧಿಯ ನಿರ್ಣಯ ಬೇರೆಯೇ ಇತ್ತು. ಕಳೆದ ವರ್ಷ ಜೂನ್ ಏಳರಂದು ಚಿರು ಸರ್ಜಾ ಅವರು ಕೇವಲ ಮೂವತ್ತೈದು ವರ್ಷ ವಯಸ್ಸಿಗೆ ಅಕಾಲಿಕವಾಗಿ ಇಲ್ಲವಾಗಿ ಹೋದರು.

ಕುಟುಂಬಕ್ಕೆ ಈ ವಿಚಾರ ಅರಗಿಸಿಕೊಳ್ಳಲಾಗದ ಸತ್ಯವಾಗಿ ಹೋಯ್ತು. ಇನ್ನು ಇತ್ತ ತುಂಬು ಗರ್ಭಿಣಿಯಾಗಿದ್ದ ಮೇಘನಾ ರಾಜ್ ಅವರ ಪರಿಸ್ಥಿತಿ ಯಾವ ಶತ್ರುವಿಗೂ ಬಾರದಿರಲಿ ಎನ್ನುವಂತಾಗಿತ್ತು. ಅತ್ತ ಜೀವಕ್ಕೆ ಜೀವ ನೀಡುತ್ತಿದ್ದ ಗಂಡ ಹೊಸ ಜೀವದ ಆಗಮನದ ಸಮಯದಲ್ಲಿಯೇ ಇಲ್ಲವಾಗಿದ್ದು ಒಬ್ಬಂಟಿಯಾಗಿ ಈ ಎಲ್ಲಾ ಸಂದರ್ಭಗಳನ್ನು ಎದುರಿಸಿ ನಿಲ್ಲಬೇಕಾದದ್ದು ಮೇಘನಾ ರಾಜ್ ಅವರಿಗೆ ಅನಿವಾರ್ಯವಾಗಿತ್ತು.

ನಟಿ ಮೇಘನಾ ರಾಜ್ ಸಧ್ಯ ಇಷ್ಟು ದಿನಗಳ ಕಾಲ ಜೂನಿಯರ್ ಚಿರುವಿನ ಲಾಲನೆ ಪಾಲನೆಯಲ್ಲಿ ಬ್ಯುಸಿ ಆಗಿದ್ದ ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್ ಇದೀಗ ಮಕ್ಕಳಿಗೆ ಪಾಠ ಹೇಳಿಕೊಡುವ ಕೆಲಸ ಶುರು ಮಾಡಿದ್ದಾರಾ? ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಹೌದು ಮೇಘನಾ ರಾಜ್ ಅವರು ಮಕ್ಕಳಿಗೆ ಪಾಠ ಹೇಳಿಕೊಡುತ್ತಿರುವುದೇನೋ ನಿಜ

ಆದರೆ ಇದಕ್ಕೆ ಕಾರಣವೂ ಇದೆ. ಮೇಘನಾ ರಾಜ್ ಸ್ಯಾಂಡಲ್ವುಡ್ ಹಾಗೂ ಮಳಯಾಳಂ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಖ್ಯಾತ ನಟಿ. ಇನ್ನು ಇಡೀ ಕುಟುಂಬವೇ ಸಿನಿಮಾವನ್ನು ನಂಬಿಕೊಂಡಿದ್ದು ಅದೇ ಅವರ ಜೀವನವಾಗಿತ್ತು. ನಂತರ ಚಿರು ಸರ್ಜಾ ಅವರನ್ನು ಮದುವೆಯಾದ ಬಳಿಕವೂ ಮೇಘನಾ ರಾಜ್ ಅವರು ಸಿನಿಮಾರಂಗದಲ್ಲಿ ಸಕ್ರಿಯರಾಗಿಯೇ ಇದ್ದರು.

ಸಾಮಾನ್ಯವಾಗಿ ನಟಿಯರು ಮದುವೆಯಾದ ಬಳಿಕ ಚಿತ್ರರಂಗದಿಂದ ದೂರ ಉಳಿದು ಬಿಡುತ್ತಾರೆ. ಆದರೆ ಮೇಘನಾ ರಾಜ್ ಅವರು ಸಿನಿಮಾವೇ ನಮ್ಮ ಕುಟುಂಬದ ಜೀವನ ಅದೇ ನಮಗೆ ಅನ್ನ ನೀಡುವ ದೇವರು ಎಂದಿದ್ದರು. ನಾಡಿನ ಲಕ್ಷಾಂತರ ಜನರು ಮೇಘನಾರಿಗಾಗಿ ಪ್ರಾರ್ಥಿಸಿದರು. ಅವರ ಆರೋಗ್ಯ ಚೆನ್ನಾಗಿರಲಿ ಅವರಿಗೆ ಗಂಡು ಮಗುವಾಗಲಿ ಚಿರು ಮೇಘನಾರ ಒಡಲಲ್ಲಿ ಮತ್ತೆ ಹುಟ್ಟಿ ಬರಲೆಂದು ಎಲ್ಲರೂ ಹಾರೈಸಿದ್ದರು. ಎಲ್ಲರ ಪ್ರಾರ್ಥನೆಯ ಫಲವಾಗಿ ದೇವರ ಕೃಪೆಯಿಂದಾಗಿ ಮೇಘನಾರಿಗೆ ಗಂಡು ಮಗುವಾಯಿತು ಎರಡೂ ಕುಟುಂಬಗಳು ಚಿರುವೇ ಮತ್ತೆ ಹುಟ್ಟಿಬಂದನೆಂದು ನಂಬಿದರು.

ಇನ್ನು ಚಿರು ಇಲ್ಲವಾಗಿ ವರ್ಷವೇ ಕಳೆದು ಹೋಯ್ತು ಈ ಒಂದು ವರ್ಷದಲ್ಲಿ ಕೊರೊನಾ ಸೇರಿದಂತೆ ಅನೇಕ ತೊಂದರೆಗಳನ್ನು ದಾಟಿ ಧೃಡವಾಗಿ ನಿಂತಿದ್ದು ಮೇಘನಾ ರಾಜ್ ಅವರು ಇದೀಗ ಮತ್ತೆ ತಮ್ಮ ವೃತ್ತಿ ಬದುಕನ್ನು ಆರಂಭಿಸಿದ್ದಾರೆ. ಕ್ಯಾಮರಾವನ್ನು ನಮಸ್ಕರಿಸಿ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನಿ ಹಂಚಿಕೊಂಡು ಮತ್ತೆ ಕ್ಯಾಮರಾ ಮುಂದೆ ಎಂದು ಬರೆದು ಪೋಸ್ಟ್ ಮಾಡಿದ್ದರು.

ಅದಾಗಲೇ ಅನೇಕ ಜಾಹಿರಾತುಗಳಲ್ಲಿ ಅಭಿನಯಿಸಿದ ಮೇಘನಾ ರಾಜ್ ಅವರು ಇದೀಗ ಮಕ್ಕಳಿಗೆ ಪಾಠ ಹೇಳಿಕೊಡುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ. ಹೌದು ಮೇಘನಾ ರಾಜ್ ಅವರು ವಿಜ್ಞಾನ ಪಾಠ ಹೇಳಿಕೊಟ್ಟು ಪ್ರಶ್ನೆ ಗಳನ್ನು ಕೇಳುತ್ತಿರುವ ಅವರ ವೀಡಿಯೋ ವೈರಲ್ ಆಗಿದ್ದು ಅಭಿಮಾನಿಗಳು ಟೀಚರ್ ಮೇಘನಾ ರಾಜ್ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ಇದೇನಪ್ಪಾ ಮೇಘನಾ ರಾಜ್ ಅವರು ನಟನೆ ಬಿಟ್ಟು ಟೀಚರ್ ಆದ್ರಾ ಎಂದು ಕುತೂಹಲ ಮೂಡೋದು ಸಾಮಾನ್ಯ. ಆದರೆ ಅಸಲಿ ವಿಚಾರ ಬೇರೆಯೇ ಇದೆ.. ಹೌದು ಮೇಘನಾ ರಾಜ್ ಅವರು ವಿಜ್ಞಾನ ಪಾಠ ಹೇಳಿಕೊಡುತ್ತಿರುವುದೇನೋ ನಿಜ. ಆದರೆ ಅದು ಜಾಹಿರಾತೊಂದರ ಸಲುವಾಗಿ ಮಾತ್ರ.

ಇದು ಸಹ ಜಾಹಿರಾತಿಗಾಗಿ ಮೇಘನಾ ರಾಜ್ ಅವರು ವಿಜ್ಞಾನ ಶಿಕ್ಷಕಿಯಾಗಿದ್ದು ಖುದ್ದು ಅವರೇ ಈ ಕುರಿತು ಸಂತೋಷ ಹಂಚಿಕೊಂಡಿದ್ದಾರೆ. ಇನ್ನು ಸಧ್ಯ ಜಾಹಿರಾತುಗಳನ್ನು ಹೊರತುಪಡಿಸಿ ಸಿನಿಮಾಗಳಲ್ಲಿಯೂ ಸಹ ಮೇಘನಾ ರಾಜ್ ಅವರು ಸಧ್ಯದಲ್ಲಿಯೇ ಕಾಣಿಸಿಕೊಳ್ಳಲಿದ್ದು ಮಳಯಾಳಂ ಸಿನಿಮಾಗಳ ಅವಕಾಶ ಒದಗಿ ಬಂದಿದ್ದು ಸಧ್ಯದಲ್ಲಿಯೇ ಮಳಯಾಳಂ ಸಿನಿಮಾ ಮೂಲಕ ಮೇಘನಾ ರಾಜ್ ಮತ್ತೆ ಕಂಬ್ಯಾಕ್ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಜೀವನದ ವಾಸ್ತವವನ್ನು ಅರಿತು ಮುನ್ನಡೆಯಬೇಕಾದದ್ದು ಮನುಜ ಧರ್ಮ ಹಾಗೂ ಅನಿವಾರ್ಯತೆಯೂ ಹೌದು. ಅದೇ ರೀತಿ ಮೇಘನಾ ರಾಜ್ ಅವರ ಕಂಬ್ಯಾಕ್ ಗೆ ಅಭಿಮಾನಿಗಳು ಶುಭ ಹಾರೈಸಿದ್ದು ಮುಂಬರುವ ದಿನಗಳಲ್ಲಿ ಜೂನಿಯರ್ ಚಿರುವಿನ ಜೊತೆಗೆ ನೆಮ್ಮದಿಯಾಗಿ ಜೀವನ ಸಾಗಿಸಲೆಂದು ಹಾರೈಸಿದ್ದಾರೆ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *