ದಸರಾ ಸಂಭ್ರಮದಲ್ಲಿ ಸಿಲ್ವರ್​ಸ್ಕ್ರೀನ್​ನಲ್ಲಿ ಸಲಗ ಸವಾರಿ ಜೋರಾಗಿದೆ. ರಾಜ್ಯಾದ್ಯಂತ ದುನಿಯಾ ವಿಜಯ್ ಸಲಗ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್​ ಸಿಕ್ಕಿದ್ದು, ಮೊದಲ ದಿನ ಬಹುತೇಕ ಶೋಗಳು ಹೌಸ್​ಫುಲ್​ ಆಗಿತ್ತು. ಹೀರೋ ಆಗಿ ಮಾತ್ರವಲ್ಲದೇ ದುನಿಯಾ ವಿಜಿ ನಿರ್ದೇಶಕರಾಗಿಯೂ ಗೆದ್ದಿದ್ದಾರೆ. ಎಲ್ಲಾ ವಿಭಾಗದಲ್ಲೂ ಸೂಪರ್​ ಅನ್ನಿಸಿಕೊಂಡಿರೋ ಸಲಗ ಬಾಕ್ಸಾಫೀಸ್​ ಶೇಕ್​ ಮಾಡ್ತಿದೆ. ಬಿಡುಗಡೆಯಾದ ಮೊದಲ ದಿನವೇ ಸಲಗ ದೋಚಿದ್ದೇಷ್ಟು ಕೋಟಿ ಗೊತ್ತಾ.? ಅಷ್ಟೇ ಅಲ್ಲದೆ , ಸಲಗ ಚಿತ್ರ ಕನ್ನಡದ ಇನ್ನೊಂದು ಓಂ ಚಿತ್ರ ಆಗಲಿದೆಯಾ? ಎನ್ನುವ ಚರ್ಚೆ ಕೂಡಾ ಆಗುತ್ತಿದೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಆರೇಳು ತಿಂಗಳುಗಳ ನಂತರ ಇವತ್ತು ಮತ್ತೆ ಥಿಯೇಟರ್​ಗಳ ಮುಂದೆ ಹೌಸ್​ಫುಲ್​ ಬೋರ್ಡ್​ ಬಿದ್ದಿತ್ತು. ಹಬ್ಬದ ಸಂಭ್ರಮದಲ್ಲಿ ಸಲಗ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್​ ಸಿಕ್ಕಿದ್ದು, ದುನಿಯಾಗಿ ಪ್ರಯತ್ನಕ್ಕೆ ಫುಲ್ ಮಾರ್ಕ್ಸ್​ ಸಿಕ್ಕಿದೆ ಎಂದೇ ಹೇಳಬಹುದು. ದುನಿಯಾ ವಿಜಿ ನಿರ್ದೇಶಕರಾಗಿಯೂ ತಮ್ಮ ತಾಕತ್ತು ಪ್ರದರ್ಶಿಸಿದ್ದು, ಸಲಗ ಸಿನಿಮಾ ರಾಜ್ಯದ್ಯಂತ 350 ಥೀಯೆಟರ್ ಗಳಲ್ಲಿ ಬಿಡುಗಡೆಯಾಗಿದ್ದು, ಮೊದಲ ದಿನವೇ ಆನ್ ಲೈನ್ ಬುಕ್ಕಿಂಗ್ ಎಲ್ಲಾ ಸೇರಿ 10 ಕೋಟಿ ಕಲೆಕ್ಷನ್​ ಮಾಡಿದೆ ಎಂದು ಗಾಂಧಿನಗರದ ಮಂದಿ ಲೆಕ್ಕಾಚಾರ ಹೇಳುತ್ತಿದ್ದಾರೆಂದು ತಿಳಿದು ಬಂದಿದೆ.  

ಸಿನಿಮಾ ನೋಡಿದವರೆಲ್ಲಾ ವಿಜಿ ಪ್ರಯತ್ನಕ್ಕೆ ಬಹುಪರಾಕ್​ ಹೇಳ್ತಿದ್ದಾರೆ. ರಾಜ್ಯಾದ್ಯಂತ 350 ಸ್ಕ್ರೀನ್​ಗಳಲ್ಲಿ ಸಲಗ ಆರ್ಭಟ ಶುರುವಾಗಿದೆ. ರಾ ಮೇಕಿಂಗ್​, ಹಂಟಿಂಗ್​ ಬಿಜಿಎಂ, ಪಂಚಿಂಗ್​ ಡೈಲಾಗ್ಸ್​, ಭರ್ಜರಿ ಆ್ಯಕ್ಷನ್​ ಸೀಕ್ವೆನ್ಸ್​ನಿಂದ ಸಿನಿಮಾ ಸಖತ್​ ಕಿಕ್​ ಕೊಡುತ್ತೆ. ಅಚ್ಯುತ್​ ಕುಮಾರ್​, ಯಶ್ ಶೆಟ್ಟಿ, ಸುಧಿ, ಸಂಪತ್, ನಾಗಭೂಷಣ್​ ಸೇರಿದಂತೆ ಪ್ರತಿಯೊಬ್ಬರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.  ಅದರಲ್ಲೂ ಡಾಲಿ ಧನಂಜಯ ಪರ್ಫಾರ್ಮೆನ್ಸ್ ಬೋನಸ್. ಮಾಸ್​ ಪ್ರೇಕ್ಷಕರಿಗಂತೂ ಸಲಗ ಹಬ್ಬದೂಟ ಎಂದೇ ಹೇಳಬಹುದು.

ಇನ್ನೂ ಸಿನಿಮಾ ಕುರಿತಾಗಿ ನಟ ಹಾಗೂ ನಿರ್ದೇಶಕ ದುನಿಯಾ ವಿಜಿ ಅವರು ಈ ರೀತಿಯಾಗಿ ಹೇಳಿದ್ದಾರೆ. ನಟನಾಗಬೇಕು ಎಂಬ ಹಂಬಲದಿಂದ ಅಭಿನಯ ಕಲಿತಿದ್ದ ನನಗೆ ಚಿತ್ರರಂಗ ಪ್ರವೇಶಿಸುವುದು ಕೊಂಚ ಕಷ್ಟದ ಕೆಲಸವಾಗಿತ್ತು. ಆ ಕಷ್ಟವನ್ನು ಮತ್ತೊಂದು ಕಷ್ಟದ ಮೂಲಕವೇ ಜಯಿಸಬೇಕು ಎಂದು ತೀರ್ಮಾನಿಸಿ ಸ್ಟಂಟ್ ಕಲಿತು ಸಾಹಸ ಕಲಾವಿದನಾಗಿ ಚಿತ್ರರಂಗಕ್ಕೆ ಬಂದೆ ನಂತರದ ದಿನಗಳಲ್ಲಿ ಸಾಹಸದ ಜತೆಯಲ್ಲಿ ಒಳ್ಳೊಳ್ಳೆ ಪಾತ್ರಗಳಲ್ಲಿಯೂ ನಟಿಸಲು ಆರಂಭಿಸಿದೆ.

ಒಂದಷ್ಟು ದಿನಗಳ ನಂತರ ‘ದುನಿಯಾ’ ಸಿನಿಮಾದ ಮೂಲಕ ನಾಯಕನಾದೆ. ಕನ್ನಡಿಗರು ಅಭಿಮಾನದಿಂದ ತಮ್ಮೆರೆಡು ಕೈಗಳಿಂದ ನನ್ನನ್ನು ಬಾಚಿ ತಬ್ಬಿಕೊಂಡು ಸಿನಿಮಾ ಗೆಲ್ಲಿಸಿದರು. ಜತೆಗೆ ಈ ಹುಡುಗನಲ್ಲಿ ಪ್ರತಿಭೆ ಇದೆ ಎಂದು ಅವರ ಮನಸ್ಸಿನಲ್ಲಿ ನನಗೊಂದು ಸ್ಥಾನವನ್ನು ನೀಡಿದರು ಎಂದು ಹೇಳಿದ್ದಾರೆ.

ಕೆಜಿ ರಸ್ತೆಯ ತ್ರಿವೇಣಿ ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆ ಚಿತ್ರತಂಡ ಸಿನಿಮಾ ನೋಡಿ ಖುಷಿ ಪಟ್ಟಿದೆ ಮೊದಲ ದಿನವೇ ಪ್ರೇಕ್ಷಕರಿಂದ ಸಿಕ್ಕ ರೆಸ್ಪಾನ್ಸ್​ ಚಿತ್ರತಂಡದ ಸಂತಸಕ್ಕೆ ಕಾರಣವಾಗಿತ್ತು. ಟಗರು ಸಿನಿಮಾ ನಂತರ ನಿರ್ಮಾಪಕರಾದ ಕೆ. ಪಿ ಶ್ರೀಕಾಂತ್​ ಅಂತದ್ದೇ ಮತ್ತೊಂದು ಹಿಟ್​ ಸಿನಿಮಾ ಕೊಟ್ಟಿದ್ದಾರೆ.

ಚರಣ್​ ಸಂಗೀತ ಸಲಗ ಚಿತ್ರದ ಖದರ್​ ಹೆಚ್ಚಿಸಿದೆ. ಒಟ್ಟಾರೆ ಸಲಗ ಸಿನಿಮಾ ಪೈಸಾ ವಸೂಲ್​ ಸಿನಿಮಾ ಅನ್ನಿಸಿಕೊಂಡಿದೆ. ದುನಿಯಾ ವಿಜಯ್ ಅವರ ಅಭಿಮಾನಿಗಳು ಅಂತೂ ಸಲಗ ಸಿನಿಮಾ ನೋಡಿ ಇನ್ನೊಂದು ಓಂ ಚಿತ್ರವೇ ಬಿಡುಗಡೆ ಆದ ಹಾಗಿದೆ ಎಂದು ಚಿತ್ರಕ್ಕೆ ಫುಲ್ ಮಾರ್ಕ್ಸ್ ನೀಡಿದ್ದಾರೆ. ಒಟ್ಟಿನಲ್ಲಿ ಲಾಕ್​​ಡೌನ್​ನಿಂದ ಕಂಗೆಟ್ಟಿದ್ದ ಚಿತ್ರರಂಗಕ್ಕೆ ಸಲಗ ಚಿತ್ರ ಶಕ್ತಿ ತುಂಬಿದೆ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *