ಪುನೀತ್ ರಾಜಕುಮಾರ್ ಅವರ ಸಮಾಧಿಗೆ ಹಾಲು ತುಪ್ಪದ ಶಾಸ್ತ್ರ ನೆರವೇರಿಸಿದ ರಾಜ್ ಕುಟುಂಬ

0 1

ಕನ್ನಡ ಚಿತ್ರರಂಗದ ಎಂದು ಮರೆಯದ ಮಾಣಿಕ್ಯ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿ ಐದು ದಿನಗಳಾಯಿತು ಅದರ ಸಲುವಾಗಿ ಕುಟುಂಬಸ್ಥರು ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ರಾಜಕುಮಾರ್ ಅವರ ಸಮಾಧಿಗೆ ಹಾಲು ತುಪ್ಪದ ಶಾಸ್ತ್ರವನ್ನು ನೆರವೇರಿಸಿದರು. ಪುನೀತ್ ರಾಜಕುಮಾರ್ ಅವರ ಸಮಾಧಿಯನ್ನು ಹೂವುಗಳಿಂದ ಅಲಂಕರಿಸಲಾಗಿತ್ತು.

ರಾಜಕುಮಾರ್ ಅವರ ಹುಟ್ಟೂರಿನಿಂದ ಪುನೀತ್ ಅವರ ಹಾಲುತುಪ್ಪ ಕಾರ್ಯಕ್ಕೆ ಎರಡು ನೂರು ಜನ ಬಂದಿದ್ದರು. ರಾಜಕುಮಾರ್ ಅವರ ಕುಟುಂಬದ ಸದಸ್ಯರು ಚಿತ್ರರಂಗದ ಆಪ್ತರು ರಾಜಕೀಯ ಗಣ್ಯರು ಹಾಗೂ ಪುನೀತ್ ರಾಜಕುಮಾರ್ ಅವರ ಆಪ್ತ ಸ್ನೇಹಿತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಪುನೀತ್ ರಾಜಕುಮಾರ್ ಅವರಿಗೆ ಇಷ್ಟವಾದ ಖಾದ್ಯವನ್ನು ಕುಟುಂಬದ ಪ್ರತಿಯೊಬ್ಬ ಸದಸ್ಯರು ಒಂದೊಂದು ಖಾದ್ಯವನ್ನು ಎಡೆಗೆ ಹಾಕಿದರು ಅಶ್ವಿನಿ ಮತ್ತು ಪುತ್ರಿಯರಾದ ದೃತಿ ಮತ್ತು ವಂದಿತಾ ಪೂಜೆಯಲ್ಲಿ ಭಾಗಿಯಾಗಿ ತಂದೆಗೆ ಹಾಲು ತುಪ್ಪವನ್ನು ಅರ್ಪಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಘವೇಂದ್ರ ರಾಜಕುಮಾರ್ ಅವರು ಅಪ್ಪಾಜಿಗೆ ಭಗವಂತ ಎಪ್ಪತ್ತಾರು ವರ್ಷ ಆಯಸ್ಸು ಕೊಟ್ಟಿದ್ದ ಅಪ್ಪುಗೆ ನಲವತ್ತಾರು ವರ್ಷ ಆಯಸ್ಸು ಕೊಟ್ಟಿದ್ದಾನೆ ಅಪ್ಪು ಕಣ್ಣುಗಳು ನಾಲ್ಕು ಜನರಿಗೆ ಬೆಳಕು ಕೊಟ್ಟಿದೆ. ಸರ್ಕಾರ ಹಾಗೂ ಅಭಿಮಾನಿಗಳಿಗೆ ಎಷ್ಟು ಧನ್ಯವಾದವನ್ನು ತಿಳಿಸಿದರು ಅದು ಕಡಿಮೆ ತಮ್ಮ ಕುಟುಂಬದ ಮೇಲೆ ಅಭಿಮಾನಿಗಳು ಪ್ರಾಣವನ್ನೇ ಇಟ್ಟಿದ್ದಾರೆ.

ಹಾಲುತುಪ್ಪ ಕಾರ್ಯದಲ್ಲಿ ನಾವು ಅಪ್ಪುಗೆ ಇಷ್ಟವಾದ ತಿನಿಸುಗಳನ್ನು ಇಟ್ಟಿದ್ದೇವೆ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ. ಜೊತೆಗೆ ಪುನೀತ್ ಅವರ ಹೆಸರನ್ನು ರಸ್ತೆಗಳಿಗೆ ಇಟ್ಟಿರುವುದು ತುಂಬಾ ಖುಷಿಯನ್ನು ತಂದುಕೊಟ್ಟಿದೆ. ಸಾರ್ವಜನಿಕರ ದರ್ಶನಕ್ಕೆ ಇವತ್ತೇ ನಾವು ಅವಕಾಶವನ್ನು ಮಾಡಿಕೊಡುತ್ತೇವೆ ಎಂದು ರಾಘವೇಂದ್ರ ರಾಜಕುಮಾರ್ ಅವರು ಆ ಸಮಯದಲ್ಲಿ ಮೀಡಿಯಾದವರೊಂದಿಗೆ ಮಾತನಾಡಿದ್ದರು.

ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲ ಬಿಟ್ಟು ಬಾರದ ಊರಿಗೆ ತೆರಳಿದ ಸಮಯದಲ್ಲಿ ಪ್ರತಿಯೊಬ್ಬರೂ ಕೂಡ ನೋವನ್ನು ಅನುಭವಿಸಿದ್ದಾರೆ ಪುನೀತ್ ಅವರ ಅಂತಿಮ ದರ್ಶನವನ್ನು ಪಡೆಯುವುದಕ್ಕೆ ರಾಜ್ಯದ ಮೂಲೆಮೂಲೆಗಳಿಂದ ಸುಮಾರು ಇಪ್ಪತ್ತೈದು ಲಕ್ಷಕ್ಕೂ ಹೆಚ್ಚಿನ ಅಭಿಮಾನಿಗಳು ಆಗಮಿಸಿದ್ದರು

ಅಪ್ಪು ಅವರ ಮೇಲಿದ್ದ ಅಭಿಮಾನದಿಂದಾಗಿ ಅಷ್ಟೆಲ್ಲ ಸಂಖ್ಯೆಯಲ್ಲಿ ಜನ ಸೇರಿದ್ದರೂ ಯಾವುದೇ ಗಲಭೆ ಗೊಂದಲಗಳಿಲ್ಲದೆ ಕರುನಾಡಿನ ಮನೆ ಮಗನನ್ನು ಕಳಿಸಿಕೊಡಲಾಯಿತು. ಅಪ್ಪುವಿನ ಅಗಲಿಕೆ ಇಡೀ ರಾಜ್ಯಕ್ಕೆ ದುಃಖವನ್ನು ಉಂಟು ಮಾಡಿದೆ ಅವರ ಕುಟುಂಬಕ್ಕೆ ಆ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ ಎಂದು ನಾವೆಲ್ಲರೂ ಪ್ರಾರ್ಥಿಸೋಣ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.