ಅಪ್ಪು ಇಲ್ಲದೆ ಮನೆ ಬಿಟ್ಟುಹೋಗುತ್ತೇನೆ ಎಂದ ಬಾಡಿಗಾರ್ಡ್ ಗೆ ಮಗಳು ದೃತಿ ಹೇಳಿದ್ದೇನು ಗೊತ್ತಾ

0 1

ನಮ್ಮೆಲ್ಲರ ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿ ಮೂರು ತಿಂಗಳುಗಳಾದವು. ಅಪ್ಪು ಅವರ ಅಗಲಿಕೆಯ ನೋವನ್ನು ಇನ್ನು ಕೂಡ ದೊಡ್ಡ ಮನೆಯಾಗಲಿ ಅಥವಾ ಅವರ ಅಭಿಮಾನಿಗಳಿಂದ ಮರೆಯುವುದಕ್ಕೆ ಸಾಧ್ಯವಾಗಿಲ್ಲ. ಪುನೀತ್ ರಾಜಕುಮಾರ್ ಅವರು ಕರುನಾಡಿಗರ ಮನೆ ಮನಸ್ಸಿನಲ್ಲಿ ಸದಾ ಅಚ್ಚಳಿಯದೆ ಚಿರಕಾಲ ಉಳಿಯುತ್ತಾರೆ. ಅವರು ನಮ್ಮ ನಡುವೆ ದೈಹಿಕವಾಗಿ ಇಲ್ಲ ಎಂದರು ಅವರು ಮಾಡಿರುವ ಒಳ್ಳೆಯ ಕಾರ್ಯಗಳ ಮೂಲಕ ಅವರು ನಮ್ಮ ನಡುವೆ ಇದ್ದಾರೆ ಎಂಬ ರೀತಿಯಲ್ಲಿ ಭಾಸವಾಗುತ್ತದೆ.

ಅವರು ಇಲ್ಲ ಎಂದು ನೆನೆಸಿಕೊಳ್ಳುವುದಕ್ಕೆ ಎಲ್ಲರಿಗೂ ಕೂಡ ದುಃಖವಾಗುತ್ತದೆ ಅದರಲ್ಲಿಯೂ ಅವರ ಆಪ್ತರಿಗೆ ಅವರ ಕುಟುಂಬದವರಿಗೆ ತುಂಬಾ ದುಃಖ ಉಂಟಾಗುತ್ತದೆ. ನಾವಿಂದು ಪುನೀತ್ ರಾಜಕುಮಾರ್ ಅವರ ಬಾಡಿಗಾರ್ಡ ಚಲಪತಿ ಅವರಿಗೆ ಪುನೀತ್ ರಾಜಕುಮಾರ್ ಮಗಳು ಏನು ಹೇಳಿದ್ದಾರೆ ಎಂಬುದರ ಕುರಿತಾಗಿ ಮಾಹಿತಿ ತಿಳಿಸಿಕೊಡುತ್ತೇವೆ.

ಅಶ್ವಿನಿ ಅವರು ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿ ಕಣ್ಣೀರನ್ನು ಹಾಕಿದ್ದಾರೆ ಅದೇ ವೇಳೆ ಅಪ್ಪು ಅವರ ಬಾಡಿಗಾರ್ಡ್ ಆಗಿದ್ದ ಚಲಪತಿ ಅವರು ತಮ್ಮ ಪ್ರೀತಿಯ ಯಜಮಾನರನ್ನು ನೆನೆದು ಕಣ್ಣೀರನ್ನ ಹಾಕಿದ್ದಾರೆ. ನಮ್ಮ ಯಜಮಾನರು ಇಲ್ಲದ್ದನ್ನ ಅರಗಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ. ನಾನು ಬದುಕಿದ್ದು ಸತ್ತಂತೆ ಇದ್ದೇನೆ ನಾವು ಬದುಕಿರುವವರೆಗೂ ಯಜಮಾನರ ನೆನಪಲ್ಲೇ ಇರುತ್ತೇನೆ ಯಜಮಾನರಿಲ್ಲದ ಮನೆಯಲ್ಲಿ ಇರಲು ಆಗುತ್ತಿಲ್ಲ ಅವರ ನೆನಪೆ ಕಾಡುತ್ತಿದೆ ಎಂದು ನಟ ಪುನೀತ್ ರಾಜಕುಮಾರ್ ಅವರ ಬಾಡಿಗಾರ್ಡ್ ಚಲಪತಿ ಅವರು ದುಃಖದಿಂದ ಹೇಳಿಕೊಂಡಿದ್ದಾರೆ. ಇದನ್ನು ಕೇಳಿದ ಅಪ್ಪು ಅವರ ಮಗಳಾದ ದೃತಿ ಅಂಕಲ್ ನೀವು ಅಪ್ಪ ಇಲ್ಲ ಅಂದರು ಅಮ್ಮನ ಜೊತೆ ಇದ್ದು ಅವರನ್ನು ಚೆನ್ನಾಗಿ ನೋಡಿಕೊಳ್ಳಿ ನೀವು ಮನೆ ಬಿಟ್ಟು ಹೋಗಬೇಡಿ ಎಂದು ಕಣ್ಣೀರು ಹಾಕಿದ್ದಾರೆ.

ದೃತಿ ಅವರ ಮಾತನ್ನು ಕೇಳಿ ಚಲಪತಿಯವರು ಅಶ್ವಿನಿ ಮೇಡಂ ಹೇಗೆ ಹೇಳುತ್ತಾರೆ ಹಾಗೆ ಮಾಡುತ್ತೇನೆ. ನಾನು ಇರುವುದೇ ದೊಡ್ಡಮನೆಯ ಕಾವಲಿಗಾಗಿ ಎಂದು ಹೇಳುವ ಮೂಲಕ ತಮ್ಮ ದೊಡ್ಡತನವನ್ನು ತೋರಿಸಿದ್ದಾರೆ. ಆಕಾಶದಷ್ಟು ವಿಶಾಲವಾದ ಹೃದಯವುಳ್ಳ ನಟಸಾರ್ವಭೌಮ ನನ್ನ ಕಳೆದುಕೊಂಡಿರುವ ದುಃಖವನ್ನು ಅರಗಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ.

ನೊಂದ ಹೃದಯಗಳಿಗೆ ಸಾಂತ್ವನ ಹೇಳುತ್ತಿದ್ದ ಬಡವರಿಗೆ ಸಹಾಯ ಮಾಡುತ್ತಿದ್ದ ನಗುಮೊಗದ ಒಡೆಯ ನಮ್ಮನ್ನೆಲ್ಲಾ ಅಗಲಿ ಬಾರದ ಲೋಕಕ್ಕೆ ತೆರಳಿರುವುದು ಎಲ್ಲರಿಗೂ ನೋವನ್ನು ಉಂಟುಮಾಡಿದೆ. ದೇವರು ಅವರ ಕುಟುಂಬಕ್ಕೆ ಆ ನೋವನ್ನು ಸಹಿಸುವ ಶಕ್ತಿಯನ್ನು ನೀಡಲಿ ಅಪ್ಪು ಅವರ ನೆನಪು ನಮ್ಮೆಲ್ಲರಲ್ಲೂ ಸದಾಕಾಲ ಚಿರವಾಗಿರಲಿ ಎಂದು ನಾವು ಕೇಳಿಕೊಳ್ಳುತ್ತೇವೆ.

Leave A Reply

Your email address will not be published.