ಕನ್ನಡದಲ್ಲಿ ವಿಶಿಷ್ಟ ಪ್ರೇಮಕಥೆಗಳ ಸಿನಿಮಾ ಮಾಡುವುದರಲ್ಲಿ ಎತ್ತಿದ ಕೈ ಎನಿಸಿಕೊಂಡಿರುವ ನಿರ್ದೇಶಕ ಮಹೇಶ್‌ ಬಾಬು ಅವರು ಅರಸು ಆಕಾಶ್‌ ಅಜಿತ್‌ ಅತಿರಥ ಅಭಯ್‌’ ಸೇರಿದಂತೆ ಹತ್ತಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಮಹೇಶ್ ಬಾಬು ಅವರು ಅರಸು ಚಿತ್ರದ ಬಗ್ಗೆ ಒಂದು ಸಂದರ್ಶನದಲ್ಲಿ ಮಾತಾಡುವಾಗ ಅದರಲ್ಲಿ ವಿಶೇಷ ಪಾತ್ರ ಮಾಡಿರುವ ನಮ್ಮೆಲ್ಲರ ಅಚ್ಚು ಮೆಚ್ಚಿನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ಮಾತಾಡಿದ್ದಾರೆ

ಮಹೇಶ್ ಬಾಬು ನಿರ್ದೇಶಿಸಿದ 2007 ರ ಭಾರತೀಯ ಕನ್ನಡ ಭಾಷೆಯ ರೋಮ್ಯಾಂಟಿಕ್ ನಾಟಕ ಚಲನಚಿತ್ರವಾಗಿದೆ. ಇದರಲ್ಲಿ ಪುನೀತ್ ರಾಜ್‌ಕುಮಾರ್ ಅವರು ವ್ಯಾಪಾರದ ಉದ್ಯಮಿಯ ಮಗನಾಗಿ ಶಿವರಾಜ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ಪೋಷಕ ಪಾತ್ರದಲ್ಲಿ ಶ್ರೀನಿವಾಸ ಮೂರ್ತಿಯವರು ರಾಮಣ್ಣ ಅನ್ನೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಶಿವರಾಜ್ ಅವರ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಾರೆ. ವ್ಯವಹಾರದ ವಿಷಯವಾಗಿ ಭಾರತಕ್ಕೆ ಬರಬೇಕೆಂದು ಒತ್ತಾಯಿಸಿ ಅವರನ್ನು ಭಾರತಕ್ಕೆ ಕರೆತರುತ್ತಾರೆ.

ಮೊದಲ ನೋಟದಲ್ಲೇ ರಮ್ಯ ಅವರ ಮೇಲೆ ಪ್ರೀತಿ ಆಗಿದ್ದು ನಂತರ ಅವರು ತಮ್ಮ ಮ್ಯಾನೇಜರ್ ಮಗಳೆ ಎಂದು ತಿಳಿದು ಅವರ ಮನೆಗೆ ಹೋಗಿ ಮದುವೆಗೆ ಪ್ರಸ್ತಾಪಿಸಿದಾಗ ರಮ್ಯಾ ಅವರು ತಿರಸ್ಕರಿಸಿ ಒಂದು ತಿಂಗಳಿನಲ್ಲಿ ಐದು ಸಾವಿರ ರೂಪಾಯಿ ಸಂಪಾದಿಸಬೇಕು ಎಂಬ ಷರತ್ತನ್ನು ವಿಧಿಸುತ್ತಾರೆ. ನಂತರ ತನ್ನ ಪಿತ್ರಾರ್ಜಿತ ಸಂಪತ್ತನ್ನು ಸ್ವಂತವಾಗಿ ಬದುಕಲು ಬಿಡುತ್ತಾರೆ ಮೀರಾ ಜಾಸ್ಮಿನ್ ಪಾತ್ರದಲ್ಲಿ ಮಧ್ಯಮ ವರ್ಗದ ಹುಡುಗಿ(ಪುನೀತ್ ಎದುರು ಸಮಾನಾಂತರ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾಳೆ) ಅವರ ಜೀವನದಲ್ಲಿ ಪ್ರವೇಶಿಸಿದಾಗ, ಅದು ಶೀಘ್ರದಲ್ಲೇ ತ್ರಿಕೋನ ಪ್ರೇಮಕ್ಕೆ ತಿರುಗುತ್ತದೆ.

ಶ್ರೀನಿವಾಸ ಮೂರ್ತಿ, ಕೋಮಲ್ ಮತ್ತು ಆದಿ ಲೋಕೇಶ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಶ್ರೇಯಾ ಸರನ್ ಕೂಡ ಕಾಣಿಸಿಕೊಂಡಿದ್ದು ಅರಸಿ ಚಿತ್ರ ಆಕೆಯ ಮೊದಲ ಕನ್ನಡ ಭಾಷೆಯ ಚಲನಚಿತ್ರ ಆಗಿದೆ.

ಇನ್ನು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಆದಿ ಹಾಗೂ ದರ್ಶನ್ ಅವರ ಬಗ್ಗೆ ಮಾತಾಡುತ್ತಾ.
ದರ್ಶನ್ ಅವರಿಗೆ ರಾಘಣ್ಣ ಅವರು ಕರೆ ಮಾಡಿ ಹೀಗೆ ಪುನೀತ್ ಮಾಡುತ್ತಿರುವ ಸಿನಿಮಾದಲ್ಲಿ ಒಂದು ಗೆಸ್ಟ್ ರೋಲ್ ಇದೆ ಎಂದಾಗ ಅವರು ಹೇಳಿದ್ದು ಒಂದೇ ಮಾತು ಡೇಟ್ ಯಾವಾಗ ಅಂತ ರಾಘಣ್ಣ ಬಂದು ಆಕ್ಟ್ ಮಾಡಿ ಹೋಗ್ತೀನಿ ಅಂತ ನಂತರ ದುಡ್ಡಿನ ಮಾತು ಕತೆಗೆ ಕೂತಾಗ ನೀವು ದುಡ್ಡು ಕೊಡ್ತೀನಿ ಅಂದ್ರೆ ನಾನು ಬರೋದಿಲ್ಲ ಎಂದು ಹೇಳಿದ್ದರು ಎಂದು ಹೆಮ್ಮೆಯಿಂದ ಸಂದರ್ಶನವೊಂದರಲ್ಲಿ ಹೇಳಿದ್ದರು.

Leave a Reply

Your email address will not be published. Required fields are marked *