ಗರ್ಭಿಣಿ ಮಹಿಳೆಯರು ಯಾಕೆ ತೆಂಗಿನಕಾಯಿ ಒಡೆಯಬಾರದು? ಇದರ ಹಿಂದಿನ ಕಾರಣವೇನು..

0 142

pregnant woman: ಹಿಂದೂ ಸಂಸ್ಕೃತಿಯಲ್ಲಿ ಕೆಲವೊಂದು ಕೆಲಸಗಳನ್ನ ಮಹಿಳೆಯರು ಮಾಡುವಂತಿಲ್ಲ ಇದಕ್ಕೆ ಸಾಕಷ್ಟು ಬಾರಿ ವಿರೋಧವು ವ್ಯಕ್ತವಾಗಿದೆ ತಲೆ ಬುಡ ಇಲ್ಲದೆ ಶಾಸ್ತ್ರಗಳನ್ನು ಮಾಡುತ್ತಾರೆ ಎಂದು ಇತ್ತೀಚಿಗೆ ಇದರ ಬಗ್ಗೆ ಆರೋಪವೂ ಕೂಡ ಕೆಲವರು ಮಾಡಿದ್ದಾರೆ ಆದರೆ ಇದಕ್ಕೆ ಹಿಂದೂ ಸಂಸ್ಕೃತಿಯಲ್ಲಿ (culture) ಸೂಕ್ತ ಕಾರಣವನ್ನ ವೈಜ್ಞಾನಿಕವಾಗಿ ಹೇಳಲಾಗಿದೆ.

ಹೆಣ್ಣು ಮಕ್ಕಳು (womens) ಮಾಡಬಾರದ ಕೆಲಸದಲ್ಲಿ ತೆಂಗಿನ ಕಾಯಿ (Coconut) ಒಡೆಯಬಾರದು ಅನ್ನೋದು ಒಂದು. ವೈಜ್ಞಾನಿಕ ಹಾಗೂ ಸಾಂಪ್ರದಾಯಿಕ ಕಾರಣವೂ ಇದೆ ಅದರಲ್ಲೂ ಗರ್ಭಿಣಿಯರು ತೆಂಗಿನಕಾಯಿ ಒಡೆಯುವುದು ಇರಲಿ ಮುಟ್ಟುವುದು ಕೂಡ ನಿಷೇಧವಾಗಿದೆ. ತೆಂಗಿನಕಾಯಿಯನ್ನ ಶ್ರೀ ಫಲ ಎಂದು ಕರೆಯುತ್ತಾರೆ ಪೂಜೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೆಂಗಿನಕಾಯಿ ಇರಲೇಬೇಕು ಎಲ್ಲಾ ಶುಭ ಸಂದರ್ಭಗಳಲ್ಲೂ ತೆಂಗಿನಕಾಯಿ ಬೇಕೇ ಬೇಕು

ಒಂದು ಕಳಸವನ್ನು ಸ್ಥಾಪನೆ ಮಾಡುವುದಕ್ಕೆ ಸಹ ತೆಂಗಿನಕಾಯಿ ಬಳಸುತ್ತಾರೆ. ತೆಂಗಿನಕಾಯಿ ಒಡೆಯುವುದನ್ನು ಬಲಿಯ ಸೂಚಕ ಎಂದು ಹೇಳುತ್ತಾರೆ ಈ ಕಾರಣಕ್ಕೆ ಬಲಿಯಂತಹ ಕಾರ್ಯಗಳನ್ನು ಪುರುಷರೇ ಮಾಡಬೇಕು ಅಂತಹ ಕಾರ್ಯಕ್ರಮದಲ್ಲಿ ಹೆಣ್ಣು ಮಕ್ಕಳು ತೊಡಗಿಸಿಕೊಳ್ಳಬಾರದು ಎನ್ನುವ ನಿಯಮವನ್ನ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ..ಹೆಣ್ಣು ತನ್ನ ಗಂಡನಿಂದ ಜಾಸ್ತಿ ಬಯಸೋದು ಏನು ಗೊತ್ತಾ? ನಿಮಗಿದು ಗೊತ್ತಿರಲಿ

ನೀವು ತೆಂಗಿನಕಾಯಿಯ ಬಗ್ಗೆ ವೈಜ್ಞಾನಿಕವಾಗಿ ಹೇಳಬೇಕೆಂದರೆ ಅವುಗಳಲ್ಲಿ ಪೊಟ್ಯಾಶಿಯನ್ ಹಾಗೂ ಗ್ಯಾಲರಿ ಸೇರಿದಂತೆ ಹಲವು ಉಪಯುಕ್ತ ಅಂಶಗಳು ಇರುವುದರಿಂದ ಇದನ್ನು ತಾಯಿಯ ಹಾಲಿಗೆ ಸಮವೆಂದು ಹೇಳಲಾಗುತ್ತದೆ ತೆಂಗಿನಕಾಯಿಗೆ ಮರು ಸೃಷ್ಟಿ ಹೊಂದುವ ಗುಣವಿದೆ ಇದನ್ನು ಪುನಃ ಬೀಜ ಮಾಡಿ ಗಿಡವನ್ನು ಮಾಡಬಹುದು ಅದೇ ರೀತಿ ಮಹಿಳೆಯು ಮತ್ತೊಂದು ಜೀವಕ್ಕೆ ಜನ್ಮ ನೀಡುತ್ತಾಳೆ ಅಂದರೆ ಸಂತಾನೋತ್ಪತ್ತಿ ಕಾರಕ ಸ್ವರೂಪಿ ಮಹಿಳೆಯಾಗಿದ್ದಾಳೆ.

ಕಲ್ಪವೃಕ್ಷವಾದ ತೆಂಗಿನ ಮರದಿಂದ ಬೀಳುವ ತೆಂಗಿನಕಾಯಿಯು ತಾಯಿಯ ಗರ್ಭದಿಂದ ಬೀಳುವ ಬೀಜದಂತೆ ಆದರಿಂದ 9 ತಿಂಗಳ ಕಾಲ ತನ್ನ ಗರ್ಭದಲ್ಲಿ ಬೀಜವನ್ನು ಅಂದರೆ ಭ್ರೂಣವನ್ನು ಹೊಂದಿರುವ ಮಹಿಳೆಯರು ತೆಂಗಿನಕಾಯಿಯನ್ನು ಒಡೆಯಬಾರದು ಹಾಗೆಯೂ ಒಡೆದರೆ ತನ್ನ ಬ್ರೂಣದಲ್ಲಿರುವ ಮಗುವನ್ನೇ ಒಡೆದಂತೆ ಎಂದು ಅರ್ಥ ಹಾಗೆಯೇ ಇದು ಪ್ರಕೃತಿಯ ನಿಯಮಕ್ಕೆ ವಿರುದ್ಧವಾಗಿದೆ ಎಂದು ಹೇಳಲಾಗುತ್ತದೆ.

ಶಾಸ್ತ್ರದ ಪ್ರಕಾರ ಅಶುಭ ಎಂದು ಹೇಳಲಾಗುತ್ತದೆ ಹಾಗೆಯೇ ಈ ಸ್ತ್ರಿ ಫಲದಲ್ಲಿ ಮೂರು ದೇವತೆಯು ವಾಸದಾಗಿದ್ದಾರೆ ಭೂಲೋಕದಲ್ಲಿ ವಿಷ್ಣು ಅವತಾರ ಎತ್ತಿ ಬರುವಾಗ ಮೂರು ವಸ್ತುವನ್ನು ಭೂಲೋಕಕ್ಕೆ ತಂದಿದ್ದನ್ನು ಅದರಲ್ಲಿ ಲಕ್ಷ್ಮಿ ತೆಂಗಿನ ಮರ ಮತ್ತು ಕೊನೆಯದಾಗಿ ಕಾಮಧೇನು ಎಂದು ಪುರಾಣದಲ್ಲಿ ಹೇಳುತ್ತಾರೆ ಹೀಗಾಗಿ ತೆಂಗಿನ ಮರವನ್ನು ಕಲ್ಪವೃಕ್ಷ ಎಂದು ಕರೆಯುತ್ತಾರೆ ತೆಂಗಿನಕಾಯಿಯಲ್ಲಿ ಬ್ರಹ್ಮ ವಿಷ್ಣು ಮಹೇಶ್ವರರು ನೆಲೆಸಿರುತ್ತಾರೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ..ಬಿಪಿ ಶುಗರ್ ಇರೋರು ನೆನಸಿದ ಶೇಂಗಾ ತಿನ್ನೋದ್ರಿಂದ ಏನಾಗುತ್ತೆ, ತಿಳಿದುಕೊಳ್ಳಿ

ಶಿವನಿಗೆ ಶ್ರೀ ಫಲ ಅತ್ಯಂತ ಪ್ರಿಯವಾಗಿದೆ ಹಾಗೆಯೇ ತೆಂಗಿನಕಾಯಿ ಮೇಲಿರುವ ಮೂರು ಕಣ್ಣುಗಳನ್ನು ಶಿವನ ಮೂರು ಕಣ್ಣು ಎಂದು ಹೇಳಲಾಗುತ್ತದೆ ಹೀಗಾಗಿ ದೇವರಿಗೆ ತೆಂಗಿನಕಾಯಿಯನ್ನು ಅರ್ಪಿಸುವುದು ಅಥವಾ ಒಡೆಯುವುದು ದೇವರು ಪ್ರಸನ್ನನಾಗಿ ಆಸೆ ಆಕಾಂಕ್ಷೆಗಳನ್ನೆಲ್ಲ ಪೂರೈಸುತ್ತಾನೆ ತಿನ್ನುವ ನಂಬಿಕೆ ಇದೆ. ಇದರಿಂದ ದೇವರಿಗೆ ತೆಂಗಿನಕಾಯಿಯನ್ನು ಅರ್ಪಿಸುತ್ತಾರೆ ಆದರೆ ಸ್ತ್ರೀಯರಿಂದ ಅದನ್ನು ಹೊಡೆಯಲು ಕೊಡುವುದಿಲ್ಲ.

Leave A Reply

Your email address will not be published.