ಪ್ರಮಾಣಿಕತೆ ಅಂದ್ರೆ ಏನು ಚಾಣಿಕ್ಯ ಹೇಳಿದ ನೀತಿ ಕೆಥೆ ನೋಡಿ

0 9

ಕೌಟಿಲ್ಯ ಎಂದೇ ಪ್ರಸಿದ್ಧನಾದ ಚಾಣಕ್ಯ ಪ್ರಾಚೀನ ಭಾರತದ ಅದ್ವಿತೀಯ ಅರ್ಥಶಾಸ್ತ್ರಜ್ಞ. ಮೌರ್ಯ ಸಾಮ್ರಾಜ್ಯ ಸ್ಥಾಪನೆಯಲ್ಲಿ ಚಾಣಕ್ಯನ ಪಾತ್ರ ಮಹತ್ವದ್ದು. ಚಣಕನ ಮಗನಾದ್ದರಿಂದ ಚಾಣಕ್ಯನೆಂದು ಹೆಸರು ಬಂದಿತೆಂದು ಹೇಳಲಾಗುತ್ತದೆ. ಇವರು ಅದ್ಭುತ ವಿದ್ಯಾವಂತ ಪಂಡಿತರಾಗಿದ್ದರು. ಇವರು ಅನೇಕ ವಿಚಾರಗಳ ಬಗ್ಗೆ ಅದ್ಭುತವಾದ ನಿರ್ಣಾಯಕ ಉತ್ತರವನ್ನು ನೀಡಿದ್ದಾರೆ. ಚಾಣಕ್ಯರು ಕೆಲವು ವಿಚಾರಗಳಲ್ಲಿ ನಾಚಿಕೆ ಇಲ್ಲದ ವ್ಯಕ್ತಿಗಳನ್ನು ತುಂಬಾ ಬುದ್ಧಿವಂತರು ಎಂದು ಹೊಗಳಿದ್ದಾರೆ. ಆದ್ದರಿಂದ ನಾವಿಲ್ಲಿ ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಇತಿಹಾಸದಲ್ಲಿ ಪ್ರಸಿದ್ಧ ರಾಜನಾದ ಚಂದ್ರಗುಪ್ತ ಮೌರ್ಯನ ಮಂತ್ರಿ ಚಾಣಕ್ಯರು ಆಗಿದ್ದರು. ವಿಷ್ಣುಗುಪ್ತ ಎಂಬುದು ಚಾಣಕ್ಯನ ನಿಜವಾದ ಹೆಸರು. ವಿಷ್ಣುಗುಪ್ತ ತಕ್ಷಶಿಲೆಯ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿದ್ದರು. ಒಂದು ದಿನ ಚಂದ್ರಗುಪ್ತ ಮತ್ತು ಚಾಣಕ್ಯರು ಜನರ ಕಷ್ಟಗಳನ್ನು ತಿಳಿಯಲು ವೇಷ ಬದಲಿಸಿಕೊಂಡು ಹೊರಟರು. ಆಗ ಚಳಿಗಾಲವಾಗಿದ್ದರಿಂದ ಬಹಳ ಚಳಿ ಇತ್ತು. ಬಡ ಜನರು ಚಳಿಯಿಂದ ಗಡಗಡ ನಡುಗುತ್ತಿದ್ದರು. ಚಂದ್ರಗುಪ್ತ ಇವರಿಗೆಲ್ಲಾ ಕಂಬಳಿಗಳನ್ನು ಕೊಡಬೇಕು ಎಂದು ಹೇಳಿದನು. ನಂತರ ಕಂಬಳಿ ತಯಾರಿಸಿ ಆಚಾರ್ಯ ಚಾಣಕ್ಯರ ಮನೆಯಲ್ಲಿ ಇಡಲಾಯಿತು.

ಚಾಣಕ್ಯರ ಮನೆ ಬಹಳ ಚಿಕ್ಕದಾಗಿತ್ತು. ಇದನ್ನು ಗಮನಿಸಿದ ಕಳ್ಳರು ಕಂಬಳಿಗಳನ್ನ ಮನೆಯಿಂದ ಕದಿಯಬೇಕು ಎಂದು ಯೋಚನೆ ಮಾಡಿದರು. ಅದೇ ರಾತ್ರಿ ಕಳ್ಳರು ಕಂಬಳಿ ಕದಿಯಲು ಹೋದಾಗ ಚಾಣಕ್ಯರು ಮತ್ತು ಅವರ ತಾಯಿ ಹರಿದ ಕಂಬಳಿಗಳನ್ನ ಹೊದ್ದು ಮಲಗಿದ್ದರು. ಇದನ್ನು ಕಂಡ ಕಳ್ಳರು ಇಷ್ಟು ಕಂಬಲಿಗಳು ಇದ್ದರೂ ಹರಿದದ್ದನ್ನು ಹೊದ್ದು ಮಲಗಿದ್ದ ಬಗ್ಗೆ ಯೋಚಿಸಿ ಕದಿಯಲು ಬಂದ ಯೋಚನೆಯೇ ಮರೆತು ಹೋಯಿತು. ನಂತರ ಕಳ್ಳರ ನಾಯಕ ಚಾಣಕ್ಯರನ್ನು ಎಬ್ಬಿಸಿ ಅಯ್ಯಾ ಇಷ್ಟು ಕಂಬಳಿಗಳ ರಾಶಿಯೇ ಇದ್ದರೂ ಹರಿದ ಕಂಬಳಿ ಹೊದ್ದು ಮಲಗಿದ್ದೀರಲ್ಲ ಎಂದು ಹೇಳಿದ.

ಆಗ ಚಾಣಕ್ಯರು ನೋಡಿ ನನ್ನ ಬಳಿ ಹರಿದ ಕಂಬಳಿಯಾದರೂ ಇದೆ. ಇವುಗಳನ್ನು ಮಹಾರಾಜ ಏನೂ ಇಲ್ಲದವರಿಗೆ ಕಳುಹಿಸಿದ್ದು. ಅದನ್ನು ಹೊದ್ದು ನಾನು ಕಳ್ಳನಾಗಲಾರೆ ಎಂದು ಹೇಳಿದರು. ಇದರಿಂದ ಕಳ್ಳರಿಗೆ ತಪ್ಪಿನ ಅರಿವಾಗಿ ಪಶ್ಚಾತಾಪ ಪಟ್ಟರು. ನೀವು ನಮ್ಮ ಕಣ್ಣು ತೆರೆಸಿದಿರಿ ನಾವು ಇನ್ನು ಕಳ್ಳತನ ಮಾಡುವುದಿಲ್ಲ ಕಷ್ಟಪಟ್ಟು ದುಡಿದು ಬದುಕುತ್ತೇವೆ ಎಂದು ನಮಸ್ಕರಿಸಿ ಹೊರಟು ಹೋದರು. ಇವರ ಪ್ರಾಮಾಣಿಕತೆಯ ಶಕ್ತಿ ಕಳ್ಳರ ಮನಸ್ಸನ್ನು ಪರಿವರ್ತನೆ ಮಾಡಿತು. ಆದ್ದರಿಂದ ಪ್ರಾಮಾಣಿಕ ತನ್ನದೇ ಆದ ಶಕ್ತಿಯನ್ನು ಹೊಂದಿದೆ. ಇದನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕಬೇಕು. ಎಲ್ಲಾ ಸ್ಥಾನಮಾನಗಳು ದೊರಕುತ್ತವೆ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave A Reply

Your email address will not be published.