ಕೌಟಿಲ್ಯ ಎಂದೇ ಪ್ರಸಿದ್ಧನಾದ ಚಾಣಕ್ಯ ಪ್ರಾಚೀನ ಭಾರತದ ಅದ್ವಿತೀಯ ಅರ್ಥಶಾಸ್ತ್ರಜ್ಞ. ಮೌರ್ಯ ಸಾಮ್ರಾಜ್ಯ ಸ್ಥಾಪನೆಯಲ್ಲಿ ಚಾಣಕ್ಯನ ಪಾತ್ರ ಮಹತ್ವದ್ದು. ವಿಷ್ಣುಗುಪ್ತ ಎಂಬುದು ಚಾಣಕ್ಯನ ನಿಜವಾದ ಹೆಸರು. ಚಣಕನ ಮಗನಾದ್ದರಿಂದ ಚಾಣಕ್ಯನೆಂದು ಹೆಸರು ಬಂದಿತೆಂದು ಹೇಳಲಾಗುತ್ತದೆ. ವಿಷ್ಣುಗುಪ್ತ ತಕ್ಷಶಿಲೆಯ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿದ್ದರು. ಇವರು ಅದ್ಭುತ ವಿದ್ಯಾವಂತ ಪಂಡಿತರಾಗಿದ್ದರು. ಇವರು ಅನೇಕ ವಿಚಾರಗಳ ಬಗ್ಗೆ ಅದ್ಭುತವಾದ ನಿರ್ಣಾಯಕ ಉತ್ತರವನ್ನು ನೀಡಿದ್ದಾರೆ. ಚಾಣಕ್ಯರು ಕೆಲವು ವಿಚಾರಗಳಲ್ಲಿ ನಾಚಿಕೆ ಇಲ್ಲದ ವ್ಯಕ್ತಿಗಳನ್ನು ತುಂಬಾ ಬುದ್ಧಿವಂತರು ಎಂದು ಹೊಗಳಿದ್ದಾರೆ. ಆದ್ದರಿಂದ ನಾವಿಲ್ಲಿ ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಸಾಮಾನ್ಯವಾಗಿ ಕೆಲವು ಜನರ ಕೆಟ್ಟ ಹವ್ಯಾಸಗಳನ್ನು ನೋಡಿ ನಾಚಿಕೆ ಇಲ್ಲದವರು ಎಂದು ಬಯ್ಯುತ್ತಾರೆ. ಆದರೆ ಆಚಾರ್ಯ ಚಾಣಕ್ಯರು ಇಂತಹದೆ ಕೆಲವು ನಾಚಿಕೆ ಇಲ್ಲದ ವ್ಯಕ್ತಿಗಳನ್ನು ತುಂಬಾ ಬುದ್ದಿವಂತ ಜೀವಿಗಳು ಎಂದು ಹೇಳಿದ್ದಾರೆ. ಏಕೆಂದರೆ ಕೆಲವು ವಿಷಯದಲ್ಲಿ ನಾಚಿಕೆ ಇಲ್ಲದ ವ್ಯಕ್ತಿಗಳು ಮಾತ್ರ ಜೀವನದಲ್ಲಿ ಮಹಾನ್ ಕಾರ್ಯಗಳನ್ನು ಮಾಡುತ್ತಾರೆ ಹಾಗೂ ತುಂಬಾ ಸುಖಮಯವಾಗಿರುತ್ತಾರೆ ಎಂದು ಅವರು ಹೇಳಿದ್ದಾರೆ. ಚಿಕ್ಕ ಚಿಕ್ಕ ವಿಷಯಗಳಲ್ಲಿ ನಾಚಿಕೆ ಪಡುವ ವ್ಯಕ್ತಿಗಳು ನಾಚಿಕೆ ಸ್ವಭಾವದಿಂದ ಯಾವ ಕೆಲಸವನ್ನು ಮಾಡಲು ಅವರಿಂದ ಸಾಧ್ಯವಾಗುವುದಿಲ್ಲ.

ಆಚಾರ್ಯ ಚಾಣಕ್ಯರು 3 ವಿಷಯದಲ್ಲಿ ನಾಚಿಕೆ ಪದದ ವ್ಯಕ್ತಿಗಳನ್ನ ಜೀವನದಲ್ಲಿ ಎಲ್ಲರಿಗಿಂತ ಹೆಚ್ಚು ಸುಖವಾಗಿರುವ ವ್ಯಕ್ತಿಗಳೆಂದು ಹೇಳಿದ್ದಾರೆ. ಮೊದಲನೆಯದಾಗಿ ಯಾವ ಮನುಷ್ಯನು ಊಟ ಮಾಡುವ ಸಮಯದಲ್ಲಿ ನಾಚಿಕೊಳ್ಳುತ್ತಾನೋ ಆತ ಯಾವತ್ತು ಸುಖವಾಗಿರುವುದಿಲ್ಲ. ಏಕೆಂದರೆ ಊಟದ ಸಮಯದಲ್ಲಿ ನಾಚಿಕೊಳ್ಳುವ ವ್ಯಕ್ತಿ ಹೊಟ್ಟೆ ಹಸಿವಿನಿಂದ ನೋವಿನಲ್ಲಿ ಇರಬೇಕಾಗುತ್ತದೆ. ಹೊಟ್ಟೆಯು ಕೂಡ ತುಂಬುವುದಿಲ್ಲ. ಹೀಗಾಗಿ ನಾವು ಊಟದ ಸಮಯದಲ್ಲಿ ನಾಚಿಕೆಯನ್ನು ಮಾಡಿಕೊಳ್ಳದೆ ಊಟ ಮಾಡಬೇಕು.

ಯಾವ ವ್ಯಕ್ತಿಯು ಜ್ಞಾನವನ್ನು ಪಡೆಯುವ ಸಂದರ್ಭದಲ್ಲಿ ಅಥವಾ ಓದುವ ಸಂದರ್ಭದಲ್ಲಿ ಸಂಕೋಚ ಪಡುವನೋ ಅವನು ಜ್ಞಾನವನ್ನು ಪಡೆದುಕೊಳ್ಳಲು ಆಗುವುದಿಲ್ಲ. ಜ್ಞಾನವನ್ನು ಪಡೆದುಕೊಳ್ಳುವ ವಿಷಯದಲ್ಲಿ ನಾಚಿಕೆ ಬಿಟ್ಟು ಎಲ್ಲ ವಿಷಯಗಳ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ. ಮೂರನೆಯದಾಗಿ ವ್ಯಕ್ತಿಯು ಹಣ ಸಂಪಾದಿಸುವ ವಿಷಯದಲ್ಲಿ ನಾಚಿಕೆ ಪಡದೆ ವ್ಯಾಪಾರ ಮತ್ತು ವ್ಯವಹಾರದಲ್ಲಿ ನಾಚಿಕೊಳ್ಳದೆ ಕೆಲಸ ಮಾಡಬೇಕು. ಈ ರೀತಿಯಾಗಿ ಮನುಷ್ಯ ಊಟ ಮಾಡುವ ಸಮಯ, ಕಲಿಯುವ ಸಮಯ ಹಾಗೂ ಹಣದ ವಿಚಾರದಲ್ಲಿ ನಾಚಿಕೆಯನ್ನು ಬಿಟ್ಟು ನಡೆಯುವನೋ ಆ ವ್ಯಕ್ತಿ ಜೀವನದಲ್ಲಿ ತುಂಬಾ ಸುಖಿಯಾಗಿ ಬಾಳುತ್ತಾನೆ ಎಂದು ಆಚಾರ್ಯ ಚಾಣಕ್ಯ ಹೇಳಿದ್ದಾರೆ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave a Reply

Your email address will not be published. Required fields are marked *