ನಮ್ಮ ದೇಶದಲ್ಲಿರುವ ಅದೆಷ್ಟೋ ಹಳ್ಳಿಗಳು ಇಂದಿಗೂ ಕೂಡ ಅಭಿವೃದ್ಧಿಯನ್ನು ಕಂಡಿಲ್ಲ ಹಾಗಾಗಿ ಹಳ್ಳಿ ಎಂದ ತಕ್ಷಣ ಎಲ್ಲರ ಮನಸ್ಸಿನಲ್ಲಿ ಮಣ್ಣಿನ ರಸ್ತೆ ಹಂಚಿನ ಮನೆಗಳು ಮೂಲ ಸೌಕರ್ಯಗಳಿಂದ ವಂಚಿತರಾಗಿರುವಂತಹ ಜನರು ಕಣ್ಣೆದುರಿಗೆ ಬರುತ್ತಾರೆ. ಆದರೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಮನಸ್ಸು ಮಾಡಿದರೆ ಅವರ ಗ್ರಾಮವನ್ನು ಇಡಿ ವಿಶ್ವವೇ ತಿರುಗಿ ನೋಡುವ ಹಾಗೆ ಮಾಡಬಹುದು ಎನ್ನುವುದಕ್ಕೆ ನಾವಿವತ್ತು ತಿಳಿಸುತ್ತಿರುವ ಗ್ರಾಮವೇ ಅತ್ಯುತ್ತಮ ಉದಾಹರಣೆ. ಇಷ್ಟಕ್ಕೂ ಗ್ರಾಮ ಯಾವುದು ಗ್ರಾಮ ಪಂಚಾಯತಿ ಅಧ್ಯಕ್ಷರು ಮಾಡಿದ ಕೆಲಸವಾದರೂ ಏನು ಎಂಬ ಕುತೂಹಲದ ಬಗ್ಗೆ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸುತ್ತೇವೆ.

ನೀಲಗಿರಿ ಬೆಟ್ಟಗಳ ಮಡಿಲಲ್ಲಿ ನೆಲೆಗೊಂಡಿರುವ ತಮಿಳುನಾಡಿನ ಕೊಯಂಬತ್ತೂರು ಜಿಲ್ಲೆಯ ಪೆಟ್ಟು ಮಲ್ಯಮ್ ತಾಲೂಕಿನ ವದಂಟುರೈ ಗ್ರಾಮ ಇಂದು ಭಾರತದಲ್ಲಿರುವ ಗ್ರಾಮಗಳಲ್ಲಿ ಉತ್ತಮವಾದ ಗ್ರಾಮ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಆ ಗ್ರಾಮಕ್ಕೆ ಹೋದರೆ ಯಾವುದೊ ನಗರಕ್ಕೆ ಹೋದಂತೆ ಭಾಸವಾಗುತ್ತದೆ. ಸುಮಾರು ಒಂದು ದಶಕದಿಂದ ಈ ಗ್ರಾಮವು ಮಾದರಿ ಗ್ರಾಮ ಎಂಬ ಹೆಸರನ್ನು ಉಳಿಸಿಕೊಂಡು ಬಂದಿದ್ದು

ಈ ಗ್ರಾಮದಲ್ಲಿರುವ ಜನರು ತಮ್ಮ ಮನೆಗೆ ಬೇಕಾದ ವಿದ್ಯುತ್ತನ್ನು ತಾವೇ ಸ್ವತಹ ಉತ್ಪಾದಿಸಿ ಕೊಳ್ಳುತ್ತಾರೆ ಮನೆ ಬಳಕೆಗೆ ಮಾತ್ರ ಉತ್ಪಾದಿಸುವುದಲ್ಲದೇ ವಿದ್ಯುತ್ತನ್ನು ಉತ್ಪಾದಿಸಿ ಅದನ್ನು ತಮಿಳುನಾಡು ಸರ್ಕಾರಕ್ಕೆ ಮಾರಾಟ ಮಾಡುತ್ತಾರೆ. ಇಲ್ಲಿ ವಾಸವಿರುವ ಎಲ್ಲಾ ಜನರ ಮನೆಯು ನೋಡುವುದಕ್ಕೆ ಒಂದೇ ತರವಿದೆ. ಗ್ರಾಮದ ಜನರಿಗೆ ಎಲ್ಲರಿಗೂ ಕುಡಿಯುವುದಕ್ಕೆ ಶುದ್ಧ ನೀರಿನ ಘಟಕವಿದೆ.

ಒಂದುಕಾಲದಲ್ಲಿ ನೀರಿಗಾಗಿ ಕಿಲೋಮೀಟರುಗಟ್ಟಲೆ ಅಲೆಯಬೇಕಾಗಿದ್ದ ಈ ಗ್ರಾಮವು ಇಂದು ಸ್ಮಾರ್ಟ್ ಗ್ರಾಮವಾಗಿರುವ ಹಿಂದೆ ಆರ್ ಷಣ್ಮುಗಂ ಅವರ ಪರಿಶ್ರಮ ದೊಡ್ಡದಿದೆ. ದಶಕಗಳ ಹಿಂದೆ ಈ ಗ್ರಾಮವು ಕೂಡ ಬೇರೆ ಹಳ್ಳಿಗಳಂತೆ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿತ್ತು. ಗುಡಿಸಲು ಹಾಗೂ ಕಚ್ಚಾ ಮನೆಗಳಿರುವ ಈ ಗ್ರಾಮದಲ್ಲಿ ಶುದ್ಧ ನೀರು ಹಾಗೂ ವಿದ್ಯುತ್ ಸೌಲಭ್ಯ ಇರಲಿಲ್ಲ ಈ ಕಾರಣಕ್ಕಾಗಿ ಹಳ್ಳಿಯ ಜನರು ವಲಸೆ ಹೋಗತೊಡಗಿದರು. ಹಾಗಾಗಿ ಹಳ್ಳಿಯಲ್ಲಿ ವಾಸಿಸುವವರ ಸಂಖ್ಯೆ ದಿನೇದಿನೇ ಕಡಿಮೆಯಾಗುತ್ತಾ ಬಂತು

ಇದನ್ನೆಲ್ಲ ಗಮನಿಸಿದ ಅಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಆರ್ ಷಣ್ಮುಗಂ ಅವರು ಹೇಗಾದರೂ ಮಾಡಿ ತನ್ನ ಗ್ರಾಮವನ್ನು ಸುಂದರ ಹಾಗೂ ಮಾದರಿ ಗ್ರಾಮವನ್ನಾಗಿ ಮಾಡಬೇಕು ಎಂದು ದೃಢನಿರ್ಧಾರವನ್ನು ಮಾಡಿ ಹಲವಾರು ಯೋಜನೆಗಳನ್ನು ಕೈಗೊಂಡರು. ಸಾವಿರದ ಒಂಬೈನೂರ ತೊಂಬತ್ತಾರರಲ್ಲಿ ಪಂಚಾಯಿತಿ ಅಧ್ಯಕ್ಷರಾದ ಷಣ್ಮುಗಂ ಅವರು ಪಂಚಾಯಿತಿಗೆ ಸರ್ಕಾರದಿಂದ ಬರುವ ಹಣವನ್ನು ಸದ್ಬಳಕೆ ಮಾಡಿಕೊಳ್ಳಲು ನಿರ್ಧರಿಸಿ ಮೊದಲು ಹಳ್ಳಿಯಲ್ಲಿ ವಾಸಿಸುವ ಜನರಿಗೆ ಸರ್ಕಾರದ ವಿವಿಧ ಯೋಜನೆಯನ್ನು ಬಳಸಿಕೊಂಡು ಪಕ್ಕಾ ಮನೆಯನ್ನು ನಿರ್ಮಾಣ ಮಾಡಿಕೊಡಲು ಪ್ರಾರಂಭ ಮಾಡಿದರು.

ಸಾವಿರದ ಒಂಬೈನೂರ ತೊಂಬತೊಂಬತ್ತರಲ್ಲಿ ಷಣ್ಮುಗಂ ಅವರು ಕೇಂದ್ರ ಸರ್ಕಾರದ ಯೋಜನೆಯಾದ ರಾಜೀವ್ ಗಾಂಧಿ ನ್ಯಾಷನಲ್ ಡ್ರಿಂಕಿಂಗ್ ವಾಟರ್ ಸ್ಯಾನಿಟೇಶನ್ ಮಿಷನ್ ಯೋಜನೆಯಡಿಯಲ್ಲಿ ಇಡೀ ಗ್ರಾಮಕ್ಕೆ ನೀರನ್ನು ಒದಗಿಸುವ ಯೋಜನೆಯನ್ನು ಮಾಡಿದರು ಇದರಿಂದಾಗಿ ಇಡೀ ಗ್ರಾಮಕ್ಕೆ ದಿನದ ಇಪ್ಪತ್ನಾಲ್ಕು ಗಂಟೆಯೂ ನೀರು ಸರಬರಾಜಾಗುವಹಾಗೆ ಆಯಿತು.

ನಂತರ ಗ್ರಾಮದಲ್ಲಿ ವಿದ್ಯುತ್ ಸೌಲಭ್ಯವನ್ನು ಒದಗಿಸುವ ಸಲುವಾಗಿ ಎಲ್ಲರ ಮನೆಗಳ ಮೇಲೆ ಸೌರ ಘಟಕವನ್ನು ಸ್ಥಾಪಿಸಿ ಎಲ್ಲರ ಮನೆಗೂ ವಿದ್ಯುತ್ ಸಿಗುವ ಹಾಗೆ ಮಾಡಲಾಯಿತು. ವಿದ್ಯುತ್ತನ್ನು ಉತ್ಪಾದನೆ ಮಾಡಿ ಅದನ್ನು ಸರ್ಕಾರಕ್ಕೆ ಮಾರಾಟ ಮಾಡಿದರೆ ಗ್ರಾಮವನ್ನು ಇನ್ನಷ್ಟು ಅಭಿವೃದ್ಧಿಪಡಿಸಬಹುದು ಎಂದು ಯೋಚಿಸಿದ ಷಣ್ಮುಗಂ ಅವರು ವಿಂಡ್ ಮಿಲ್ ಸ್ಥಾಪಿಸುವ ನಿರ್ಧಾರಕ್ಕೆ ಬಂದರು.

ಹೀಗಾಗಿ ಪಂಚಾಯತ್ ನಲ್ಲಿರುವ ನಲವತ್ತು ಲಕ್ಷವನ್ನು ಬಳಸಿಕೊಂಡು ಹಾಗೂ ಬೇರೆ ಬ್ಯಾಂಕುಗಳಲ್ಲಿ ಪಂಚಾಯ್ತಿಯ ಪರವಾಗಿ ಸಾಲವನ್ನು ಪಡೆದುಕೊಂಡು 1.5 ಕೋಟಿ ರೂಪಾಯಿ ವೆಚ್ಚದಲ್ಲಿ ವಿಂಡ್ ಮಿಲ್ ಅನ್ನು ಗ್ರಾಮದಲ್ಲಿ ಅಳವಡಿಸಲಾಯಿತು. ಅಲ್ಲಿ ತಯಾರಾಗುವ ವಿದ್ಯುತ್ತನ್ನ ತಮಿಳುನಾಡು ವಿದ್ಯುತ್ ಮಂಡಳಿಗೆ ಮಾರಾಟ ಮಾಡಲಾಯಿತು ಈ ಗ್ರಾಮದಲ್ಲಿ ಇದುವರೆಗೂ ಸುಮಾರು ಎರಡು ಲಕ್ಷ ಯೂನಿಟ್ ವಿದ್ಯುತ್ ಮಾರಾಟವಾಗಿದೆ.

ಒಂದೇ ವರ್ಷದಲ್ಲಿ ವಿದ್ಯುತ್ ಉತ್ಪಾದನೆ ಮಾಡಿ ಮಾರಾಟ ಮಾಡುವ ಮೂಲಕವೇ ಈ ಗ್ರಾಮವು ಪ್ರತಿವರ್ಷ ಇಪ್ಪತ್ತು ಲಕ್ಷ ರೂಪಾಯಿಗಳಷ್ಟು ಲಾಭವನ್ನು ಗಳಿಸುತ್ತದೆ. ವಿಂಡ್ ಮಿಲ್ ಸ್ಥಾಪನೆ ಮಾಡಲು ತೆಗೆದ ಸಾಲವನ್ನು ವಿದ್ಯುತ್ ಮಾರಾಟ ಮಾಡುವ ಮೂಲಕ ತಿರಿಸಲಾಗಿದೆ. ರಾಜ್ಯದ ಹಸಿರುಮನೆ ಯೋಜನೆಯಡಿಯಲ್ಲಿ ಇದುವರೆಗೂ ಎಂಟು ನೂರಾ ಐವತ್ತು ಮನೆಗಳನ್ನು ನಿರ್ಮಿಸಲಾಗಿದೆ ಇಡೀ ಗ್ರಾಮಕ್ಕೆ ಡಾಂಬರ್ ರೋಡ್ ಕೂಡ ಇದೆ. ಗ್ರಾಮದಲ್ಲಿ ಶಾಲೆ ಕೂಡ ಇದ್ದು ಬೀದಿದೀಪ ದಿಂದ ಹಿಡಿದು ಮನೆಯ ಒಳಗಡೆ ಸೌರ ವಿದ್ಯುತ್ ದೀಪ ಉರಿಯುತ್ತಲೇ ಇರುತ್ತದೆ. ಇಷ್ಟೆಲ್ಲಾ ಸಾಧನೆಯನ್ನು ಮಾಡಿರುವ ಷಣ್ಮುಗಂ ಅವರು ಕಲಿತಿರುವುದು ಕೇವಲ ಹತ್ತನೇ ತರಗತಿ ಆದರೆ ಅವರು ಮಾಡಿರುವಂತಹ ಸಾಧನೆ ಮಾತ್ರ ಅಪರೂಪವಾದದ್ದು.

ಸದ್ಯ ಈ ಗ್ರಾಮವನ್ನು ನೋಡುವುದಕ್ಕೆ ಭಾರತದ ಬೇರೆ ಬೇರೆ ಭಾಗಗಳಿಂದ ಜನರು ಬರುವುದು ಮಾತ್ರವಲ್ಲದೆ ವಿಶ್ವ ಬ್ಯಾಂಕಿನ ಸದಸ್ಯರು ಜನರು ಕೂಡ ಭೇಟಿ ನೀಡುತ್ತಿದ್ದಾರೆ ಇದುವರೆಗೂ ನಲವತ್ಮುರು ದೇಶದ ಜನರು ಭೇಟಿ ನೀಡಿದ್ದಾರೆ. ವ್ಯವಸಾಯವನ್ನು ಮುಖ್ಯ ಕಸುಬನ್ನಾಗಿ ಮಾಕೊಂಡಿರುವ ಈ ಗ್ರಾಮದ ಜನರು ಬಾಳೆಹಣ್ಣು ತೆಂಗಿನಕಾಯಿ ಮತ್ತು ಸಾಸಿವೆ ಕಾಳನ್ನು ಹೆಚ್ಚಾಗಿ ಬೆಳೆಯುತ್ತಾರೆ. ಈ ಗ್ರಾಮವು ದಿನೇದಿನೇ ಅಭಿವೃದ್ಧಿಯಾಗುತ್ತಾ ನೂರಾರು ಗ್ರಾಮಗಳಿಗೆ ಮಾದರಿಯಾಗಿದೆ ಪಂಚಾಯಿತಿಯ ಅಧ್ಯಕ್ಷರೊಬ್ಬರು ಸರ್ಕಾರ ನೀಡುವ ಯೋಜನೆಗಳನ್ನು ಸಮರ್ಪಕವಾಗಿ ಹೇಗೆ ಬಳಸಿಕೊಳ್ಳಬಹುದು ಎನ್ನುವುದಕ್ಕೆ ವದಂಟುರೈ ಗ್ರಾಮ ಜೀವಂತ ಸಾಕ್ಷಿಯಾಗಿದೆ.

ಗ್ರಾಮ ಪಂಚಾಯತ್ ಗಳಿಗೆ ಸರ್ಕಾರದಿಂದ ಸಾಕಷ್ಟು ಸೌಲಭ್ಯಗಳು ಬರುತ್ತದೆ ಆದರೆ ಕೆಲಸದಲ್ಲಿ ಶ್ರದ್ಧೆ ತನ್ನ ಗ್ರಾಮವನ್ನು ಅಭಿವೃದ್ಧಿ ಪಡಿಸಬೇಕು ಎಂಬ ಮನಸ್ಥಿತಿ ಉಳ್ಳವರು ಮಾತ್ರ ಷಣ್ಮುಗಂ ಅವರ ರೀತಿ ಕೆಲಸ ಮಾಡುವುದಕ್ಕೆ ಸಾಧ್ಯ. ನಮ್ಮ ಹಳ್ಳಿಯಲ್ಲಿ ಇರುವ ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರು ಅಧ್ಯಕ್ಷರು ಕೂಡ ಷಣ್ಮುಗಂ ಅವರ ರೀತಿ ಕೆಲಸ ಮಾಡಿ ತಮ್ಮ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡಲಿ ಎಂದು ನಾವು ಆಶಿಸೋಣ. ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *