ಒಂದೊಂದು ತಿಂಗಳಿನಲ್ಲಿ ಒಂದೊಂದು ರಾಶಿಯಲ್ಲಿ ಜನಿಸಿದವರು ಅನುಭವಿಸುವ ಫಲಗಳಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಅಕ್ಟೋಬರ್ ತಿಂಗಳಿನಲ್ಲಿ ಯಾವ ರಾಶಿಯ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ.

ಅಕ್ಟೋಬರ್ ತಿಂಗಳಿನಲ್ಲಿ ನವರಾತ್ರಿ ಮಹಾಲಯ ಅಮಾವಾಸ್ಯೆ ಬರುವುದರಿಂದ 15 ದಿನಗಳಿಗೊಮ್ಮೆ ಗ್ರಹಗಳ ಚಲನೆಯಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳನ್ನು ನೋಡಬಹುದು. ಅಕ್ಟೋಬರ್ ತಿಂಗಳಿನಲ್ಲಿ ಮೇಷ ರಾಶಿಯವರ ಶತ್ರುಗಳ ನಾಶವಾಗುವುದು ಆದರೆ ಹಣ ವಿಪರೀತವಾಗಿ ಖರ್ಚಾಗುತ್ತದೆ. ಮೇಷ ರಾಶಿಯವರು ಹುರುಳಿ ಕಾಳುಗಳನ್ನು ಬಡವರಿಗೆ ದೇವಸ್ಥಾನಗಳಿಗೆ ದಾನ ಕೊಡಬೇಕು ದೇವಸ್ಥಾನಗಳಿಗೆ ದಾನ ಕೊಡುವುದಾದರೆ ಸೋಮವಾರ, ಗುರುವಾರ ಕೊಡಬೇಕು ಇದರಿಂದ ಮೇಷರಾಶಿಯವರ ಸಮಸ್ಯೆ ಪರಿಹಾರವಾಗುತ್ತದೆ. ವೃಷಭರಾಶಿಗೆ ಅಕ್ಟೋಬರ್ ತಿಂಗಳಿನಲ್ಲಿ ಅನುಕೂಲವಾಗಲಿದೆ. ವೃಷಭ ರಾಶಿಯವರಿಗೆ ಕೈಗೆ ಬಂದ ತುತ್ತು ಬಾಯಿಗೆ ಸಿಗಲಾರದ ಸ್ಥಿತಿ ಉಂಟಾಗುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಜೇನುತುಪ್ಪವನ್ನು ಸೇವಿಸಬೇಕು ಶುಗರ್ ಇರುವವರು ಖರ್ಜೂರ, ಒಣದ್ರಾಕ್ಷಿ ಸೇವಿಸಿಬಹುದು.

ವೃಷಭ ರಾಶಿಯವರು ಈಶ್ವರ ದೇವಸ್ಥಾನ, ಅನಾಥಾಶ್ರಮ ಅಥವಾ ವೃದ್ಧಾಶ್ರಮಗಳಿಗೆ ಒಣದ್ರಾಕ್ಷಿಯನ್ನು ದಾನವಾಗಿ ಕೊಡಬೇಕು. ಮಿಥುನ ರಾಶಿಯವರಿಗೆ ಅಕ್ಟೋಬರ್ ತಿಂಗಳಿನಲ್ಲಿ ಕೆಲಸದ ವಿಷಯದಲ್ಲಿ ಸಮಸ್ಯೆ ಉಂಟಾಗುತ್ತದೆ. ಮಿಥುನ ರಾಶಿಯವರು ಉದ್ಯೋಗ ಬದಲಾವಣೆ ಇನ್ನಿತರ ಉದ್ಯೋಗ ವಿಷಯದಲ್ಲಿ ಈ ತಿಂಗಳಿನಲ್ಲಿ ನಿರ್ಧಾರ ತೆಗೆದುಕೊಳ್ಳಬಾರದು. ಮಿಥುನ ರಾಶಿಯವರು ಎಳ್ಳೆಣ್ಣೆ ಪ್ಯಾಕೆಟ್ ಅನ್ನು ಶನಿ ದೇವಸ್ಥಾನಕ್ಕೆ ದಾನ ಕೊಡಬೇಕು.

ಕರ್ಕಾಟಕ ರಾಶಿಯವರಿಗೆ ಅಕ್ಟೋಬರ್ ತಿಂಗಳಿನಲ್ಲಿ ಅನುಕೂಲಕರವಾಗಲಿದೆ. ಈ ರಾಶಿಯವರು ಲಕ್ಷ್ಮಿ ವೆಂಕಟೇಶ, ಲಕ್ಷ್ಮಿ ನರಸಿಂಹ ದೇವಾಲಯಗಳಿಗೆ ಕರ್ಕಾಟಕ ರಾಶಿಯ ದಂಪತಿಗಳು ಮಲ್ಲಿಗೆ ಹೂವಿನ ಹಾರವನ್ನು ಕೊಡುವುದರಿಂದ ಒಳ್ಳೆಯದಾಗುತ್ತದೆ. ಸಿಂಹ ರಾಶಿಯವರಿಗೆ ಅಕ್ಟೋಬರ್ ತಿಂಗಳಿನಲ್ಲಿ ಅನುಕೂಲವಿದೆ ಅಚಾನಕ್ಕಾಗಿ ಒಳ್ಳೆಯದು ನಡೆಯುತ್ತದೆ. ಸಿಂಹರಾಶಿಯವರು ರವಿವಾರದಂದು ದಾಳಿಂಬೆ ಹಣ್ಣು ಕೊಡುವುದರಿಂದ ಸಮಸ್ಯೆ ದೂರವಾಗುತ್ತದೆ.

ಕನ್ಯಾ ರಾಶಿಯವರಿಗೆ ಸಂತಾನ ಸಮಸ್ಯೆಗೆ ಸಂಬಂಧಿಸಿ ಯೋಚನೆ ಮಾಡುತ್ತಿದ್ದರೆ ಅಕ್ಟೋಬರ್ ತಿಂಗಳಿನಲ್ಲಿ ಯೋಚನೆ ಕೈಗೂಡಲಿದೆ. ಕನ್ಯಾ ರಾಶಿಯವರು ದೇವಸ್ಥಾನಗಳಲ್ಲಿ ಕಂಡುಬರುವ ಅರಳಿಮರದ ಹತ್ತಿರ ಬೆಳಗ್ಗೆ 5 ಗಂಟೆಯಿಂದ 6 ಗಂಟೆಯ ಒಳಗೆ ಮಣ್ಣಿನ ದೀಪ ಹಚ್ಚಿ ಪ್ರದಕ್ಷಿಣೆ ಹಾಕುವುದರಿಂದ ಕನ್ಯಾರಾಶಿಯವರಿಗೆ ಒಳ್ಳೆಯದಾಗುತ್ತದೆ.

ತುಲಾ ರಾಶಿಯವರು ವಾಹನ ಚಲಾಯಿಸುವಾಗ ಜಾಗರೂಕತೆಯಿಂದ ಇರಬೇಕು. ತುಲಾ ರಾಶಿಯವರು ಈಶ್ವರ ದೇವಸ್ಥಾನಕ್ಕೆ ಸಾಸಿವೆ ಎಣ್ಣೆಯನ್ನು ದಾನ ಕೊಡುವುದರಿಂದ ಒಳ್ಳೆಯದಾಗುತ್ತದೆ. ವೃಶ್ಚಿಕ ರಾಶಿಯವರಿಗೆ ಅಕ್ಟೋಬರ್ ತಿಂಗಳಿನಲ್ಲಿ ಕೆಲಸ ಸಂಪೂರ್ಣಗೊಳ್ಳುವ ಕೊನೆಯ ಹಂತದಲ್ಲಿ ಸಮಸ್ಯೆಗಳು ಉಂಟಾಗುತ್ತದೆ. ವೃಶ್ಚಿಕ ರಾಶಿಯವರು ಶುಕ್ರವಾರ ಸಂಜೆ ಹಸುವಿಗೆ ಆಲೂಗಡ್ಡೆ ಅಥವಾ ಅನ್ನ ಬೆಲ್ಲ ತಿನ್ನಿಸುವುದರಿಂದ ಸಮಸ್ಯೆ ಪರಿಹಾರವಾಗುತ್ತದೆ.

ಧನುರಾಶಿಯವರಿಗೆ ಅಕ್ಟೋಬರ್ ತಿಂಗಳಿನಲ್ಲಿ ಅನುಕೂಲವಿದೆ ಸಣ್ಣಪುಟ್ಟ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಮಹಾಲಕ್ಷ್ಮೀ ದೇವಸ್ಥಾನಕ್ಕೆ ಅವರೇಕಾಳು ದಾನ ಕೊಡುವುದರಿಂದ ಒಳ್ಳೆಯದಾಗುತ್ತದೆ. ಅಕ್ಟೋಬರ್ ತಿಂಗಳಿನಲ್ಲಿ ಮಕರ ರಾಶಿಯವರ ಕೆಲಸ ನಿಧಾನಗತಿಯಲ್ಲಿ ಸಾಗುತ್ತದೆ. ಈ ರಾಶಿಯವರು ಸಾಯಿಬಾಬಾ ಮಂದಿರ, ರಾಘವೇಂದ್ರ ಮಂದಿರಕ್ಕೆ ಕಡ್ಲೆಬೇಳೆ ದಾನ ಕೊಡುವುದರಿಂದ ಒಳ್ಳೆಯದಾಗುತ್ತದೆ.

ಕುಂಭ ರಾಶಿಯವರಿಗೆ ಅಕ್ಟೋಬರ್ ತಿಂಗಳಿನಲ್ಲಿ ಸಣ್ಣಪುಟ್ಟ ಕಿರಿಕಿರಿ ಉಂಟಾಗುತ್ತದೆ ಜೊತೆಗೆ ಮಾನಸಿಕ ನೆಮ್ಮದಿ ಇರುವುದಿಲ್ಲ. ಕಡಲೆಬೇಳೆ ಪಾಯಸವನ್ನು ತಯಾರಿಸಿ ಗುರುವಾರ ದೇವಸ್ಥಾನ, ವೃದ್ಧಾಶ್ರಮ ಅನಾಥಾಶ್ರಮಗಳಿಗೆ ದಾನ ಕೊಡಬೇಕು. ಮೀನ ರಾಶಿಯವರು ಅಕ್ಟೋಬರ್ ತಿಂಗಳಿನಲ್ಲಿ ಮನಸ್ಸಿನ ಮಾತನ್ನು ಕೇಳಬೇಕು ಬುದ್ಧಿಯ ಮಾತನ್ನು ಕೇಳಬಾರದು. ಮೀನ ರಾಶಿಯವರು ಪ್ರತಿದಿನ ಸೂರ್ಯ ನಮಸ್ಕಾರ ಮಾಡುವುದರಿಂದ ಒಳ್ಳೆಯದಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ನಿಮ್ಮ ರಾಶಿ ಭವಿಷ್ಯ ಅಕ್ಟೋಬರ್ ತಿಂಗಳಿನಲ್ಲಿ ಹೇಗಿದೆ ಎಂಬುದನ್ನು ತಿಳಿಯಿರಿ.

Leave a Reply

Your email address will not be published. Required fields are marked *