ನಾವಿಂದು ನಿಮಗೆ ಎರಡು ಸಾವಿರದ ಇಪ್ಪತ್ತೊಂದರ ಅಕ್ಟೋಬರ್ ತಿಂಗಳಿನಲ್ಲಿ ಕುಂಭ ರಾಶಿಯವರ ರಾಶಿ ಫಲ ಹೇಗಿದೆ ಎಂಬುದನ್ನು ತಿಳಿಸಿಕೊಡುತ್ತೇವೆ. ಕುಂಭ ರಾಶಿಯವರ ರಾಶಿ ಫಲ ಯಾವ ರೀತಿಯಾಗಿದೆ ಯಾವೆಲ್ಲ ಶುಭಫಲಗಳು ಕುಂಭರಾಶಿಯವರಿಗೆ ಮತ್ತು ಯಾವ ವಿಷಯವಾಗಿ ನೀವು ಎಚ್ಚರಿಕೆಯನ್ನು ಹೊಂದಿರಬೇಕು ಜೊತೆಗೆ ಗ್ರಹಗತಿಗಳ ಸ್ಥಿತಿಗತಿಗಳು ಮತ್ತು ಅವುಗಳ ಪರಿವರ್ತನೆಯ ಪ್ರಭಾವ ಹೇಗಿರಲಿದೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವಿಂದು ತಿಳಿದುಕೊಳ್ಳೋಣ.

ಜ್ಯೋತಿಷ್ಯದ ಫಲಗಳು ಗ್ರಹಗತಿಗಳ ಚಲನೆಯ ಮೇಲೆ ಆಧಾರಿತವಾಗಿರುತ್ತದೆ ಹಾಗಾಗಿ ಅಕ್ಟೋಬರ್ ತಿಂಗಳಿನಲ್ಲಿ ಯಾವೆಲ್ಲ ಗ್ರಹಗತಿಗಳು ಪರಿವರ್ತನೆಯನ್ನು ಹೊಂದುತ್ತದೆ ಮತ್ತು ಅವುಗಳ ಪ್ರಭಾವ ಕುಂಭ ರಾಶಿಯ ಮೇಲೆ ಯಾವ ರೀತಿಯಾಗಿರುತ್ತದೆ ಎಂಬುದನ್ನು ನೋಡುವುದಾದರೆ ಅಕ್ಟೋಬರ್ ನಲ್ಲಿ ಮೊಟ್ಟಮೊದಲಿಗೆ ಬುಧನ ರಾಶಿ ಪರಿವರ್ತನೆ ಆಗಿದೆ. ಅಕ್ಟೋಬರ್ ತಿಂಗಳ ಎರಡನೆಯ ತಾರೀಖಿನ ರಾತ್ರಿ ಎರಡು ಗಂಟೆ ನಲವತ್ತು ನಿಮಿಷಕ್ಕೆ ಬುಧನ ಪರಿವರ್ತನೆ ಉಂಟಾಗಿದೆ. ಈ ಅವಧಿಯಲ್ಲಿ ವಕ್ರಿ ಆಗಿರುವ ಬುಧ ದೇವನು ವಕ್ರಿ ಅವಸ್ಥೆಯಲ್ಲಿ ತನ್ನ ಉಚ್ಚ ರಾಶಿಯಾಗಿರುವ ಕನ್ಯಾ ರಾಶಿಗೆ ಪರಿವರ್ತನೆ ಆಗಿದ್ದಾನೆ. ಕನ್ಯಾರಾಶಿಯ ಮೂಲಕ ನಿಮ್ಮ ಅಷ್ಟಮ ಭಾಗದಲ್ಲಿ ಬುಧ ಗೋಚರಿಸಲಿದ್ದಾನೆ ಇಲ್ಲಿ ಬುಧನು ಅಷ್ಟಮದಲ್ಲಿ ವಕ್ರಿ ಅವಸ್ಥೆಯಲ್ಲಿ ಇದ್ದಾಗಿಯು ಬುಧನು ತನ್ನ ಉಚ್ಚ ರಾಶಿಯಲ್ಲಿ ಇರುವುದರಿಂದ ಬುಧನ ಈ ಗೋಚರವು ಮಿಶ್ರಿತ ಫಲಗಳನ್ನು ಕರುಣಿಸಲಿದೆ.

ಕುಂಭರಾಶಿಯವರು ನಿಮ್ಮ ಸಂಗಾತಿಯ ಮನೆಯಿಂದ ದೊಡ್ಡ ಕುಷಿಯ ವಿಚಾರವನ್ನು ಕೇಳಲಿದ್ದೀರಿ ಅವರೊಂದಿಗಿನ ಸಂಬಂಧದಲ್ಲಿಯೂ ಮಧುರತೆಯನ್ನು ಹೊಂದುವುದರಲ್ಲಿದೆ. ಕೆಲವು ಹಳೆಯ ಸಂಬಂಧಗಳು ಹಳೆಯ ನೋವುಗಳು ಈಗಲೂ ನಿಮಗೆ ಬಾಧಿಸುತ್ತಿದ್ದರೆ ಅವುಗಳು ಈಗ ದೂರವಾಗಲಿದೆ. ಆದರೆ ಬುಧನು ಅಷ್ಟಮ ಭಾವದಲ್ಲಿ ಗೋಚರಿಸುತ್ತಿರುವುದು ನರಸಂಬಂಧಿ ಸಮಸ್ಯೆಗಳು ಸೇರಿದಂತೆ ದಂತ ಸಮಸ್ಯೆಗಳನ್ನು ಸಹ ಕರುಣಿಸ ಬಹುದಾಗಿದೆ.

ಅಲ್ಲದೆ ಬಾಯಿಗೆ ಸಂಬಂಧಿಸಿದ ಯಾವುದಾದರೂ ರೋಗ ಅಥವಾ ಪೀಡೆ ಈ ತಿಂಗಳು ನಿಮ್ಮನ್ನು ಭಾಧಿಸಬಹುದು. ಇದರ ಹೊರತಾಗಿ ಬುಧನು ಅಷ್ಟಮ ಭಾವದಲ್ಲಿ ಗೋಚರಿಸುತ್ತಿರುವುದು ನಿಮಗೆ ಅಕೌಂಟೆನ್ಸಿ ಬ್ಯಾಂಕಿಂಗ್ ಮತ್ತು ಚಾರ್ಟೆಡ್ ಅಕೌಂಟೆಂಟ್ ಕ್ಷೇತ್ರದಲ್ಲಿ ನಿಮಗೆ ಲಾಭವನ್ನು ಕರುಣಿಸ ಬಹುದಾಗಿದೆ. ಜೊತೆಗೆ ಯಾರು ಜನ್ಮ ಭೂಮಿಯಿಂದ ದೂರ ಇರುವರು ಅವರಿಗೂ ಈ ಅವಧಿಯಲ್ಲಿ ವಿಶೇಷ ಲಾಭದ ಪ್ರಾಪ್ತಿ ಉಂಟಾಗಬಹುದಾಗಿದೆ.

ನಿಮಗೆ ವಿದೇಶಿ ಯಾತ್ರೆಯ ಯೋಗವು ನಿರ್ಮಾಣವಾಗಬಹುದು ಜೊತೆಗೆ ಆಮದು ಮತ್ತು ರಫ್ತು ಕ್ಷೇತ್ರದಲ್ಲಿಯೂ ನಿಮಗೆ ಲಾಭದ ಪ್ರಾಪ್ತಿಯಾಗಲಿದೆ. ಇಲ್ಲಿ ನಿಮಗೆ ವಿಶೇಷವಾಗಿ ವಿದೇಶದಿಂದ ಧನ ಸಂಪಾದಿಸುವ ಅವಕಾಶ ಮತ್ತು ಗುಪ್ತಧನದ ಪ್ರಾಪ್ತಿಯು ಆಗಬಹುದಾಗಿದೆ. ಜೊತೆಗೆ ನಿಮಗೆ ಲಾಟರಿ ಯಂತಹ ವಿಷಯದಲ್ಲಿಯೂ ಶುಭ ಸೂಚನೆ ದೊರೆಯಬಹುದಾಗಿದೆ ಅಂದರೆ ನಿಮಗೆ ಬುಧನ ರಾಶಿ ಪರಿವರ್ತನೆಯು ಧನ ಸಂಪಾದನೆಯ ವಿಷಯದಲ್ಲಿ ವಿಶೇಷ ಲಾಭವನ್ನು ಹೊತ್ತು ತರಲಿದೆ. ಬುಧದೇವನು ನಿಮ್ಮ ಪಂಚಮ ಭಾವದ ಸ್ವಾಮಿ ಗ್ರಹನಾಗಿದ್ದಾನೆ. ಹಾಗಾಗಿ ನಿಮ್ಮ ಪಂಚಮೆಷನು ಅಷ್ಟಮ ಭಾವದಲ್ಲಿ ಗೋಚರಿಸುತ್ತಿರುವುದು ಸ್ಟಾಕ್ ಮಾರ್ಕೆಟಿಂಗ್ ಕಮೋಡಿಟಿ ಸೆಕ್ಟರ್ ನಲ್ಲಿ ನಿಮಗೆ ಉತ್ತಮ ಲಾಭವನ್ನೂ ನೀಡಲಿದೆ. ಪ್ರೀತಿಯ ಸಂಬಂಧದ ವಿಷಯಕ್ಕೆ ಸಂಬಂಧಿಸಿದ ಸಮಸ್ಯೆಗಳ ಅಂತ್ಯವು ಕೂಡ ಈ ಅವಧಿಯಲ್ಲಿ ಉಂಟಾಗಬಹುದು ಆಗಿದೆ.

ಇಲ್ಲಿ ವಿದ್ಯಾರ್ಥಿ ಜಾತಕ ಫಲದವರಿಗೂ ವಿಶೇಷ ಫಲಗಳ ಪ್ರಾಪ್ತಿ ಉಂಟಾಗಲಿದ್ದು ವಿಶೇಷವಾಗಿ ಯಾರು ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡ ಬಯಸುತ್ತಾರೋ ಅಂತವರಿಗೆ ಜಾತಕ ಫಲ ಬಹಳ ಉತ್ತಮವಾಗಿದ್ದು ಇಲ್ಲಿ ಅವರ ಇಚ್ಛೆ ಪೂರ್ತಿ ಆಗಬಹುದಾಗಿದೆ. ಇದರ ಜೊತೆಗೆ ಇಲ್ಲಿ ನಿಮ್ಮ ಸಂತಾನ ಪಕ್ಷವು ಸದೃಢ ವಾಗಿರಲಿದ್ದು ನಿಮ್ಮ ಸಂತಾನ ಸಂಬಂಧಿ ನಿಮಗಿರುವ ಚಿಂತೆಗಳು ದೂರವಾಗಬಹುದು ಇಲ್ಲಿ ಯಾರು ತಮ್ಮ ಜೀವನದಲ್ಲಿ ಸಂತಾನ ಸುಖದಿಂದ ವಂಚಿತರಾಗಿದ್ದಾರೆ ಅವರಿಗೆ ಬುಧನ ಕೃಪೆಯಿಂದ ಸಂತಾನಪ್ರಾಪ್ತಿಯು ಕೂಡ ಉಂಟಾಗಲಿದೆ. ಆದಾಗ್ಯೂ ಕೂಡ ಕೆಲವು ಜಾತಕದವರ ಸಂತಾನದಲ್ಲಿ ವ್ಯಥೆಯೂ ಕೂಡ ಉಂಟಾಗಬಹುದಾಗಿದ್ದು ಅವರು ಕೊಂಚ ಎಚ್ಚರಿಕೆಯನ್ನು ಹೊಂದಿರಬೇಕು.

ಇದರ ನಂತರ ಅಕ್ಟೋಬರ್ ತಿಂಗಳಿನಲ್ಲಿ ಉಂಟಾಗಲಿರುವ ರಾಶಿ ಪರಿವರ್ತನೆ ಎಂದರೆ ಅದು ಶುಕ್ರದೇವನದ್ದು ಶುಕ್ರನ ರಾಶಿ ಪರಿವರ್ತನೆಯು ಕೂಡ ಇದೇ ದಿನದಂದು ಅಂದರೆ ಅಕ್ಟೋಬರ್ ಎರಡನೇ ತಾರೀಖಿನಂದು ಉಂಟಾಗಲಿದೆ ಇಲ್ಲಿ ಶುಕ್ರ ದೇವನು ತುಲಾ ರಾಶಿ ಇಂದ ನಿರ್ಗಮಿಸುವ ಮೂಲಕ ವೃಶ್ಚಿಕ ರಾಶಿಗೆ ಪರಿವರ್ತನೆ ಹೊಂದಲಿದ್ದಾನೆ. ಈ ಮೂಲಕ ನಿಮ್ಮ ಕರ್ಮ ಕ್ಷೇತ್ರದಲ್ಲಿ ಗೋಚರಿಸಲಿದ್ದಾನೆ ಆದರೆ ವೃಶ್ಚಿಕ ರಾಶಿಯಲ್ಲಿ ಮೊದಲಿನಿಂದಲೇ ಕೇತುಗ್ರಹದ ಉಪಸ್ಥಿತಿಯು ಇರುವುದರಿಂದಾಗಿ ಇಲ್ಲಿ ಕೇತು ಮತ್ತು ಶುಕ್ರ ಗ್ರಹದ ಯೂತಿಯು ಕೂಡ ನೆರವೇರಲಿದೆ.

ಇದರಿಂದಾಗಿ ನಿಮ್ಮ ಖರ್ಚುಗಳಲ್ಲಿ ವೃದ್ಧಿ ಉಂಟಾಗಬಹುದಾಗಿದೆ ಅನಾವಶ್ಯಕ ಖರ್ಚುಗಳು ನಿಮ್ಮ ಕೆಲಸ ಕಾರ್ಯಸಂಬಂಧಿತ, ಪರಿವಾರ ಸಂಬಂಧ ಉಂಟಾಗಲಿದ್ದು ಇದು ನಿಮ್ಮ ಚಿಂತೆಯನ್ನು ಹೆಚ್ಚಿಸಬಹುದಾಗಿದೆ. ಹಾಗಾಗಿ ಖರ್ಚುಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಮಾಡಬೇಕು. ಶುಕ್ರ ದೇವನ ಪರಿವರ್ತನೆಯು ನಿಮ್ಮ ಕರ್ಮವನ್ನು ಸದೃಢ ಮಾಡಲಿದೆ. ಆಭರಣಗಳ ಕಾರ್ಯ ಆಹಾರ-ಪಾನೀಯಗಳ ಕಾರ್ಯ ಸಾರಿಗೆ ವಾಹನಗಳ ಕಾರ್ಯ ಮಾಡೆಲಿಂಗ್ ಕ್ಷೇತ್ರ ಉದ್ಯಮ ಕ್ಷೇತ್ರದಿಂದ ನಿಮಗೆ ಬಹಳ ಲಾಭ ಉಂಟಾಗಲಿದೆ. ಜೊತೆಗೆ ಈ ಸಮಯದಲ್ಲಿ ಹೊಸ ವ್ಯಾಪಾರದ ಪ್ರಾರಂಭ ಮಾಡುವುದಕ್ಕೆ ಸಮಯ ಉತ್ತಮವಾಗಿದೆ ಇಲ್ಲಿ ನೀವು ನಿರ್ಭಯವಾಗಿ ಮುಂದುವರೆಯ ಬಹುದಾಗಿದೆ.

ಅಲ್ಲದೆ ಇಲ್ಲಿ ನೌಕರಿ ಮಾಡುವ ಜಾತಕದವರು ತಮ್ಮ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಲು ಇಲ್ಲಿ ಸಾಧ್ಯವಾಗಲಿದೆ. ಆದಾಗ್ಯೂ ಇಲ್ಲಿ ತಪ್ಪು ಜನರ ಸಂಗ ದುಷ್ಚಟಗಳು ನಿಮ್ಮನ್ನು ಆಕರ್ಷಿಸಬಹುದಾಗಿದೆ ನೀವು ವಿಶೇಷ ಎಚ್ಚರಿಕೆಯನ್ನು ಹೊಂದಿರಬೇಕು. ಕಾರಣ ಶುಕ್ರ ಮತ್ತು ಕೇತುವಿನ ಯುತಿಯು ನಿಮಗೆ ಈ ಎಲ್ಲ ಕಾರ್ಯಗಳಲ್ಲಿ ಪ್ರೇರೇಪಿಸಲಿದ್ದು ಈ ಸಂಬಂಧ ಎಚ್ಚರಿಕೆ ಅಗತ್ಯವಾಗಿದೆ. ಅಲ್ಲದೆ ನಿಮಗೆ ಇಲ್ಲಿ ನಿಮ್ಮ ಜನ್ಮ ಭೂಮಿಯಿಂದ ಲಾಭ ಪ್ರಾಪ್ತಿಯಾಗಲಿದೆ ಮಾತಾಪಿತೃ ವಿನ ಸುಖದ ಪ್ರಾಪ್ತಿಯು ಉಂಟಾಗಲಿದೆ ವಿಶೇಷವಾಗಿ ನಿಮ್ಮ ಕರ್ಮ ಕ್ಷೇತ್ರ ಮತ್ತು ಪರಿವಾರ ಎರಡು ಕಡೆಗಳಲ್ಲಿ ವಿಶೇಷವಾಗಿ ಸ್ತ್ರೀಯರೊಂದಿಗೆ ಉತ್ತಮ ಬಾಂಧವ್ಯ ಉಂಟಾಗಲಿದೆ ಹಾಗೆ ನಿಮಗೆ ಇಲ್ಲಿ ಭೂಮಿ ಮತ್ತು ವಾಹನದ ಸುಖ ಕೂಡ ಪ್ರಾಪ್ತಿಯಾಗಬಹುದು ಆಗಿದೆ.

ಶುಕ್ರ ದೇವನ ನಂತರ ರಾಶಿ ಪರಿವರ್ತನೆ ಸೂರ್ಯದೇವನದಾಗಿರಲಿದೆ. ಸೂರ್ಯದೇವನು ಅಕ್ಟೋಬರ್ ತಿಂಗಳ ಹದಿನೇಳನೇ ತಾರಿಕಿನಂದು ನಿಮ್ಮ ಅಷ್ಟಮ ಭಾವದಿಂದ ಹೊರಬರಲಿದ್ದು ಇಲ್ಲಿಂದ ನಿಮ್ಮ ಸಮಸ್ಯೆಗಳ ಅಂತ್ಯವು ಕೂಡ ಉಂಟಾಗಲಿದೆ ಆದಾಗ್ಯೂ ಇಲ್ಲಿ ಸೂರ್ಯದೇವನು ತನ್ನ ನೀಚರಾಶಿ ತುಲಾರಾಶಿಗೆ ಪ್ರವೇಶ ಮಾಡಲಿದ್ದು ಇದರಿಂದ ಅನೇಕ ರಾಶಿಗಳಿಗೆ ಸಮಸ್ಯೆಗಳನ್ನು ಕರುಣಿಸಬಹುದಾಗಿದೆ.

ಕುಂಭ ರಾಶಿಯವರಿಗೆ ಕೆಲವರಿಗೆ ಸರ್ಕಾರಿ ಕೆಲಸ ದಿಂದ ಲಾಭ ಉಂಟಾಗಬಹುದಾಗಿದೆ ಈಗಾಗಲೇ ಸಂಪಾದನೆಯನ್ನೂ ಮಾಡುತ್ತಿರುವವರಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಸಂಪಾದನೆ ಮಾಡುವ ಅವಕಾಶ ಸಿಗುತ್ತದೆ ಸೂರ್ಯದೇವನ ರಾಶಿ ಬದಲಾವಣೆಯು ನಿಮಗೆ ನಿಮ್ಮ ಹಿರಿಯ ಸಹೋದರ ಅಥವಾ ಸಹೋದರಿಯ ಇಂದ ಲಾಭವನ್ನು ತಂದು ಕೊಡಲಿದೆ. ಇಲ್ಲಿ ಸೂರ್ಯದೇವನ ರಾಶಿ ಬದಲಾವಣೆಯ ಜೊತೆಗೆ ಸರ್ಕಾರಿ ನೌಕರಿಯ ಯೋಗಗಳು ಪ್ರಬಲವಾಗಿ ರಲಿವೇ ಆದರೆ ಇಲ್ಲಿ ಕೆಲ ಜಾತಕದವರು ತಪ್ಪು ರೀತಿಯಲ್ಲಿ ನೌಕರಿಯನ್ನು ಪಡೆದುಕೊಳ್ಳಬಹುದಾಗಿದ್ದು ಒಟ್ಟಾರೆ ನಿಮಗೆ ನೌಕರಿಯ ಪ್ರಾಪ್ತಿ ಉಂಟಾಗಬಹುದು.

ಆದಾಗ್ಯೂ ಅಕ್ಟೋಬರ್ ಹದಿನೇಳನೇ ತಾರೀಖಿನವರೆಗೂ ನಿಮ್ಮ ಆರೋಗ್ಯದ ಬಗ್ಗೆ ಒಂದಿಷ್ಟು ಎಚ್ಚರಿಕೆಯಿಂದ ಹೊಂದಿರಬೇಕು ಹಾಗೆ ತಂದೆಯೊಂದಿಗೆ ವಾದವಿವಾದವನ್ನು ಮಾಡುವುದರಿಂದ ದೂರವಿರಬೇಕು. ಅಲ್ಲದೆ ಇಲ್ಲಿ ಅಕ್ಟೋಬರ್ ಹದಿನೇಳನೇ ತಾರೀಕಿನವರೆಗೆ ನಿಮಗೆ ಸರ್ಕಾರಿ ಕೆಲಸಗಳಲ್ಲಿ ವಿಘ್ನಗಳು ಅಡೆತಡೆಗಳು ಭಾದಿಸಬಹುದಾಗಿದೆ. ಅದೇ ಅಕ್ಟೋಬರ್ ಹದಿನೇಳನೇ ತಾರೀಖಿನ ನಂತರ ಈ ಎಲ್ಲ ಕೆಲಸಗಳು ಸರಾಗವಾಗಿ ನಡೆದುಕೊಂಡು ಹೋಗಬಹುದಾಗಿದೆ. ಸೂರ್ಯದೇವನ ನಂತರ ಮಂಗಳನ ರಾಶಿ ಪರಿವರ್ತನೆಯಾಗುತ್ತದೆ ಮಂಗಳನ ರಾಶಿ ಪರಿವರ್ತನೆ ಅಕ್ಟೋಬರ್ ಇಪ್ಪತ್ತೆರಡನೇ ತಾರೀಖಿನಂದು ಉಂಟಾಗಲಿದೆ. ಮಂಗಳನ ರಾಶಿ ಪರಿವರ್ತನೆಯ ಕೂಡ ನಿಮ್ಮ ಪಾಲಿಗೆ ಅತ್ಯಂತ ಮಹತ್ವಪೂರ್ಣವಾಗಿದೆ.

ಇಲ್ಲಿಯವರೆಗೂ ನಿಮ್ಮ ಅಷ್ಟಮ ಭಾವದಲ್ಲಿ ಸ್ಥಿತನಾಗಿದ್ದ ಮಂಗಳನು ನಿಮಗೆ ಅನಾರೋಗ್ಯವನ್ನು ಕರುಣಿಸುತ್ತಿದ್ದನು. ಜೊತೆಗೆ ಸಿಹಿತಿನಿಸು ವ್ಯಾಪಾರಿಗಳಿಗೆ ನಷ್ಟದ ಸ್ಥಿತಿಯನ್ನು ಉಂಟುಮಾಡಿದನು ಈ ಸ್ಥಿತಿಯು ಅಕ್ಟೋಬರ್ ಇಪ್ಪತ್ತೆರಡನೇ ತಾರೀಕಿನವರೆಗೆ ಮುಂದುವರಿಯಲಿದ್ದು ಅದರ ನಂತರ ಪರಿಸ್ಥಿತಿಯು ಬಹುವಾಗಿ ಸುಧಾರಿತ ವಾಗುತ್ತದೆ. ಮಂಗಳನು ನಿಮ್ಮ ಅಷ್ಟಮ ಭಾವದಿಂದ ಹೊರಬರುತ್ತಲೆ ನಿಮಗೆ ಅನೇಕ ಪ್ರಕಾರದ ಉರ್ಜೆಯನ್ನು ಪ್ರದಾನ ಮಾಡಲಿದೆ.

ಜೊತೆಗೆ ಸೂರ್ಯ ಮತ್ತು ಮಂಗಳನ ಪರಾಕ್ರಮ ಯೋಗವು ನಿಮ್ಮ ಭಾಗ್ಯ ಸ್ಥಾನದಲ್ಲಿ ಉಂಟಾಗುತ್ತಿದ್ದು ಇದರಿಂದ ನಿಮಗೆ ನಿಮ್ಮ ಭಾಗ್ಯದಲ್ಲಿ ವೃದ್ಧಿಯನ್ನು ಉಂಟು ಮಾಡಲಿದೆ. ಇಲ್ಲಿ ನೀವು ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸಲಿದ್ದು ಜೊತೆಗೆ ಸಹೋದರರೊಂದಿಗೆ ಉತ್ತಮ ಸಂಬಂಧ ನಿರ್ಮಾಣವಾಗಲಿದೆ ಜೊತೆಗೆ ನಿಮ್ಮ ಸ್ನೇಹಿತರ ಸಹಕಾರದ ಪ್ರಾಪ್ತಿಯು ಉಂಟಾಗಲಿದೆ. ಹಾಗೆ ನಿಮ್ಮೊಂದಿಗೆ ಹೊಸ ಸಂಬಂಧಗಳು ಬೆಸೆದುಕೊಳ್ಳಲಿವೆ.

ಜೊತೆಗೆ ನಿಮ್ಮ ಕ್ರೋಧದಲ್ಲಿ ವೃದ್ಧಿಯಾಗಬಹುದು ಅದು ನಿಮ್ಮ ಶತ್ರುಗಳಿಗ ಮೇಲೆ ಸಾಕಷ್ಟು ಪರಿಣಾಮವನ್ನು ಉಂಟುಮಾಡಬಹುದು. ಇಲ್ಲಿ ನಿಮ್ಮ ಕರ್ಮ ಕೂಡ ಸದೃಢವಾಗಿದೆ ಇಲ್ಲಿ ನಿಮ್ಮ ಸ್ವಾಮಿ ಗ್ರಹನು ಅಷ್ಟಮ ಭಾವದಲ್ಲಿ ಸ್ಥಿತನಾಗಿದ್ದು ಅಕ್ಟೋಬರ್ ಇಪ್ಪತ್ತೆರಡನೇ ತಾರೀಖಿನವರೆಗೆ ಕೆಲಸಕಾರ್ಯಗಳಲ್ಲಿ ಮಿಶ್ರಿತ ಫಲಗಳನ್ನು ಕರುಣಿಸಬಹುದಾಗಿದೆ. ಇಪ್ಪತ್ತೆರಡನೇ ತಾರೀಖಿನ ನಂತರ ನಿಮ್ಮ ಕರ್ಮವು ಭಾಗ್ಯ ದೊಂದಿಗೆ ಬೆಸೆದುಕೊಳ್ಳುವುದರಿಂದ ಇಲ್ಲಿ ಒಳ್ಳೆಯ ಫಲಗಳು ನಿಮ್ಮದಾಗಲಿವೆ. ತಾಮ್ರ ಮತ್ತು ಸಿಹಿತಿನಿಸುಗಳ ವ್ಯಾಪಾರ ಮಾಡುವವರಿಗೆ ಲಾಭ ಉಂಟಾಗಲಿದೆ.

ಅಲ್ಲದೆ ಇಲ್ಲಿ ಜಮೀನಿನ ಖರೀದಿ ಮತ್ತು ಮಾರಾಟ ನಿಮಗೆ ಲಾಭವನ್ನು ತಂದು ಕೊಡಲಿದೆ. ಅಕ್ಟೋಬರ್ ಇಪ್ಪತ್ತೆರಡನೇ ತಾರೀಖಿನ ನಂತರ ನಿಮ್ಮ ಕಿರಿಯ ಸಹೋದರ ಅಥವಾ ಸಹೋದರಿಯರ ಉನ್ನತಿಯು ಕೂಡ ನಿಶ್ಚಿತ ರೂಪದಲ್ಲಿ ಉಂಟಾಗಲಿದೆ. ಅವರ ಸಂಬಂಧ ವಿಶೇಷ ಚಿಂತೆಯೂ ನಿಮ್ಮನ್ನ ಬಾಧಿಸುತ್ತಿದ್ದರೆ ಅಕ್ಟೋಬರ್ ಇಪ್ಪತ್ತೆರಡನೇ ತಾರೀಖಿನ ನಂತರ ಅವರಿಗೆ ಸಂಬಂಧಪಟ್ಟ ಖುಷಿಯ ವಿಚಾರ ನಿಮಗೆ ಸಂತೋಷವನ್ನುಂಟು ಮಾಡುತ್ತದೆ. ಮಂಗಳನ ನಂತರ ಶುಕ್ರ ದೇವನು ತನ್ನ ರಾಶಿ ಪರಿವರ್ತನೆ ಮಾಡಲಿದ್ದಾನೆ ಅಕ್ಟೋಬರ್ ತಿಂಗಳಿನಲ್ಲಿ ಶುಕ್ರ ದೇವನು ಎರಡು ಸಾರಿ ತನ್ನ ರಾಶಿ ಪರಿವರ್ತನೆಯನ್ನು ಮಾಡಲಿದ್ದಾನೆ.

ಅಕ್ಟೋಬರ್ ಮುವಾತ್ತನೇ ತಾರೀಖಿನ ದಿನದಂದು ಶುಕ್ರ ದೇವ ಧನುರಾಶಿಗೆ ಪರಿವರ್ತನೆ ಹೊಂದುವ ಮೂಲಕ ನಿಮ್ಮ ಲಾಭ ಸ್ಥಾನದಲ್ಲಿ ಗೋಚರಿಸಲಿದ್ದಾನೆ. ಇಲ್ಲಿಂದ ನಿಮ್ಮ ಸುಖದಲ್ಲಿ ಮತ್ತಷ್ಟು ವೃದ್ಧಿ ಕಂಡುಬರಲಿದೆ. ರಾಜಕೀಯ ಕ್ಷೇತ್ರದಲ್ಲಿಯೂ ಉತ್ತಮ ಸಮಯ ನಿಮ್ಮದಾಗಿರಲಿದ್ದು ಇಲ್ಲಿ ನಿಮಗೆ ಮಾನ ಸನ್ಮಾನವನ್ನು ಸಂಪಾದಿಸಿಕೊಳ್ಳುವ ಅವಕಾಶ ಲಭಿಸಲಿದೆ. ಹಾಗೆ ಈ ಸಮಯ ನಿಮಗೆ ನಿಮ್ಮ ಜೀವನ ಸಂಗಾತಿಯ ಉನ್ನತಿಯು ಕೂಡ ನಿಮ್ಮ ಸಂತಸಕ್ಕೆ ಕಾರಣವಾಗಲಿದೆ. ಆದರೆ ಒಂದು ವಿಷಯದ ಕುರಿತು ನೀವು ಹೆಚ್ಚು ಜಾಗೃತಿಯನ್ನು ಹೊಂದಿರಬೇಕು ಅಕ್ಟೋಬರ್ ತಿಂಗಳಿನಲ್ಲಿ ಸೂರ್ಯದೇವನ ರಾಶಿ ಪರಿವರ್ತನೆಯು ನೀಚ ರಾಶಿಯಲ್ಲಿ ಉಂಟಾಗಲಿದೆ ಸೂರ್ಯದೇವನು ನಿಮ್ಮ ಸಪ್ತಮ ಭಾವದ ಸ್ವಾಮಿ ಗ್ರಹನಾಗಿದ್ದು ಇಲ್ಲಿ ನಿಮ್ಮ ಜೀವನ ಸಂಗಾತಿಗೆ ಸಂಬಂಧಿತ ಸಮಸ್ಯೆಗಳ ಜೊತೆಗೆ ನಿಮ್ಮ ಅವೈದ್ಯ ಸಂಬಂಧಗಳು ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದಾಗಿದೆ. ಇದರಿಂದ ನಿಮ್ಮ ಮಾನವ ಪ್ರತಿಷ್ಠೆಯ ಮೇಲೆ ಗುರುತರ ಆರೋಪ ಕೇಳಿ ಬರಬಹುದಾಗಿದೆ.

ನೀವು ಮಾಡಿಕೊಳ್ಳಬಹುದಾದ ಪರಿಹಾರೋಪಾಯಗಳ ಬಗ್ಗೆ ನೋಡುವುದಾದರೆ ಅಕ್ಟೋಬರ್ ಹದಿನೈದನೇ ತಾರೀಖಿನವರೆಗೆ ಸೂರ್ಯದೇವನಿಗೆ ತಾಮ್ರದ ಲೋಟದಲ್ಲಿ ಕೆಂಪು ಪುಷ್ಪಗಳನ್ನು ಹಾಕಿ ಸೂರ್ಯದೇವನಿಗೆ ಜಲವನ್ನು ಸಮರ್ಪಣೆ ಮಾಡಬೇಕು. ಜೊತೆಗೆ ಅಕ್ಟೋಬರ್ ಇಪ್ಪತ್ತೆರಡನೇ ತಾರೀಖಿನವರೆಗೂ ಮಂಗಳನಿಗಾಗಿ ಮಂಗಳವಾರದ ದಿನ ಒಂಬತ್ತು ವರ್ಷಕ್ಕಿಂತ ಚಿಕ್ಕಮಕ್ಕಳಿಗೆ ಸಿಹಿತಿಂಡಿಯನ್ನು ಹಂಚಬೇಕು. ಜೊತೆಗೆ ಮಂಗಳವಾರದ ದಿನದಂದು ತಪ್ಪದೇ ಹನುಮಾನ ಚಾಲೀಸ್ ನ್ನು ಪಠಣೆ ಮಾಡಬೇಕು.

ಪ್ರತೀ ಶನಿವಾರದಂದು ಅಥವಾ ಪ್ರತಿದಿನ ಆಲದ ಮರದ ಬುಡದಲ್ಲಿ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸುವುದು ಒಳ್ಳೆಯದು ಸಾಧ್ಯವಾದರೆ ಶನಿವಾರದ ದಿನ ಸಾಸಿವೆ ಎಣ್ಣೆಯ ಛಾಯಾ ಪಾತ್ರೆಯನ್ನು ದಾನವಾಗಿ ನೀಡುವುದು ಕೂಡ ಉತ್ತಮವಾಗಿರಲಿದೆ. ನೋಡಿದಿರಲ್ಲ ಸ್ನೇಹಿತರೆ ಈ ರೀತಿಯಾಗಿ ಅಕ್ಟೋಬರ್ ತಿಂಗಳಿನಲ್ಲಿ ಕುಂಭ ರಾಶಿಯವರಿಗೆ ಮಿಶ್ರಿತ ಫಲಗಳು ಇವೆ. ನೀವು ಕುಂಭ ರಾಶಿಯವರಾಗಿದ್ದರೆ ನಿಮಗೆ ಒಳ್ಳೆಯ ಮತ್ತು ಕೆಟ್ಟ ಪರಿಣಾಮಗಳು ನಿಮ್ಮ ರಾಶಿಯಲ್ಲಿ ಇರುವುದರಿಂದ ನಾವು ಮೇಲೆ ಸೂಚಿಸಿರುವ ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ನಿಮಗೆ ಕಷ್ಟಗಳು ಪರಿಹಾರವಾಗುತ್ತವೆ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *