ಮೂಗಿನ ಹತ್ತಾರು ಸಮಸ್ಯೆಗೆ ರಾಮಬಾಣ ಈ ಮನೆಮದ್ದು

0 1

ನಮ್ಮ ದೇಹದ ಪ್ರತಿಯೊಂದು ಅಂಗವು ಮುಖ್ಯವಾಗಿದ್ದು ಯಾವುದೆ ಒಂದು ಅಂಗ ನ್ಯೂನ್ಯತೆಯನ್ನು ಅಥವಾ ಸಮಸ್ಯೆಯನ್ನು ಹೊಂದಿದ್ದರೆ ನಮ್ಮ ಇಡಿ ದೇಹದ ಮೇಲೆ ಪರಿಣಾಮ ಬೀರುತ್ತದೆ. ನೇಸಲ್ ಪಾಲಿಪ್ ಸಮಸ್ಯೆಯು ಕಿರಿಕಿರಿಯನ್ನುಂಟು ಮಾಡುತ್ತದೆ. ಹಾಗಾದರೆ ನೇಸಲ್ ಪಾಲಿಪ್ ಸಮಸ್ಯೆಗೆ ಕಾರಣಗಳೇನು ಹಾಗೂ ಈ ಸಮಸ್ಯೆಗೆ ಪರಿಹಾರವೇನು ಎಂಬುದನ್ನು ಸಂಪೂರ್ಣವಾಗಿ ಈ ಲೇಖನದಲ್ಲಿ ನೋಡೋಣ.

ಬಹಳಷ್ಟು ಜನರು ನೇಸಲ್ ಪಾಲಿಪ್ ಸಮಸ್ಯೆಯನ್ನು ಅನುಭವಿಸುತ್ತಿರುತ್ತಾರೆ. ನೇಸಲ್ ಮ್ಯುಕೋಸ ಒಳಗಡೆ ಇರುವ ಲೋಳೆ ಪದರ ಅಥವಾ ಸೈನಸ್ ಮ್ಯೂಕೋಸ ಮೂಗಿಗೆ ಅಡ್ಡಬರುತ್ತದೆ ಆಗ ಕಿರಿಕಿರಿ ಉಂಟಾಗುತ್ತದೆ. ಮೂಗು ಕಟ್ಟಿದಂತೆ ಆಗುವುದು, ಪದೆ ಪದೆ ಅಲರ್ಜಿ ನೆಗಡಿ ಆಗುವುದು, ಶೀತ ಆಗುವುದು ಇಮ್ಯೂನಿಟಿ ಕಡಿಮೆ ಆಗುತ್ತದೆ. ವಾತ ಮತ್ತು ಕಫ ದೋಷದಿಂದ ಈ ಸಮಸ್ಯೆ ಬರುತ್ತದೆ.

ವಂಶವಾಹಿನಿಯಿಂದಲೂ ಈ ಸಮಸ್ಯೆ ಬರಬಹುದು. ಹಗಲಿನಲ್ಲಿ ಹೆಚ್ಚು ನಿದ್ರೆ ಮಾಡುವುದು, ಹೆಚ್ಚಾಗಿ ಔಟ್ ಸೈಡ್ ಆಹಾರ ಸೇವಿಸುವುದು, ಅತಿಯಾಗಿ ಫ್ರಿಡ್ಜ್ ನಲ್ಲಿ ಇಟ್ಟಿರುವ ಆಹಾರವನ್ನು ಸೇವಿಸುವುದರಿಂದ, ಎಣ್ಣೆಯಲ್ಲಿ ಖರಿದ ಆಹಾರವನ್ನು ಹೆಚ್ಚು ಸೇವಿಸುವುದರಿಂದ, ಪ್ರಾಣಾಯಾಮ, ಧ್ಯಾನದಂತಹ ಕ್ರಿಯೆಗಳನ್ನು ಮಾಡದೆ ಇರುವುದರಿಂದ ದೇಹದಲ್ಲಿ ದೋಷ ಉಂಟಾಗಿ ನೇಸಲ್ ಪಾಲಿಪ್ ಸಮಸ್ಯೆ ಕಂಡುಬರುತ್ತದೆ.

ನೇಸಲ್ ಪಾಲಿಪ್ ಸಮಸ್ಯೆ ನಿವಾರಣೆಯಾಗಬೇಕಾದರೆ ವಾತ, ಕಫ ದೋಷ ನಿವಾರಣೆ ಆಗುವಂತೆ ನೋಡಿಕೊಳ್ಳಬೇಕು. ಕಾಳುಮೆಣಸು, ಶುಂಠಿ, ಹಿಪ್ಲಿ ಪುಡಿ ಮಾಡಿ ಸಮ ಪ್ರಮಾಣದಲ್ಲಿ ಮಿಕ್ಸ್ ಮಾಡಿ ಇದನ್ನು ತ್ರಿಫಲ ಚೂರ್ಣ ಎಂದು ಕರೆಯುತ್ತಾರೆ. ಅರ್ಧ ಚಮಚ ಪುಡಿಯನ್ನು ಜೇನುತುಪ್ಪದೊಂದಿಗೆ ಮಿಶ್ರಣ ಮಾಡಿ ಸೇವಿಸಬೇಕು. ವಾತ, ಕಫದ ದೋಷ ನಿವಾರಣೆಯಾಗಿ ನೇಸಲ್ ಪಾಲಿಪ್ ಸಮಸ್ಯೆ ನಿವಾರಣೆಯಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸುವ ಇನ್ನೊಂದು ಔಷಧವೆಂದರೆ ಅರ್ಧ ಚಮಚ ಅಣಲೆಕಾಯಿ ಪುಡಿ, ಅರ್ಧ ಚಮಚ ಶುಂಠಿ ಪುಡಿ, 1-2 ಚಮಚ ಬೆಲ್ಲ ಇವುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಪ್ರತಿದಿನ ಸೇವಿಸುತ್ತಾ ಬರಬೇಕು. ಹೀಗೆ ಮಾಡುವುದರಿಂದ ನೇಸಲ್ ಪಾಲಿಪ್ ಸಮಸ್ಯೆ ನಿಧಾನವಾಗಿ ನಿವಾರಣೆಯಾಗುತ್ತದೆ.

ಸೂತ್ರ ನೇತಿ ಕ್ರಿಯೆಯನ್ನು ಮಾಡುವುದರಿಂದ ಈ ಸಮಸ್ಯೆ ನಿವಾರಣೆಯಾಗುತ್ತದೆ. ಮೂಗಿನಲ್ಲಿ ದಾರವನ್ನು ಹಾಕಿ ಬಾಯಿಯಿಂದ ತೆಗೆಯುವ ಕ್ರಿಯೆಯನ್ನು ಸೂತ್ರ ನೇತಿ ಎಂದು ಹೇಳುತ್ತಾರೆ, ಈ ಕ್ರಿಯೆಯನ್ನು ಯೋಗ ಗುರುಗಳಿಂದ ಕಲಿತುಕೊಳ್ಳಬೇಕು. ಸೂತ್ರನೇತಿ ಕ್ರಿಯೆಯನ್ನು ವಾರದಲ್ಲಿ ಎರಡು ಬಾರಿ ಪ್ರಾಕ್ಟೀಸ್ ಮಾಡುವುದರಿಂದ ನೇಸಲ್ ಪಾಲಿಪ್ ಸಮಸ್ಯೆ ಶಾಶ್ವತವಾಗಿ ನಿವಾರಣೆಯಾಗುತ್ತದೆ. ಪ್ರತಿದಿನ ಪ್ರಾಣಾಯಾಮ ಮಾಡುವುದರಿಂದಲೂ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆ. ನೇಸಲ್ ಪಾಲಿಪ್ ಸಮಸ್ಯೆ ಪ್ರಾರಂಭಿಕವಾಗಿದ್ದರೆ ಈ ರೀತಿ ವಿಧಾನಗಳನ್ನು ಅನುಸರಿಸುವುದರಿಂದ ಪರಿಹಾರ ಸಿಗುತ್ತದೆ ಆದರೆ ಸಮಸ್ಯೆ ಹೆಚ್ಚಾಗಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.