ನಿದ್ರೆ ಬರದೆ ಇರುವುದು ಒಂದು ಖಾಯಿಲೆಯಾಗಿದ್ದು ನಿದ್ರೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಮಲಗುವಾಗಲೂ ಹೀಗೆಯೆ ಮಲಗಬೇಕು ಎಂಬ ನಿಯಮಗಳಿವೆ. ಮಲಗಲು ಅನೇಕ ಭಂಗಿಗಳಿವೆ ಯಾವ ಭಂಗಿಯಲ್ಲಿ ಮಲಗಿದರೆ ಉಪಯುಕ್ತ, ಯಾವ ಭಂಗಿಯಲ್ಲಿ ಮಲಗಿದರೆ ಒಳ್ಳೆಯದಲ್ಲ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಕೆಲವರು ಚಾಪೆ ಮೇಲೆ ಮಲಗುತ್ತಾರೆ, ಕೆಲವರು ಮಂಚದ ಮೇಲೆ ಮಲಗುತ್ತಾರೆ, ಇನ್ನು ಕೆಲವರು ನೆಲದ ಮೇಲೆ ಮಲಗುತ್ತಾರೆ. ಯಾವುದೆ ಕಾರಣಕ್ಕೂ ಬಹಳ ಮೆತ್ತನೆಯ ಹಾಸಿಗೆ ಮೇಲೆ ಮಲಗಬಾರದು. ಮೆತ್ತನೆ ಹಾಸಿಗೆ ಮೇಲೆ ಮಲಗುವುದರಿಂದ ಸ್ಪೈನಲ್ ಕಾರ್ಡ್ ಹಾಗೂ ಮೂಳೆಗಳಿಗೆ ವಿಶ್ರಾಂತಿ ಸಿಗುವುದಿಲ್ಲ. ಸ್ಪಾಂಜ್ ಬೆಡ್ ನಲ್ಲಿ ಸಮತೋಲನವಾಗಿ ಮಲಗಲು ಸಾಧ್ಯವಿಲ್ಲ, ನಾವು ಸಮತೋಲನವಾಗಿ ಮಲಗಿದಾಗ ನಮ್ಮ ಸ್ಪೈನಲ್ ಕಾರ್ಡ್ ಹಾಗೂ ಮೂಳೆಗಳಿಗೆ ವಿಶ್ರಾಂತಿ ಸಿಗುತ್ತದೆ.

ಇದರಿಂದ ಕುತ್ತಿಗೆ ನೋವು, ಸೊಂಟ ನೋವು, ಕೀಲು ನೋವು ಪ್ರಾರಂಭವಾಗುತ್ತದೆ. ಬರಿ ನೆಲದ ಮೇಲೆ ಮಲಗಬಾರದು ಭೂಮಿಗೆ ಗುರುತ್ವಾಕರ್ಷಣ ಬಲವಿದ್ದು ಯಾವುದೆ ವಸ್ತುವನ್ನು ಮೇಲಕ್ಕೆತ್ತಿದರೆ ಕೆಳಗೆ ಬೀಳುತ್ತದೆ. ಬರಿ ನೆಲದ ಮೇಲೆ ಮಲಗುವುದರಿಂದ ದೇಹದ ಶಕ್ತಿಯನ್ನು ನೆಲ ಎಳೆಯುತ್ತದೆ.

ಚಾಪೆ, ದರ್ಬೆಯ ಹಾಸು, ಹುಲ್ಲು, ಜಮಖಾನ, ಥಡಿಯ ಮೇಲೆ ಮಲಗಬೇಕು. ತಲೆದಿಂಬನ್ನು ಬಳಸಬಹುದು ಆದರೆ ನಿಮ್ಮ ಕಿವಿ ಮತ್ತು ಶೋಲ್ಡರ್ ಗೂ ಎಷ್ಟು ಅಗಲವಿದೆ ಅಷ್ಟು ಅಗಲದ ತಲೆದಿಂಬು ಬಳಸಬಹುದು. ಹೆಚ್ಚು ಅಗಲದ ತಲೆದಿಂಬನ್ನು ಬಳಸಬಾರದು ಇದರಿಂದ ಆರೋಗ್ಯಕ್ಕೆ ತೊಂದರೆಯಾಗುತ್ತದೆ.

ಒಂದೊಂದು ಸ್ವಭಾವದ ವ್ಯಕ್ತಿಗಳು ಒಂದೊಂದು ಭಂಗಿಯಲ್ಲಿ ಮಲಗುತ್ತಾರೆ. ಸಂಕೋಚ ನಾಚಿಕೆ ಸ್ವಭಾವದವರು ಹೊಟ್ಟೆಯನ್ನು ಕೆಳಗೆ ಹಾಕಿ ಮಲಗುತ್ತಾರೆ. ಹೊಟ್ಟೆ ಮುಂದೆ ಬಂದಿದ್ದು, ಹೆಚ್ಚು ಗೊರಕೆ ಹೊಡೆಯುವ ಉಸಿರಾಟದ ಸಮಸ್ಯೆ ಇರುವವರು ಅಂಗಾತ ಮಲಗುತ್ತಾರೆ. ಸಂಸಾರಿಗಳು ಎಡಭಾಗವನ್ನು ನೆಲದ ಮೇಲೆ ಇರುವಂತೆ ಮಲಗಬೇಕು. ಸನ್ಯಾಸಿಗಳು ಬಲಭಾಗ ನೆಲಕ್ಕೆ ತಾಗುವಂತೆ ಮಲಗಬೇಕು.

ಪಿತ್ತಪ್ರಕೃತಿ ಇರುವವರು, ಹೀಟ್ ಜಾಸ್ತಿ ಇರುವವರು ಬಲಭಾಗವನ್ನು ನೆಲಕ್ಕೆ ತಾಗಿಸಿ ಮಲಗಬೇಕು. ನಮ್ಮ ದೇಹದ ಎಡಭಾಗದಲ್ಲಿ ಚಂದ್ರನಾಡಿ ಇದೆ ಬಲಭಾಗದಲ್ಲಿ ಸೂರ್ಯನಾಡಿ ಇದೆ. ಬಲಭಾಗವನ್ನು ಕೆಳಗೆ ಮಾಡಿ ಮಲಗಿದಾಗ ಎಡಭಾಗದಲ್ಲಿರುವ ಚಂದ್ರನಾಡಿ ಜಾಗೃತವಾಗುತ್ತದೆ. ನೆಗಡಿಯಾದಾಗ ಮೂಗು ಕಟ್ಟುತ್ತದೆ ಅಂತಹ ಸಮಯದಲ್ಲಿ ಕಟ್ಟಿರುವ ಮೂಗು ಮೇಲ್ಭಾಗ ಇರುವಂತೆ ಮಲಗಬೇಕು ಆಗ ಅದು ಆಕ್ಟೀವ್ ಆಗುತ್ತದೆ.

ಬಲಭಾಗ ಕೆಳಗಿರುವಂತೆ ಮಲಗಿದಾಗ ಎಡಭಾಗದಲ್ಲಿರುವ ಚಂದ್ರನಾಡಿ ಆಕ್ಟೀವ್ ಆಗಿ ದೇಹಕ್ಕೆ ತಂಪನ್ನು ಕೊಡುತ್ತದೆ. ಕಫ, ಶೀತ ಪ್ರಕೃತಿ ಇರುವವರು ಎಡಭಾಗ ಕೆಳಗೆ ಇರುವಂತೆ ಮಲಗಿದಾಗ ಬಲಭಾಗದಲ್ಲಿರುವ ಸೂರ್ಯನಾಡಿ ಜಾಗೃತವಾಗಿ ದೇಹಕ್ಕೆ ಉಷ್ಣ ಕೊಡುತ್ತದೆ. ಕೆಲವು ಸಮಸ್ಯೆಗಳಿಗೆ ವೈದ್ಯರನ್ನು ಸಂಪರ್ಕಿಸಿ ಆಸ್ಪತ್ರೆಗೆ ಹೋಗಿ ವಾಸಿ ಮಾಡಿಕೊಳ್ಳುವುದಕ್ಕಿಂತ ಮಲಗುವ ಭಂಗಿಯಲ್ಲಿ ವ್ಯತ್ಯಾಸ ಮಾಡಿಕೊಳ್ಳುವುದರಿಂದ ನಿವಾರಣೆ ಮಾಡಿಕೊಳ್ಳಬಹುದು.

ನಮಗೆ ಗೊತ್ತಿಲ್ಲದ ಹಾಗೆ ನಮ್ಮ ದೇಹ ಶೀತ ಆದಾಗ ಭಂಗಿಯನ್ನು ಬದಲಾಯಿಸುತ್ತದೆ, ಉಷ್ಣಾಂಶ ಹೆಚ್ಚಾದಾಗ ಭಂಗಿಯನ್ನು ಬದಲಾಯಿಸುತ್ತದೆ. ಈ ರೀತಿ ಬೇರೆ ಬೇರೆ ವಿಧಾನಗಳ ಮೂಲಕ ಮಲಗಿದಾಗ ನಿದ್ರೆಯು ಚೆನ್ನಾಗಿ ಬರುತ್ತದೆ. ನಿದ್ರೆಯ ಸಮಸ್ಯೆ ಹೆಚ್ಚಾಗಿ ಕಂಡುಬಂದರೆ ಹತ್ತಿರದ ಆಯುರ್ವೇದ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಈ ಮಾಹಿತಿ ಉಪಯುಕ್ತವಾಗಿದ್ದು ಆರೋಗ್ಯಕ್ಕೆ ನಿದ್ರೆ ಮಾಡುವುದು ಬಹಳ ಮುಖ್ಯವಾಗಿದ್ದು ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *