ಈ ಮುಳ್ಳಿನ ಗಿಡದಲ್ಲಿದೆ ಸರ್ವ ರೋಗ ಮಾಯವಾಗಿಸುವ ಶಕ್ತಿ

0 411

ಸ್ನೇಹಿತರೆ ನಾವಿಂದು ನಿಮಗೆ ಒಂದು ಚಿಕ್ಕದಾದ ಮುಳ್ಳು ಯಾವ ರೀತಿ ನಮ್ಮ ಆರೋಗ್ಯಕ್ಕೆ ಉತ್ತಮವಾದದ್ದು ಅದರಿಂದ ಆರೋಗ್ಯವನ್ನು ಹೇಗೆ ಸುಧಾರಿಸಿಕೊಳ್ಳಬಹುದು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಯಾವ ಮುಳ್ಳು ಔಷಧಿಯ ಗುಣವನ್ನು ಹೊಂದಿದೆ ಅದನ್ನು ಯಾವ ರೀತಿಯಾಗಿ ಬಳಸಿಕೊಳ್ಳಬಹುದು ಎಂಬುದನ್ನು ನೋಡೋಣ. ಜೊತೆಗೆ ಇದರ ಗುಣ ಏನು ಯಾವ ಯಾವ ಸಮಸ್ಯೆಗಳಲ್ಲಿ ಇದನ್ನು ಬಳಕೆ ಮಾಡಿಕೊಳ್ಳಬಹುದು ಎಷ್ಟು ದಿನ ಬಳಸಬಹುದು ಬಳಕೆ ಮಾಡುವಾಗ ಯಾವ ರೀತಿಯಾಗಿ ಬಳಕೆ ಮಾಡಬೇಕ ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

ನಾವೀಗ ನಿಮಗೆ ತಿಳಿಸಿ ಕೊಡುತ್ತಿರುವ ಮುಳ್ಳು ಬಹುತೇಕ ಜನರಿಗೆ ಗೊತ್ತಿರುವಂಥದ್ದು ಅದು ನೆಗ್ಗಿನ ಮುಳ್ಳು. ನೆಗ್ಗಿನ ಮುಳ್ಳು ಎಂದರೆ ಯಾವುದೋ ಮರದ ಮುಳ್ಳಲ್ಲ ಇದು ಹೆಚ್ಚಾಗಿ ಉತ್ತರ ಕರ್ನಾಟಕದ ಭಾಗದಲ್ಲಿ ಗದ್ದೆಯ ಅಂಚುಗಳಲ್ಲಿ ಬೆಳೆದುಕೊಂಡಿರುತ್ತದೆ. ಇದು ಒಂದು ಬಳ್ಳಿಯ ಕಾಯಿ ಇದು ಬಹುತೇಕ ಗ್ರಂಥಿ ಅಂಗಡಿಗಳಲ್ಲಿ ಸಿಗುತ್ತದೆ ಇದಕ್ಕೆ ಆಯುರ್ವೇದದಲ್ಲಿ ಗೋಕ್ಷುರ ಎಂದು ಕರೆಯುತ್ತಾರೆ. ಆ ಹೆಸರಿನಿಂದ ಕರೆಯಲು ಕಾರಣ ಈ ಮುಳ್ಳು ಆಕಳಿನ ಪಾದಕ್ಕೆ ಚುಚ್ಚಿಕೊಂಡು ಬರುತ್ತಿತ್ತು ಗೋಕ್ಷುರವನ್ನು ಹಲವಾರು ಸಮಸ್ಯೆಗಳಿಗೆ ಬಳಸಬಹುದು. ಮನೆಯಲ್ಲಿ ತಮಗೆ ತಾವೇ ಔಷಧಿಯನ್ನು ತಯಾರಿಸಿ ಕೊಳ್ಳುವವರು ಉರಿಮುತ್ರ, ಮೂತ್ರಕ್ಕೆ ಸಂಬಂಧಿಸಿದ ಸಮಸ್ಯೆಯಾದಾಗ ಮೂತ್ರಕೋಶದಲ್ಲಿ ಕಲ್ಲು ಬೆಳೆದಾಗ ಅಂತಹ ಸಂದರ್ಭದಲ್ಲಿ ಇದನ್ನು ಬಳಕೆ ಮಾಡುತ್ತಾರೆ.

ಮೊದಲನೆಯದಾಗಿ ಗೋಕ್ಷುರ ಅಥವಾ ನೆಗ್ಗಿನ ಮುಳ್ಳು ಇದರ ಗುಣ ಏನು ಎಂದರೆ ಇದು ತಂಪಾಗಿರುವಂತದ್ದು ಇದು ಶೀತ ಗುಣವನ್ನು ಹೊಂದಿದೆ. ಶೀತ ಗುಣದಿಂದಲೇ ಹಲವಾರು ರೀತಿಯ ಸಮಸ್ಯೆಗಳನ್ನು ಪರಿಹರಿಸುವಂತಹ ಗುಣವನ್ನು ಹೊಂದಿದೆ. ಇದು ದೇಹವನ್ನು ತೇವವಾಗಿರಿಸುತ್ತದೆ ಯಾರಿಗೆ ಅಶಕ್ತತೆ ಇದೆ ಯಾರ ದೇಹದಲ್ಲಿ ಶುಷ್ಕತೆ ಇದೆ ಅವರಿಗೆ ಇದು ಉತ್ತಮವಾದದ್ದು. ಈ ಗುಣಗಳಿರುವುದರಿಂದ ಇದು ವಾತ ಮತ್ತು ಪಿತ್ತವನ್ನು ನಿಯಂತ್ರಣಕ್ಕೆ ತರುತ್ತದೆ. ಇದರಿಂದಾಗಿ ಸಹಜವಾಗಿ ವಾತ ಮತ್ತು ಪಿತ್ತ ದಿಂದ ಬರುವ ರೋಗಗಳು ಕಡಿಮೆಯಾಗುತ್ತದೆ.

ಇದು ಮೊದಲನೆಯದಾಗಿ ಯಾವ ಯಾವ ಧಾತುಗಳ ಮೇಲೆ ಕೆಲಸ ಮಾಡುತ್ತದೆ ಎಂಬುದನ್ನು ನೋಡುವುದಾದರೆ ಆಯುರ್ವೇದದಲ್ಲಿ ಹೇಳುವ ಸಪ್ತಧಾತುಗಳಾದ ರಸ ರಕ್ತ ಮಾಂಸ ಮೇಧ ಅಸ್ತಿ ಮಜ್ಜ ಶುಕ್ರ ಏಳು ಧಾತುಗಳಲ್ಲಿ ಯಾವ ಧಾತುವಿನ ಮೇಲೆ ವಿಶೇಷವಾಗಿ ಕೆಲಸ ಮಾಡುತ್ತದೆ ಎಂದರೆ ಮಾಂಸ ಧಾತುವಿನ ಮೇಲೆ ಚೆನ್ನಾಗಿ ಕೆಲಸ ಮಾಡುತ್ತದೆ ಮಾಂಸಖಂಡಗಳು ಚೆನ್ನಾಗಿ ಬೆಳೆಯುವುದಕ್ಕೆ ಸಹಾಯಮಾಡುತ್ತದೆ. ಮೇಧೋ ಧಾತುವಿನಲ್ಲಿ ಚೆನ್ನಾಗಿ ಕೆಲಸ ಮಾಡುತ್ತದೆ ಒಳ್ಳೆಯ ತೂಕವನ್ನು ನಿರ್ವಹಣೆ ಮಾಡಿಕೊಳ್ಳುವುದಕ್ಕೆ ಇದು ಸಹಾಯಕವಾಗುತ್ತದೆ.

ಇನ್ನು ಯಾವ ಯಾವ ರೋಗಗಳನ್ನು ನಿಯಂತ್ರಿಸುವುದಕ್ಕೆ ಇದು ಸಹಾಯಕಾರಿ ಎಂದರೆ ವಿಶೇಷವಾಗಿ ಇದು ಮೂತ್ರಾಂಗ ವ್ಯೂಹದ ಮೇಲೆ ಕೆಲಸ ಮಾಡುತ್ತದೆ ಕಿಡ್ನಿಯ ಶಕ್ತಿಯನ್ನು ಹೆಚ್ಚು ಮಾಡುತ್ತದೆ ಮೂತ್ರಕೋಶ ಅಥವಾ ಮೂತ್ರನಾಳದಲ್ಲಿ ಎಲ್ಲೆ ಕಲ್ಲು ಇದ್ದರೂ ಅದನ್ನು ಹೊರಹಾಕುವಂತಹ ಕೆಲಸವನ್ನು ಮಾಡುತ್ತದೆ. ಇದು ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ ಕೆಲವೊಬ್ಬರಿಗೆ ವೈದ್ಯರಿಂದ ಔಷಧಿ ತೆಗೆದುಕೊಂಡಾಗ ಉಷ್ಣ ಆಗುತ್ತದೆ

ಆ ಸಮಯದಲ್ಲಿ ಗೋಕ್ಷುರವನ್ನು ತೆಗೆದುಕೊಳ್ಳುವುದರಿಂದ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ಇದನ್ನ ಸೇವನೆ ಮಾಡುವುದರಿಂದ ಹೃದಯಕ್ಕೆ ತುಂಬಾ ಸಹಾಯವಾಗುತ್ತದೆ ಯಾಕೆಂದರೆ ಇದು ದೇಹದಲ್ಲಿರುವ ಅಧಿಕ ನೀರಿನಾಂಶ ವನ್ನು ಹೊರ ಹಾಕುವುದರಿಂದ ಹೃದಯದ ಮೇಲೆ ಒತ್ತಡ ಕಡಿಮೆಯಾಗುತ್ತದೆ.ಇನ್ನು ಗೋಕ್ಷುರವನ್ನು ಹೇಗೆ ಉಪಯೋಗಿಸಬೇಕು ಮತ್ತು ಯಾರು ಯಾರು ಉಪಯೋಗಿಸಬಾರದು ಎಂಬುದನ್ನು ತಿಳಿದುಕೊಳ್ಳೋಣ.

ತುಂಬಾ ದೊಡ್ಡದಾದ ಸಮಸ್ಯೆ ಎದುರಿಸುತ್ತಿರುವವರು ಅಥವಾ ಡಯಾಲಿಸಸ್ ಪಡೆದುಕೊಳ್ಳುತ್ತಿರುವವರು ವೈದ್ಯರನ್ನು ಸಂಪರ್ಕಿಸಿ ಇದನ್ನು ತೆಗೆದುಕೊಳ್ಳಬಹುದು.ಈ ಗೋಕ್ಷುರವನ್ನು ಹದಿನೈದು ದಿನ ಅಥವಾ ಒಂದು ತಿಂಗಳುಗಳ ಕಾಲ ಬಳಕೆ ಮಾಡಬಹುದು ಇದಕ್ಕಿಂತ ಹೆಚ್ಚಿನ ದಿನ ಬಳಕೆ ಮಾಡುವವರು ವೈದ್ಯರ ಸಂಪರ್ಕವನ್ನು ಮಾಡಿ ಸಲಹೆ ತೆಗೆದುಕೊಳ್ಳುವುದು ಉತ್ತಮ. ನೆಗ್ಗಿನ ಮುಳ್ಳಿನ ಪುಡಿ ಆಯುರ್ವೇದದ ಔಷಧಿ ಅಂಗಡಿಗಳಲ್ಲಿ ಸಿಗುತ್ತದೆ.

ಈ ಪುಡಿಯನ್ನು ಅರ್ಧ ಚಮಚ ಹಾಲು ಅಥವಾ ನೀರಿನಲ್ಲಿ ಹಾಕಿ ತೆಗೆದುಕೊಳ್ಳಬಹುದು ದಿನಕ್ಕೆ ಒಂದು ಬಾರಿ ಅಥವಾ ಎರಡು ಬಾರಿ ಇದನ್ನು ಸೇವಿಸಬಹುದು ಅಥವಾ ಗೋಕ್ಷುರ ಕ್ಷೀರ ಪಾಕ ಮಾಡಿ ಕುಡಿಯಬಹುದು ಅಂದರೆ ಒಂದು ಚಮಚ ಗೋಕ್ಷುರದ ಪುಡಿ ಹಾಕುವುದು ಒಂದು ಲೋಟ ಹಾಲು ಮತ್ತು ಮೂರು ಲೋಟ ನೀರನ್ನು ಬೆರೆಸಿ ಅದನ್ನು ಒಂದು ಲೋಟ ಆಗುವವರೆಗೆ ಸಣ್ಣ ಉರಿಯಲ್ಲಿ ಬತ್ತಿಸಿ ನಂತರ ಅದನ್ನು ಸೋಸಿ ಆ ಹಾಲನ್ನು ಕುಡಿಯುವುದು. ಅಥವಾ ಮುಳ್ಳುಗಳನ್ನು ಕುದಿಸಿ ಕಷಾಯದ ರೀತಿ ಮಾಡಿ ಕುಡಿಯಬಹುದು ಈ ಮುಳ್ಳುಗಳನ್ನು ತೆಗೆದುಕೊಂಡು ಅದನ್ನ ಜಜ್ಜಿ ಒಂದರಿಂದ ಒಂದೂವರೆ ಚಮಚ ಆಗುವಷ್ಟು ತೆಗೆದುಕೊಂಡು ಒಂದು ಪಾತ್ರೆಗೆ ಹಾಕಿ ಅದಕ್ಕೆ ನಾಲ್ಕು ಲೋಟ ನೀರನ್ನು ಹಾಕಿ ಅದು ಒಂದು ಲೋಟ ಆಗುವವರೆಗೆ ಕುದಿಸಿ ಅದನ್ನು ಸೋಸಿ ಕುಡಿಯಬಹುದು.

ಈ ರೀತಿಯಾಗಿ ಗೋಕ್ಷುರ ಅಥವಾ ನೆಗ್ಗಿನ ಮುಳ್ಳು ತುಂಬಾ ಉತ್ತಮವಾದ ಔಷಧೀಯ ಗುಣವನ್ನು ಹೊಂದಿದ್ದು ನೀವು ಕೂಡ ಇದನ್ನು ಬಳಸಬಹುದು ಇದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ. ಜೊತೆಗೆ ನೀವು ಒಂದು ತಿಂಗಳಿಗಿಂತ ಹೆಚ್ಚಿನದಾಗಿ ಇದನ್ನ ಬಳಸುವುದಿದ್ದರೆ ಹತ್ತಿರದ ಆಯುರ್ವೇದ ವೈದ್ಯರನ್ನು ಸಂಪರ್ಕಿಸಿ ಅವರ ಸಲಹೆ ಪಡೆದುಕೊಂಡು ಇದನ್ನು ಉಪಯೋಗಿಸಬಹುದು ಈ ಒಂದು ನೆಗ್ಗಿನ ಮುಳ್ಳಿನ ಪ್ರಯೋಜನವನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರಿಗೆ ಸ್ನೇಹಿತರಿಗೂ ಈ ಮಾಹಿತಿಯನ್ನು ತಿಳಿಸಿರಿ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave A Reply

Your email address will not be published.