ನವರಾತ್ರಿಯ ದಿನದಂದು ದೇವಿಗೆ ಅರ್ಪಿಸುವ 9 ವಿಶೇಷ ಹೂವುಗಳು ಯಾವುವು ತಿಳಿದುಕೊಳ್ಳಿ

0 7

ನವರಾತ್ರಿಯ ದಿನದಂದು 9 ದಿನಗಳ ಕಾಲ ದೇವಿಯ ಒಂಬತ್ತು ಅವತಾರಗಳ ಪೂಜೆಯನ್ನು ಮಾಡುವುದು ನಾವು ಹಲವಾರು ಪ್ರಾಚೀನ ಕಾಲದಿಂದಲೂ ಕೂಡ ಮಾಡಿಕೊಂಡು ಬಂದಿರುವಂತಹ ಸಂಸ್ಕೃತಿ ಹಾಗೂ ಪದ್ಧತಿಯಾಗಿದೆ. ಸದ್ಯಕ್ಕೆ ನವರಾತ್ರಿ ಆಚರಣೆ ಎಲ್ಲಾ ಕಡೆ ನಡೆಯುತ್ತಿದ್ದು 9 ದಿನಗಳ ಕಾಲ ಪ್ರತಿದಿನಕ್ಕೂ ಕೂಡ ದೇವಿಗೆ ಒಂಬತ್ತು ವಿಶೇಷ ಹೂಗಳಿಂದ ಪೂಜೆ ಮಾಡಿದರೆ ಅದು ದುರ್ಗಾಮಾತೆಯನ್ನು ಪ್ರಸನ್ನಗೊಳಿಸಿ ನಾವು ದುರ್ಗಾಮಾತೆಯ ಕೃಪಾಕಟಾಕ್ಷಕ್ಕೆ ಒಳಗಾಗಬಹುದಾಗಿದೆ. ಹಾಗಿದ್ದರೆ ಆ ಹೂವುಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ನವರಾತ್ರಿಯ ಮೊದಲನೇ ದಿನದಂದು ಶೈಲ ಪುತ್ರಿ ದೇವಿಯನ್ನು ಆರಾಧನೆ ಮಾಡುವಾಗ ಕೆಂಪು ಹಾಗೂ ಬಿಳಿ ಬಣ್ಣದ ಹೂವುಗಳನ್ನು ಅರ್ಪಿಸಬೇಕು. ಅದರಲ್ಲೂ ವಿಶೇಷವಾಗಿ ಕೆಂಪು ದಾಸವಾಳ. ಎರಡನೇ ದಿನದಂದು ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸಲಾಗುತ್ತದೆ ಈ ದಿನ ಸೇವಂತಿಗೆ ಹೂವುಗಳನ್ನು ಇಟ್ಟು ಪೂಜಿಸಬೇಕು. ಮೂರನೇ ದಿನದಂದು ಚಂದ್ರಘಂಟ ದೇವಿಯನ್ನು ಪೂಜಿಸುವ ಸಂದರ್ಭದಲ್ಲಿ ಆಕೆಯ ಇಷ್ಟದ ಕಮಲದ ಹೂಗಳನ್ನು ಇಟ್ಟು ಪೂಜೆ ಮಾಡಬೇಕು.

ನಾಲ್ಕನೇ ದಿನದಂದು ಕೂಷ್ಮಾಂಡ ದೇವಿಯನ್ನು ಪೂಜಿಸುವಾಗ ಪರಿಮಳ ಸೂಸುವ ಜಾಜಿ ಮಲ್ಲಿಗೆ ಹಾಗೂ ಸೂಜಿ ಮಲ್ಲಿಗೆಯನ್ನಿಟ್ಟು ಪೂಜೆ ಮಾಡಬೇಕು‌. ಐದನೇ ದಿನ ದುರ್ಗಾಮಾತೆಯ ಮತ್ತೊಂದು ಅವತಾರವಾಗಿರುವ ಸ್ಕಂದಮಾತೆಯನ್ನು ಗುಲಾಬಿ ಹೂಗಳಿಂದ ಪೂಜೆ ಮಾಡಿದರೆ ಆಕೆ ಪ್ರಸನ್ನವಾಗುತ್ತಾಳೆ. 6ನೇ ದಿನ ಖಾತ್ಯಾಯಿನಿದೇವಿಯನ್ನು ಪೂಜೆ ಮಾಡುತ್ತಾರೆ. ಈ ದಿನ ಚೆಂಡು ಹೂವಿನ ಅರ್ಪಣೆಯ ಪೂಜೆ ಸಾಕಷ್ಟು ವಿಶೇಷವಾಗಿರುತ್ತದೆ.

ಏಳನೇ ದಿನದಂದು ಕಾಳಿ ದೇವಿಯನ್ನು ಪೂಜಿಸುವಾಗ ನೀಲಿ ಬಣ್ಣದ ಅದರಲ್ಲೂ ವಿಶೇಷವಾಗಿ ನೀಲಿ ಬಣ್ಣದ ಕಮಲದ ಹೂವುಗಳು ಹಾಗೂ ಶಂಕಪುಷ್ಪವನ್ನು ಅರ್ಪಿಸಿ ಪೂಜಿಸಬೇಕು. ಎಂಟನೇ ದಿನದಂದು ಮಹಾ ಗೌರಿ ದೇವಿಯನ್ನು ಪೂಜಿಸುವ ಸಂದರ್ಭದಲ್ಲಿ ದುಂಡು ಮಲ್ಲಿಗೆಯನ್ನು ಆಕೆಯ ಪಾದದ ಬಳಿ ಇಟ್ಟು ಆಶೀರ್ವಾದ ಪಡೆದುಕೊಳ್ಳಿ. ಒಂಬತ್ತನೇ ದಿನ ಅಂದರೆ ನವರಾತ್ರಿಯ ದಿನದಂದು ಸಿದ್ದಿ ಧಾತ್ರಿ ದೇವಿಯನ್ನು ಪೂಜಿಸಲಾಗುತ್ತದೆ. ಈ ದಿನ ಹೂವುಗಳಲ್ಲಿ ಅತ್ಯಂತ ಸುಗಂಧ ಭರಿತ ಹೂವು ಆಗಿರುವ ಸಂಪಿಗೆಯಿಂದ ಪೂಜಿಸಿದರೆ ನಿಮ್ಮ ಇಷ್ಟಾರ್ಥಗಳೆಲ್ಲವೂ ಈಡೇರುತ್ತದೆ.

ಶ್ರೀಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ

Leave A Reply

Your email address will not be published.