Naming Astrology in Kannada: R ಹೆಸರಿನಿಂದ ಶುರುವಾಗುವ ವ್ಯಕ್ತಿಗಳ ಜೀವನದ ಸತ್ಯವನ್ನು ಈ ಲೇಖನದಲ್ಲಿ ನೋಡಬಹುದು. ಯಾವ ವ್ಯಕ್ತಿಗಳ ಹೆಸರಿನ ಮೊದಲನೇ ಅಕ್ಷರ R ಅಥವಾ ರ ಆಗಿರುತ್ತದೆಯೋ ಅಂತವರು ಹೆಚ್ಚಿನದಾಗಿ ತುಲಾ ರಾಶಿಗೆ ಸೇರಿರುತ್ತಾರೆ. R ಅಕ್ಷರದವರ ಜೀವನಶೈಲಿ ಹಾಗೂ ಅವರ ಗುಣ ಮತ್ತು ಹವ್ಯಾಸದ ಬಗ್ಗೆ ನಾವು ಇಲ್ಲಿ ತಿಳಿದುಕೊಳ್ಳಬಹುದು.

R ಹೆಸರಿನ ಜನರು ನೋಡಲು ಬಹಳ ಸುಂದರವಾಗಿರುತ್ತಾರೆ ಮತ್ತು ಮನೆಗೆ ಹೊಂದಿಕೊಳ್ಳುವಂತವರಾಗಿರುತ್ತಾರೆ. ಇವರಿಗೆ ಏಕಾಂತ ಎಂದರೆ ತುಂಬಾ ಇಷ್ಟ ಆದರೂ ಕೂಡ ಸ್ನೇಹಿತರ ಜೊತೆ ಇದ್ದಾಗ ತುಂಬಾ ಚೆನ್ನಾಗಿ ಹೊಂದಿಕೊಂಡು ಖುಷಿಯಾಗಿರುತ್ತಾರೆ. ಇವರೆ ಇನ್ನೊಂದು ವಿಶೇಷತೆ ಏನೆಂದರೆ ಇವರ ಜೀವನದಲ್ಲಿ ಏನಾದರೂ ಒಂದು ಏರುಪೇರು ನಡೆಯುತ್ತಲೇ ಇರುತ್ತದೆ. ಇವರು ಸ್ವಲ್ಪ ಚಿಂತನೆಯನ್ನು ಮಾಡುತ್ತಾರೆ.

ಸಮಯಕ್ಕೂ ಮುನ್ನವೇ ಎಲ್ಲಾ ಕಾರ್ಯವನ್ನು ಸರಿಯಾಗಿ ಮುಗಿಸಿರುತ್ತಾರೆ. R ಹೆಸರಿನ ಜನರಿಗೆ ಜೀವನದಲ್ಲಿ ಹೇಗೆ ಖುಷಿಯಾಗಿರಬೇಕು ಎಂದು ಗೊತ್ತಿರುತ್ತದೆ ಮತ್ತು ಕಠಿಣವಾದ ಪರಿಸ್ಥಿತಿಗಳಲ್ಲೂ ಕೂಡ ಎಲ್ಲರನ್ನು ಖುಷಿಯಾಗಿಡಲು ಬಯಸುತ್ತಾರೆ. ಈ ಹೆಸರಿನ ಜನರಿಗೆ ದಯೆ ಬಾವ ಇರುತ್ತದೆ ಮತ್ತು ಬೇರೆಯವರಿಗೆ ಉಪಕಾರ ಮಾಡುವಂತ ಮನೋಭಾವ ಹೊಂದಿರುತ್ತಾರೆ. ವಿದ್ಯಾಭ್ಯಾಸದಲ್ಲೂ ಕೂಡ ತುಂಬಾ ಪ್ರತಿಭಾವಂತರಾಗಿರುತ್ತಾರೆ. ಬೇರೆಯವರು ಇವರ ಬಗ್ಗೆ ಏನು ಮಾತನಾಡುತ್ತಾರೆ ಎಂದು ಸ್ವಲ್ಪ ಗಮನ ಹರಿಸುತ್ತಾರೆ ಮತ್ತು ಕುಟುಂಬದವರಿಗೆ ಸಹಾಯ ಮಾಡುತ್ತಾರೆ.

ಈ ಜನರು ಹೃದಯದಿಂದ ತುಂಬಾ ಒಳ್ಳೆಯವರಾಗಿರುತ್ತಾರೆ ಇವರು ತಮ್ಮ ಹೆಸರು ಹಾಳಾಗುವಂತಹ ಕೆಲಸ ಕಾರ್ಯಗಳನ್ನು ಯಾವತ್ತೂ ಮಾಡಲು ಇಚ್ಛೆ ಪಡುವುದಿಲ್ಲ ವಿಶೇಷವಾಗಿ ಈ ಹೆಸರಿನ ಜನರು ತಮ್ಮ ಜೀವನದಲ್ಲಿ ಅಂದುಕೊಳ್ಳುವುದೇ ಒಂದು ಅವರ ಜೀವನದಲ್ಲಿ ನಡೆಯುವುದೇ ಇನ್ನೊಂದು ಆಗಿರುತ್ತದೆ. ಹೌದು ಈ ಜನರು ಯಾವಾಗಲೂ ಕೆಲವೊಂದು ವಿಚಾರಗಳಿಗೆ ಗೊಂದಲಗಳಲ್ಲಿ ಸಿಲುಕಿಕೊಂಡಿರುತ್ತಾರೆ ಕೆಲವು ಜನರು ಇವರನ್ನು ನೋಡಿದರೆ ಇಷ್ಟಪಡಬಹುದು ಅಥವಾ ಇನ್ನು ಕೆಲವರು ಇವರನ್ನು ನೋಡಿದರೆ ಹೆದರಲು ಬಹುದು ಏಕೆಂದರೆ ಇವರು ತಮ್ಮ ಮಾನ ಮರ್ಯಾದೆ ಗೋಸ್ಕರ ಯಾವ ಕೆಲಸವನ್ನು ಮಾಡಲು ಸಹ ಸಿದ್ದರಾಗಿರುತ್ತಾರೆ.

ಈ ಜನರ ಮನಸಲ್ಲಿ ಏನಿರುತ್ತದೆ ಎಂಬುದು ಮೇಲ್ನೋಟಕ್ಕೆ ಯಾರಿಗೂ ತಿಳಿಯುವುದಿಲ್ಲ ಏಕೆಂದರೆ ತಮ್ಮ ನೋವುಗಳನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ ಇವರು ತಮ್ಮ ಕುಟುಂಬದವರೊಂದಿಗೆ ಸದಾ ಹಸನ್ಮುಖಿಯಾಗಿ ಇರುತ್ತಾರೆ. ಅಷ್ಟೇ ಅಲ್ಲದೆ ಈ ಜನರಿಗೆ ದೇವರ ಮೇಲೆ ಅಪಾರವಾದ ನಂಬಿಕೆ ಇರುತ್ತದೆ ಜೊತೆಗೆ ಇವರು ಸಾತ್ವಿಕ ಜೀವನದಲ್ಲಿ ಹೆಚ್ಚಿಗೆ ನಂಬಿಕೆಯನ್ನು ಹೊಂದಿದವರಾಗಿರುತ್ತಾರೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, R ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿರುವವರು ತಮ್ಮ ವೈವಾಹಿಕ ಜೀವನದಲ್ಲಿ ಕೆಲವು ಏರಿಳಿತಗಳನ್ನು ಹೊಂದಿರುತ್ತಾರೆ. ಯಾವುದೇ ವಿಷಯಗಳನ್ನು ಬೇಗ ನಂಬುತ್ತಾರೆ, ಇದರಿಂದಾಗಿ ಅವರ ಸಂಗಾತಿ ವಿಚಾರದಲ್ಲಿ ಅವರ ಸಂಬಂಧವು ಹೆಚ್ಚು ಉತ್ತಮವಾಗುವುದಿಲ್ಲ.ಯಾವುದೇ ಕೆಲಸವನ್ನು ಬುದ್ಧಿವಂತಿಕೆಯಿಂದ ಮಾಡುತ್ತಾರೆ. ಅವರು ಎಲ್ಲಾ ವಿಷಯಗಳಲ್ಲಿ ಯಶಸ್ವಿಯಾಗಲು ಬಯಸುತ್ತಾರೆ.

ಈ ಜನರು ತಮ್ಮ ಸ್ನೇಹಿತರಿಗಾಗಿ ತಮ್ಮ ಮನಸ್ಸಿನಲ್ಲಿ ಬಹಳ ವಿಶೇಷವಾದ ಸ್ಥಾನವನ್ನು ಹೊಂದಿದ್ದಾರೆ ಆದರು ಕೂಡ ಅವರ ಸ್ನೇಹವು ಕೆಲವೇ ಜನರೊಂದಿಗೆ ಮಾತ್ರ ಹೊಂದಿರುತ್ತಾರೆ.ಮಾಧ್ಯಮ, ವಿನ್ಯಾಸ, ಗ್ಲಾಮರ್, ಕ್ರೀಡೆ ಮತ್ತು ಸಂಗೀತ ಕ್ಷೇತ್ರದಲ್ಲಿ ಈ ಜನರಿಗೆ ಹೆಚ್ಚು ಲಾಭ ಸಿಗಲಿದೆ. ಅಲ್ಲದೇ ಇತರರು ಇವರನ್ನು ಹುರಿದುಂಭಿಸುವ ಅವಶ್ಯಕತೆ ಇಲ್ಲ. ತಮಗಾಗಿ ಅವರು ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿರುತ್ತಾರೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By

Leave a Reply

Your email address will not be published. Required fields are marked *