ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಅರ್ಜಿ ಆಹ್ವಾನ

0 10

ಇತ್ತೀಚಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಅನೇಕ ಅವಕಾಶಗಳಿವೆ. ವ್ಯವಸ್ಥಿತ ರೀತಿಯ ಶಿಕ್ಷಣ ವನ್ನ ಪಡೆದುಕೊಳ್ಳಲು ಸಾಕಷ್ಟು ಮಾರ್ಗಗಳಿವೆ. ಈ ಬರಹದಡಿಯಲ್ಲಿ ನಾವಿಂದು ಮೊರಾರ್ಜಿ ದೇಸಾಯಿವಸತಿ ಶಾಲೆಯ ಅರ್ಜಿ ಸಲ್ಲಿಸುವ ಬಗ್ಗೆ ತಿಳಿದುಕೊಳ್ಳೋಣ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಸತಿ ಶಾಲೆಗಳಿಗೆ ಪ್ರವೇಶ ಪರೀಕ್ಷೆಯನ್ನು ನಡೆಸಲು ತೀರ್ಮಾನಿಸಿದೆ ಅದರಬಗ್ಗೆ ತಿಳಿದುಕೊಳ್ಳೋಣ ಯಾರೆಲ್ಲ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು ಎಲ್ಲಿ ಅರ್ಜಿ ಸಲ್ಲಿಸಬೇಕು ಮತ್ತು ಪರೀಕ್ಷೆ ಯಾವಾಗ ಎಂಬುದರ ಮಾಹಿತಿಯನ್ನು ತಿಳಿದುಕೊಳ್ಳೋಣ.

ಮೊರಾರ್ಜಿ ದೇಸಾಯಿ ವಸತಿ ಶಾಲೆ ಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ದಿನಾಂಕ ಇಪ್ಪತ್ತೆರಡು ಜೂಲೈ ಎರಡು ಸಾವಿರದ ಇಪ್ಪತ್ತೊಂದರಂದು ಆರನೆಯ ತರಗತಿಯ ವಿದ್ಯಾರ್ಥಿಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ ಪ್ರಸಕ್ತ ವರ್ಷದಲ್ಲಿ ಐದನೆಯ ತರಗತಿಯ ವಿದ್ಯಾರ್ಥಿಗಳಿಗೆ ಎರಡು ಸಾವಿರದ ಇಪ್ಪತ್ತೆರಡನೇಯ ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಅರ್ಜಿ ಆಹ್ವಾನ ಮಾಡಲಾಗುತ್ತದೆ ಯಾಕೆ ನಾವು ಈ ದಿನಾಂಕವನ್ನು ಹೇಳುತ್ತಿದ್ದಿವೆ ಎಂದರೆ ಈಗಾಗಲೆ ಆರನೆಯ ತರಗತಿಯಲ್ಲಿ ಪ್ರಸಕ್ತ ವರ್ಷದಲ್ಲಿ ಓದುತ್ತಿರುವಂತಹ ವಿದ್ಯಾರ್ಥಿಗಳಿಗೆ ಈ ಪರೀಕ್ಷೆ ಆಗಬೇಕಾಗಿತ್ತು ಆದರೆ ಲಾಕ್ ಡೌನ್ ಆದ ಕಾರಣ ಆ ಸಮಯದಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗದ ಕಾರಣ ಆ ವಿದ್ಯಾರ್ಥಿಗಳಿಗೆ ಇಪ್ಪತ್ತೆರಡು ಜೂಲೈ ಎರಡು ಸಾವಿರದ ಇಪ್ಪತ್ತೊಂದರಂದು ಅರ್ಜಿ ಸಲ್ಲಿಸಲು ಸೂಚನೆಯನ್ನು ನೀಡಲಾಗಿದೆ .

ಹೇಗೆ ಅರ್ಜಿ ಸಲ್ಲಿಸಬೇಕು ಎಲ್ಲಿ ಅರ್ಜಿ ಸಲ್ಲಿಸಬಹುದು ಯಾರೆಲ್ಲ ಅರ್ಜಿ ಸಲ್ಲಿಸಬಹುದು ಯಾವ ಶಾಲೆಗೆ ಹೋಗಿ ಆನ್ಲೈನ್ ಅರ್ಜಿ ಹಾಕಬೇಕು ಪರೀಕ್ಷೆ ಯಾವ ದಿನಾಂಕದಂದು ನಡೆಯುತ್ತದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇಪ್ಪತ್ತೆರಡು ಜೂಲೈ ಎರಡು ಸಾವಿರದ ಇಪ್ಪತ್ತೊಂದರಂದು ಸೂಚನೆಯನ್ನು ಹೊರಡಿಸಿದೆ ಅದರಲ್ಲಿ ಏನು ಹೇಳಿದೆ ಎನ್ನುವುದನ್ನು ನೋಡುವುದಾದರೆ. ಎರಡು ಸಾವಿರದ ಇಪ್ಪತ್ತೊಂದು ಇಪ್ಪತ್ತೆರಡ ನೇ ಸಾಲಿಗೆ ಸಂಬಂಧಿಸಿದಂತೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಆರನೇ ತರಗತಿಯ ಪ್ರವೇಶಕ್ಕಾಗಿ ಅಗತ್ಯವಿರುವ ಪ್ರವೇಶ ಪರೀಕ್ಷೆ ಮತ್ತು ಆನ್ಲೈನ್ ಕೌನ್ಸಿಲಿಂಗ್ ಅನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ತೆಗೆದುಕೊಳ್ಳಬೇಕು ಎಂಬುದನ್ನು ಇಲ್ಲಿ ತಿಳಿಸಲಾಗಿದೆ

ಇಪ್ಪತ್ತೆಂಟು ಜುಲೈ ಎರಡು ಸಾವಿರದ ಇಪ್ಪತ್ತೊಂದ ರಿಂದ ಹತ್ತು ಆಗಸ್ಟ್ ಎರಡು ಸಾವಿರದ ಇಪ್ಪತ್ತೊಂದ ರವರೆಗೆ ಆನ್ಲೈನ್ ಮೂಲಕ ಕೇವಲ ಮೊರಾರ್ಜಿ ದೇಸಾಯಿ ಮಾತ್ರ ಅಲ್ಲ ಜೊತೆಗೆ ಡಾಕ್ಟರ ಬಿ ಆರ್ ಅಂಬೇಡ್ಕರ್ ವಸತಿ ಶಾಲೆ ಏಕಲವ್ಯ ಮಾದರಿ ಶಾಲೆ ಮುಂತಾದ ಎಲ್ಲ ವಸತಿ ಶಾಲೆಗಳಿಗೆ ಅಂದರೆ ಸಮಾಜ ಕಲ್ಯಾಣ ಇಲಾಖೆಯಿಂದ ನಡೆಯುತ್ತಿರುವ ಶಾಲೆಗಳಿಗೆ ಇದು ಅನ್ವಯಿಸುತ್ತದೆ. ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳಿಗೆ ದಿನಾಂಕ ಹದಿನಾರು ಸೆಪ್ಟೆಂಬರ್ ಎರಡು ಸಾವಿರದ ಇಪ್ಪತ್ತೊಂದರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈ ಪ್ರವೇಶ ಪರೀಕ್ಷೆಯನ್ನು ನಡೆಸುತ್ತದೆ.

ಯಾರೆಲ್ಲ ಅರ್ಜಿ ಸಲ್ಲಿಸಬಹುದು ಎಂಬುದನ್ನು ನೋಡುವುದಾದರೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ತಂದೆ ತಾಯಿ ಆದಾಯ ಎರಡು ಲಕ್ಷದ ಐವತ್ತು ಸಾವಿರ ಮೀರಿರಬಾರದು . ಪ್ರವರ್ಗ ಒಂದರಲ್ಲಿ ಬರುವ ವಿದ್ಯಾರ್ಥಿಗಳ ತಂದೆ ತಾಯಿ ಆದಾಯ ಎರಡು ಲಕ್ಷದ ಐವತ್ತು ಸಾವಿರ ಮೀರಿರಬಾರದು ಇನ್ನು ಟುಎ ಟುಬಿ ತ್ರಿಎ ಮತ್ತು ತ್ರಿಬೀ ವಿದ್ಯಾರ್ಥಿಗಳ ತಂದೆ ತಾಯಿ ಆದಾಯ ಒಂದು ಲಕ್ಷಕ್ಕಿಂತ ಕಡಿಮೆ ಇದ್ದರೆ ಇಂತಹ ವಿದ್ಯಾರ್ಥಿಗಳು ವಸತಿ ಶಾಲೆಗೆ ಅರ್ಜಿ ಸಲ್ಲಿಸಬಹುದು. ಆದಾಯ ಹೆಚ್ಚಿರುವ ವಿದ್ಯಾರ್ಥಿಗಳು ಪರೀಕ್ಷೆ ಬರೆಯ ಬೇಕು ಎನಿಸಿದರೆ ಅಂತವರು ಜನರಲ್ ಕೋಟಾದಲ್ಲಿ ಅರ್ಜಿ ಸಲ್ಲಿಸಬಹುದು ಅವರಿಗೆ ರಿಜರವೆಶನ್ ಮೆರಿಟ್ ಕೋಟಾ ದಲ್ಲಿ ಸಿಟು ಸಿಗುವುದಿಲ್ಲ.

ಪ್ರತಿಯೊಂದು ಶಾಲೆಯ ವಿದ್ಯಾರ್ಥಿಗಳು ಅಂದರೆ ಸರಕಾರಿ ಶಾಲೆಯ ವಿದ್ಯಾರ್ಥಿಗಳು ಅನುದಾನಿತ ಶಾಲೆಯ ವಿದ್ಯಾರ್ಥಿಗಳು ಮತ್ತು ಖಾಸಗಿ ಶಾಲೆಯ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ನೀವು ಅರ್ಜಿಯನ್ನು ಸಲ್ಲಿಸಲು ನಿಮ್ಮ ಸ್ಯಾಟ್ಸ್ ನಂಬರನ್ನು ನಿಮ್ಮ ಶಾಲೆಯಲ್ಲಿ ಕೇಳಿ ತೆಗೆದುಕೊಳ್ಳಬೇಕು ನಿಮ್ಮ ಆಧಾರ್ ಕಾರ್ಡ್ ಮತ್ತು ಫೋಟೊ ತೆಗೆದುಕೊಂಡು ನಿಮ್ಮ ಪಾಲಕರನ್ನು ಕರೆದು ಕೊಂಡು ನಿಮ್ಮ ಹತ್ತಿರದಲ್ಲಿರುವಂತಹ ಯಾವುದಾದರು ಮೊರಾರ್ಜಿ ದೇಸಾಯಿ ಶಾಲೆ ಅಥವಾ ಡಾಕ್ಟರ ಬಿ ಆರ್ ಅಂಬೇಡ್ಕರ್ ವಸತಿ ಶಾಲೆ ಇಲ್ಲವೆ ಏಕಲವ್ಯ ಮಾದರಿ ಶಾಲೆಗಳಾಗಿರಬಹುದು ಅಲ್ಲಿಗೆ ನಿಮ್ಮ ಪೋಷಕರನ್ನು ಕರೆದುಕೊಂಡು ಹೋಗಿ.

ಆ ಶಾಲೆಯ ಪ್ರಾಂಶುಫಾಲರು ನಿಮ್ಮ ಅರ್ಜಿಯನ್ನು ಆನ್ಲೈನ್ ಮೂಲಕ ಅರ್ಜಿ ಹಾಕಿ ಕೊಡುತ್ತಾರೆ ನಿಮ್ಮ ಸ್ಯಾಟ್ಸ ನಂಬರ್ ಆಧಾರ್ ಕಾರ್ಡ್ ನಂಬರ್ ನಿಮ್ಮ ಫೋಟೊ ನಿಮ್ಮ ಸಹಿ ನಿಮ್ಮ ಪೋಷಕರ ಸಹಿ ಆದಾಯ ಪ್ರಮಾಣಪತ್ರ ಜಾತಿ ಪ್ರಮಾಣಪತ್ರ ತೆಗೆದುಕೊಂಡು ಹೋಗಿ ಅವರು ನಿಮಗೊಂದು ಅರ್ಜಿಯನ್ನು ಕೊಡುತ್ತಾರೆ ಅದರಲ್ಲಿ ಮಾಹಿತಿಯನ್ನು ತುಂಬಿ ಅವರಿಗೆ ಕೊಟ್ಟರೆ ಅವರು ಅಡ್ಮಿಷನ್ ಟಿಕೇಟ್ ಬಂದಾಗ ನಿಮಗೆ ತಿಳಿಸುತ್ತಾರೆ.

ಪ್ರವೇಶ ಪರೀಕ್ಷೆ ಹದಿನಾರು ಸೆಪ್ಟೆಂಬರ್ ಎರಡು ಸಾವಿರದ ಇಪ್ಪತ್ತೊಂದರಂದು ಗುರುವಾರ ಬೆಳಿಗ್ಗೆ ಹನ್ನೊಂದು ಗಂಟೆಯಿಂದ ಒಂದು ಗಂಟೆಯವರೆಗೆ ನೂರು ಅಂಕಗಳಿಗೆ ಪರೀಕ್ಷೆ ನಡೆಯುತ್ತದೆ. ಪರೀಕ್ಷೆಯಲ್ಲಿ ಐದನೇ ತರಗತಿಯ ಕನ್ನಡ ಪಠ್ಯಪುಸ್ತಕದ ವ್ಯಾಕರಣ ಇಂಗ್ಲಿಷ್ ವ್ಯಾಕರಣ ಸಮಾಜವಿಜ್ಞಾನ ಸಾಮಾನ್ಯ ವಿಜ್ಞಾನ ಗಣಿತ ಜನರೆಲ್ ನಾಲೆಜ್ ಇಷ್ಟು ವಿಷಯಗಳ ಮೇಲೆ ನೂರು ಅಂಕದ ಪರೀಕ್ಷೆ ನಡೆಯುತ್ತದೆ

ಪ್ರತಿಯೊಬ್ಬ ವಿದ್ಯಾರ್ಥಿಯು ಅರ್ಜಿಯನ್ನು ಸಲ್ಲಿಸಿ ಪ್ರವೇಶ ಪರೀಕ್ಷೆ ಯನ್ನು ಬರೆಯಿರಿ ಇದರಿಂದ ಬಡಕುಟುಂಬದ ವಿದ್ಯಾರ್ಥಿಗಳಿಗೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಎಲ್ಲರಿಗೂ ಸಹಾಯವಾಗುತ್ತದೆ. ಅರ್ಜಿಯನ್ನು ಸಲ್ಲಿಸುವ ಸಮಯದಲ್ಲಿ ನಿಮಗೆ ಯಾವ ಶಾಲೆ ಬೇಕು ಎಂಬುದನ್ನು ಕೇಳುತ್ತಾರೆ ನೀವು ಅವುಗಳನ್ನು ಆಯ್ಕೆ ಮಾಡಿಕೊಳ್ಳಬೇಕು ನೀವು ಪಡೆದ ಅಂಕದ ಆಧಾರದ ಮೇಲೆ ಮತ್ತು ಜಾತಿ ಆಧಾರದ ಮೇಲೆ ನೀವು ಯಾವಶಾಲೆಗೆ ಹೋಗಬೇಕು ಎಂಬುದು ನಿರ್ಧಾರ ಆಗುತ್ತದೆ.

ಮತ್ತೊಮ್ಮೆ ಯಾರು ಪರೀಕ್ಷೆಯನ್ನು ಬರೆಯಬಹುದು ಎಂಬುದನ್ನು ತಿಳಿದುಕೊಳ್ಳೋಣ ಯಾರು ಇಪ್ಪತ್ತೆರಡು ಜುಲೈ ಎರಡು ಸಾವಿರದ ಇಪ್ಪತ್ತೊಂದಕ್ಕೆ ಯಾರು ಐದನೆಯ ತರಗತಿಯನ್ನು ಮುಗಿಸಿ ಆರನೇ ತರಗತಿಯಲ್ಲಿ ಓದುತ್ತಿದ್ದಿರೋ ಅವರಿಗೆ ಮಾತ್ರ ಇದು ಅನ್ವಯವಾಗುತ್ತದೆ. ಸ್ನೇಹಿತರೆ ಯಾರೆಲ್ಲ ವಸತಿ ಶಾಲೆಯ ಪ್ರವೇಶ ಪರೀಕ್ಷೆ ಬರೆಯುತ್ತಿರಿ ಚೆನ್ನಾಗಿ ಅಭ್ಯಾಸಮಾಡಿಕೊಂಡು ಸರಿಯಾದ ತರಬೇತಿಯನ್ನು ತೆಗೆದುಕೊಂಡು ಚೆನ್ನಾಗಿ ಪರೀಕ್ಷೆ ಬರೆಯಿರಿ ನಿಮಗಿರುವ ಈ ಸುವರ್ಣಾವಕಾಶದ ಸದುಪಯೋಗ ಪಡೆದುಕೊಳ್ಳಿ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave A Reply

Your email address will not be published.